ETV Bharat / health

'ಮಧುಮೇಹಿಗಳು ಸೂರ್ಯಾಸ್ತಕ್ಕೂ ಮುನ್ನವೇ ಆಹಾರ ಸೇವಿಸಿದರೆ ಒಳ್ಳೆಯದು': ಇದರ ಹಿಂದಿನ ಸತ್ಯ ತಿಳಿಸಿದ ಆಯುರ್ವೇದ ತಜ್ಞರು - Dinner Best Time

author img

By ETV Bharat Health Team

Published : 2 hours ago

Have dinner before sunset: ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತು ಮಧುಮೇಹದಿಂದ ಬಳಲುತ್ತಿದೆ. ಈ ರೋಗವು ವಯಸ್ಸನ್ನು ಲೆಕ್ಕಿಸದೇ ಎಲ್ಲ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆಯುರ್ವೇದ ತಜ್ಞ ದೀಕ್ಷಾ ಭಾವ್ಸಾರ್ ಅವರು, ಸಕ್ಕರೆ ರೋಗಿಗಳಿಗೆ ರಾತ್ರಿಯ ಊಟವನ್ನು ಬೇಗ (ಸೂರ್ಯಾಸ್ತದ ಮೊದಲು) ಮುಗಿಸುವಂತೆ ಸಲಹೆ ನೀಡಿದ್ದಾರೆ.

ADVISED TO EAT BEFORE SUNSET  HAVE DINNER BEFORE SUNSET  WHY SHOULD NOT EAT FOOD AT NIGHT  DINNER BEST TIME
ಸಾಂದರ್ಭಿಕ ಚಿತ್ರ (ETV Bharat)

Have dinner before sunset: ಇಂದಿನ ಕಾಲಘಟ್ಟದಲ್ಲಿ ಡಯಾಬಿಟೀಸ್ ಎನ್ನುವುದು ಜಗತ್ತಿನಾದ್ಯಂತ ಹರಡುತ್ತಿರುವ ಗಂಭೀರ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಕಾಯಿಲೆಯಿಂದ ಪ್ರಭಾವಿತವಾಗದಿರಲು, ಆರೋಗ್ಯಕ್ಕೆ ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸುವುದು ಬಹಳ ಮುಖ್ಯ.

ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಯುತ್ತದೆ. ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದರಿಂದ ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಇನ್ಸುಲಿನ್ ಉತ್ಪಾದನೆ ಉತ್ತೇಜಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜನರು ಸಾಮೆ, ಕೊರಲೆ, ರಾಗಿ ಮತ್ತು ಜೋಳದ ಹಿಟ್ಟನ್ನು ಬಳಸಬಹುದು ಎಂದು ಆಯುರ್ವೇದ ತಜ್ಞ ದೀಕ್ಷಾ ಭಾವಸರ್ ಹೇಳುತ್ತಾರೆ. ಈ ಆಹಾರ ಪದಾರ್ಥಗಳು ಮಧುಮೇಹ ರೋಗಿಗಳಿಗೆ ರಾಮಬಾಣವೆಂದು ಅವರು ಸಾಬೀತುಪಡಿಸಬಹುದು.

ಮಧುಮೇಹ ರೋಗಿಗಳಿಗೆ ವ್ಯಾಯಾಮ ರಾಮಬಾಣ: ಆಯುರ್ವೇದ ತಜ್ಞೆ ದೀಕ್ಷಾ ಭಾವಸರ್ ಅವರು, ಬಹುತೇಕ ಜನರು ತಮ್ಮ ಇಡೀ ದಿನವನ್ನು ಮನೆ ಮತ್ತು ಕಚೇರಿ ಕೆಲಸದಲ್ಲಿ ಕಳೆಯುತ್ತಾರೆ. ಅವರು ವ್ಯಾಯಾಮಕ್ಕೆ ಯಾವುದೇ ಆದ್ಯತೆ ನೀಡುವುದಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಜೀವನಶೈಲಿಯಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ದಿನದ ಕನಿಷ್ಠ 40 ನಿಮಿಷ ವ್ಯಾಯಾಮ ಮತ್ತು 20 ನಿಮಿಷ ಪ್ರಾಣಾಯಾಮಕ್ಕೆ ಮೀಸಲಿಡಬೇಕು ಎಂದು ಸಲಹೆ ನೀಡಲಾಗಿದೆ.

ವ್ಯಾಯಾಮದ ಭಾಗವಾಗಿ ವಾಕಿಂಗ್, ಸೈಕ್ಲಿಂಗ್, ಯೋಗದಂತಹ ವಿಷಯಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ. ದೇಹವು ಈ ರೀತಿಯಾಗಿ ಕೆಲಸ ಮಾಡುವುದರಿಂದ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದ ಪ್ರತಿಯೊಂದು ಜೀವಕೋಶಕ್ಕೂ ಸಾಕಷ್ಟು ಆಮ್ಲಜನಕ ಸಿಗುತ್ತದೆ. ವ್ಯಾಯಾಮ ಮಾಡುವುದರಿಂದ ಅಗತ್ಯ ಇರುವಷ್ಟು ಇನ್ಸುಲಿನ್ ಉತ್ಪತ್ತಿಯಾಗುತ್ತದೆ ಎಂದು ದೀಕ್ಷಾ ಭಾವಸರ್ ಹೇಳುತ್ತಾರೆ.

ಇವುಗಳನ್ನು ತಿನ್ನದ ಇದ್ದರೆ ಒಳ್ಳೆಯದು: ಸಕ್ಕರೆ, ಮೈದಾ ಅಥವಾ ಗ್ಲುಟನ್ ಜೊತೆ ನೇರವಾಗಿ ಶೇಂಗಾ ಬೀಜಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಈ ಪದಾರ್ಥಗಳು ಮಧುಮೇಹದ ತೀವ್ರತೆ ಹೆಚ್ಚಿಸುವ ಹೆಚ್ಚಿನ ಅವಕಾಶ ಹೊಂದಿವೆ. ಬದಲಾಗಿ, ಆಹಾರದಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಆಹಾರಗಳನ್ನು ಸೇರಿಸುವುದು ಒಳ್ಳೆಯದು. ರಾಗಿ ಮತ್ತು ಜೋಳ, ಬೇಳೆಕಾಳುಗಳು ಸೇರಿದಂತೆ ಸಿರಿಧಾನ್ಯಗಳ ಪ್ರಯೋಜನಗಳನ್ನು ಪಡೆಯಬಹುದು. ಶೇಂಗಾ ಸೇರಿದಂತೆ ಇತರ ಬೀಜಗಳನ್ನು ನೇರವಾಗಿ ತಿನ್ನುವ ಬದಲು ನೆನೆಸಿಡುವುದರಿಂದ ನೀವು ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ಆಯುರ್ವೇದ ತಜ್ಞೆ ದೀಕ್ಷಾ ಸಲಹೆ ನೀಡುತ್ತಾರೆ.

ಊಟ ಯಾವಾಗ ಮಾಡಬೇಕು?: ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದ ಉಂಟಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಸಕ್ಕರೆಯ ಮಟ್ಟ ಕಡಿಮೆ ಮಾಡಲು, ರಾತ್ರಿಯ ಊಟವನ್ನು ಬೇಗ ಮುಗಿಸಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಸೂರ್ಯಾಸ್ತದ ಮೊದಲು ರಾತ್ರಿಯ ಊಟ ಮುಗಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಲಸದ ಸಮಯವು ಅದನ್ನು ಬೆಂಬಲಿಸದಿದ್ದರೆ, ಕನಿಷ್ಠ 8 ಗಂಟೆಗೆ ಊಟ ಮುಗಿಸಲು ಸೂಚಿಸಲಾಗುತ್ತದೆ.

ಊಟದ ನಂತರ ನಿದ್ರೆಗೆ ಜಾರಬೇಡಿ: ಅನೇಕ ಜನರು ತಿಂದ ತಕ್ಷಣ ಮಲಗಲು ಪ್ರಯತ್ನಿಸುತ್ತಾರೆ. ಮತ್ತು ಗ್ಯಾಜೆಟ್‌ಗಳೊಂದಿಗೆ ಸಮಯ ಕಳೆಯುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದರಲ್ಲೂ ಮಧುಮೇಹ ಇರುವವರು ಊಟ ಮಾಡಿದ ನಂತರ ಬೇಗ ಮಲಗುವುದರಿಂದ ಶುಗರ್ ಲೆವೆಲ್ ಹೆಚ್ಚಾಗಬಹುದು. ಆದ್ದರಿಂದ, ಊಟವಾದ ತಕ್ಷಣ ಮಲಗುವುದನ್ನು ತಪ್ಪಿಸುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ, ರಾತ್ರಿಯ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಕೆಲವರು ಮಧುಮೇಹವನ್ನು ಲಘುವಾಗಿ ಪರಿಗಣಿಸುತ್ತಾರೆ. ಆದರೆ, ಈ ಸಮಸ್ಯೆಗೆ ಕೇವಲ ಔಷಧವನ್ನೇ ಅವಲಂಬಿಸುವುದು ಸೂಕ್ತವಲ್ಲ. ಔಷಧಿಗಳ ಅತಿಯಾದ ಸೇವನೆಯು ಕಾಲಾನಂತರದಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಔಷಧದ ಜೊತೆಗೆ, ಮೇಲೆ ತಿಳಿಸಲಾದ ತಜ್ಞರ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮರೆಯಬೇಡಿ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Have dinner before sunset: ಇಂದಿನ ಕಾಲಘಟ್ಟದಲ್ಲಿ ಡಯಾಬಿಟೀಸ್ ಎನ್ನುವುದು ಜಗತ್ತಿನಾದ್ಯಂತ ಹರಡುತ್ತಿರುವ ಗಂಭೀರ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಈ ಕಾಯಿಲೆಯಿಂದ ಪ್ರಭಾವಿತವಾಗದಿರಲು, ಆರೋಗ್ಯಕ್ಕೆ ಹಾನಿಕಾರಕ ಅಭ್ಯಾಸಗಳನ್ನು ತಪ್ಪಿಸುವುದು ಬಹಳ ಮುಖ್ಯ.

ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ತಡೆಯುತ್ತದೆ. ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದರಿಂದ ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಇನ್ಸುಲಿನ್ ಉತ್ಪಾದನೆ ಉತ್ತೇಜಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುತ್ತದೆ. ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಜನರು ಸಾಮೆ, ಕೊರಲೆ, ರಾಗಿ ಮತ್ತು ಜೋಳದ ಹಿಟ್ಟನ್ನು ಬಳಸಬಹುದು ಎಂದು ಆಯುರ್ವೇದ ತಜ್ಞ ದೀಕ್ಷಾ ಭಾವಸರ್ ಹೇಳುತ್ತಾರೆ. ಈ ಆಹಾರ ಪದಾರ್ಥಗಳು ಮಧುಮೇಹ ರೋಗಿಗಳಿಗೆ ರಾಮಬಾಣವೆಂದು ಅವರು ಸಾಬೀತುಪಡಿಸಬಹುದು.

ಮಧುಮೇಹ ರೋಗಿಗಳಿಗೆ ವ್ಯಾಯಾಮ ರಾಮಬಾಣ: ಆಯುರ್ವೇದ ತಜ್ಞೆ ದೀಕ್ಷಾ ಭಾವಸರ್ ಅವರು, ಬಹುತೇಕ ಜನರು ತಮ್ಮ ಇಡೀ ದಿನವನ್ನು ಮನೆ ಮತ್ತು ಕಚೇರಿ ಕೆಲಸದಲ್ಲಿ ಕಳೆಯುತ್ತಾರೆ. ಅವರು ವ್ಯಾಯಾಮಕ್ಕೆ ಯಾವುದೇ ಆದ್ಯತೆ ನೀಡುವುದಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಜೀವನಶೈಲಿಯಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ದಿನದ ಕನಿಷ್ಠ 40 ನಿಮಿಷ ವ್ಯಾಯಾಮ ಮತ್ತು 20 ನಿಮಿಷ ಪ್ರಾಣಾಯಾಮಕ್ಕೆ ಮೀಸಲಿಡಬೇಕು ಎಂದು ಸಲಹೆ ನೀಡಲಾಗಿದೆ.

ವ್ಯಾಯಾಮದ ಭಾಗವಾಗಿ ವಾಕಿಂಗ್, ಸೈಕ್ಲಿಂಗ್, ಯೋಗದಂತಹ ವಿಷಯಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ. ದೇಹವು ಈ ರೀತಿಯಾಗಿ ಕೆಲಸ ಮಾಡುವುದರಿಂದ, ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ದೇಹದ ಪ್ರತಿಯೊಂದು ಜೀವಕೋಶಕ್ಕೂ ಸಾಕಷ್ಟು ಆಮ್ಲಜನಕ ಸಿಗುತ್ತದೆ. ವ್ಯಾಯಾಮ ಮಾಡುವುದರಿಂದ ಅಗತ್ಯ ಇರುವಷ್ಟು ಇನ್ಸುಲಿನ್ ಉತ್ಪತ್ತಿಯಾಗುತ್ತದೆ ಎಂದು ದೀಕ್ಷಾ ಭಾವಸರ್ ಹೇಳುತ್ತಾರೆ.

ಇವುಗಳನ್ನು ತಿನ್ನದ ಇದ್ದರೆ ಒಳ್ಳೆಯದು: ಸಕ್ಕರೆ, ಮೈದಾ ಅಥವಾ ಗ್ಲುಟನ್ ಜೊತೆ ನೇರವಾಗಿ ಶೇಂಗಾ ಬೀಜಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಈ ಪದಾರ್ಥಗಳು ಮಧುಮೇಹದ ತೀವ್ರತೆ ಹೆಚ್ಚಿಸುವ ಹೆಚ್ಚಿನ ಅವಕಾಶ ಹೊಂದಿವೆ. ಬದಲಾಗಿ, ಆಹಾರದಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಆಹಾರಗಳನ್ನು ಸೇರಿಸುವುದು ಒಳ್ಳೆಯದು. ರಾಗಿ ಮತ್ತು ಜೋಳ, ಬೇಳೆಕಾಳುಗಳು ಸೇರಿದಂತೆ ಸಿರಿಧಾನ್ಯಗಳ ಪ್ರಯೋಜನಗಳನ್ನು ಪಡೆಯಬಹುದು. ಶೇಂಗಾ ಸೇರಿದಂತೆ ಇತರ ಬೀಜಗಳನ್ನು ನೇರವಾಗಿ ತಿನ್ನುವ ಬದಲು ನೆನೆಸಿಡುವುದರಿಂದ ನೀವು ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ಆಯುರ್ವೇದ ತಜ್ಞೆ ದೀಕ್ಷಾ ಸಲಹೆ ನೀಡುತ್ತಾರೆ.

ಊಟ ಯಾವಾಗ ಮಾಡಬೇಕು?: ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದ ಉಂಟಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಸಕ್ಕರೆಯ ಮಟ್ಟ ಕಡಿಮೆ ಮಾಡಲು, ರಾತ್ರಿಯ ಊಟವನ್ನು ಬೇಗ ಮುಗಿಸಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಸೂರ್ಯಾಸ್ತದ ಮೊದಲು ರಾತ್ರಿಯ ಊಟ ಮುಗಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಕೆಲಸದ ಸಮಯವು ಅದನ್ನು ಬೆಂಬಲಿಸದಿದ್ದರೆ, ಕನಿಷ್ಠ 8 ಗಂಟೆಗೆ ಊಟ ಮುಗಿಸಲು ಸೂಚಿಸಲಾಗುತ್ತದೆ.

ಊಟದ ನಂತರ ನಿದ್ರೆಗೆ ಜಾರಬೇಡಿ: ಅನೇಕ ಜನರು ತಿಂದ ತಕ್ಷಣ ಮಲಗಲು ಪ್ರಯತ್ನಿಸುತ್ತಾರೆ. ಮತ್ತು ಗ್ಯಾಜೆಟ್‌ಗಳೊಂದಿಗೆ ಸಮಯ ಕಳೆಯುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಅದರಲ್ಲೂ ಮಧುಮೇಹ ಇರುವವರು ಊಟ ಮಾಡಿದ ನಂತರ ಬೇಗ ಮಲಗುವುದರಿಂದ ಶುಗರ್ ಲೆವೆಲ್ ಹೆಚ್ಚಾಗಬಹುದು. ಆದ್ದರಿಂದ, ಊಟವಾದ ತಕ್ಷಣ ಮಲಗುವುದನ್ನು ತಪ್ಪಿಸುವುದು ಒಳ್ಳೆಯದು. ಇದು ಸಾಧ್ಯವಾಗದಿದ್ದರೆ, ರಾತ್ರಿಯ ಊಟ ಮತ್ತು ನಿದ್ರೆಯ ನಡುವೆ ಕನಿಷ್ಠ ಮೂರು ಗಂಟೆಗಳ ಅಂತರವನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ.

ಕೆಲವರು ಮಧುಮೇಹವನ್ನು ಲಘುವಾಗಿ ಪರಿಗಣಿಸುತ್ತಾರೆ. ಆದರೆ, ಈ ಸಮಸ್ಯೆಗೆ ಕೇವಲ ಔಷಧವನ್ನೇ ಅವಲಂಬಿಸುವುದು ಸೂಕ್ತವಲ್ಲ. ಔಷಧಿಗಳ ಅತಿಯಾದ ಸೇವನೆಯು ಕಾಲಾನಂತರದಲ್ಲಿ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಔಷಧದ ಜೊತೆಗೆ, ಮೇಲೆ ತಿಳಿಸಲಾದ ತಜ್ಞರ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಮರೆಯಬೇಡಿ.

ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.