ETV Bharat / sports

ನಂಬರ್​ 1​ ಬ್ಯಾಟರ್​ ಆಗಿ, ಪರಿಸ್ಥಿತಿಗೆ ತಕ್ಕಂತೆ ಆಟವಾಡುವುದು ಅಗತ್ಯ: ಸೂರ್ಯಕುಮಾರ್​ ಯಾದವ್ - Suryakumar On T20 World Cup

author img

By PTI

Published : Jun 19, 2024, 9:23 AM IST

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಪ್ರದರ್ಶನ, ಬ್ಯಾಟಿಂಗ್ ಯೋಜನೆಗಳು ಹಾಗೂ ಪಿಚ್​ ಪರಿಸ್ಥಿತಿಗಳ ಬಗ್ಗೆ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಮಾತನಾಡಿದ್ದಾರೆ.

suryakumar yadav
ಸೂರ್ಯಕುಮಾರ್​ ಯಾದವ್ (Photo: IANS)

ಬ್ರಿಡ್ಜ್‌ಟೌನ್: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಬ್ಯಾಟರ್​ಗಳಿಗಿಂತ ಬೌಲರ್​ಗಳೇ ಪಾರಮ್ಯ ಮೆರೆಯುತ್ತಿದ್ದಾರೆ. ವಿಶ್ವದ ಘಟಾನುಘಟಿ ಟಿ-20 ಸ್ಪೆಷಲಿಸ್ಟ್​ ಬ್ಯಾಟರ್​ಗಳೂ ಕೂಡ ಬೌಲಿಂಗ್​ ದಾಳಿಗೆ ತಲೆಬಾಗಿದ್ದು, ನಿಧಾನಗತಿಯ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಟಿ20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಕೂಡ ಚುಟುಕು ವಿಶ್ವಕಪ್‌ನಲ್ಲಿ ಪಿಚ್​ ಸ್ವರೂಪಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಮುಂದಿನ ಪಂದ್ಯಗಳು ಕೆರಿಬಿಯನ್‌ನಲ್ಲಿ ನಡೆಯುತ್ತಿದ್ದು, ಕೊಂಚ ಸರಾಗವಾಗಿ ಬ್ಯಾಟ್​ ಬೀಸಲು ನೆರವಾಗಲಿವೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಭಾರತ ತಂಡವು ಗುರುವಾರ ಬಾರ್ಬಡೋಸ್​​ನಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಹಣಾಹಣಿಯ ಮೂಲಕ ಸೂಪರ್ 8 ಅಭಿಯಾನ ಆರಂಭಿಸಲಿದೆ. ಬಳಿಕ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಆಂಟಿಗುವಾ ಹಾಗೂ ಸೇಂಟ್ ಲೂಸಿಯಾದಲ್ಲಿ ನಡೆಯಲಿವೆ. ಇವೆರಡೂ ಮೈದಾನಗಳಲ್ಲಿ ಪಂದ್ಯಾವಳಿಯ ಅತ್ಯಧಿಕ ಮೊತ್ತಗಳು ದಾಖಲಾಗಿವೆ.

ನ್ಯೂಯಾರ್ಕ್‌ನಲ್ಲಿ ಅಮೆರಿಕ ವಿರುದ್ಧ ಅಲ್ಪಮೊತ್ತದ ಟಾರ್ಗೆಟ್​ ಇದ್ದರೂ ಬ್ಯಾಟಿಂಗ್​ ಸುಲಭವಿರಲಿಲ್ಲ. ಸೂರ್ಯಕುಮಾರ್ ಯಾದವ್​ ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಮೆರಿಕ​ ವಿರುದ್ಧ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ್ದರು. ಟಿ20 ಕ್ರಿಕೆಟ್​ನಲ್ಲಿ ಸೂರ್ಯ ಅವರ ಸರಾಸರಿ ಸ್ಟ್ರೈಕ್ ರೇಟ್ 168ಕ್ಕಿಂತ ಜಾಸ್ತಿ ಇರುವುದು ಗಮನಾರ್ಹವಾಗಿದೆ.

ಟೂರ್ನಿಯ ಬಗ್ಗೆ ಮಾತನಾಡಿರುವ ಸೂರ್ಯ, "ನೀವು ಎರಡು ವರ್ಷಗಳಿಂದ ನಂಬರ್ ಒನ್ ಬ್ಯಾಟರ್​ ಆಗಿದ್ದುಕೊಂಡು, ವಿಭಿನ್ನ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುತ್ತ, ತಂಡದ ಅಗತ್ಯತೆಗೆ ತಕ್ಕಂತೆ ಆಟ ಬದಲಾಯಿಸಿಕೊಳ್ಳಬೇಕು. ಅದು ಉತ್ತಮ ಬ್ಯಾಟ್ಸ್‌ಮನ್‌ಶಿಪ್ ಅನ್ನು ತೋರಿಸುತ್ತದೆ. ಅದನ್ನೇ ನಾನು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.

"ಪಿಚ್​​ನಲ್ಲಿ ಯಾವುದೇ ವೇಗವಿಲ್ಲದಾಗ ಆಕ್ರಮಣಕಾರಿ ಆಟವಾಡುವುದು ಕಷ್ಟ. ಆ ಸಮಯದಲ್ಲಿ ದೀರ್ಘವಾದ ಇನ್ನಿಂಗ್ಸ್ ಆಡಬೇಕಾದರೆ ಬ್ಯಾಟಿಂಗ್ ಬಹಳ ಸ್ಮಾರ್ಟ್ ಆಗಿರಬೇಕು. ನೀವು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕು. ತಂಡದ ಬೇಡಿಕೆಗೆ ಅನುಗುಣವಾಗಿ ಆಡಬೇಕು. ತಾಳ್ಮೆಯ ಇನ್ನಿಂಗ್ಸ್ ಕಟ್ಟಬೇಕು'' ಎಂದರು.

"ನಾನು ಅಮೆರಿಕದಲ್ಲಿಯೂ ಸಂತಸದಿಂದಲೇ ಆಡುತ್ತಿದ್ದೆ, ಅಲ್ಲಿ ಬ್ಯಾಟಿಂಗ್​ ಮಾಡಲು ಖುಷಿಯಿರಲಿಲ್ಲ ಎಂದಲ್ಲ. ಮೊದಲ ಬಾರಿಗೆ ಅಲ್ಲಿ ಆಡುತ್ತಿದ್ದೇವೆ, ಪರಿಸ್ಥಿತಿಗಳು ವಿಭಿನ್ನ ಹಾಗೂ ಸ್ವಲ್ಪ ಸವಾಲಿನಿಂದ ಕೂಡಿತ್ತು. ಆದರೆ, ವೆಸ್ಟ್​ ಇಂಡೀಸ್​ನಲ್ಲಿ ನಾವು ಈಗಾಗಲೇ ಆಡಿದ್ದೇವೆ. ಇಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ತಿಳಿದಿದೆ" ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಟಿ20 ವಿಶ್ವಕಪ್ ರೋಚಕ ಸೂಪರ್​-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight

''ಕೆನ್ಸಿಂಗ್ಟನ್ ಓವಲ್‌ನಲ್ಲಿರುವ ಪಿಚ್ ಕಂದು ಬಣ್ಣವನ್ನು ಹೊಂದಿದೆ. ಈ ಹಿಂದಿನ ಕೊನೆಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡವು ಇಲ್ಲಿ ಆಡಿತ್ತು. ನ್ಯೂಯಾರ್ಕ್‌ ಪಿಚ್​​ ಕಠಿಣವಾಗಿತ್ತು. ಯಾಕೆಂದರೆ ಅದು ಹೊಸದಾಗಿತ್ತು. ಅಲ್ಲಿ ವಿಶ್ವಕಪ್ ಇದೆ ಎಂದು ತಿಳಿದ ಬಳಿಕ ಎಲ್ಲ ಸಿದ್ಧತೆ ಕೈಗೊಂಡು ನಿರ್ಮಿಸಲಾಗಿತ್ತು. ಇಲ್ಲಿ ನಿಯಮಿತ ಕ್ರಿಕೆಟ್​ ನಡೆಯುವುದರಿಂದ, ಪಿಚ್​ಗಳು ಹೆಚ್ಚು ಉತ್ತಮವಾಗಿವೆ" ಅವರು ಹೇಳಿದರು. "ಸ್ವೀಪ್‌ಗಳು ಮತ್ತು ರಿವರ್ಸ್ ಸ್ವೀಪ್‌ಗಳು ಯಾವಾಗಲೂ ನನ್ನ ಬಲ. ನಾನು ಅಭ್ಯಾಸದ ಅವಧಿಗಳಲ್ಲಿ ಅದೇ ರೀತಿ ಆಡಲು ಪ್ರಯತ್ನಿಸುತ್ತೇನೆ" ಎಂದರು.

ನಾಯಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ್ದು, ರಿಷಭ್​ ಪಂತ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ಸೂರ್ಯಕುಮಾರ್ ಆಟ ಬದಲಿಸುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಹಾಗೇನೂ ಇಲ್ಲ. ಪಂದ್ಯದ ಸ್ವರೂಪಕ್ಕೆ ತಕ್ಕಂತೆ ಆಡಲು ಪ್ರಯತ್ನಿಸುತ್ತೇವೆ. ಆರಂಭಿಕ ವಿಕೆಟ್‌ಗಳಿದ್ದರೆ, ನೀವು ಇನ್ನೂ ಹೆಚ್ಚಿನ ರನ್‌ಗಳನ್ನು ಕಲೆಹಾಕಬೇಕು. ಆ ನಿಟ್ಟಿನಲ್ಲಿ ಬ್ಯಾಟಿಂಗ್ ಮಾಡಬೇಕು. ನಾವು ಕೂಡ ಅದನ್ನೇ ಪ್ರಯತ್ನಿಸುತ್ತೇವೆ. ಧನಾತ್ಮಕ ಮಾರ್ಗದಲ್ಲಿ ಮುನ್ನಡೆಯಲು ಪರಸ್ಪರ ಮಾತನಾಡಿಕೊಳ್ಳುತ್ತೇವೆ. ಎಲ್ಲ ನಿರ್ಧಾರ ಕೈಗೊಳ್ಳುವಿಕೆಯನ್ನು ಮ್ಯಾನೇಜ್‌ಮೆಂಟ್ ಆಟಗಾರರಿಗೆ ಬಿಟ್ಟಿದೆ" ಎಂದು ಹೇಳಿದರು.

ಇದನ್ನೂ ಓದಿ: 6,6,6,4,4,4 2nob,1wide ಯುವರಾಜ್​ ಸಿಂಗ್​ ದಾಖಲೆ ಸರಿಗಟ್ಟಿ, ಗೇಲ್​ ದಾಖಲೆ ಮುರಿದ ನಿಕೋಲಸ್​ ಪೂರನ್​ - Nicholas Pooran Records

ಬ್ರಿಡ್ಜ್‌ಟೌನ್: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಬ್ಯಾಟರ್​ಗಳಿಗಿಂತ ಬೌಲರ್​ಗಳೇ ಪಾರಮ್ಯ ಮೆರೆಯುತ್ತಿದ್ದಾರೆ. ವಿಶ್ವದ ಘಟಾನುಘಟಿ ಟಿ-20 ಸ್ಪೆಷಲಿಸ್ಟ್​ ಬ್ಯಾಟರ್​ಗಳೂ ಕೂಡ ಬೌಲಿಂಗ್​ ದಾಳಿಗೆ ತಲೆಬಾಗಿದ್ದು, ನಿಧಾನಗತಿಯ ಆಟಕ್ಕೆ ಮೊರೆ ಹೋಗುತ್ತಿದ್ದಾರೆ. ಟಿ20 ಮಾದರಿಯಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ಕೂಡ ಚುಟುಕು ವಿಶ್ವಕಪ್‌ನಲ್ಲಿ ಪಿಚ್​ ಸ್ವರೂಪಕ್ಕೆ ತಕ್ಕಂತೆ ತಮ್ಮ ಆಟದ ಶೈಲಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಮುಂದಿನ ಪಂದ್ಯಗಳು ಕೆರಿಬಿಯನ್‌ನಲ್ಲಿ ನಡೆಯುತ್ತಿದ್ದು, ಕೊಂಚ ಸರಾಗವಾಗಿ ಬ್ಯಾಟ್​ ಬೀಸಲು ನೆರವಾಗಲಿವೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಭಾರತ ತಂಡವು ಗುರುವಾರ ಬಾರ್ಬಡೋಸ್​​ನಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಹಣಾಹಣಿಯ ಮೂಲಕ ಸೂಪರ್ 8 ಅಭಿಯಾನ ಆರಂಭಿಸಲಿದೆ. ಬಳಿಕ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳು ಆಂಟಿಗುವಾ ಹಾಗೂ ಸೇಂಟ್ ಲೂಸಿಯಾದಲ್ಲಿ ನಡೆಯಲಿವೆ. ಇವೆರಡೂ ಮೈದಾನಗಳಲ್ಲಿ ಪಂದ್ಯಾವಳಿಯ ಅತ್ಯಧಿಕ ಮೊತ್ತಗಳು ದಾಖಲಾಗಿವೆ.

ನ್ಯೂಯಾರ್ಕ್‌ನಲ್ಲಿ ಅಮೆರಿಕ ವಿರುದ್ಧ ಅಲ್ಪಮೊತ್ತದ ಟಾರ್ಗೆಟ್​ ಇದ್ದರೂ ಬ್ಯಾಟಿಂಗ್​ ಸುಲಭವಿರಲಿಲ್ಲ. ಸೂರ್ಯಕುಮಾರ್ ಯಾದವ್​ ಸಮಯೋಚಿತ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಮೆರಿಕ​ ವಿರುದ್ಧ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದ್ದರು. ಟಿ20 ಕ್ರಿಕೆಟ್​ನಲ್ಲಿ ಸೂರ್ಯ ಅವರ ಸರಾಸರಿ ಸ್ಟ್ರೈಕ್ ರೇಟ್ 168ಕ್ಕಿಂತ ಜಾಸ್ತಿ ಇರುವುದು ಗಮನಾರ್ಹವಾಗಿದೆ.

ಟೂರ್ನಿಯ ಬಗ್ಗೆ ಮಾತನಾಡಿರುವ ಸೂರ್ಯ, "ನೀವು ಎರಡು ವರ್ಷಗಳಿಂದ ನಂಬರ್ ಒನ್ ಬ್ಯಾಟರ್​ ಆಗಿದ್ದುಕೊಂಡು, ವಿಭಿನ್ನ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುತ್ತ, ತಂಡದ ಅಗತ್ಯತೆಗೆ ತಕ್ಕಂತೆ ಆಟ ಬದಲಾಯಿಸಿಕೊಳ್ಳಬೇಕು. ಅದು ಉತ್ತಮ ಬ್ಯಾಟ್ಸ್‌ಮನ್‌ಶಿಪ್ ಅನ್ನು ತೋರಿಸುತ್ತದೆ. ಅದನ್ನೇ ನಾನು ಪ್ರಯತ್ನಿಸುತ್ತೇನೆ" ಎಂದು ಹೇಳಿದರು.

"ಪಿಚ್​​ನಲ್ಲಿ ಯಾವುದೇ ವೇಗವಿಲ್ಲದಾಗ ಆಕ್ರಮಣಕಾರಿ ಆಟವಾಡುವುದು ಕಷ್ಟ. ಆ ಸಮಯದಲ್ಲಿ ದೀರ್ಘವಾದ ಇನ್ನಿಂಗ್ಸ್ ಆಡಬೇಕಾದರೆ ಬ್ಯಾಟಿಂಗ್ ಬಹಳ ಸ್ಮಾರ್ಟ್ ಆಗಿರಬೇಕು. ನೀವು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಬೇಕು. ತಂಡದ ಬೇಡಿಕೆಗೆ ಅನುಗುಣವಾಗಿ ಆಡಬೇಕು. ತಾಳ್ಮೆಯ ಇನ್ನಿಂಗ್ಸ್ ಕಟ್ಟಬೇಕು'' ಎಂದರು.

"ನಾನು ಅಮೆರಿಕದಲ್ಲಿಯೂ ಸಂತಸದಿಂದಲೇ ಆಡುತ್ತಿದ್ದೆ, ಅಲ್ಲಿ ಬ್ಯಾಟಿಂಗ್​ ಮಾಡಲು ಖುಷಿಯಿರಲಿಲ್ಲ ಎಂದಲ್ಲ. ಮೊದಲ ಬಾರಿಗೆ ಅಲ್ಲಿ ಆಡುತ್ತಿದ್ದೇವೆ, ಪರಿಸ್ಥಿತಿಗಳು ವಿಭಿನ್ನ ಹಾಗೂ ಸ್ವಲ್ಪ ಸವಾಲಿನಿಂದ ಕೂಡಿತ್ತು. ಆದರೆ, ವೆಸ್ಟ್​ ಇಂಡೀಸ್​ನಲ್ಲಿ ನಾವು ಈಗಾಗಲೇ ಆಡಿದ್ದೇವೆ. ಇಲ್ಲಿನ ಪರಿಸ್ಥಿತಿ ಬಗ್ಗೆ ನಮಗೆ ತಿಳಿದಿದೆ" ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಟಿ20 ವಿಶ್ವಕಪ್ ರೋಚಕ ಸೂಪರ್​-8; ಭಾರತದ ಎದುರಾಳಿಗಳ್ಯಾರು? ಪಂದ್ಯಗಳು ಯಾವಾಗ? - T20 World Cup Super Eight

''ಕೆನ್ಸಿಂಗ್ಟನ್ ಓವಲ್‌ನಲ್ಲಿರುವ ಪಿಚ್ ಕಂದು ಬಣ್ಣವನ್ನು ಹೊಂದಿದೆ. ಈ ಹಿಂದಿನ ಕೊನೆಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡವು ಇಲ್ಲಿ ಆಡಿತ್ತು. ನ್ಯೂಯಾರ್ಕ್‌ ಪಿಚ್​​ ಕಠಿಣವಾಗಿತ್ತು. ಯಾಕೆಂದರೆ ಅದು ಹೊಸದಾಗಿತ್ತು. ಅಲ್ಲಿ ವಿಶ್ವಕಪ್ ಇದೆ ಎಂದು ತಿಳಿದ ಬಳಿಕ ಎಲ್ಲ ಸಿದ್ಧತೆ ಕೈಗೊಂಡು ನಿರ್ಮಿಸಲಾಗಿತ್ತು. ಇಲ್ಲಿ ನಿಯಮಿತ ಕ್ರಿಕೆಟ್​ ನಡೆಯುವುದರಿಂದ, ಪಿಚ್​ಗಳು ಹೆಚ್ಚು ಉತ್ತಮವಾಗಿವೆ" ಅವರು ಹೇಳಿದರು. "ಸ್ವೀಪ್‌ಗಳು ಮತ್ತು ರಿವರ್ಸ್ ಸ್ವೀಪ್‌ಗಳು ಯಾವಾಗಲೂ ನನ್ನ ಬಲ. ನಾನು ಅಭ್ಯಾಸದ ಅವಧಿಗಳಲ್ಲಿ ಅದೇ ರೀತಿ ಆಡಲು ಪ್ರಯತ್ನಿಸುತ್ತೇನೆ" ಎಂದರು.

ನಾಯಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದ್ದು, ರಿಷಭ್​ ಪಂತ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೆ ಸೂರ್ಯಕುಮಾರ್ ಆಟ ಬದಲಿಸುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಹಾಗೇನೂ ಇಲ್ಲ. ಪಂದ್ಯದ ಸ್ವರೂಪಕ್ಕೆ ತಕ್ಕಂತೆ ಆಡಲು ಪ್ರಯತ್ನಿಸುತ್ತೇವೆ. ಆರಂಭಿಕ ವಿಕೆಟ್‌ಗಳಿದ್ದರೆ, ನೀವು ಇನ್ನೂ ಹೆಚ್ಚಿನ ರನ್‌ಗಳನ್ನು ಕಲೆಹಾಕಬೇಕು. ಆ ನಿಟ್ಟಿನಲ್ಲಿ ಬ್ಯಾಟಿಂಗ್ ಮಾಡಬೇಕು. ನಾವು ಕೂಡ ಅದನ್ನೇ ಪ್ರಯತ್ನಿಸುತ್ತೇವೆ. ಧನಾತ್ಮಕ ಮಾರ್ಗದಲ್ಲಿ ಮುನ್ನಡೆಯಲು ಪರಸ್ಪರ ಮಾತನಾಡಿಕೊಳ್ಳುತ್ತೇವೆ. ಎಲ್ಲ ನಿರ್ಧಾರ ಕೈಗೊಳ್ಳುವಿಕೆಯನ್ನು ಮ್ಯಾನೇಜ್‌ಮೆಂಟ್ ಆಟಗಾರರಿಗೆ ಬಿಟ್ಟಿದೆ" ಎಂದು ಹೇಳಿದರು.

ಇದನ್ನೂ ಓದಿ: 6,6,6,4,4,4 2nob,1wide ಯುವರಾಜ್​ ಸಿಂಗ್​ ದಾಖಲೆ ಸರಿಗಟ್ಟಿ, ಗೇಲ್​ ದಾಖಲೆ ಮುರಿದ ನಿಕೋಲಸ್​ ಪೂರನ್​ - Nicholas Pooran Records

ETV Bharat Logo

Copyright © 2024 Ushodaya Enterprises Pvt. Ltd., All Rights Reserved.