ETV Bharat / international

ಹಿಂದೂ, ಜೈನ ಯಾತ್ರಾರ್ಥಿಗಳಿಗಾಗಿ ಮತ್ತೊಂದು ಧಾರ್ಮಿಕ ಕಾರಿಡಾರ್ ಪ್ರಸ್ತಾಪಿಸಿದ ಪಾಕಿಸ್ತಾನ - Kartarpur like religious corridor

ಕರ್ತಾರ್​ಪುರ್ ಕಾರಿಡಾರ್ ಮಾದರಿಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರವಾಸೋದ್ಯಮ ಸಚಿವ ಜುಲ್ಫಿಕರ್ ಅಲಿ ಶಾ ಮಾತನಾಡಿದ್ದಾರೆ.

author img

By ETV Bharat Karnataka Team

Published : Jun 6, 2024, 8:08 PM IST

ಪಾಕಿಸ್ತಾನದಲ್ಲಿನ ಪುರಾತನ ದೇವಾಲಯಗಳು
ಪಾಕಿಸ್ತಾನದಲ್ಲಿನ ಪುರಾತನ ದೇವಾಲಯಗಳು (IANS image)

ಇಸ್ಲಾಮಾಬಾದ್ : ಕರ್ತಾರ್​ಪುರ್ ಕಾರಿಡಾರ್ ಮಾದರಿಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರವಾಸೋದ್ಯಮ ಸಚಿವ ಜುಲ್ಫಿಕರ್ ಅಲಿ ಶಾ ಗುರುವಾರ ಪ್ರಸ್ತಾಪ ಮಾಡಿದ್ದಾರೆ. ಪಾಕಿಸ್ತಾನದ ಉಮರ್​ಕೋಟ್ ಮತ್ತು ನಾಗರ್ ಪಾರ್ಕರ್ ಗಳಲ್ಲಿ ಇರುವ ಹಿಂದೂ ದೇವಾಲಯಗಳಿಗೆ ಭಾರತದ ಗುಜರಾತ್ ಮತ್ತು ರಾಜಸ್ಥಾನದ ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ಹೊಸ ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರಾಂತ್ಯದ ಸಚಿವರು ಮಾತನಾಡಿದ್ದಾರೆ. ದುಬೈನಲ್ಲಿ ನಡೆದ ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಸಿಂಧ್​ನಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿ ನೀಡಲು ದೊಡ್ಡ ಸಂಖ್ಯೆಯ ಹಿಂದೂಗಳು ಮತ್ತು ಜೈನರು ಉತ್ಸುಕರಾಗಿದ್ದಾರೆ ಎಂದು ಶಾ ಹೇಳಿದರು. ಸಿಂಧ್ ಪ್ರಾಂತ್ಯದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಶ್ರೀ ಶಿವ ಮಂದಿರವು ಪಾಕಿಸ್ತಾನದ ಏಕೈಕ ಹಿಂದೂ ಬಹುಸಂಖ್ಯಾತ ಜಿಲ್ಲೆಯಾದ ಉಮರ್ ಕೋಟ್​ನಲ್ಲಿದೆ.

ಈ ದೇವಾಲಯವನ್ನು 2,000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದ್ದರೂ, ಸ್ಥಳೀಯ ಹಿಂದೂ ಸಮುದಾಯದ ಮುಖಂಡರೊಬ್ಬರು ಇದು 5,000 ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಈ ದೇವಾಲಯವನ್ನು ಅಖಿಲ ಹಿಂದೂ ಪಂಚಾಯತ್ ನಿರ್ವಹಿಸುತ್ತದೆ. ನಿಯಮಿತ ದುರಸ್ತಿ ಮತ್ತು ನಿರ್ವಹಣೆಯ ಹೊರತಾಗಿ, ಪ್ರತಿವರ್ಷ ಹೆಚ್ಚುತ್ತಿರುವ ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಅತಿಥಿಗೃಹ, ಸಮುದಾಯ ಭವನ ಮತ್ತು ಇತರ ಸೌಲಭ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.

ಇನ್ನು ಉಮರ್ ಕೋಟ್​ನಲ್ಲಿ ಕಾಳಿ ಮಾತಾ ದೇವಾಲಯ, ಕೃಷ್ಣ ಮಂದಿರ ಮತ್ತು ಮನ್ಹಾರ್ ಮಂದಿರ ಕತ್ವಾರಿ ಮಂದಿರಗಳಿವೆ. ನಾಗರ್ ಪಾರ್ಕರ್ ನಲ್ಲಿ 14 ಜೈನ ದೇವಾಲಯಗಳಿದ್ದು, ಇವೆಲ್ಲವೂ ನಿರ್ಲಕ್ಷಿಸಲ್ಪಟ್ಟಿವೆ. ಅವುಗಳಲ್ಲಿ ವಿಶ್ವದ ಅತ್ಯಂತ ಹಳೆಯ ಜೈನ ವರ್ಣಚಿತ್ರಗಳನ್ನು ಹೊಂದಿರುವ ಗೋರಿ ದೇವಾಲಯ, ಪರಸ್ ನಾಥ್ ಮೂರ್ತಿಯನ್ನು ಹೊಂದಿರುವ, ಸ್ಥಳೀಯ ಹಿಂದೂಗಳಿಂದ ಪೂಜಿಸಲ್ಪಡುವ ಗೋರಿ ದೇವಾಲಯ, ನಾಗರ್ ಪಾರ್ಕರ್ ಬಜಾರ್ ದೇವಾಲಯ, ಕರೂಂಜರ್ ಪರ್ವತಗಳ ತಪ್ಪಲಿನಲ್ಲಿರುವ ಭೋದೇಸರ್ ದೇವಾಲಯಗಳು ಮತ್ತು ವೀರವಾಹ್ ಪಟ್ಟಣದ ಬಳಿ ಪಾಳುಬಿದ್ದ ಆದರೆ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ದೇವಾಲಯ ಮತ್ತು ರಣ್ ಆಫ್ ಕಚ್ ಅಂಚಿನಲ್ಲಿರುವ ಪ್ರಾಚೀನ ಪರಿನಗರ ಬಂದರಿನ ಅವಶೇಷಗಳು ಇದರಲ್ಲಿ ಸೇರಿವೆ.

ಧಾರ್ಮಿಕ ಪ್ರವಾಸಿಗರಿಗಾಗಿ ಸಿಂಧ್ ಸರ್ಕಾರವು ಭಾರತದಿಂದ ಸುಕ್ಕೂರ್ ಅಥವಾ ಲರ್ಕಾನಾಗೆ ಸಾಪ್ತಾಹಿಕ ವಿಮಾನವನ್ನು ಪ್ರಾರಂಭಿಸಬಹುದು ಎಂದು ಶಾ ಸಲಹೆ ನೀಡಿದರು.

ನವೆಂಬರ್ 9, 2019 ರಂದು ಉದ್ಘಾಟಿಸಲಾದ ಕರ್ತಾರ್ ಪುರ ಕಾರಿಡಾರ್ ಪಾಕಿಸ್ತಾನ-ಭಾರತ ಗಡಿಯಿಂದ 4 ಕಿ.ಮೀ ಉದ್ದವಾಗಿದೆ ಮತ್ತು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ತಮ್ಮ ಅಂತಿಮ ವರ್ಷಗಳಲ್ಲಿ ವಾಸಿಸುತ್ತಿದ್ದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ಪುರಕ್ಕೆ ಭಾರತೀಯ ಯಾತ್ರಾರ್ಥಿಗಳ ವೀಸಾ ರಹಿತ ಭೇಟಿಗೆ ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ : 'ಭಾರತದೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಇದು ಸಕಾಲ': ಚೀನಾದ ಸರ್ಕಾರಿ ಮಾಧ್ಯಮ ಅಚ್ಚರಿಯ ಹೇಳಿಕೆ - India China Relations

ಇಸ್ಲಾಮಾಬಾದ್ : ಕರ್ತಾರ್​ಪುರ್ ಕಾರಿಡಾರ್ ಮಾದರಿಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರವಾಸೋದ್ಯಮ ಸಚಿವ ಜುಲ್ಫಿಕರ್ ಅಲಿ ಶಾ ಗುರುವಾರ ಪ್ರಸ್ತಾಪ ಮಾಡಿದ್ದಾರೆ. ಪಾಕಿಸ್ತಾನದ ಉಮರ್​ಕೋಟ್ ಮತ್ತು ನಾಗರ್ ಪಾರ್ಕರ್ ಗಳಲ್ಲಿ ಇರುವ ಹಿಂದೂ ದೇವಾಲಯಗಳಿಗೆ ಭಾರತದ ಗುಜರಾತ್ ಮತ್ತು ರಾಜಸ್ಥಾನದ ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ಹೊಸ ಕಾರಿಡಾರ್ ನಿರ್ಮಾಣದ ಬಗ್ಗೆ ಸಿಂಧ್ ಪ್ರಾಂತ್ಯದ ಸಚಿವರು ಮಾತನಾಡಿದ್ದಾರೆ. ದುಬೈನಲ್ಲಿ ನಡೆದ ಪ್ರವಾಸೋದ್ಯಮ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಈ ಪ್ರಸ್ತಾಪ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಸಿಂಧ್​ನಲ್ಲಿರುವ ಹಲವಾರು ದೇವಾಲಯಗಳಿಗೆ ಭೇಟಿ ನೀಡಲು ದೊಡ್ಡ ಸಂಖ್ಯೆಯ ಹಿಂದೂಗಳು ಮತ್ತು ಜೈನರು ಉತ್ಸುಕರಾಗಿದ್ದಾರೆ ಎಂದು ಶಾ ಹೇಳಿದರು. ಸಿಂಧ್ ಪ್ರಾಂತ್ಯದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಶ್ರೀ ಶಿವ ಮಂದಿರವು ಪಾಕಿಸ್ತಾನದ ಏಕೈಕ ಹಿಂದೂ ಬಹುಸಂಖ್ಯಾತ ಜಿಲ್ಲೆಯಾದ ಉಮರ್ ಕೋಟ್​ನಲ್ಲಿದೆ.

ಈ ದೇವಾಲಯವನ್ನು 2,000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದ್ದರೂ, ಸ್ಥಳೀಯ ಹಿಂದೂ ಸಮುದಾಯದ ಮುಖಂಡರೊಬ್ಬರು ಇದು 5,000 ವರ್ಷಗಳಷ್ಟು ಹಳೆಯದು ಎಂದು ಹೇಳಿದರು. ಈ ದೇವಾಲಯವನ್ನು ಅಖಿಲ ಹಿಂದೂ ಪಂಚಾಯತ್ ನಿರ್ವಹಿಸುತ್ತದೆ. ನಿಯಮಿತ ದುರಸ್ತಿ ಮತ್ತು ನಿರ್ವಹಣೆಯ ಹೊರತಾಗಿ, ಪ್ರತಿವರ್ಷ ಹೆಚ್ಚುತ್ತಿರುವ ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಅತಿಥಿಗೃಹ, ಸಮುದಾಯ ಭವನ ಮತ್ತು ಇತರ ಸೌಲಭ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.

ಇನ್ನು ಉಮರ್ ಕೋಟ್​ನಲ್ಲಿ ಕಾಳಿ ಮಾತಾ ದೇವಾಲಯ, ಕೃಷ್ಣ ಮಂದಿರ ಮತ್ತು ಮನ್ಹಾರ್ ಮಂದಿರ ಕತ್ವಾರಿ ಮಂದಿರಗಳಿವೆ. ನಾಗರ್ ಪಾರ್ಕರ್ ನಲ್ಲಿ 14 ಜೈನ ದೇವಾಲಯಗಳಿದ್ದು, ಇವೆಲ್ಲವೂ ನಿರ್ಲಕ್ಷಿಸಲ್ಪಟ್ಟಿವೆ. ಅವುಗಳಲ್ಲಿ ವಿಶ್ವದ ಅತ್ಯಂತ ಹಳೆಯ ಜೈನ ವರ್ಣಚಿತ್ರಗಳನ್ನು ಹೊಂದಿರುವ ಗೋರಿ ದೇವಾಲಯ, ಪರಸ್ ನಾಥ್ ಮೂರ್ತಿಯನ್ನು ಹೊಂದಿರುವ, ಸ್ಥಳೀಯ ಹಿಂದೂಗಳಿಂದ ಪೂಜಿಸಲ್ಪಡುವ ಗೋರಿ ದೇವಾಲಯ, ನಾಗರ್ ಪಾರ್ಕರ್ ಬಜಾರ್ ದೇವಾಲಯ, ಕರೂಂಜರ್ ಪರ್ವತಗಳ ತಪ್ಪಲಿನಲ್ಲಿರುವ ಭೋದೇಸರ್ ದೇವಾಲಯಗಳು ಮತ್ತು ವೀರವಾಹ್ ಪಟ್ಟಣದ ಬಳಿ ಪಾಳುಬಿದ್ದ ಆದರೆ ಉತ್ತಮವಾಗಿ ಸಂರಕ್ಷಿಸಲ್ಪಟ್ಟ ದೇವಾಲಯ ಮತ್ತು ರಣ್ ಆಫ್ ಕಚ್ ಅಂಚಿನಲ್ಲಿರುವ ಪ್ರಾಚೀನ ಪರಿನಗರ ಬಂದರಿನ ಅವಶೇಷಗಳು ಇದರಲ್ಲಿ ಸೇರಿವೆ.

ಧಾರ್ಮಿಕ ಪ್ರವಾಸಿಗರಿಗಾಗಿ ಸಿಂಧ್ ಸರ್ಕಾರವು ಭಾರತದಿಂದ ಸುಕ್ಕೂರ್ ಅಥವಾ ಲರ್ಕಾನಾಗೆ ಸಾಪ್ತಾಹಿಕ ವಿಮಾನವನ್ನು ಪ್ರಾರಂಭಿಸಬಹುದು ಎಂದು ಶಾ ಸಲಹೆ ನೀಡಿದರು.

ನವೆಂಬರ್ 9, 2019 ರಂದು ಉದ್ಘಾಟಿಸಲಾದ ಕರ್ತಾರ್ ಪುರ ಕಾರಿಡಾರ್ ಪಾಕಿಸ್ತಾನ-ಭಾರತ ಗಡಿಯಿಂದ 4 ಕಿ.ಮೀ ಉದ್ದವಾಗಿದೆ ಮತ್ತು ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ತಮ್ಮ ಅಂತಿಮ ವರ್ಷಗಳಲ್ಲಿ ವಾಸಿಸುತ್ತಿದ್ದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ಪುರಕ್ಕೆ ಭಾರತೀಯ ಯಾತ್ರಾರ್ಥಿಗಳ ವೀಸಾ ರಹಿತ ಭೇಟಿಗೆ ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ : 'ಭಾರತದೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಇದು ಸಕಾಲ': ಚೀನಾದ ಸರ್ಕಾರಿ ಮಾಧ್ಯಮ ಅಚ್ಚರಿಯ ಹೇಳಿಕೆ - India China Relations

ETV Bharat Logo

Copyright © 2024 Ushodaya Enterprises Pvt. Ltd., All Rights Reserved.