ETV Bharat / sports

ಒಂದು ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ನಿರ್ಣಯಿಸಬಾರದು​: ಗಂಭೀರ್

ವಿರಾಟ್​ ಕೊಹ್ಲಿ ಕುರಿತು ಸುದ್ಧಿಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯ ಕೋಚ್​ ಗೌತಮ್​ ಗಂಭೀರ್ ಈ ರೀತಿ ಉತ್ತರಿಸಿದರು.

author img

By ETV Bharat Sports Team

Published : 2 hours ago

ವಿರಾಟ್​ ಕೊಹ್ಲಿ ಗೌತಮ್​ ಗಂಭೀರ್​
ವಿರಾಟ್​ ಕೊಹ್ಲಿ, ಗೌತಮ್​ ಗಂಭೀರ್​ (IANS)

ಹೈದರಾಬಾದ್​: ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತದ ರನ್​ ಮಷಿನ್​ ವಿರಾಟ್​​ ಕೊಹ್ಲಿ ರನ್​ಗಳಿಸುವಲ್ಲಿ ವೈಫಲ್ಯ ಅನುಭವಿಸಿದ್ದರು. ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಒಂದೂ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ 6 ಮತ್ತು 17 ರನ್​ಗಳಿಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲೂ ಮೊದಲ ಇನ್ನಿಂಗ್ಸ್​ನಲ್ಲಿ 29 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 47 ರನ್​ ಗಳಿಸಿದ್ದರು. ಒಟ್ಟಾರೆ ಸರಣಿಯಲ್ಲಿ 99 ರನ್​ಮಾತ್ರ ಕಲೆಹಾಕಿದ್ದರು. ಇದರಿಂದಾಗಿ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು.

ಇದೀಗ ಕೋಚ್​ ಗಂಭೀರ್​ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ​, "ಕೊಹ್ಲಿಗೆ ರನ್ ದಾಹವಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ಖಂಡಿತಾ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್​ ಸರಣಿಯಲ್ಲೂ ಅದೇ ವೇಗವನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇನೆ. ಒಂದು ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ನಿರ್ಣಯಿಸಬಾರದು. ಕ್ರೀಡೆಯಲ್ಲಿ, ಆಟಗಾರರು ಕೆಲವೊಮ್ಮೆ ವಿಫಲರಾಗುತ್ತಾರೆ" ಎಂದರು.

ಇದು ಬೌಲರ್‌ಗಳ ಯುಗ: ಬ್ಯಾಟರ್‌ಗಳು 1,000 ರನ್ ಗಳಿಸಿದರೂ, ತಂಡ ಪಂದ್ಯ ಗೆಲ್ಲುತ್ತದೆ ಎಂಬ ಭರವಸೆ ಇಲ್ಲ, ಆದರೆ ಬೌಲರ್ 20 ವಿಕೆಟ್ ಪಡೆದರೆ ಗೆಲುವು ಖಚಿತ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ನ್ಯೂಜಿಲೆಂಡ್​ ಟೆಸ್ಟ್​ ಸರಣಿ: ಈ ಮೂರು ದಾಖಲೆ ಬರೆಯಲು ಹಿಟ್​ಮ್ಯಾನ್ ಸಜ್ಜು!

ಹೈದರಾಬಾದ್​: ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತದ ರನ್​ ಮಷಿನ್​ ವಿರಾಟ್​​ ಕೊಹ್ಲಿ ರನ್​ಗಳಿಸುವಲ್ಲಿ ವೈಫಲ್ಯ ಅನುಭವಿಸಿದ್ದರು. ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಒಂದೂ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ 6 ಮತ್ತು 17 ರನ್​ಗಳಿಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲೂ ಮೊದಲ ಇನ್ನಿಂಗ್ಸ್​ನಲ್ಲಿ 29 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 47 ರನ್​ ಗಳಿಸಿದ್ದರು. ಒಟ್ಟಾರೆ ಸರಣಿಯಲ್ಲಿ 99 ರನ್​ಮಾತ್ರ ಕಲೆಹಾಕಿದ್ದರು. ಇದರಿಂದಾಗಿ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು.

ಇದೀಗ ಕೋಚ್​ ಗಂಭೀರ್​ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ​, "ಕೊಹ್ಲಿಗೆ ರನ್ ದಾಹವಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ಖಂಡಿತಾ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್​ ಸರಣಿಯಲ್ಲೂ ಅದೇ ವೇಗವನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇನೆ. ಒಂದು ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ನಿರ್ಣಯಿಸಬಾರದು. ಕ್ರೀಡೆಯಲ್ಲಿ, ಆಟಗಾರರು ಕೆಲವೊಮ್ಮೆ ವಿಫಲರಾಗುತ್ತಾರೆ" ಎಂದರು.

ಇದು ಬೌಲರ್‌ಗಳ ಯುಗ: ಬ್ಯಾಟರ್‌ಗಳು 1,000 ರನ್ ಗಳಿಸಿದರೂ, ತಂಡ ಪಂದ್ಯ ಗೆಲ್ಲುತ್ತದೆ ಎಂಬ ಭರವಸೆ ಇಲ್ಲ, ಆದರೆ ಬೌಲರ್ 20 ವಿಕೆಟ್ ಪಡೆದರೆ ಗೆಲುವು ಖಚಿತ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ನ್ಯೂಜಿಲೆಂಡ್​ ಟೆಸ್ಟ್​ ಸರಣಿ: ಈ ಮೂರು ದಾಖಲೆ ಬರೆಯಲು ಹಿಟ್​ಮ್ಯಾನ್ ಸಜ್ಜು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.