ETV Bharat / health

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಗುರಿಯಾದ ಮೂರೂವರೆ ವರ್ಷದ ಮಗು: ಈ ರೋಗದ ಗುಣಲಕ್ಷಣಗಳೇನು? ಪರಿಹಾರವೇನು? - amoebic encephalitis in Kerala

author img

By ETV Bharat Karnataka Team

Published : Jul 26, 2024, 3:19 PM IST

ಸದ್ಯ ಬಾಲಕ ವೈದ್ಯಕೀಯ ಪರೀಕ್ಷೆಗೆ ಪ್ರತಿಕ್ರಿಯಿಸುತ್ತಿದ್ದು, ಆತನಿಗೆ ವೆಂಟಿಲೇಟರ್​ ಚಿಕಿತ್ಸೆಗೆ ಒಳಪಡಿಸಲಾಗಿದೆ.

kozhikode-three-and-half-year-boy-suffering-from-amoebic-encephalitis
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ಕೋಯಿಕ್ಕೊಡ್​​, ಕೇರಳ: ಕಣ್ಣೂರಿನ ಥಲಿಪರಂಬದ ಮೂರುವರೆ ವರ್ಷದ ಪುಟ್ಟ ಕಂದ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಮಿದುಳು ತಿನ್ನುವ ಸೋಂಕಿನಿಂದ ಬಳಲುತ್ತಿರುವುದು ಪಿಸಿಆರ್​ ಪರೀಕ್ಷೆಯಿಂದ ದೃಢಪಟ್ಟಿದೆ. ಸದ್ಯ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೀಬಿಕ್ ಎನ್ಸೆಫಾಲಿಟಿಸ್​​ಗೆ ಬಾಲಕ ತುತ್ತಾದ ಎಂಬ ಕುರಿತು ಪರಿಯರಾಮ್​​ ಮೆಡಿಕಲ್​ ಕಾಲೇಜ್​ ಪ್ರಾಥಮಿಕ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಕಂಡು ಬಂದಿತು. ಬಳಿಕ ಸೋಂಕಿನ ಸ್ಯಾಂಪಲ್​ ಪರೀಕ್ಷೆಗಳನ್ನು ಪುದುಚೇರಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಪರೀಕ್ಷೆಯಲ್ಲಿ ಬಾಲಕ ಮಿದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸದ್ಯ ಬಾಲಕ ವೈದ್ಯಕೀಯ ಪರೀಕ್ಷೆಗೆ ಪ್ರತಿಕ್ರಿಯಿಸುತ್ತಿದ್ದು, ಆತನಿಗೆ ವೆಂಟಿಲೇಟರ್​ ಚಿಕಿತ್ಸೆಗೆ ಒಳಗಾಗಿಸಲಾಗಿದೆ.

ಇನ್ನು ಕೋಯಿಕ್ಕೋಡ್​ನಲ್ಲಿ ಈ ಸೋಂಕಿಗೆ ಒಳಗಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಸ್ಥಿತಿ ಸುಧಾರಣೆ ಕಂಡಿದ್ದು, ಬಾಲಕನನ್ನು ತುರ್ತು ನಿಗಾ ಘಟಕದಿಂದ ಸಾಮಾನ್ಯ ರೂಮ್​ಗೆ ವರ್ಗಾಯಿಸಲಾಗಿದೆ. ಇದೇ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕ 22 ದಿನಗಳ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದು, ಪೋಷಕರಲ್ಲಿ ನಿಟ್ಟುಸಿರುವ ಬಿಡುವಂತೆ ಆಗಿದ್ದು, ಉಳಿದ ರೋಗಿಗಳ ಚೇತರಿಗೆ ಬಗ್ಗೆ ಆಶಾಭಾವನೆ ಹೊಂದುವಂತೆ ಆಗಿದೆ.

ಈಜುತಾಣಗಳ ಬಗ್ಗೆ ಇರಲಿ ಎಚ್ಚರ: ಈಜು, ಕೆರೆಕಟ್ಟೆ ಸ್ನಾನದ ಸಂದರ್ಭದಲ್ಲಿ ಮೂಗಿನ ಮೂಲಕ ಈ ಮಿದುಳು ತಿನ್ನುವ ಅಮೀಬಾ ದೇಹ ಸೇರುತ್ತದೆ. ಈ ಅಮೀಬಾವು ತಾಜಾ ಮತ್ತು ಬೆಚ್ಚಗಿನ ನೀರು ಮತ್ತು ಮಣ್ಣಿನಲ್ಲಿ ಅಡಗಿರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿದೆ. ಇದು ಮಿದುಳಿನ ನರ ಮಂಡಲದ ಮೇಲೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಈ ಸೋಂಕಿನ ಸಾವಿನ ದರ ಅತ್ಯಂತ ಹೆಚ್ಚಿದೆ. ಹೀಗಾಗಿ ಭಾರಿ ಎಚ್ಚರಿಕೆಯಿಂದ ಇರುವುದು ಉತ್ತಮ ಅನ್ನುವುದು ತಜ್ಞರ ಸಲಹೆ ಆಗಿದೆ. ಏಕೆಂದರೆ ಈ ರೋಗಕಾರಕ ದೇಹ ಹೊಕ್ಕು ವಾರವಾದರೂ ಯಾವುದೇ ಲಕ್ಷಣವನ್ನು ತೋರುವುದಿಲ್ಲ ಇದರಿಂದ ರೋಗಿಯ ಉಳಿಯುವಿಕೆ ಮೇಲೆ ಸವಾಲಾಗುತ್ತದೆ. ವಾರದ ಬಳಿಕ ತಲೆನೋವು, ಜ್ವರ ಮತ್ತು ವಾಂತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎನ್ನುತ್ತಾರೆ ತಜ್ಞರು. ಇದು ಸಮಾಧಾನದ ವಿಷಯವಾದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಈ ಏಕಕೋಶ ಜೀವದಿಂದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಮುನ್ನೆಚ್ಚರಿಕೆ ಪಾಲಿಸಬೇಕು?:

  • ಶುಚಿಯಿಲ್ಲದ ಈಜುಕೊಳ, ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡುವುದು ತಪ್ಪಿಸಬೇಕು.
  • ನಿಯಮಿತವಾಗಿ ಈಜುಕೊಳ ಮತ್ತು ಬಾವಿ, ಕೊಳಗಳನ್ನು ಕ್ಲೊರಿನೇಟ್​ ಮಾಡಬೇಕು.
  • ನೀರಿಗೆ ಇಳಿದಾಗ ಆ ನೀರು ಮೂಗಿಗೆ ತಲುಪದಂತೆ ನೋಡಿಕೊಳ್ಳಿ.
  • ಒಂದು ವೇಳೆ ಈಜು ಅನಿವಾರ್ಯವಾದರೆ, ಮೂಗಿಗೆ ಕ್ಲಿಪ್​ನಂತಹ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ

ಇದನ್ನೂ ಓದಿ: ಕರಾವಳಿ ಪ್ರದೇಶದ ಜನರೇ ಎಚ್ಚರ: ಮಳೆಗಾಲದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚು

ಕೋಯಿಕ್ಕೊಡ್​​, ಕೇರಳ: ಕಣ್ಣೂರಿನ ಥಲಿಪರಂಬದ ಮೂರುವರೆ ವರ್ಷದ ಪುಟ್ಟ ಕಂದ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಮಿದುಳು ತಿನ್ನುವ ಸೋಂಕಿನಿಂದ ಬಳಲುತ್ತಿರುವುದು ಪಿಸಿಆರ್​ ಪರೀಕ್ಷೆಯಿಂದ ದೃಢಪಟ್ಟಿದೆ. ಸದ್ಯ ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೀಬಿಕ್ ಎನ್ಸೆಫಾಲಿಟಿಸ್​​ಗೆ ಬಾಲಕ ತುತ್ತಾದ ಎಂಬ ಕುರಿತು ಪರಿಯರಾಮ್​​ ಮೆಡಿಕಲ್​ ಕಾಲೇಜ್​ ಪ್ರಾಥಮಿಕ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಸೋಂಕು ಕಂಡು ಬಂದಿತು. ಬಳಿಕ ಸೋಂಕಿನ ಸ್ಯಾಂಪಲ್​ ಪರೀಕ್ಷೆಗಳನ್ನು ಪುದುಚೇರಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅಲ್ಲಿ ಕೂಡ ಪರೀಕ್ಷೆಯಲ್ಲಿ ಬಾಲಕ ಮಿದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಸದ್ಯ ಬಾಲಕ ವೈದ್ಯಕೀಯ ಪರೀಕ್ಷೆಗೆ ಪ್ರತಿಕ್ರಿಯಿಸುತ್ತಿದ್ದು, ಆತನಿಗೆ ವೆಂಟಿಲೇಟರ್​ ಚಿಕಿತ್ಸೆಗೆ ಒಳಗಾಗಿಸಲಾಗಿದೆ.

ಇನ್ನು ಕೋಯಿಕ್ಕೋಡ್​ನಲ್ಲಿ ಈ ಸೋಂಕಿಗೆ ಒಳಗಾಗಿದ್ದ ನಾಲ್ಕೂವರೆ ವರ್ಷದ ಬಾಲಕ ಸ್ಥಿತಿ ಸುಧಾರಣೆ ಕಂಡಿದ್ದು, ಬಾಲಕನನ್ನು ತುರ್ತು ನಿಗಾ ಘಟಕದಿಂದ ಸಾಮಾನ್ಯ ರೂಮ್​ಗೆ ವರ್ಗಾಯಿಸಲಾಗಿದೆ. ಇದೇ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಬಾಲಕ 22 ದಿನಗಳ ಚಿಕಿತ್ಸೆ ಬಳಿಕ ಚೇತರಿಕೆ ಕಂಡಿದ್ದು, ಪೋಷಕರಲ್ಲಿ ನಿಟ್ಟುಸಿರುವ ಬಿಡುವಂತೆ ಆಗಿದ್ದು, ಉಳಿದ ರೋಗಿಗಳ ಚೇತರಿಗೆ ಬಗ್ಗೆ ಆಶಾಭಾವನೆ ಹೊಂದುವಂತೆ ಆಗಿದೆ.

ಈಜುತಾಣಗಳ ಬಗ್ಗೆ ಇರಲಿ ಎಚ್ಚರ: ಈಜು, ಕೆರೆಕಟ್ಟೆ ಸ್ನಾನದ ಸಂದರ್ಭದಲ್ಲಿ ಮೂಗಿನ ಮೂಲಕ ಈ ಮಿದುಳು ತಿನ್ನುವ ಅಮೀಬಾ ದೇಹ ಸೇರುತ್ತದೆ. ಈ ಅಮೀಬಾವು ತಾಜಾ ಮತ್ತು ಬೆಚ್ಚಗಿನ ನೀರು ಮತ್ತು ಮಣ್ಣಿನಲ್ಲಿ ಅಡಗಿರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿದೆ. ಇದು ಮಿದುಳಿನ ನರ ಮಂಡಲದ ಮೇಲೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಈ ಸೋಂಕಿನ ಸಾವಿನ ದರ ಅತ್ಯಂತ ಹೆಚ್ಚಿದೆ. ಹೀಗಾಗಿ ಭಾರಿ ಎಚ್ಚರಿಕೆಯಿಂದ ಇರುವುದು ಉತ್ತಮ ಅನ್ನುವುದು ತಜ್ಞರ ಸಲಹೆ ಆಗಿದೆ. ಏಕೆಂದರೆ ಈ ರೋಗಕಾರಕ ದೇಹ ಹೊಕ್ಕು ವಾರವಾದರೂ ಯಾವುದೇ ಲಕ್ಷಣವನ್ನು ತೋರುವುದಿಲ್ಲ ಇದರಿಂದ ರೋಗಿಯ ಉಳಿಯುವಿಕೆ ಮೇಲೆ ಸವಾಲಾಗುತ್ತದೆ. ವಾರದ ಬಳಿಕ ತಲೆನೋವು, ಜ್ವರ ಮತ್ತು ವಾಂತಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಎನ್ನುತ್ತಾರೆ ತಜ್ಞರು. ಇದು ಸಮಾಧಾನದ ವಿಷಯವಾದರೂ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಈ ಏಕಕೋಶ ಜೀವದಿಂದ ಆರೋಗ್ಯ ಕಾಪಾಡಿಕೊಳ್ಳಲು ಯಾವ ಮುನ್ನೆಚ್ಚರಿಕೆ ಪಾಲಿಸಬೇಕು?:

  • ಶುಚಿಯಿಲ್ಲದ ಈಜುಕೊಳ, ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡುವುದು ತಪ್ಪಿಸಬೇಕು.
  • ನಿಯಮಿತವಾಗಿ ಈಜುಕೊಳ ಮತ್ತು ಬಾವಿ, ಕೊಳಗಳನ್ನು ಕ್ಲೊರಿನೇಟ್​ ಮಾಡಬೇಕು.
  • ನೀರಿಗೆ ಇಳಿದಾಗ ಆ ನೀರು ಮೂಗಿಗೆ ತಲುಪದಂತೆ ನೋಡಿಕೊಳ್ಳಿ.
  • ಒಂದು ವೇಳೆ ಈಜು ಅನಿವಾರ್ಯವಾದರೆ, ಮೂಗಿಗೆ ಕ್ಲಿಪ್​ನಂತಹ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ

ಇದನ್ನೂ ಓದಿ: ಕರಾವಳಿ ಪ್ರದೇಶದ ಜನರೇ ಎಚ್ಚರ: ಮಳೆಗಾಲದಲ್ಲಿ ಮಿದುಳು ಸೋಂಕಿನ ಅಪಾಯ ಹೆಚ್ಚು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.