ETV Bharat / state

ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ 'ರಾಸ್ತಾ ರೋಕ್': ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್ ಪೊಲೀಸ್ ವಶಕ್ಕೆ - BJP Rasta Rok

author img

By ETV Bharat Karnataka Team

Published : Jun 20, 2024, 10:27 PM IST

Updated : Jun 20, 2024, 10:42 PM IST

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ವೃತ್ತದ ಬಳಿ 'ರಾಸ್ತಾ ರೋಕ್' ನಡೆಯಿತು. ಈ ವೇಳೆ ಪೊಲೀಸರು ಸಂಸದ ಬ್ರಿಜೇಶ್​ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಇತರರನ್ನು ವಶಕ್ಕೆ ಪಡೆದರು.

bjp-organised-rasta-rok
ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ 'ರಾಸ್ತಾ ರೋಕ್' (ETV Bharat)
ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ 'ರಾಸ್ತಾ ರೋಕ್' (ETV Bharat)

ಮಂಗಳೂರು(ದಕ್ಷಿಣ ಕನ್ನಡ): ತೈಲಬೆಲೆ ಏರಿಕೆ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ವೃತ್ತದ ಬಳಿ 'ರಾಸ್ತಾ ರೋಕೊ' ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.

ಬ್ರಿಜೇಶ್ ಚೌಟ ಹಾಗು ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಿಜೆಪಿ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರು 'ರಾಸ್ತಾ ರೋಕ್' ನಡೆಸಲು ಪಿವಿಎಸ್ ವೃತ್ತದ ಬಳಿ ಆಗಮಿಸಿದರು. ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ರಸ್ತೆಯ ಮೂರು ದಾರಿಗಳಿಂದ ಬರುವ ವಾಹನಗಳನ್ನು ತಡೆದರು. ಈ ವೇಳೆ ಕಾರೊಂದು ಮುಂದೆ ಚಲಾಯಿಸಲು ಯತ್ನಿಸಿದಾಗ ತಡೆದು ಘೋಷಣೆ ಕೂಗಿ ಹಿಂದೆ ಸರಿಯುವಂತೆ ಮಾಡಿದರು.

ಬಳಿಕ ಪೊಲೀಸರು ರಸ್ತೆ ತಡೆ ನಿಲ್ಲಿಸುವಂತೆ ಒತ್ತಾಯಿಸಿದರೂ, ಪ್ರತಿಭಟನಾಕಾರರಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಆಗ ಯುವ ಮೋರ್ಚದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರು ಎಂಎಲ್ಎ ವೇದವ್ಯಾಸ ಕಾಮತ್ ಅವರನ್ನು ರಸ್ತೆ ತಡೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಆದರೆ ಅವರು ರಸ್ತೆ ತಡೆ ಸ್ಥಗಿತಗೊಳಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡದ ಕಾರಣ, ಪೊಲೀಸರು ಕಾಮತ್ ಸಹಿತ ಬ್ರಿಜೇಶ್ ಚೌಟರನ್ನು ವಶಕ್ಕೆ ತೆಗೆದುಕೊಳ್ಳಲು ತಳ್ಳಿಕೊಂಡೇ ಬಸ್‌ನತ್ತ ಬಂದರು. ಆಗ ಆಕ್ರೋಶಿತ ಕಾರ್ಯಕರ್ತರು ತಡೆಯೊಡ್ಡಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು. ಮಹಿಳಾ ಕಾರ್ಯಕರ್ತರು ಬಸ್ ಮುಂದೆ ಹೋಗದಂತೆ ತಡೆದರೂ ಮಹಿಳಾ ಪೊಲೀಸರು ಅವರನ್ನು ತಡೆದು ಬಸ್ ಮುಂದಕ್ಕೆ ಸಂಚರಿಸುವಂತೆ ಮಾಡಿದರು. ಸುಮಾರು 15 ನಿಮಿಷಗಳ ಕಾಲ ರಾಸ್ತಾ ರೋಕ್ ನಡೆಯಿತು.

ಇದನ್ನೂ ಓದಿ: ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ ಹಾಕಿ, ಬರೆ ಎಳೆದಿದೆ : ಬೊಮ್ಮಾಯಿ - BASAVARAJ BOMMAI

ತೈಲಬೆಲೆ ಏರಿಕೆ ವಿರುದ್ಧ ಬಿಜೆಪಿ 'ರಾಸ್ತಾ ರೋಕ್' (ETV Bharat)

ಮಂಗಳೂರು(ದಕ್ಷಿಣ ಕನ್ನಡ): ತೈಲಬೆಲೆ ಏರಿಕೆ ವಿರುದ್ಧ ದ.ಕ.ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪಿವಿಎಸ್ ವೃತ್ತದ ಬಳಿ 'ರಾಸ್ತಾ ರೋಕೊ' ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡರು.

ಬ್ರಿಜೇಶ್ ಚೌಟ ಹಾಗು ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಿಜೆಪಿ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾಕಾರರು 'ರಾಸ್ತಾ ರೋಕ್' ನಡೆಸಲು ಪಿವಿಎಸ್ ವೃತ್ತದ ಬಳಿ ಆಗಮಿಸಿದರು. ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ರಸ್ತೆಯ ಮೂರು ದಾರಿಗಳಿಂದ ಬರುವ ವಾಹನಗಳನ್ನು ತಡೆದರು. ಈ ವೇಳೆ ಕಾರೊಂದು ಮುಂದೆ ಚಲಾಯಿಸಲು ಯತ್ನಿಸಿದಾಗ ತಡೆದು ಘೋಷಣೆ ಕೂಗಿ ಹಿಂದೆ ಸರಿಯುವಂತೆ ಮಾಡಿದರು.

ಬಳಿಕ ಪೊಲೀಸರು ರಸ್ತೆ ತಡೆ ನಿಲ್ಲಿಸುವಂತೆ ಒತ್ತಾಯಿಸಿದರೂ, ಪ್ರತಿಭಟನಾಕಾರರಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮತ್ತಷ್ಟು ತಾರಕಕ್ಕೇರಿತು. ಆಗ ಯುವ ಮೋರ್ಚದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರು ಎಂಎಲ್ಎ ವೇದವ್ಯಾಸ ಕಾಮತ್ ಅವರನ್ನು ರಸ್ತೆ ತಡೆ ಸ್ಥಗಿತಗೊಳಿಸುವಂತೆ ಮನವಿ ಮಾಡಿದರು. ಆದರೆ ಅವರು ರಸ್ತೆ ತಡೆ ಸ್ಥಗಿತಗೊಳಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡದ ಕಾರಣ, ಪೊಲೀಸರು ಕಾಮತ್ ಸಹಿತ ಬ್ರಿಜೇಶ್ ಚೌಟರನ್ನು ವಶಕ್ಕೆ ತೆಗೆದುಕೊಳ್ಳಲು ತಳ್ಳಿಕೊಂಡೇ ಬಸ್‌ನತ್ತ ಬಂದರು. ಆಗ ಆಕ್ರೋಶಿತ ಕಾರ್ಯಕರ್ತರು ತಡೆಯೊಡ್ಡಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು. ಮಹಿಳಾ ಕಾರ್ಯಕರ್ತರು ಬಸ್ ಮುಂದೆ ಹೋಗದಂತೆ ತಡೆದರೂ ಮಹಿಳಾ ಪೊಲೀಸರು ಅವರನ್ನು ತಡೆದು ಬಸ್ ಮುಂದಕ್ಕೆ ಸಂಚರಿಸುವಂತೆ ಮಾಡಿದರು. ಸುಮಾರು 15 ನಿಮಿಷಗಳ ಕಾಲ ರಾಸ್ತಾ ರೋಕ್ ನಡೆಯಿತು.

ಇದನ್ನೂ ಓದಿ: ಸರ್ಕಾರ ಗ್ಯಾರಂಟಿ ಹೆಸರಲ್ಲಿ ಬಡವರ ಮೇಲೆ ಹೊರೆ ಹಾಕಿ, ಬರೆ ಎಳೆದಿದೆ : ಬೊಮ್ಮಾಯಿ - BASAVARAJ BOMMAI

Last Updated : Jun 20, 2024, 10:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.