ETV Bharat / bharat

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಈ ಬಜೆಟ್​: ನಿರ್ಮಲಾ ಸೀತಾರಾಮನ್​ - UNION BUDGET 2025

ಶನಿವಾರ ಮಂಡಿಸಲಾದ ಕೇಂದ್ರ ಬಜೆಟ್​ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಣ್ಣಿಸಿದ್ದಾರೆ.

ನಿರ್ಮಲಾ ಸೀತಾರಾಮನ್​
ನಿರ್ಮಲಾ ಸೀತಾರಾಮನ್​ (ETV Bharat)
author img

By ETV Bharat Karnataka Team

Published : Feb 2, 2025, 4:22 PM IST

ನವದೆಹಲಿ: 2025-26 ಸಾಲಿನ ಆರ್ಥಿಕ ವರ್ಷದ ಕೇಂದ್ರ ಬಜೆಟ್​ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಿಳಿಸಿದರು.

ಮಾಧ್ಯಮವೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಕಡಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲವಿತ್ತು. ಇದು ಈ ಹಿಂದೆಯೇ ಜಾರಿಯಾಗಬೇಕಿತ್ತು. ಆದರೆ, ಅಧಿಕಾರಿಗಳ ಮನವೊಲಿಸುವಲ್ಲಿ ಸಮಯ ಹಿಡಿಯಿತು ಎಂದು ಅವರು ಹೇಳಿದರು.

ಪ್ರಾಮಾಣಿಕ ತೆರಿಗೆ ಪಾವತಿಸುತ್ತಿದ್ದರೂ, ನಮಗೆ ಯಾವುದೇ ಲಾಭ ಇಲ್ಲ ಎಂದು ಪ್ರತಿ ಬಾರಿಯೂ ಆರೋಪಿಸುತ್ತಿದ್ದ ದೇಶದ ಮಧ್ಯಮ ವರ್ಗದವರಿಗೆ ಈ ಬಾರಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಅವರ ಆಕಾಂಕ್ಷೆಗಳಿಗೆ ಸರ್ಕಾರ ಸ್ಪಂದಿಸಿದೆ. ಮಿಡಲ್​ ಕ್ಲಾಸ್​ ಜನರ ಧ್ವನಿಯನ್ನು ನಾವು ಆಲಿಸಿದ್ದೇವೆ ಎಂದು ಸೀತಾರಾಮನ್​ ತಿಳಿಸಿದರು.

ಡಾಲರ್​​ ಎದುರು ಮಾತ್ರ ರೂಪಾಯಿ ಕುಸಿತ : ರೂಪಾಯಿ ಮೌಲ್ಯದಲ್ಲಿ ಕುಸಿತದ ಬಗ್ಗೆ ಮಾತನಾಡಿರುವ ಅವರು, ಅಮೆರಿಕನ್​ ಡಾಲರ್​ ಎದುರು ಮಾತ್ರ ಭಾರತದ ರೂಪಾಯಿ ಕುಸಿಯುತ್ತಿದೆ. ಬಿಟ್ಟರೆ, ವಿಶ್ವದ ಯಾವುದೇ ಕರೆನ್ಸಿ ವಿರುದ್ಧ ನಮ್ಮ ಕರೆನ್ಸಿ ಸ್ಥಿರವಾಗಿದೆ. ಈ ಬಗ್ಗೆ ಟೀಕೆ ಮಾಡುವುದೇ ಅಪಮೌಲ್ಯ ಎಂದರು.

ನಮ್ಮ ಮ್ಯಾಕ್ರೋ ಆರ್ಥಿಕ ನೀತಿಗಳಿಂದಾಗಿ ರೂಪಾಯಿ ಅಪಮೌಲ್ಯವಾಗಿಲ್ಲ. ಡಾಲರ್​ ಎದುರು ವಿಶ್ವದ ಎಲ್ಲ ಕರೆನ್ಸಿಗಳು ಕುಸಿಯುತ್ತಿವೆ. ಇದಕ್ಕೆ ಬೇರೆಯದ್ದೇ ಕಾರಣಗಳಿವೆ. ಡಾಲರ್​ ಹೆಚ್ಚಿನ ಬಳಕೆ ಕಾರಣ, ಅದರ ಮುಂದೆ ಎಲ್ಲ ಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ಹಣಕಾಸು ಸಚಿವರು ಸ್ಪಷ್ಟನೆ ನೀಡಿದರು.

ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ನಿರಾಧಾರ. ಡಾಲರ್​ ಹೊರತಾಗಿ ನಮ್ಮ ರೂಪಾಯಿ ಗಟ್ಟಿಯಾಗಿದೆ. ಇತರ ಕರೆನ್ಸಿಗಳಿಗೆ ಹೋಲಿಸಿಕೊಂಡರೆ, ನಮ್ಮ ರೂಪಾಯಿ ಅತಿ ಕಡಿಮೆ ಅಪಮೌಲ್ಯವಾಗಿದೆ ಎಂದು ತಿಳಿಸಿದರು.

ಬಜೆಟ್​ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್ ​: ಫೆಬ್ರವರಿ 1 ಮಂಡಿಸಿದ ಮುಂಗಡಪತ್ರದಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಭರ್ಜರಿ ವಿನಾಯಿತಿ ನೀಡಲಾಗಿದೆ. ಯಾವುದೇ ನೌಕರರು 12.75 ಲಕ್ಷ ರೂಪಾಯಿವರೆಗೆ ಗಳಿಸುತ್ತಿದ್ದಲ್ಲಿ ಹೊಸ ತೆರಿಗೆ ಪದ್ಧತಿಯಡಿ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಿಳಿಸಿದ್ದಾರೆ. ಇದು ದೇಶದ ಕೋಟ್ಯಂತರ ಮಧ್ಯಮವರ್ಗಕ್ಕೆ ನೀಡಿದ ಬಂಪರ್​ ಕೊಡುಗೆಯಾಗಿದೆ.

ಓದಿ: ಜನಗಣತಿಗಾಗಿ ಕೇವಲ ₹574 ಕೋಟಿ ಹಂಚಿಕೆ : ಈ ವರ್ಷವೂ ಎಣಿಕೆ ಅನುಮಾನ?

12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: ಕೇಂದ್ರ ಬಜೆಟ್​​ನಲ್ಲಿ ಘೋಷಣೆ

ಜೈಲುಗಳ ಆಧುನೀಕರಣಕ್ಕೆ ಬಜೆಟ್​ನಲ್ಲಿ ₹300 ಕೋಟಿ ಮೀಸಲು : ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು

ನವದೆಹಲಿ: 2025-26 ಸಾಲಿನ ಆರ್ಥಿಕ ವರ್ಷದ ಕೇಂದ್ರ ಬಜೆಟ್​ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಿಳಿಸಿದರು.

ಮಾಧ್ಯಮವೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಕಡಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲವಿತ್ತು. ಇದು ಈ ಹಿಂದೆಯೇ ಜಾರಿಯಾಗಬೇಕಿತ್ತು. ಆದರೆ, ಅಧಿಕಾರಿಗಳ ಮನವೊಲಿಸುವಲ್ಲಿ ಸಮಯ ಹಿಡಿಯಿತು ಎಂದು ಅವರು ಹೇಳಿದರು.

ಪ್ರಾಮಾಣಿಕ ತೆರಿಗೆ ಪಾವತಿಸುತ್ತಿದ್ದರೂ, ನಮಗೆ ಯಾವುದೇ ಲಾಭ ಇಲ್ಲ ಎಂದು ಪ್ರತಿ ಬಾರಿಯೂ ಆರೋಪಿಸುತ್ತಿದ್ದ ದೇಶದ ಮಧ್ಯಮ ವರ್ಗದವರಿಗೆ ಈ ಬಾರಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಅವರ ಆಕಾಂಕ್ಷೆಗಳಿಗೆ ಸರ್ಕಾರ ಸ್ಪಂದಿಸಿದೆ. ಮಿಡಲ್​ ಕ್ಲಾಸ್​ ಜನರ ಧ್ವನಿಯನ್ನು ನಾವು ಆಲಿಸಿದ್ದೇವೆ ಎಂದು ಸೀತಾರಾಮನ್​ ತಿಳಿಸಿದರು.

ಡಾಲರ್​​ ಎದುರು ಮಾತ್ರ ರೂಪಾಯಿ ಕುಸಿತ : ರೂಪಾಯಿ ಮೌಲ್ಯದಲ್ಲಿ ಕುಸಿತದ ಬಗ್ಗೆ ಮಾತನಾಡಿರುವ ಅವರು, ಅಮೆರಿಕನ್​ ಡಾಲರ್​ ಎದುರು ಮಾತ್ರ ಭಾರತದ ರೂಪಾಯಿ ಕುಸಿಯುತ್ತಿದೆ. ಬಿಟ್ಟರೆ, ವಿಶ್ವದ ಯಾವುದೇ ಕರೆನ್ಸಿ ವಿರುದ್ಧ ನಮ್ಮ ಕರೆನ್ಸಿ ಸ್ಥಿರವಾಗಿದೆ. ಈ ಬಗ್ಗೆ ಟೀಕೆ ಮಾಡುವುದೇ ಅಪಮೌಲ್ಯ ಎಂದರು.

ನಮ್ಮ ಮ್ಯಾಕ್ರೋ ಆರ್ಥಿಕ ನೀತಿಗಳಿಂದಾಗಿ ರೂಪಾಯಿ ಅಪಮೌಲ್ಯವಾಗಿಲ್ಲ. ಡಾಲರ್​ ಎದುರು ವಿಶ್ವದ ಎಲ್ಲ ಕರೆನ್ಸಿಗಳು ಕುಸಿಯುತ್ತಿವೆ. ಇದಕ್ಕೆ ಬೇರೆಯದ್ದೇ ಕಾರಣಗಳಿವೆ. ಡಾಲರ್​ ಹೆಚ್ಚಿನ ಬಳಕೆ ಕಾರಣ, ಅದರ ಮುಂದೆ ಎಲ್ಲ ಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ಹಣಕಾಸು ಸಚಿವರು ಸ್ಪಷ್ಟನೆ ನೀಡಿದರು.

ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ನಿರಾಧಾರ. ಡಾಲರ್​ ಹೊರತಾಗಿ ನಮ್ಮ ರೂಪಾಯಿ ಗಟ್ಟಿಯಾಗಿದೆ. ಇತರ ಕರೆನ್ಸಿಗಳಿಗೆ ಹೋಲಿಸಿಕೊಂಡರೆ, ನಮ್ಮ ರೂಪಾಯಿ ಅತಿ ಕಡಿಮೆ ಅಪಮೌಲ್ಯವಾಗಿದೆ ಎಂದು ತಿಳಿಸಿದರು.

ಬಜೆಟ್​ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್ ​: ಫೆಬ್ರವರಿ 1 ಮಂಡಿಸಿದ ಮುಂಗಡಪತ್ರದಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಭರ್ಜರಿ ವಿನಾಯಿತಿ ನೀಡಲಾಗಿದೆ. ಯಾವುದೇ ನೌಕರರು 12.75 ಲಕ್ಷ ರೂಪಾಯಿವರೆಗೆ ಗಳಿಸುತ್ತಿದ್ದಲ್ಲಿ ಹೊಸ ತೆರಿಗೆ ಪದ್ಧತಿಯಡಿ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಿಳಿಸಿದ್ದಾರೆ. ಇದು ದೇಶದ ಕೋಟ್ಯಂತರ ಮಧ್ಯಮವರ್ಗಕ್ಕೆ ನೀಡಿದ ಬಂಪರ್​ ಕೊಡುಗೆಯಾಗಿದೆ.

ಓದಿ: ಜನಗಣತಿಗಾಗಿ ಕೇವಲ ₹574 ಕೋಟಿ ಹಂಚಿಕೆ : ಈ ವರ್ಷವೂ ಎಣಿಕೆ ಅನುಮಾನ?

12 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ: ಕೇಂದ್ರ ಬಜೆಟ್​​ನಲ್ಲಿ ಘೋಷಣೆ

ಜೈಲುಗಳ ಆಧುನೀಕರಣಕ್ಕೆ ಬಜೆಟ್​ನಲ್ಲಿ ₹300 ಕೋಟಿ ಮೀಸಲು : ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.