ETV Bharat / health

ಡಯಾಲಿಸಿಸ್​ ತಡವಾದರೆ ಜೀವಕ್ಕೆ ಕುತ್ತು; ರೋಗಿಗಳ ಆರೋಗ್ಯ ಸುಧಾರಣೆಯತ್ತ ಗುರಿನೆಟ್ಟ ಸರ್ಕಾರ - kidney dialysis

author img

By ETV Bharat Karnataka Team

Published : Jun 22, 2024, 11:49 AM IST

ಈ ಡಯಾಲಿಸಿಸ್​ ಚಿಕಿತ್ಸೆ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ವಿಭಾಗೀಯ ಕೇಂದ್ರಗಳಲ್ಲಿ ಇದ್ದರೂ ಇಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.

if-dialysis-is-delayed-it-will-cost-lives-a-mortality-rate-of-8-15-percent-is-recorded-dot-dot-dot-the-governments-special-focus-on-improving-services
ಡಯಾಲಿಸಿಸ್​ ಚಿಕಿತ್ಸೆ (ಈಟಿವಿ ಭಾರತ್​​)

ಹೈದರಾಬಾದ್​: ಡಯಾಲಿಸಿಸ್ ಕೇಂದ್ರಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಎಲ್ಲ ಡಯಾಲಿಸಿಸ್ ಕೇಂದ್ರಗಳನ್ನು ನಿಮ್ಸ್ ಮತ್ತು ಗಾಂಧಿ ಆಸ್ಪತ್ರೆಗಳೊಂದಿಗೆ ಜೋಡಿಸಿ, ಸೇವೆಗಳನ್ನು ಸುಧಾರಿಸಲು ವಿಶೇಷ ಕಾಳಜಿ ವಹಿಸುತ್ತಿದೆ. ಬಡ ರೋಗಿಗಳಿಗೆ ನಿಮ್ಸ್​, ಗಾಂಧಿ ಮತ್ತು ಉಸ್ಮಾನಿಯಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 400ರಿಂದ 600 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.

ಏನಿದು ಡಯಾಲಿಸಿಸ್​: ಮೂತ್ರಪಿಂಡದ ಹಾನಿಗೆ ಒಳಗಾದ ಬಳಿಕ ಅವು ದೇಹದ ತ್ಯಾಜ್ಯವನ್ನು ಶೋಧಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಈ ಹಿನ್ನೆಲೆ ಯಂತ್ರಗಳ ಮೂಲಕ ರೋಗಿಯ ರಕ್ತದಿಂದ ತ್ಯಾಜ್ಯ ಮತ್ತು ಇತರ ದ್ರವಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯಲಾಗುತ್ತದೆ. ಮೂತ್ರಪಿಂಡ ಹಾನಿಗೊಳಗಾದ ರೋಗಿಯು ವಾರಕ್ಕೆ ಕನಿಷ್ಠ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕು. ಈ ಸೇವೆಗಳನ್ನು ಆರೋಗ್ಯಶ್ರೀ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಈ ಡಯಾಲಿಸಿಸ್​ ಚಿಕಿತ್ಸೆ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ವಿಭಾಗೀಯ ಕೇಂದ್ರಗಳಲ್ಲಿ ಇದ್ದರೂ ಇಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಇದರ ಪ್ರಮಾಣ ಹೈದರಬಾದ್​ ನಗರದಲ್ಲಿ ಶೇ 8ರಷ್ಟಿದ್ದರೆ, ಇತರೆ ಜಿಲ್ಲೆಗಳಲ್ಲಿ ಶೇ.15ರಷ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವರು ಪರ್ಯಾಯ ಚಿಕಿತ್ಸೆಗಳನ್ನು ಅವಲಂಬಿಸಿದ್ದಾರೆ. ಮತ್ತೆ ಕೆಲವು ಮಂದಿ ತಮ್ಮ ಮೂತ್ರ ಪಿಂಡ ಸಂಪೂರ್ಣವಾಗಿ ಹಾನಿಯಾಗುವವರೆಗೆ ಇದರ ಅರಿವನ್ನು ಹೊಂದಿರುವುದಿಲ್ಲ. ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಹೊಂದಿದ್ದು, ಔಷಧವನ್ನು ತೆಗೆದುಕೊಳ್ಳದ ಮಂದಿಯಲ್ಲಿ ಮೂತ್ರಪಿಂಡ ಬೇಗ ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ಸಮಸ್ಯೆ ಬೇಗ ಬಗೆಹರಿದ ಬಳಿಕವೂ ಡಯಾಲಿಸಿಸ್​ ಪ್ರಯೋಜನವಾಗುವುದಿಲ್ಲ. ಇಂತಹ ಶೇ 40ರಷ್ಟು ಮಂದಿ ಮೊದಲ ಆರು ತಿಂಗಳೊಳಗೆ ಸಾವನ್ನಪ್ಪುತ್ತಾರೆ.

ಸಾವಿನ ದರ ತಡೆಯುವ ನಿಟ್ಟಿನಲ್ಲಿ ಜಿಲ್ಲೆಗಳು ಮತ್ತು ವಿಭಾಗಗಳಲ್ಲಿನ ಕೇಂದ್ರಗಳನ್ನು ನಿಮ್ಸ್ ಮತ್ತು ಗಾಂಧಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಕೇಂದ್ರಗಳೊಂದಿಗೆ ಜೋಡಿಸಿ, ಮೇಲ್ವಿಚಾರಣೆ ಮಾಡಲಾಗುತ್ತದೆ. ಇಲ್ಲಿ ತಂತ್ರಜ್ಞರು ಮತ್ತು ವೈದ್ಯರಿಗೆ ಡಯಾಲಿಸಿಸ್ ಕುರಿತು ಸೂಚನೆ ನೀಡಲಾಗುತ್ತದೆ. ಜನರುು ಇಲ್ಲಿಂದ ನೇರವಾಗಿ ಆನ್‌ಲೈನ್‌ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.

ಸಾವಿನ ದರ ಹೆಚ್ಚಳಕ್ಕೆ ಕಾರಣ ಏನು?

  • ಅನೇಕ ರೋಗಿಗಳಿಗೆ ಡಯಾಲಿಸಿಸ್ ಬಗ್ಗೆ ಅರಿವು ಇರುವುದಿಲ್ಲ
  • ಕ್ರಿಯಾಟಿನ್ 5-7 ಮೀರಿದರೂ ಜನರು ಡಯಾಲಿಸಿಸ್‌ಗೆ ಒಳಗಾಗುತ್ತಿಲ್ಲ
  • ಅಂತಿಮ ಕ್ಷಣದಲ್ಲಿ ಡಯಾಲಿಸಿಸ್‌ಗೆ ಬರುವುದು ಚಿಕಿತ್ಸೆ ಸಫಲವಾಗಲು ಕಾರಣವಾಗುತ್ತಿಲ್ಲ.
  • ಮೂತ್ರಪಿಂಡ ವೈಫಲ್ಯಕ್ಕೆ ಪರ್ಯಾಯ ಚಿಕಿತ್ಸೆಗಳ ಅವಲಂಬನೆ
  • ಡಯಾಲಿಸಿಸ್‌ಗೆ ಬಳಸುವ ಅಪಧಮನಿಗಳು ಮತ್ತು ರಕ್ತನಾಳಗಳನ್ನು ಸಂಪರ್ಕಿಸುವ ಯಾವುದೇ ಫಿಸ್ಟುಲಾ ಶಸ್ತ್ರಚಿಕಿತ್ಸೆಯಲ್ಲಿ ವಿಳಂಬವಾಗುತ್ತದೆ
  • ವೈದ್ಯರು ಸೂಚಿಸಿದ್ದಕ್ಕಿಂತ ಕಡಿಮೆ ಬಾರಿ ಡಯಾಲಿಸಿಸ್‌ಗೆ ಒಳಗಾಗುವುದು
  • ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ
  • ಹೆಪಟೈಟಿಸ್ ಬಿ ಮತ್ತು ಸಿ ಇತರ ವೈರಲ್ ಸೋಂಕುಗಳು
  • ಕೆಲವೊಮ್ಮೆ ಡಯಾಲಿಸಿಸ್ ಕೇಂದ್ರಗಳಲ್ಲಿ ಮೇಲ್ವಿಚಾರಣೆಯ ಕೊರತೆ ಇರುತ್ತದೆ
  • ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗಾಗಿ ಕಾಯುವಿಕೆ, ಸೇವೆಗಳ ವಿಳಂಬ

ಇದನ್ನೂ ಓದಿ: ವಿಜ್ಞಾನಿಗಳಿಂದ ಕೃತಕ ಮೂತ್ರಪಿಂಡದ ವಿನ್ಯಾಸ; ಹೇಗಿದೆ ಇದರ ಕಾರ್ಯ ವೈಖರಿ?

ಹೈದರಾಬಾದ್​: ಡಯಾಲಿಸಿಸ್ ಕೇಂದ್ರಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸರ್ಕಾರ ಗಮನಹರಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದ ಬಹುತೇಕ ಎಲ್ಲ ಡಯಾಲಿಸಿಸ್ ಕೇಂದ್ರಗಳನ್ನು ನಿಮ್ಸ್ ಮತ್ತು ಗಾಂಧಿ ಆಸ್ಪತ್ರೆಗಳೊಂದಿಗೆ ಜೋಡಿಸಿ, ಸೇವೆಗಳನ್ನು ಸುಧಾರಿಸಲು ವಿಶೇಷ ಕಾಳಜಿ ವಹಿಸುತ್ತಿದೆ. ಬಡ ರೋಗಿಗಳಿಗೆ ನಿಮ್ಸ್​, ಗಾಂಧಿ ಮತ್ತು ಉಸ್ಮಾನಿಯಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳಲ್ಲಿ ಪ್ರತಿನಿತ್ಯ 400ರಿಂದ 600 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ.

ಏನಿದು ಡಯಾಲಿಸಿಸ್​: ಮೂತ್ರಪಿಂಡದ ಹಾನಿಗೆ ಒಳಗಾದ ಬಳಿಕ ಅವು ದೇಹದ ತ್ಯಾಜ್ಯವನ್ನು ಶೋಧಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಈ ಹಿನ್ನೆಲೆ ಯಂತ್ರಗಳ ಮೂಲಕ ರೋಗಿಯ ರಕ್ತದಿಂದ ತ್ಯಾಜ್ಯ ಮತ್ತು ಇತರ ದ್ರವಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಡಯಾಲಿಸಿಸ್ ಎಂದು ಕರೆಯಲಾಗುತ್ತದೆ. ಮೂತ್ರಪಿಂಡ ಹಾನಿಗೊಳಗಾದ ರೋಗಿಯು ವಾರಕ್ಕೆ ಕನಿಷ್ಠ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕು. ಈ ಸೇವೆಗಳನ್ನು ಆರೋಗ್ಯಶ್ರೀ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

ಈ ಡಯಾಲಿಸಿಸ್​ ಚಿಕಿತ್ಸೆ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳು, ಜಿಲ್ಲಾ ಮತ್ತು ವಿಭಾಗೀಯ ಕೇಂದ್ರಗಳಲ್ಲಿ ಇದ್ದರೂ ಇಲ್ಲಿ ಸಾವಿನ ಪ್ರಮಾಣ ಹೆಚ್ಚಿದೆ. ಇದರ ಪ್ರಮಾಣ ಹೈದರಬಾದ್​ ನಗರದಲ್ಲಿ ಶೇ 8ರಷ್ಟಿದ್ದರೆ, ಇತರೆ ಜಿಲ್ಲೆಗಳಲ್ಲಿ ಶೇ.15ರಷ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವರು ಪರ್ಯಾಯ ಚಿಕಿತ್ಸೆಗಳನ್ನು ಅವಲಂಬಿಸಿದ್ದಾರೆ. ಮತ್ತೆ ಕೆಲವು ಮಂದಿ ತಮ್ಮ ಮೂತ್ರ ಪಿಂಡ ಸಂಪೂರ್ಣವಾಗಿ ಹಾನಿಯಾಗುವವರೆಗೆ ಇದರ ಅರಿವನ್ನು ಹೊಂದಿರುವುದಿಲ್ಲ. ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆ ಹೊಂದಿದ್ದು, ಔಷಧವನ್ನು ತೆಗೆದುಕೊಳ್ಳದ ಮಂದಿಯಲ್ಲಿ ಮೂತ್ರಪಿಂಡ ಬೇಗ ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ಸಮಸ್ಯೆ ಬೇಗ ಬಗೆಹರಿದ ಬಳಿಕವೂ ಡಯಾಲಿಸಿಸ್​ ಪ್ರಯೋಜನವಾಗುವುದಿಲ್ಲ. ಇಂತಹ ಶೇ 40ರಷ್ಟು ಮಂದಿ ಮೊದಲ ಆರು ತಿಂಗಳೊಳಗೆ ಸಾವನ್ನಪ್ಪುತ್ತಾರೆ.

ಸಾವಿನ ದರ ತಡೆಯುವ ನಿಟ್ಟಿನಲ್ಲಿ ಜಿಲ್ಲೆಗಳು ಮತ್ತು ವಿಭಾಗಗಳಲ್ಲಿನ ಕೇಂದ್ರಗಳನ್ನು ನಿಮ್ಸ್ ಮತ್ತು ಗಾಂಧಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಕೇಂದ್ರಗಳೊಂದಿಗೆ ಜೋಡಿಸಿ, ಮೇಲ್ವಿಚಾರಣೆ ಮಾಡಲಾಗುತ್ತದೆ. ಇಲ್ಲಿ ತಂತ್ರಜ್ಞರು ಮತ್ತು ವೈದ್ಯರಿಗೆ ಡಯಾಲಿಸಿಸ್ ಕುರಿತು ಸೂಚನೆ ನೀಡಲಾಗುತ್ತದೆ. ಜನರುು ಇಲ್ಲಿಂದ ನೇರವಾಗಿ ಆನ್‌ಲೈನ್‌ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.

ಸಾವಿನ ದರ ಹೆಚ್ಚಳಕ್ಕೆ ಕಾರಣ ಏನು?

  • ಅನೇಕ ರೋಗಿಗಳಿಗೆ ಡಯಾಲಿಸಿಸ್ ಬಗ್ಗೆ ಅರಿವು ಇರುವುದಿಲ್ಲ
  • ಕ್ರಿಯಾಟಿನ್ 5-7 ಮೀರಿದರೂ ಜನರು ಡಯಾಲಿಸಿಸ್‌ಗೆ ಒಳಗಾಗುತ್ತಿಲ್ಲ
  • ಅಂತಿಮ ಕ್ಷಣದಲ್ಲಿ ಡಯಾಲಿಸಿಸ್‌ಗೆ ಬರುವುದು ಚಿಕಿತ್ಸೆ ಸಫಲವಾಗಲು ಕಾರಣವಾಗುತ್ತಿಲ್ಲ.
  • ಮೂತ್ರಪಿಂಡ ವೈಫಲ್ಯಕ್ಕೆ ಪರ್ಯಾಯ ಚಿಕಿತ್ಸೆಗಳ ಅವಲಂಬನೆ
  • ಡಯಾಲಿಸಿಸ್‌ಗೆ ಬಳಸುವ ಅಪಧಮನಿಗಳು ಮತ್ತು ರಕ್ತನಾಳಗಳನ್ನು ಸಂಪರ್ಕಿಸುವ ಯಾವುದೇ ಫಿಸ್ಟುಲಾ ಶಸ್ತ್ರಚಿಕಿತ್ಸೆಯಲ್ಲಿ ವಿಳಂಬವಾಗುತ್ತದೆ
  • ವೈದ್ಯರು ಸೂಚಿಸಿದ್ದಕ್ಕಿಂತ ಕಡಿಮೆ ಬಾರಿ ಡಯಾಲಿಸಿಸ್‌ಗೆ ಒಳಗಾಗುವುದು
  • ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ
  • ಹೆಪಟೈಟಿಸ್ ಬಿ ಮತ್ತು ಸಿ ಇತರ ವೈರಲ್ ಸೋಂಕುಗಳು
  • ಕೆಲವೊಮ್ಮೆ ಡಯಾಲಿಸಿಸ್ ಕೇಂದ್ರಗಳಲ್ಲಿ ಮೇಲ್ವಿಚಾರಣೆಯ ಕೊರತೆ ಇರುತ್ತದೆ
  • ಡಯಾಲಿಸಿಸ್ ಕೇಂದ್ರಗಳಲ್ಲಿ ರೋಗಿಗಳಿಗಾಗಿ ಕಾಯುವಿಕೆ, ಸೇವೆಗಳ ವಿಳಂಬ

ಇದನ್ನೂ ಓದಿ: ವಿಜ್ಞಾನಿಗಳಿಂದ ಕೃತಕ ಮೂತ್ರಪಿಂಡದ ವಿನ್ಯಾಸ; ಹೇಗಿದೆ ಇದರ ಕಾರ್ಯ ವೈಖರಿ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.