ETV Bharat / entertainment

ಬಿಗ್​ ಬಾಸ್​ನಲ್ಲಿ ಉಗ್ರಂ ಮಂಜು - ರಜತ್​ ಕಿಶನ್​ ಬಿಗ್ ಫೈಟ್​​; ಅವಾಚ್ಯ ಪದ ಬಳಕೆ - BIGG BOSS KANNADA 11

ಬಿಗ್​ ಬಾಸ್​ನಲ್ಲಿ ಉಗ್ರಂ ಮಂಜು ರಜತ್​ ಕಿಶನ್​ ನಡುವೆ ಮಾತಿಗೆ ಮಾತು ಬೆಳೆದಿದೆ. ಅವಾಚ್ಯ ಪದ ಬಳಸಿದ ರಜತ್​, ಬರ್ತೀಯಾ ಎಂದು ಮಂಜುರನ್ನು ಫೈಟ್​ಗೆ ಆಹ್ವಾನಿಸಿದ್ದಾರೆ.

Ugram Manju, Rajath Kishan
ಉಗ್ರಂ ಮಂಜು - ರಜತ್​ ಕಿಶನ್​ (Photo: Bigg Boss team)
author img

By ETV Bharat Entertainment Team

Published : Jan 20, 2025, 3:11 PM IST

ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಗ್ರ್ಯಾಂಡ್​ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ಫಿನಾಲೆ ವೀಕ್​ ರೋಷಾವೇಷದಲ್ಲೇ ಶುರುವಾಗಿದೆ. ಹೌದು, ರಜತ್ ಕಿಶನ್​ ಮತ್ತು ಉಗ್ರಂ ಮಂಜು ನಡುವೆ ಮಾತಿಗೆ ಮಾತು ಬೆಳೆದು, ದೊಡ್ಡ ಜಗಳವೇ ನಡೆದು ಹೋಗಿದೆ. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರಾ ಅನ್ನೋವಷ್ಟರ ಮಟ್ಟಿಗೆ ಟಾಕ್​ ವಾರ್​​ ನಡೆದಿದೆ.

ರಜತ್ ಕಿಶನ್​ ಮತ್ತು ಉಗ್ರಂ ಮಂಜು ನಡುವಿನ ಗಲಾಟೆಯ ಒಂದು ನೋಟವನ್ನು ಬಿಗ್​ ಬಾಸ್​ ತಮ್ಮ ಪ್ರೋಮೋದಲ್ಲಿ ಒದಗಿಸಿದ್ದಾರೆ. 'ರೋಷಾವೇಷದಲ್ಲೇ ಶುರುವಾಯ್ತಾ ಫಿನಾಲೆ ವಾರ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನಡಿ ಪ್ರೋಮೋ ಅನಾವರಣಗೊಂಡಿದೆ.

ಮನದಲ್ಲಿರುವ ಕೋಪ, ಬೇಸರ, ಹತಾಷೆಯನ್ನು ಹೊಡೆಯುತ್ತಾ ಮನದೊಳಗಿರುವ ಭಾರವನ್ನು ಇಳಿಸಬೇಕು ಎಂದು ಬಿಗ್​ ಬಾಸ್​ ತನ್ನ ಫೈನಲಿಸ್ಟ್​​ಗಳಿಗೆ ತಿಳಿಸಿದ್ದಾರೆ. ಮಣ್ಣಿನ ಮಡಕೆ ಮೇಲೆ ಸ್ಪರ್ಧಿಗಳ ಫೋಟೋ ಅಂಟಿಸಲಾಗಿದ್ದು, ಕೋಲಿನಿಂದ ಅದನ್ನು ಒಡೆಯಬೇಕಿದೆ. ಈ ಮೂಲಕ ಸ್ಪರ್ಧಿಗಳು ತಮ್ಮ ಆಕ್ರೋಶವನ್ನು ಹೊರಹಾಕಬೇಕಿದೆ.

ಅದರಂತೆ, ಮೊದಲು ಉಗ್ರಂ ಮಂಜು ಅವರು ರಜತ್​ ಕಿಶನ್​ ಹೆಸರು ತೆಗೆದುಕೊಂಡಿದ್ದಾರೆ. ಗ್ಯಾಂಗ್​ಗಳನ್ನೆಲ್ಲಾ ಹೊಡೆದಾಕ್ತೀನಿ ಅಂದಿದ್ರಿ, ಏನೂ ಮಾಡೋಕ್ಕಾಗ್ಲಿಲ್ಲ ನನ್ನ ಗೌತಮಿ ಫ್ರೆಂಡ್​ಶಿಪ್​ ನಾ ಎಂದಿದ್ದಾರೆ. ಅದಕ್ಕೆ ವ್ಯಂಗ್ಯವಾಡಿದ ರಜತ್​, ಏಳೆಂಟ್​ ವಾರ ಗುಳ್ಳೇ ನರಿ ತರ ಇದ್ದೆ ಎಂದಿದ್ದಾರೆ. ಭವ್ಯಾ ಜೊತೆ ಸೇರಿ ಮಂಜುನನ್ನು ಅಣಕಿಸಿದ್ದಾರೆ. ಅಲ್ಲದೇ, ಬರ್ತೀಯಾ ಎಂದು ಫೈಟ್​ಗೆ ಆಹ್ವಾನಿಸಿದ್ದಾರೆ. ಮತ್ತದೇ ಅವಾಚ್ಯ ಶಬ್ದವನ್ನೂ ಬಳಸಿದ್ದಾರೆ.

ಇದನ್ನೂ ಓದಿ: 'ಹೋಸ್ಟ್​ ಆಗಿ ಕೊನೆಯ ಎಪಿಸೋಡ್​​​': ಬಿಗ್​ ಬಾಸ್​ಗೆ ಮರೆಯಲಾಗದ ಪಯಣವೆಂದ ಸುದೀಪ್​

ಹಿಂದೊಮ್ಮೆ, ಗೋಲ್ಡ್​ ಸುರೇಶ್​ ಅವರೊಂದಿಗಿನ ಗಲಾಟೆಯಲ್ಲಿ ರಜತ್​ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದು ವೀಕೆಂಡ್​ ಎಪಿಸೋಡ್​ನಲ್ಲಿ ಚರ್ಚೆಗೆ ಬಂದು ಸುದೀಪ್​ ಕ್ಲಾಸ್​ ಕೊಟ್ಟಿದ್ದರು. ಇನ್ಮುಂದೆ ಈ ರೀತಿ ಮಾತನಾಡೋದಿಲ್ಲ ಎಂದು ರಜತ್​​ ಅವರು ಸುದೀಪ್​ ಅವರಲ್ಲಿ ಪ್ರಾಮಿಸ್​ ಮಾಡಿದ್ರು. ಅದ್ರೀಗ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಮಂಜು ಅವರನ್ನು ಫೈಟ್​ಗೆ ಆಹ್ವಾನಿಸಿದ್ದು, ಮುಂದೇನಾಗಲಿದೆ ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು

ಫಿನಾಲೆಗೆ ಇನ್ನೊಂದು ಹೆಜ್ಜೆ ಇದೆ ಅನ್ನೋವಾಗ, ಧನರಾಜ್​ ಆಚಾರ್​ ಎಲಿಮಿನೇಟ್​ ಆಗಿದ್ದಾರೆ. ಧನರಾಜ್​​ಗೂ ಮುನ್ನ ಗೌತಮಿ ಜಾಧವ್​ ಮನೆಯಿಂದ ಹೊರ ನಡೆದಿದ್ದಾರೆ. ಈ ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಫಿನಾಲೆಗೆ ಹನುಮಂತು, ತ್ರಿವಿಕ್ರಮ್​, ಭವ್ಯಾ, ಮೋಕ್ಷಿತಾ, ಮಂಜು ಮತ್ತು ರಜತ್​ ಎಂಟ್ರಿ ಕೊಟ್ಟಿದ್ದಾರೆ.

ಜನಪ್ರಿಯ ಕಾರ್ಯಕ್ರಮ 'ಬಿಗ್​ ಬಾಸ್​ ಕನ್ನಡ ಸೀಸನ್​ 11'ರ ಗ್ರ್ಯಾಂಡ್​ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ಫಿನಾಲೆ ವೀಕ್​ ರೋಷಾವೇಷದಲ್ಲೇ ಶುರುವಾಗಿದೆ. ಹೌದು, ರಜತ್ ಕಿಶನ್​ ಮತ್ತು ಉಗ್ರಂ ಮಂಜು ನಡುವೆ ಮಾತಿಗೆ ಮಾತು ಬೆಳೆದು, ದೊಡ್ಡ ಜಗಳವೇ ನಡೆದು ಹೋಗಿದೆ. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರಾ ಅನ್ನೋವಷ್ಟರ ಮಟ್ಟಿಗೆ ಟಾಕ್​ ವಾರ್​​ ನಡೆದಿದೆ.

ರಜತ್ ಕಿಶನ್​ ಮತ್ತು ಉಗ್ರಂ ಮಂಜು ನಡುವಿನ ಗಲಾಟೆಯ ಒಂದು ನೋಟವನ್ನು ಬಿಗ್​ ಬಾಸ್​ ತಮ್ಮ ಪ್ರೋಮೋದಲ್ಲಿ ಒದಗಿಸಿದ್ದಾರೆ. 'ರೋಷಾವೇಷದಲ್ಲೇ ಶುರುವಾಯ್ತಾ ಫಿನಾಲೆ ವಾರ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನಡಿ ಪ್ರೋಮೋ ಅನಾವರಣಗೊಂಡಿದೆ.

ಮನದಲ್ಲಿರುವ ಕೋಪ, ಬೇಸರ, ಹತಾಷೆಯನ್ನು ಹೊಡೆಯುತ್ತಾ ಮನದೊಳಗಿರುವ ಭಾರವನ್ನು ಇಳಿಸಬೇಕು ಎಂದು ಬಿಗ್​ ಬಾಸ್​ ತನ್ನ ಫೈನಲಿಸ್ಟ್​​ಗಳಿಗೆ ತಿಳಿಸಿದ್ದಾರೆ. ಮಣ್ಣಿನ ಮಡಕೆ ಮೇಲೆ ಸ್ಪರ್ಧಿಗಳ ಫೋಟೋ ಅಂಟಿಸಲಾಗಿದ್ದು, ಕೋಲಿನಿಂದ ಅದನ್ನು ಒಡೆಯಬೇಕಿದೆ. ಈ ಮೂಲಕ ಸ್ಪರ್ಧಿಗಳು ತಮ್ಮ ಆಕ್ರೋಶವನ್ನು ಹೊರಹಾಕಬೇಕಿದೆ.

ಅದರಂತೆ, ಮೊದಲು ಉಗ್ರಂ ಮಂಜು ಅವರು ರಜತ್​ ಕಿಶನ್​ ಹೆಸರು ತೆಗೆದುಕೊಂಡಿದ್ದಾರೆ. ಗ್ಯಾಂಗ್​ಗಳನ್ನೆಲ್ಲಾ ಹೊಡೆದಾಕ್ತೀನಿ ಅಂದಿದ್ರಿ, ಏನೂ ಮಾಡೋಕ್ಕಾಗ್ಲಿಲ್ಲ ನನ್ನ ಗೌತಮಿ ಫ್ರೆಂಡ್​ಶಿಪ್​ ನಾ ಎಂದಿದ್ದಾರೆ. ಅದಕ್ಕೆ ವ್ಯಂಗ್ಯವಾಡಿದ ರಜತ್​, ಏಳೆಂಟ್​ ವಾರ ಗುಳ್ಳೇ ನರಿ ತರ ಇದ್ದೆ ಎಂದಿದ್ದಾರೆ. ಭವ್ಯಾ ಜೊತೆ ಸೇರಿ ಮಂಜುನನ್ನು ಅಣಕಿಸಿದ್ದಾರೆ. ಅಲ್ಲದೇ, ಬರ್ತೀಯಾ ಎಂದು ಫೈಟ್​ಗೆ ಆಹ್ವಾನಿಸಿದ್ದಾರೆ. ಮತ್ತದೇ ಅವಾಚ್ಯ ಶಬ್ದವನ್ನೂ ಬಳಸಿದ್ದಾರೆ.

ಇದನ್ನೂ ಓದಿ: 'ಹೋಸ್ಟ್​ ಆಗಿ ಕೊನೆಯ ಎಪಿಸೋಡ್​​​': ಬಿಗ್​ ಬಾಸ್​ಗೆ ಮರೆಯಲಾಗದ ಪಯಣವೆಂದ ಸುದೀಪ್​

ಹಿಂದೊಮ್ಮೆ, ಗೋಲ್ಡ್​ ಸುರೇಶ್​ ಅವರೊಂದಿಗಿನ ಗಲಾಟೆಯಲ್ಲಿ ರಜತ್​ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದರು. ಇದು ವೀಕೆಂಡ್​ ಎಪಿಸೋಡ್​ನಲ್ಲಿ ಚರ್ಚೆಗೆ ಬಂದು ಸುದೀಪ್​ ಕ್ಲಾಸ್​ ಕೊಟ್ಟಿದ್ದರು. ಇನ್ಮುಂದೆ ಈ ರೀತಿ ಮಾತನಾಡೋದಿಲ್ಲ ಎಂದು ರಜತ್​​ ಅವರು ಸುದೀಪ್​ ಅವರಲ್ಲಿ ಪ್ರಾಮಿಸ್​ ಮಾಡಿದ್ರು. ಅದ್ರೀಗ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಮಂಜು ಅವರನ್ನು ಫೈಟ್​ಗೆ ಆಹ್ವಾನಿಸಿದ್ದು, ಮುಂದೇನಾಗಲಿದೆ ಎಂದು ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು

ಫಿನಾಲೆಗೆ ಇನ್ನೊಂದು ಹೆಜ್ಜೆ ಇದೆ ಅನ್ನೋವಾಗ, ಧನರಾಜ್​ ಆಚಾರ್​ ಎಲಿಮಿನೇಟ್​ ಆಗಿದ್ದಾರೆ. ಧನರಾಜ್​​ಗೂ ಮುನ್ನ ಗೌತಮಿ ಜಾಧವ್​ ಮನೆಯಿಂದ ಹೊರ ನಡೆದಿದ್ದಾರೆ. ಈ ಇಬ್ಬರೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಫಿನಾಲೆಗೆ ಹನುಮಂತು, ತ್ರಿವಿಕ್ರಮ್​, ಭವ್ಯಾ, ಮೋಕ್ಷಿತಾ, ಮಂಜು ಮತ್ತು ರಜತ್​ ಎಂಟ್ರಿ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.