ETV Bharat / health

ಐವರಲ್ಲಿ ಒಬ್ಬ ತಾಯಿಗೆ ಕಾಡುತ್ತೆ ಪ್ರಸವಪೂರ್ವ ಖಿನ್ನತೆ - postpartum depression

ಪ್ರಸವಪೂರ್ವ ಖಿನ್ನತೆ ಎಂಬುದು ಸಾಮಾನ್ಯವಾಗಿದೆ. ಇದು ಮಕ್ಕಳಾದ ಬಳಿಕ ತಾಯಂದಿರಿಗೆ ಕಾಡುವ ಪರಿಸ್ಥಿತಿಯಾಗಿದೆ.

author img

By ETV Bharat Karnataka Team

Published : May 13, 2024, 3:37 PM IST

20 per cent of mothers suffers from  postpartum depression
20 per cent of mothers suffers from postpartum depression (IANS)

ನವದೆಹಲಿ: ಪೋಷಕತ್ವ ಎಂಬುದು ವರದಾನವಾದರೂ ಶೇ 20ರಷ್ಟು ತಾಯಂದಿರಿಗೆ ಜೀವನದಲ್ಲಿನ ಈ ಘಟ್ಟ ಆತಂಕ, ಖಿನ್ನತೆ ಮತ್ತು ಪ್ರಸವ ಪೂರ್ವ ಖಿನ್ನತೆಗೆ ಕಾರಣವಾಗುತ್ತದೆ. ಅನೇಕ ಸಂದರ್ಭದಲ್ಲಿ ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋದಲ್ಲಿ ತಾಯಿ ಮತ್ತು ಮಗುವಿಗೆ ಮಾರಾಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಸವಪೂರ್ವ ಖಿನ್ನತೆ ಎಂಬುದು ಸಾಮಾನ್ಯವಾಗಿದೆ. ಇದು ಮಕ್ಕಳಾದ ಬಳಿಕ ತಾಯಂದಿರಿಗೆ ಕಾಡುವ ಪರಿಸ್ಥಿತಿಯಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ನಿಖರವಾಗಿಲ್ಲ. ಬೇಸರ, ಆತಂಕ ಮತ್ತು ಸುಸ್ತಿನ ಭಾವನೆಗಳು ಇದಕ್ಕೆ ಕಾರಣಗಳಾಗುತ್ತವೆ. ಅನುವಂಶಿಕತೆ, ಹಾರ್ಮೋನ್​ ಬದಲಾವಣೆ, ನಿದ್ರೆ ಕೊರತೆ, ಆಯಾಸ ಅಥವಾ ತಾಯ್ತನದ ಒತ್ತಡದ ಫಲಿತಾಂಶವೂ ಇದಾಗಬಹುದು.

ಪ್ರಸವ ನಂತರದ ಖಿನ್ನತೆಯ ಹರಡುವಿಕೆಯ ಒಟ್ಟಾರೆ ಅಂದಾಜು ಶೇ 22ರಷ್ಟು ವರದಿಯಾಗಿದ್ದು, ಹೆರಿಗೆಯ ಎರಡು ವಾರಗಳಲ್ಲಿ ಈ ಖಿನ್ನತೆ ಕಾಡುತ್ತದೆ.

ಪೋಷಕತ್ವದ ಹೊಣೆಗಾರಿಯೆಯು ದಂಪತಿಗಳಿಗೆ ಸವಾಲುದಾಯಕವಾಗಿದ್ದು, ಅನೇಕ ಬಾರಿ ಇದು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಕಾಡುವ ಕ್ಲಿಷ್ಟತೆ ಅಥವಾ ಐವಿಎಫ್​ ಗರ್ಭಧಾರಣೆ ಮಾದರಿ ಸಹಾಯ, ಹೆರಿಗೆ ಬಳಿಕ ಹೆಚ್ಚುವರಿ ತೂಕ ಸೇರಿ ಹಲವು ಅಂಶಗಳು ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಗುರುಗ್ರಾಮದ ಮೆದಾಂತ ಆಸ್ಪತ್ರೆಯ ಮನೋವೈದ್ಯ ಡಾ ಸೌರಭ್​ ಮೆಹ್ರೊತ್ರಾ ತಿಳಿಸಿದ್ದಾರೆ.

ಅಧ್ಯಯನಗಳು ಹೇಳುವಂತೆ ತಾಯ್ತನದ ಮಾನಸಿಕ ಅಸ್ವಸ್ಥತೆಯು ಅನೇಕ ಬಾರಿ ಅವಧಿಪೂರ್ವ ಜನನ ಮತ್ತು ಕಳಪೆ ನರಾಭಿವೃದ್ದಿಯ ಸಮಸ್ಯೆಯಿಂದಲೂ ಆಗುತ್ತದೆ.

ಹೆರಿಗೆಯದಾದ ಶೇ 70 ರಿಂದ 80ರಷ್ಟು ಪ್ರಕರಣದಲ್ಲಿ ನಾವು ಪ್ರಸವಪೂರ್ವ ಮಾನಸಿಕ ಅಸ್ವಸ್ಥತೆಯ ಲಕ್ಷಣ ಕಂಡರೂ ಶೇ 20ರಷ್ಟು ಪ್ರಕರಣದಲ್ಲಿ ತಾಯಂದಿರು ಮಾನಸಿಕ ಆರೋಗ್ಯಕ್ಕೆ ಸವಾಲುದಾಯಕ ಖಿನ್ನತೆಗೆ ಗುರಿಯಾಗುತ್ತಾರೆ. ಇವರಿಗೆ ಅಗತ್ಯ ಸಮಗ್ರ ಭಾವನಾತ್ಮಕ ಬೆಂಬಲ ಮತ್ತು ಆರೈಕೆ ಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

ಪ್ರಸವಪೂರ್ವ ಖಿನ್ನತೆ ಲಕ್ಷಣ: ನಿದ್ರಾಹೀನತೆ, ಹಸಿವೆ ನಷ್ಟ, ತೀವ್ರತರದ ಕಿರಿಕಿರಿ, ಮಗುವಿನೊಂದಿಗೆ ಸಂಬಂಧ ಏರ್ಪಡಲು ಕಷ್ಟವಾಗುವ ಪರಿಸ್ಥಿತಿ ಕಾಣಬಹುದು. ಈ ಸಮಯದಲ್ಲಿ ಸಹಾಯ ಕೇಳುವುದು ಕೂಡ ನಿರ್ಣಾಯಕ ಹಂತವಾಗಿದೆ.

ಈ ಪ್ರಸವಪೂರ್ವ ಖಿನ್ನತೆಗೆ ಚಿಕಿತ್ಸೆ ದೊರೆಯದೇ ಹೋಗುವುದು, ದೀರ್ಘಕಾಲ ಪರಿಸ್ಥಿತಿ ಮುಂದುವರೆಯುವುದರಿಂದ ಸಮಸ್ಯೆಯಾಗುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಸೂಕ್ತ ಎನ್ನುತ್ತಾರೆ ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ಮದರ್​ಹುಡ್​​ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ ತೆಜಿ ದವನೆ. (ಐಎಎನ್​ಎಸ್​)

ಇದನ್ನೂ ಓದಿ: ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಅನೀಮಿಯಾ ತಡೆಗಟ್ಟಲು ಸಾಧ್ಯ: ತಜ್ಞರ ಅಭಿಮತ

ನವದೆಹಲಿ: ಪೋಷಕತ್ವ ಎಂಬುದು ವರದಾನವಾದರೂ ಶೇ 20ರಷ್ಟು ತಾಯಂದಿರಿಗೆ ಜೀವನದಲ್ಲಿನ ಈ ಘಟ್ಟ ಆತಂಕ, ಖಿನ್ನತೆ ಮತ್ತು ಪ್ರಸವ ಪೂರ್ವ ಖಿನ್ನತೆಗೆ ಕಾರಣವಾಗುತ್ತದೆ. ಅನೇಕ ಸಂದರ್ಭದಲ್ಲಿ ಇದಕ್ಕೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಹೋದಲ್ಲಿ ತಾಯಿ ಮತ್ತು ಮಗುವಿಗೆ ಮಾರಾಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಸವಪೂರ್ವ ಖಿನ್ನತೆ ಎಂಬುದು ಸಾಮಾನ್ಯವಾಗಿದೆ. ಇದು ಮಕ್ಕಳಾದ ಬಳಿಕ ತಾಯಂದಿರಿಗೆ ಕಾಡುವ ಪರಿಸ್ಥಿತಿಯಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ನಿಖರವಾಗಿಲ್ಲ. ಬೇಸರ, ಆತಂಕ ಮತ್ತು ಸುಸ್ತಿನ ಭಾವನೆಗಳು ಇದಕ್ಕೆ ಕಾರಣಗಳಾಗುತ್ತವೆ. ಅನುವಂಶಿಕತೆ, ಹಾರ್ಮೋನ್​ ಬದಲಾವಣೆ, ನಿದ್ರೆ ಕೊರತೆ, ಆಯಾಸ ಅಥವಾ ತಾಯ್ತನದ ಒತ್ತಡದ ಫಲಿತಾಂಶವೂ ಇದಾಗಬಹುದು.

ಪ್ರಸವ ನಂತರದ ಖಿನ್ನತೆಯ ಹರಡುವಿಕೆಯ ಒಟ್ಟಾರೆ ಅಂದಾಜು ಶೇ 22ರಷ್ಟು ವರದಿಯಾಗಿದ್ದು, ಹೆರಿಗೆಯ ಎರಡು ವಾರಗಳಲ್ಲಿ ಈ ಖಿನ್ನತೆ ಕಾಡುತ್ತದೆ.

ಪೋಷಕತ್ವದ ಹೊಣೆಗಾರಿಯೆಯು ದಂಪತಿಗಳಿಗೆ ಸವಾಲುದಾಯಕವಾಗಿದ್ದು, ಅನೇಕ ಬಾರಿ ಇದು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆ ಸಂದರ್ಭದಲ್ಲಿ ಕಾಡುವ ಕ್ಲಿಷ್ಟತೆ ಅಥವಾ ಐವಿಎಫ್​ ಗರ್ಭಧಾರಣೆ ಮಾದರಿ ಸಹಾಯ, ಹೆರಿಗೆ ಬಳಿಕ ಹೆಚ್ಚುವರಿ ತೂಕ ಸೇರಿ ಹಲವು ಅಂಶಗಳು ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಗುರುಗ್ರಾಮದ ಮೆದಾಂತ ಆಸ್ಪತ್ರೆಯ ಮನೋವೈದ್ಯ ಡಾ ಸೌರಭ್​ ಮೆಹ್ರೊತ್ರಾ ತಿಳಿಸಿದ್ದಾರೆ.

ಅಧ್ಯಯನಗಳು ಹೇಳುವಂತೆ ತಾಯ್ತನದ ಮಾನಸಿಕ ಅಸ್ವಸ್ಥತೆಯು ಅನೇಕ ಬಾರಿ ಅವಧಿಪೂರ್ವ ಜನನ ಮತ್ತು ಕಳಪೆ ನರಾಭಿವೃದ್ದಿಯ ಸಮಸ್ಯೆಯಿಂದಲೂ ಆಗುತ್ತದೆ.

ಹೆರಿಗೆಯದಾದ ಶೇ 70 ರಿಂದ 80ರಷ್ಟು ಪ್ರಕರಣದಲ್ಲಿ ನಾವು ಪ್ರಸವಪೂರ್ವ ಮಾನಸಿಕ ಅಸ್ವಸ್ಥತೆಯ ಲಕ್ಷಣ ಕಂಡರೂ ಶೇ 20ರಷ್ಟು ಪ್ರಕರಣದಲ್ಲಿ ತಾಯಂದಿರು ಮಾನಸಿಕ ಆರೋಗ್ಯಕ್ಕೆ ಸವಾಲುದಾಯಕ ಖಿನ್ನತೆಗೆ ಗುರಿಯಾಗುತ್ತಾರೆ. ಇವರಿಗೆ ಅಗತ್ಯ ಸಮಗ್ರ ಭಾವನಾತ್ಮಕ ಬೆಂಬಲ ಮತ್ತು ಆರೈಕೆ ಬೇಕಾಗುತ್ತದೆ ಎನ್ನುತ್ತಾರೆ ವೈದ್ಯರು.

ಪ್ರಸವಪೂರ್ವ ಖಿನ್ನತೆ ಲಕ್ಷಣ: ನಿದ್ರಾಹೀನತೆ, ಹಸಿವೆ ನಷ್ಟ, ತೀವ್ರತರದ ಕಿರಿಕಿರಿ, ಮಗುವಿನೊಂದಿಗೆ ಸಂಬಂಧ ಏರ್ಪಡಲು ಕಷ್ಟವಾಗುವ ಪರಿಸ್ಥಿತಿ ಕಾಣಬಹುದು. ಈ ಸಮಯದಲ್ಲಿ ಸಹಾಯ ಕೇಳುವುದು ಕೂಡ ನಿರ್ಣಾಯಕ ಹಂತವಾಗಿದೆ.

ಈ ಪ್ರಸವಪೂರ್ವ ಖಿನ್ನತೆಗೆ ಚಿಕಿತ್ಸೆ ದೊರೆಯದೇ ಹೋಗುವುದು, ದೀರ್ಘಕಾಲ ಪರಿಸ್ಥಿತಿ ಮುಂದುವರೆಯುವುದರಿಂದ ಸಮಸ್ಯೆಯಾಗುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಸೂಕ್ತ ಎನ್ನುತ್ತಾರೆ ಬೆಂಗಳೂರಿನ ವೈಟ್​ಫೀಲ್ಡ್​​ನಲ್ಲಿರುವ ಮದರ್​ಹುಡ್​​ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ ತೆಜಿ ದವನೆ. (ಐಎಎನ್​ಎಸ್​)

ಇದನ್ನೂ ಓದಿ: ಕಬ್ಬಿಣಾಂಶ ಭರಿತ ಆಹಾರ ಸೇವನೆಯಿಂದ ಅನೀಮಿಯಾ ತಡೆಗಟ್ಟಲು ಸಾಧ್ಯ: ತಜ್ಞರ ಅಭಿಮತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.