ETV Bharat / international

ಭಾರತ - ಕೆನಡಾ ಬಾಂಧವ್ಯಕ್ಕುಂಟಾದ ಹಾನಿಗೆ ಪ್ರಧಾನಿ ಟ್ರುಡೊ ನೇರ ಹೊಣೆ: ಭಾರತ

ಕೆನಡಾ ಗುಪ್ತಚರ ಮಾಹಿತಿ ಆಧರಿಸಿ ಭಾರತದ ಮೇಲೆ ಆರೋಪ ಮಾಡಲಾಗಿದೆಯೇ ಹೊರತು ಪುರಾವೆಗಳನ್ನು ಆಧರಿಸಿ ಅಲ್ಲ ಎಂದ ಟ್ರೂಡೊ - ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾಲ್ಗೊಳ್ಳುವಿಕೆಗೆ ನಂಬಲರ್ಹವಾದ ಪುರಾವೆಗಳಿವೆ ಎಂದ ಕೆನಡಾ

author img

By PTI

Published : 2 hours ago

CANADA-INQUIRY-MEA
responsibility-for-damage-caused-to-india-canada-ties-lies-with-pm-trudeau-alone-mea (IANS)

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತನಿಖಾ ಆಯೋಗದ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರಾಥಮಿಕವಾಗಿ ಇದು ಗುಪ್ತಚರ ಮಾಹಿತಿಯಾಗಿದೆ ಹಾಗೂ ನಮ್ಮ ಬಳಿ ಯಾವುದೇ ಗಟ್ಟಿಯಾದ ಮಾಹಿತಿ ಇಲ್ಲ ಎಂದು ಜಸ್ಟಿನ್​ ಟ್ರುಡೋ ಹೇಳಿದ್ದಾರೆ. ನಾವು ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಗುಪ್ತಚರ ಮಾಹಿತಿಯನ್ನು ಮಾತ್ರವೇ ಆಧರಿಸಿ ಟ್ರುಡೋ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಬೇಕಾದ "ಸ್ಥಿರ ಹಾಗೂ ಖಚಿತ ಸಾಕ್ಷ್ಯಾಧಾರಗಳಿಲ್ಲ" ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಕೆನಡಾ ಪ್ರಧಾನಿ ಈ ಹೇಳಿಕೆ ಹೊರ ಬರುತ್ತಿದ್ದಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಗುರುವಾರ ಮುಂಜಾನೆ ಹೇಳಿಕೆ ಬಿಡುಗಡೆ ಮಾಡಿದೆ. ಟ್ರುಡೊ ಅವರ ಈ ಹೇಳಿಕೆ, ನಾವು ಇಂದು ಕೇಳಿರುವುದು ಮತ್ತು ನಾವು ನಿರಂತರವಾಗಿ ಹೇಳುತ್ತಿರುವುದನ್ನು ಮಾತ್ರ ದೃಢಪಡಿಸುತ್ತದೆ. ಕೆನಡಾವು ಭಾರತ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧದ ಗಂಭೀರ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂಬುದನ್ನು ವಿಶ್ವಕ್ಕೆ ದೃಢಪಡಿಸಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಭಾರತ-ಕೆನಡಾ ಸಂಬಂಧಗಳ ಮೇಲೆ ಆಗಿರುವ ಭಾರಿ ನಷ್ಟಕ್ಕೆ ಪ್ರಧಾನ ಮಂತ್ರಿ ಟ್ರುಡೊ ಅವರೇ ಜವಾಬ್ದಾರರಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಟ್ರುಡೋ ಆರೋಪವೇನು?: ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಸಾರ್ವಜನಿಕ ವಿಚಾರಣೆಯ ಮೊದಲು ಸಾಕ್ಷ್ಯ ನೀಡಿದ ಟ್ರೂಡೊ, ಭಾರತೀಯ ರಾಜತಾಂತ್ರಿಕರು ನರೇಂದ್ರ ಮೋದಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕೆನಡಿಯನ್ನರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಅದನ್ನು ಭಾರತ ಸರ್ಕಾರ ಮತ್ತು ಅಪರಾಧ ಸಂಸ್ಥೆಗಳ ಉನ್ನತ ಆಡಳಿತಕ್ಕೆ ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂತಹ ಕ್ರಿಮಿನಲ್​ ಸಂಸ್ಥೆಗಳಿಗೆ ರವಾನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೆನಡಾ ಆರೋಪ ತಳ್ಳಿ ಹಾಕಿದ ಭಾರತ: ಆದರೆ, ಭಾರತ ಕೆನಡಾದ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಕೆನಡಾದಲ್ಲಿರುವ ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ಭಾರತೀಯ ಏಜೆಂಟರನ್ನು ಸಂಪರ್ಕಿಸಲು ಕೆನಡಾದ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ನವದೆಹಲಿಯಲ್ಲಿನ ಅಧಿಕೃತ ಮೂಲಗಳೊಂದಿಗೆ ನಿಜ್ಜರ್ ಪ್ರಕರಣದಲ್ಲಿ ತಾನು ನವದೆಹಲಿಯೊಂದಿಗೆ ಪುರಾವೆಗಳನ್ನು ಹಂಚಿಕೊಂಡಿದ್ದೇನೆ ಎಂಬ ಕೆನಡಾ ಸರ್ಕಾರದ ಸಮರ್ಥನೆಯು ನಿಜವಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.

ತನ್ನ ದೇಶದಲ್ಲಿ ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದು ಸೇರಿದಂತೆ ಭಾರತವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಟ್ರುಡೊ ಅವರ ಹಿಂದಿನ ಆರೋಪಗಳನ್ನು ನವದೆಹಲಿಯ ಮೂಲಗಳು ಮತ್ತೊಮ್ಮೆ ತಿರಸ್ಕರಿಸಿವೆ.

ಕೆನಡಾ ಆರು ರಾಜತಾಂತ್ರಿಕರನ್ನು ಹೊರ ಹಾಕಿದ್ದ ಭಾರತ: ಭಾರತವು ಸೋಮವಾರ ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತ್ತು. ಅಷ್ಟೇ ಅಲ್ಲ ಕೆನಡಾದಿಂದ ತನ್ನ ಹೈಕಮಿಷನರ್ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಘರ್ಷಣೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ದೊಡ್ಡ ಪೆಟ್ಟು ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ "ಸಂಭಾವ್ಯ" ಒಳಗೊಳ್ಳುವಿಕೆಯ ಬಗ್ಗೆ ಟ್ರೂಡೊ ಆರೋಪಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿತ್ತು. ಇದೇ ವೇಳೆ ಭಾರತ ಸರ್ಕಾರ ಟ್ರುಡೊ ಅವರ ಆರೋಪಗಳನ್ನು "ಅಸಂಬದ್ಧ" ಎಂದು ತಳ್ಳಿಹಾಕಿತ್ತು.

ಕೆನಡಾದ ನೆಲದಿಂದ ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರವಾದ ಘಟಕಗಳಿಗೆ ಕೆನಡಾ ಅವಕಾಶ ನೀಡುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತ ಹೇಳಿದೆ. ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದ ನಿಜ್ಜರ್‌ನನ್ನು ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇವುಗಳನ್ನು ಓದಿ:ಭಯೋತ್ಪಾದನೆ, ಉಗ್ರವಾದದಿಂದ ಪ್ರಾದೇಶಿಕ ಸಹಕಾರಕ್ಕೆ ಅಡ್ಡಿ: ಪಾಕ್ SCO ಶೃಂಗಸಭೆಯಲ್ಲಿ ಜೈಶಂಕರ್

ಕಾಶ್ಮೀರದಲ್ಲಿ ಚುನಾವಣೆ ಯಶಸ್ವಿಯಾಗಿದ್ದಕ್ಕೆ ಇಸ್ಲಾಮಾಬಾದ್​ಗೆ ನಿರಾಸೆ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ತಿವಿದ ಭಾರತಭಾರತ, ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣ, ಹಿನ್ನೆಲೆಯೇನು? ಸಂಪೂರ್ಣ ಮಾಹಿತಿ

ನವದೆಹಲಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ತನಿಖಾ ಆಯೋಗದ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪ್ರಾಥಮಿಕವಾಗಿ ಇದು ಗುಪ್ತಚರ ಮಾಹಿತಿಯಾಗಿದೆ ಹಾಗೂ ನಮ್ಮ ಬಳಿ ಯಾವುದೇ ಗಟ್ಟಿಯಾದ ಮಾಹಿತಿ ಇಲ್ಲ ಎಂದು ಜಸ್ಟಿನ್​ ಟ್ರುಡೋ ಹೇಳಿದ್ದಾರೆ. ನಾವು ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಗುಪ್ತಚರ ಮಾಹಿತಿಯನ್ನು ಮಾತ್ರವೇ ಆಧರಿಸಿ ಟ್ರುಡೋ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಬೇಕಾದ "ಸ್ಥಿರ ಹಾಗೂ ಖಚಿತ ಸಾಕ್ಷ್ಯಾಧಾರಗಳಿಲ್ಲ" ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಕೆನಡಾ ಪ್ರಧಾನಿ ಈ ಹೇಳಿಕೆ ಹೊರ ಬರುತ್ತಿದ್ದಂತೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಗುರುವಾರ ಮುಂಜಾನೆ ಹೇಳಿಕೆ ಬಿಡುಗಡೆ ಮಾಡಿದೆ. ಟ್ರುಡೊ ಅವರ ಈ ಹೇಳಿಕೆ, ನಾವು ಇಂದು ಕೇಳಿರುವುದು ಮತ್ತು ನಾವು ನಿರಂತರವಾಗಿ ಹೇಳುತ್ತಿರುವುದನ್ನು ಮಾತ್ರ ದೃಢಪಡಿಸುತ್ತದೆ. ಕೆನಡಾವು ಭಾರತ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧದ ಗಂಭೀರ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಎಂಬುದನ್ನು ವಿಶ್ವಕ್ಕೆ ದೃಢಪಡಿಸಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಭಾರತ-ಕೆನಡಾ ಸಂಬಂಧಗಳ ಮೇಲೆ ಆಗಿರುವ ಭಾರಿ ನಷ್ಟಕ್ಕೆ ಪ್ರಧಾನ ಮಂತ್ರಿ ಟ್ರುಡೊ ಅವರೇ ಜವಾಬ್ದಾರರಾಗಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಟ್ರುಡೋ ಆರೋಪವೇನು?: ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಸಾರ್ವಜನಿಕ ವಿಚಾರಣೆಯ ಮೊದಲು ಸಾಕ್ಷ್ಯ ನೀಡಿದ ಟ್ರೂಡೊ, ಭಾರತೀಯ ರಾಜತಾಂತ್ರಿಕರು ನರೇಂದ್ರ ಮೋದಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕೆನಡಿಯನ್ನರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಮತ್ತು ಅದನ್ನು ಭಾರತ ಸರ್ಕಾರ ಮತ್ತು ಅಪರಾಧ ಸಂಸ್ಥೆಗಳ ಉನ್ನತ ಆಡಳಿತಕ್ಕೆ ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂತಹ ಕ್ರಿಮಿನಲ್​ ಸಂಸ್ಥೆಗಳಿಗೆ ರವಾನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೆನಡಾ ಆರೋಪ ತಳ್ಳಿ ಹಾಕಿದ ಭಾರತ: ಆದರೆ, ಭಾರತ ಕೆನಡಾದ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಕೆನಡಾದಲ್ಲಿರುವ ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ಭಾರತೀಯ ಏಜೆಂಟರನ್ನು ಸಂಪರ್ಕಿಸಲು ಕೆನಡಾದ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ನವದೆಹಲಿಯಲ್ಲಿನ ಅಧಿಕೃತ ಮೂಲಗಳೊಂದಿಗೆ ನಿಜ್ಜರ್ ಪ್ರಕರಣದಲ್ಲಿ ತಾನು ನವದೆಹಲಿಯೊಂದಿಗೆ ಪುರಾವೆಗಳನ್ನು ಹಂಚಿಕೊಂಡಿದ್ದೇನೆ ಎಂಬ ಕೆನಡಾ ಸರ್ಕಾರದ ಸಮರ್ಥನೆಯು ನಿಜವಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.

ತನ್ನ ದೇಶದಲ್ಲಿ ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆಗಳನ್ನು ನಡೆಸುವುದು ಸೇರಿದಂತೆ ಭಾರತವು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಟ್ರುಡೊ ಅವರ ಹಿಂದಿನ ಆರೋಪಗಳನ್ನು ನವದೆಹಲಿಯ ಮೂಲಗಳು ಮತ್ತೊಮ್ಮೆ ತಿರಸ್ಕರಿಸಿವೆ.

ಕೆನಡಾ ಆರು ರಾಜತಾಂತ್ರಿಕರನ್ನು ಹೊರ ಹಾಕಿದ್ದ ಭಾರತ: ಭಾರತವು ಸೋಮವಾರ ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತ್ತು. ಅಷ್ಟೇ ಅಲ್ಲ ಕೆನಡಾದಿಂದ ತನ್ನ ಹೈಕಮಿಷನರ್ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಘರ್ಷಣೆಯು ಉಭಯ ರಾಷ್ಟ್ರಗಳ ನಡುವಿನ ಸಂಬಂಧಕ್ಕೆ ದೊಡ್ಡ ಪೆಟ್ಟು ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ "ಸಂಭಾವ್ಯ" ಒಳಗೊಳ್ಳುವಿಕೆಯ ಬಗ್ಗೆ ಟ್ರೂಡೊ ಆರೋಪಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿತ್ತು. ಇದೇ ವೇಳೆ ಭಾರತ ಸರ್ಕಾರ ಟ್ರುಡೊ ಅವರ ಆರೋಪಗಳನ್ನು "ಅಸಂಬದ್ಧ" ಎಂದು ತಳ್ಳಿಹಾಕಿತ್ತು.

ಕೆನಡಾದ ನೆಲದಿಂದ ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿರುವ ಖಲಿಸ್ತಾನ್ ಪರವಾದ ಘಟಕಗಳಿಗೆ ಕೆನಡಾ ಅವಕಾಶ ನೀಡುವುದು ಉಭಯ ದೇಶಗಳ ನಡುವಿನ ಪ್ರಮುಖ ಸಮಸ್ಯೆಯಾಗಿದೆ ಎಂದು ಭಾರತ ಹೇಳಿದೆ. ಭಾರತದಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿದ್ದ ನಿಜ್ಜರ್‌ನನ್ನು ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಇವುಗಳನ್ನು ಓದಿ:ಭಯೋತ್ಪಾದನೆ, ಉಗ್ರವಾದದಿಂದ ಪ್ರಾದೇಶಿಕ ಸಹಕಾರಕ್ಕೆ ಅಡ್ಡಿ: ಪಾಕ್ SCO ಶೃಂಗಸಭೆಯಲ್ಲಿ ಜೈಶಂಕರ್

ಕಾಶ್ಮೀರದಲ್ಲಿ ಚುನಾವಣೆ ಯಶಸ್ವಿಯಾಗಿದ್ದಕ್ಕೆ ಇಸ್ಲಾಮಾಬಾದ್​ಗೆ ನಿರಾಸೆ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ತಿವಿದ ಭಾರತಭಾರತ, ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣ, ಹಿನ್ನೆಲೆಯೇನು? ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.