ETV Bharat / state

ವಿಜಯನಗರ: 9 ತೊಲೆ ಚಿನ್ನ ಕಳೆದುಕೊಂಡು ಮಹಿಳೆ ಗೋಳಾಟ; 80 ಪ್ರಯಾಣಿಕರಿದ್ದ ಬಸ್​ ಪೊಲೀಸ್​ ಠಾಣೆಗೆ ದೌಡು - A WOMAN LOST GOLD ORNAMENTS

ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು 9 ತೊಲೆ ಬಂಗಾರದ ಒಡವೆ ಕಳೆದುಕೊಂಡ ಪರಿಣಾಮ ಚಾಲಕ ಮತ್ತು ಕಂಡಕ್ಟರ್​ ಬಸ್ಸನ್ನೇ ಪೊಲೀಸ್​ ಠಾಣೆಗೆ ತಂದು ಪೊಲೀಸರ ನೇತೃತ್ವದಲ್ಲಿ ತಪಾಸಣೆ ನಡೆಸಿದ ವಿಚಿತ್ರ ಘಟನೆ ನಡೆದಿದೆ.

A WOMAN LOST GOLD ORNAMENTS
ಬಂಗಾರ ಕಳೆದುಕೊಂಡ ಮಹಿಳೆ (ETV Bharat)
author img

By ETV Bharat Karnataka Team

Published : Dec 22, 2024, 10:42 PM IST

Updated : Dec 22, 2024, 11:02 PM IST

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಯೋಜನೆ ಶುರುವಾದಾಗಿನಿಂದ ಸರ್ಕಾರಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿರೋದು ಕಂಡುಬರುತ್ತಿದೆ. ಆದ್ರೆ ಕೆಲ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ವಸ್ತುಗಳನ್ನು ಕಳೆದುಕೊಂಡು ಪೇಚಿಗೆ ಸಿಲುಕಿದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತವೆ. ಅದೇ ರೀತಿಯ ಪ್ರಕರಣ ನಡೆದು ಭಾರಿ ಹೈಡ್ರಾಮಾ ಸೃಷ್ಟಿಯಾಗಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ಭಾನುವಾರ ನಡೆದಿದೆ.

ಪೊಲೀಸ್​ ಠಾಣೆಗೆ ಬಂದ ಬಸ್​; 80 ಜನ ಪ್ರಯಾಣಿಕರ ಸಮೇತ ಬಸ್ ನ್ನು ಪೊಲೀಸ್ ಠಾಣೆಗೆ ಕರೆತಂದ ಸಾರಿಗೆ ಇಲಾಖೆಯ ಚಾಲಕ, ನಿರ್ವಾಹಕ, ಬಸ್ ಪ್ರಯಾಣದ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಿಂದ ಬರೋಬ್ಬರಿ 9 ತೊಲೆ ಬಂಗಾರದ ಒಡವೆ ಎಗರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಈ ಹರಸಾಹಸ ಮಾಡಿದರು. ಅಂಬಮ್ಮ ಎಂಬ ಮಹಿಳೆ ಆಭರಣ ಕಳೆದುಕೊಂಡವರು. ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದಾಗ ಮುನಿರಾಬಾದ್ ಬಳಿ ಈ ಘಟನೆ ನಡೆದಿದೆ.

9 ತೊಲೆ ಚಿನ್ನ ಕಳೆದುಕೊಂಡು ಮಹಿಳೆ ಗೋಳಾಟ; ಬಸ್​ನ್ನೇ ಪೊಲೀಸ್​ ಠಾಣೆಗೆ ತಂದ ಡ್ರೈವರ್​ (ETV Bharat)

ಸಿಗದ ಬಂಗಾರ, ಕೇಸ್​ ದಾಖಲು: ಬಂಗಾರದ ಒಡವೆ ಕಳೆದುಕೊಂಡಿದ್ದರಿಂದ ಬಸ್ ನಿಲ್ಲಿಸಿ ಅಂಬಮ್ಮ ಹಾಗೂ ಅವರ ಮಗಳು ರಾದ್ಧಾಂತ ಮಾಡಿದರು. ಇವರಿಬ್ಬರ ಗೋಳಾಟ ಜೋರಾದ ಹಿನ್ನೆಲೆ 80 ಜನ ಪ್ರಯಾಣಿಕರ ಸಮೇತ ಸಾರಿಗೆ ಬಸ್ಅನ್ನು ಹೊಸಪೇಟೆ ನಗರ ಠಾಣೆಗೆ ಕರೆತಂದಿದ್ದರು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್​ ಇನ್ಸಪೆಕ್ಟರ್​ ಲಖನ್ ಮಸುಗುಪ್ಪಿ ನೇತೃತ್ವದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಸರದಿಯಂತೆ ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ ಪೊಲೀಸರು ಬ್ಯಾಗ್​ಗಳನ್ನು ತಪಾಸಣೆ ಮಾಡಿದರು.

ಆದ್ರೆ ಯಾರ ಬಳಿಯೂ ಕಳ್ಳತನವಾದ ಬಂಗಾರದ ಒಡವೆಗಳು ಪತ್ತೆಯಾಗಲಿಲ್ಲ. ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಮಹಿಳಾ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಯೋಜನೆ ಶುರುವಾದಾಗಿನಿಂದ ಸರ್ಕಾರಿ ಬಸ್​ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿರೋದು ಕಂಡುಬರುತ್ತಿದೆ. ಆದ್ರೆ ಕೆಲ ಸಂದರ್ಭಗಳಲ್ಲಿ ಮಹಿಳೆಯರು ತಮ್ಮ ವಸ್ತುಗಳನ್ನು ಕಳೆದುಕೊಂಡು ಪೇಚಿಗೆ ಸಿಲುಕಿದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತವೆ. ಅದೇ ರೀತಿಯ ಪ್ರಕರಣ ನಡೆದು ಭಾರಿ ಹೈಡ್ರಾಮಾ ಸೃಷ್ಟಿಯಾಗಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ಭಾನುವಾರ ನಡೆದಿದೆ.

ಪೊಲೀಸ್​ ಠಾಣೆಗೆ ಬಂದ ಬಸ್​; 80 ಜನ ಪ್ರಯಾಣಿಕರ ಸಮೇತ ಬಸ್ ನ್ನು ಪೊಲೀಸ್ ಠಾಣೆಗೆ ಕರೆತಂದ ಸಾರಿಗೆ ಇಲಾಖೆಯ ಚಾಲಕ, ನಿರ್ವಾಹಕ, ಬಸ್ ಪ್ರಯಾಣದ ವೇಳೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಿಂದ ಬರೋಬ್ಬರಿ 9 ತೊಲೆ ಬಂಗಾರದ ಒಡವೆ ಎಗರಿಸಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ಈ ಹರಸಾಹಸ ಮಾಡಿದರು. ಅಂಬಮ್ಮ ಎಂಬ ಮಹಿಳೆ ಆಭರಣ ಕಳೆದುಕೊಂಡವರು. ಹೊಸಪೇಟೆಯಿಂದ ಕೊಪ್ಪಳ ಕಡೆ ಹೊರಟಿದ್ದಾಗ ಮುನಿರಾಬಾದ್ ಬಳಿ ಈ ಘಟನೆ ನಡೆದಿದೆ.

9 ತೊಲೆ ಚಿನ್ನ ಕಳೆದುಕೊಂಡು ಮಹಿಳೆ ಗೋಳಾಟ; ಬಸ್​ನ್ನೇ ಪೊಲೀಸ್​ ಠಾಣೆಗೆ ತಂದ ಡ್ರೈವರ್​ (ETV Bharat)

ಸಿಗದ ಬಂಗಾರ, ಕೇಸ್​ ದಾಖಲು: ಬಂಗಾರದ ಒಡವೆ ಕಳೆದುಕೊಂಡಿದ್ದರಿಂದ ಬಸ್ ನಿಲ್ಲಿಸಿ ಅಂಬಮ್ಮ ಹಾಗೂ ಅವರ ಮಗಳು ರಾದ್ಧಾಂತ ಮಾಡಿದರು. ಇವರಿಬ್ಬರ ಗೋಳಾಟ ಜೋರಾದ ಹಿನ್ನೆಲೆ 80 ಜನ ಪ್ರಯಾಣಿಕರ ಸಮೇತ ಸಾರಿಗೆ ಬಸ್ಅನ್ನು ಹೊಸಪೇಟೆ ನಗರ ಠಾಣೆಗೆ ಕರೆತಂದಿದ್ದರು. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್​ ಇನ್ಸಪೆಕ್ಟರ್​ ಲಖನ್ ಮಸುಗುಪ್ಪಿ ನೇತೃತ್ವದಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರನ್ನು ಸರದಿಯಂತೆ ಒಬ್ಬೊಬ್ಬರನ್ನಾಗಿ ಕೆಳಗಿಳಿಸಿ ಪೊಲೀಸರು ಬ್ಯಾಗ್​ಗಳನ್ನು ತಪಾಸಣೆ ಮಾಡಿದರು.

ಆದ್ರೆ ಯಾರ ಬಳಿಯೂ ಕಳ್ಳತನವಾದ ಬಂಗಾರದ ಒಡವೆಗಳು ಪತ್ತೆಯಾಗಲಿಲ್ಲ. ಈ ಕುರಿತು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ

Last Updated : Dec 22, 2024, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.