ETV Bharat / state

ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟ: ಶಾಸಕ ವಿಶ್ವನಾಥ್​ ಭೇಟಿಗೆ ಬಂದ ಸುಧಾಕರ್ ಮನೆ ಗೇಟ್‌ನಿಂದಲೇ ವಾಪಸ್ - bjp candidate dr k sudhakar

ಯಲಹಂಕದಲ್ಲಿ ಇನ್ನೂ ಪ್ರಚಾರ ಆರಂಭ ಮಾಡಲು ಆಗಿಲ್ಲ. ವಿಶ್ವನಾಥ್ ಅಸಮಾಧಾನ ಶಮನ ಮಾಡಲು ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಹೇಳಿದ್ದಾರೆ.

author img

By ETV Bharat Karnataka Team

Published : Mar 31, 2024, 3:36 PM IST

Updated : Apr 2, 2024, 3:50 PM IST

chikkaballapur-bjp-candidate-dr-k-sudhakar-came-to-mla-sr-vishwanath-house-but-he-was-sent-back
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಶಾಸಕ ವಿಶ್ವನಾಥ್​ ಭೇಟಿಗೆ ಬಂದ ಸುಧಾಕರ್ ಮನೆ ಗೇಟ್‌ನಿಂದಲೇ ವಾಪಸ್
ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್

ಯಲಹಂಕ (ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್​ ಅವರನ್ನು ಭೇಟಿ ಮಾಡಲು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಆಗಮಿಸಿದ್ದರು. ಆದರೆ ಶಾಸಕ ಎಸ್‌ ಆರ್ ವಿಶ್ವನಾಥ್ ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಹೇಳಿ ಸಿಬ್ಬಂದಿ ಮನೆ ಗೇಟ್‌ ಬಳಿಯಿಂದಲೇ ಸುಧಾಕರ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ಮಗನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಶಾಸಕ ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ. ಇದೀಗ ತಮ್ಮ ಭೇಟಿಗೆ ಸುಧಾಕರ್ ಅವರಿ​ಗೆ ಅವಕಾಶ ನೀಡದೆ ನಿರಾಸೆಯುಂಟು ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಸುಧಾಕರ್ ಮಾತನಾಡಿ, ಕ್ಷೇತ್ರದ 7 ಕಡೆ ಪ್ರಚಾರ ಆರಂಭವಾಗಿದೆ. ಆದರೆ ಯಲಹಂಕದಲ್ಲಿ ಇನ್ನೂ ಪ್ರಚಾರ ಆರಂಭ ಮಾಡಲು ಆಗಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮೊದಲಿನಿಂದಲು ಬೇಸರವಿದೆ. ಹಲವು ಬಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೇಜ್ ಸಹ ಮಾಡಿದ್ದೆ. ಆದರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ. ಹೀಗಾಗಿ ನಾನೇ ಖುದ್ದು ಇಂದು ಅವರ ಮನೆಗೆ ಭೇಟಿ ಮಾಡಲು ಬಂದಿದ್ದೇ‌ನೆ. ಆದರೆ ಅವರು ಮನೆಯಲಿಲ್ಲ ಅಂತ ವಾಚ್ ಮ್ಯಾನ್ ಹೇಳುತ್ತಿದ್ದಾರೆ. ಇನ್ನೂ ಎರಡು ಮೂರು ಬಾರಿ ವಿಶ್ವನಾಥ್ ಅವರನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡುತ್ತೀನಿ. ಇದೊಂದೇ ಚುನಾವಣೆ ಕೊನೆಯಲ್ಲ, ಮುಂದೆಯೂ ನಾವು ಜೊತೆಯಾಗಿ ಸಾಗಬೇಕಾಗುತ್ತೆ ಎಂದರು.

ಅಮಿತ್ ಶಾ ಬಂದಾಗ ಸಮಸ್ಯೆ ಬಗೆಹರಿಯುವ ಭರವಸೆ ಇದೆ: ವಿಶ್ವನಾಥ್ ಜೊತೆ ಮಾತನಾಡುವುದಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಬಂದಾಗ ಅವರ ಹಂತದಲ್ಲಿ ಬಗೆಹರಿಯುವ ಭರವಸೆ ಇದೆ. ರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಇದ್ದರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ. ಅಲ್ಲಿ ಮುಳ್ಳಿನ ಹಾದಿ ಇರುತ್ತೆ, ಕೆಂಪು ಗುಲಾಬಿ ಹಾದಿ ಇರಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತೀವಿ. ಅವರಿಗೂ ನಮಗೂ ಯಾವುದೇ ವೈಯುಕ್ತಿಕ ಭಿನ್ನಾಬಿಪ್ರಾಯಗಳಿಲ್ಲ. ವಿಶ್ವನಾಥ್ ಅವರಿಗೆ ಮಗನಿಗೆ ಟಿಕೆಟ್​ ಸಿಗಲಿಲ್ಲ ಎಂಬ ಬೇಸರವಿದೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ - Dheeraj Prasad Joins Congress

ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್

ಯಲಹಂಕ (ಬೆಂಗಳೂರು): ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದೊಳಗಿನ ಭಿನ್ನಮತ ಶಮನ ಮಾಡಲು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್​ ಅವರನ್ನು ಭೇಟಿ ಮಾಡಲು ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಆಗಮಿಸಿದ್ದರು. ಆದರೆ ಶಾಸಕ ಎಸ್‌ ಆರ್ ವಿಶ್ವನಾಥ್ ಅವರು ಮನೆಯಿಂದ ಹೊರಗಡೆ ಹೋಗಿದ್ದಾರೆ ಎಂದು ಹೇಳಿ ಸಿಬ್ಬಂದಿ ಮನೆ ಗೇಟ್‌ ಬಳಿಯಿಂದಲೇ ಸುಧಾಕರ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ಮಗನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಶಾಸಕ ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ. ಇದೀಗ ತಮ್ಮ ಭೇಟಿಗೆ ಸುಧಾಕರ್ ಅವರಿ​ಗೆ ಅವಕಾಶ ನೀಡದೆ ನಿರಾಸೆಯುಂಟು ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಸುಧಾಕರ್ ಮಾತನಾಡಿ, ಕ್ಷೇತ್ರದ 7 ಕಡೆ ಪ್ರಚಾರ ಆರಂಭವಾಗಿದೆ. ಆದರೆ ಯಲಹಂಕದಲ್ಲಿ ಇನ್ನೂ ಪ್ರಚಾರ ಆರಂಭ ಮಾಡಲು ಆಗಿಲ್ಲ. ಎಲ್ಲರಿಗೂ ಗೊತ್ತಿರುವಂತೆ ಶಾಸಕ ಎಸ್ ಆರ್ ವಿಶ್ವನಾಥ್ ಅವರಿಗೆ ಮೊದಲಿನಿಂದಲು ಬೇಸರವಿದೆ. ಹಲವು ಬಾರಿ ವಿಶ್ವನಾಥ್ ಅವರಿಗೆ ಕರೆ ಮಾಡಿ ಮೆಸೇಜ್ ಸಹ ಮಾಡಿದ್ದೆ. ಆದರೆ ಅವರು ಯಾವುದಕ್ಕೂ ಉತ್ತರ ಕೊಡಲಿಲ್ಲ. ಹೀಗಾಗಿ ನಾನೇ ಖುದ್ದು ಇಂದು ಅವರ ಮನೆಗೆ ಭೇಟಿ ಮಾಡಲು ಬಂದಿದ್ದೇ‌ನೆ. ಆದರೆ ಅವರು ಮನೆಯಲಿಲ್ಲ ಅಂತ ವಾಚ್ ಮ್ಯಾನ್ ಹೇಳುತ್ತಿದ್ದಾರೆ. ಇನ್ನೂ ಎರಡು ಮೂರು ಬಾರಿ ವಿಶ್ವನಾಥ್ ಅವರನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡುತ್ತೀನಿ. ಇದೊಂದೇ ಚುನಾವಣೆ ಕೊನೆಯಲ್ಲ, ಮುಂದೆಯೂ ನಾವು ಜೊತೆಯಾಗಿ ಸಾಗಬೇಕಾಗುತ್ತೆ ಎಂದರು.

ಅಮಿತ್ ಶಾ ಬಂದಾಗ ಸಮಸ್ಯೆ ಬಗೆಹರಿಯುವ ಭರವಸೆ ಇದೆ: ವಿಶ್ವನಾಥ್ ಜೊತೆ ಮಾತನಾಡುವುದಾಗಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರು ಬಂದಾಗ ಅವರ ಹಂತದಲ್ಲಿ ಬಗೆಹರಿಯುವ ಭರವಸೆ ಇದೆ. ರಾಜಕಾರಣದಲ್ಲಿ ಎಲ್ಲವೂ ಸರಾಗವಾಗಿ ಇದ್ದರೆ ಅದು ರಾಜಕಾರಣ ಅನ್ನಿಸಿಕೊಳ್ಳಲ್ಲ. ಅಲ್ಲಿ ಮುಳ್ಳಿನ ಹಾದಿ ಇರುತ್ತೆ, ಕೆಂಪು ಗುಲಾಬಿ ಹಾದಿ ಇರಲ್ಲ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡ್ತೀವಿ. ಅವರಿಗೂ ನಮಗೂ ಯಾವುದೇ ವೈಯುಕ್ತಿಕ ಭಿನ್ನಾಬಿಪ್ರಾಯಗಳಿಲ್ಲ. ವಿಶ್ವನಾಥ್ ಅವರಿಗೆ ಮಗನಿಗೆ ಟಿಕೆಟ್​ ಸಿಗಲಿಲ್ಲ ಎಂಬ ಬೇಸರವಿದೆ. ಮುಂದೆ ಎಲ್ಲವೂ ಸರಿಯಾಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ - Dheeraj Prasad Joins Congress

Last Updated : Apr 2, 2024, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.