ETV Bharat / entertainment

ಜನ್ಮ ದಿನಕ್ಕೂ ಮುನ್ನ ಅಭಿಮಾನಿಗಳೊಂದಿಗೆ ಸೂಪರ್​ ಸ್ಟಾರ್ ಸೂರ್ಯ ರಕ್ತದಾನ: ವಿಡಿಯೋ ಇಲ್ಲಿದೆ ನೋಡಿ - Suriya Donates Blood

author img

By ETV Bharat Karnataka Team

Published : Jul 16, 2024, 12:30 PM IST

ಅಭಿಮಾನಿಗಳೊಂದಿಗೆ ದಕ್ಷಿಣದ ಹೆಸರಾಂತ ನಟ ಸೂರ್ಯ ಶಿವಕುಮಾರ್ ರಕ್ತದಾನ ಮಾಡಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

Suriya Donates Blood
ನಟ ಸೂರ್ಯ ರಕ್ತದಾನ (ETV Bharat)
ನಟ ಸೂರ್ಯ ರಕ್ತದಾನ (ETV Bharat)

ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಶಿವಕುಮಾರ್ ಅವರ ಅಭಿಮಾನಿಗಳು ಕಳೆದ ಕೆಲ ವರ್ಷಗಳಿಂದ ರಕ್ತದಾನ, ಪುಸ್ತಕ ದಾನ, ಮರ ನೆಡುವಿಕೆ ಸೇರಿದಂತೆ ಮಾನವೀಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ತಮ್ಮ ಮೆಚ್ಚಿನ ನಟನ ಜನ್ಮದಿನದ ಸಂದರ್ಭ 2,000ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದ್ದರು. ಮುಂದಿನ ವರ್ಷ ಈ ಕಾರ್ಯದಲ್ಲಿ ತಾನೂ ಭಾಗವಹಿಸುವುದಾಗಿ ಸೂರ್ಯ ಭರವಸೆ ನೀಡಿದ್ದರು. ಅದರಂತೆ ಇದೀಗ ನಟ ತಾನು ಕೊಟ್ಟ ಮಾತು ನೆರವೇರಿಸಿ ಗಮನ ಸೆಳೆದಿದ್ದಾರೆ.

ಜುಲೈ 23ರಂದು (ಮುಂದಿನ ಮಂಗಳವಾರ) ಸೂರ್ಯ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸೋಮವಾರದಂದು ತಮ್ಮ ಅಭಿಮಾನಿಗಳೊಂದಿಗೆ ರಕ್ತದಾನ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋ ನಿಟ್ಟಿನಲ್ಲಿ ಈ ರಕ್ತದಾನದಲ್ಲಿ 400ಕ್ಕೂ ಅಭಿಮಾನಿಗಳು ಭಾಗಿಯಾಗಿದ್ದರು. ಈ ಕಾರ್ಯ ಮುಂದುವರಿಯಲಿದೆ. ಕಳೆದ ದಿನ ನಟನ ಫೋಟೋ - ವಿಡಿಯೋಗಳು ವೈರಲ್ ಆದ ನಂತರ ಅನೇಕರು ಸ್ಫೂರ್ತಿ ಪಡೆದಿದ್ದು, ಇಂತಹ ಮಾನವೀಯ ಕಾರ್ಯ ಕೈಗೊಳ್ಳಲು ಮುಂದಾಗುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾನವೀಯ ಕಾರ್ಯಗಳಿಗೆ ಅಭಿಮಾನಿಗಳನ್ನೂ ಪ್ರೇರೇಪಿಸುತ್ತಾರೆ. ಇದಕ್ಕೂ ಮುನ್ನ ಕಲ್ಲಾಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ್ದ ಸೂರ್ಯ, ಇಂತಹ ದುರ್ಘಟನೆಗಳನ್ನು ತಡೆಯಲು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದ್ದರು. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ನಟ, "ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದರೆ ನಾವು ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಬಹುದು. ಅಲ್ಪಾವಧಿ ಪರಿಹಾರ ಲೆಕ್ಕಿಸದೇ, ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಅಂಬಾನಿ ಕುಟುಂಬದ ವಿವಾಹ ಮಹೋತ್ಸವ: ಅತಿಥಿಗಳಿಗೆ ಕ್ಯೂಆರ್​ ಕೋಡ್, ಕಲರ್​ ಬ್ಯಾಂಡ್ಸ್ - ಹೇಗಿತ್ತು ಗೊತ್ತಾ ಭದ್ರತೆ? - SECURITY AT ANANT RADHIKA WEDDING

ನಟನ ಸಿನಿಮಾ ವಿಚಾರ ಗಮನಿಸುವುದಾದರೆ, ಬಹುನಿರೀಕ್ಷಿತ 'ಕಂಗುವ' ಬಿಡುಗಡೆಗಾಗಿ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಎದುರು ನೋಡುತ್ತಿದೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಯೋಗಿ ಬಾಬು ಮತ್ತು ಮೃಣಾಲ್ ಠಾಕೂರ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಸಾಲಿನ ಅಕ್ಟೋಬರ್ 10ರಂದು 'ಕಂಗುವ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: 'ಫಿರ್​ ಆಯಿ ಹಸೀನ್​ ದಿಲ್ರುಬಾ' ಬಿಡುಗಡೆ ದಿನಾಂಕ ಫಿಕ್ಸ್: OTTಯಲ್ಲೇ ಬರಲಿದೆ ಸಿನಿಮಾ - Phir Aayi Hasseen Dillruba Release

ನಟ ಸೂರ್ಯ ರಕ್ತದಾನ (ETV Bharat)

ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಶಿವಕುಮಾರ್ ಅವರ ಅಭಿಮಾನಿಗಳು ಕಳೆದ ಕೆಲ ವರ್ಷಗಳಿಂದ ರಕ್ತದಾನ, ಪುಸ್ತಕ ದಾನ, ಮರ ನೆಡುವಿಕೆ ಸೇರಿದಂತೆ ಮಾನವೀಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ವರ್ಷ ತಮ್ಮ ಮೆಚ್ಚಿನ ನಟನ ಜನ್ಮದಿನದ ಸಂದರ್ಭ 2,000ಕ್ಕೂ ಹೆಚ್ಚು ಅಭಿಮಾನಿಗಳು ರಕ್ತದಾನ ಮಾಡಿದ್ದರು. ಮುಂದಿನ ವರ್ಷ ಈ ಕಾರ್ಯದಲ್ಲಿ ತಾನೂ ಭಾಗವಹಿಸುವುದಾಗಿ ಸೂರ್ಯ ಭರವಸೆ ನೀಡಿದ್ದರು. ಅದರಂತೆ ಇದೀಗ ನಟ ತಾನು ಕೊಟ್ಟ ಮಾತು ನೆರವೇರಿಸಿ ಗಮನ ಸೆಳೆದಿದ್ದಾರೆ.

ಜುಲೈ 23ರಂದು (ಮುಂದಿನ ಮಂಗಳವಾರ) ಸೂರ್ಯ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಸೋಮವಾರದಂದು ತಮ್ಮ ಅಭಿಮಾನಿಗಳೊಂದಿಗೆ ರಕ್ತದಾನ ಮಾಡಿದ್ದಾರೆ. ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋ ನಿಟ್ಟಿನಲ್ಲಿ ಈ ರಕ್ತದಾನದಲ್ಲಿ 400ಕ್ಕೂ ಅಭಿಮಾನಿಗಳು ಭಾಗಿಯಾಗಿದ್ದರು. ಈ ಕಾರ್ಯ ಮುಂದುವರಿಯಲಿದೆ. ಕಳೆದ ದಿನ ನಟನ ಫೋಟೋ - ವಿಡಿಯೋಗಳು ವೈರಲ್ ಆದ ನಂತರ ಅನೇಕರು ಸ್ಫೂರ್ತಿ ಪಡೆದಿದ್ದು, ಇಂತಹ ಮಾನವೀಯ ಕಾರ್ಯ ಕೈಗೊಳ್ಳಲು ಮುಂದಾಗುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಸೇವೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾನವೀಯ ಕಾರ್ಯಗಳಿಗೆ ಅಭಿಮಾನಿಗಳನ್ನೂ ಪ್ರೇರೇಪಿಸುತ್ತಾರೆ. ಇದಕ್ಕೂ ಮುನ್ನ ಕಲ್ಲಾಕುರಿಚಿ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ ಅನೇಕರು ಸಾವನ್ನಪ್ಪಿರುವ ಬಗ್ಗೆ ಮಾತನಾಡಿದ್ದ ಸೂರ್ಯ, ಇಂತಹ ದುರ್ಘಟನೆಗಳನ್ನು ತಡೆಯಲು ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದ್ದರು. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ನಟ, "ಸರ್ಕಾರ ಮತ್ತು ರಾಜಕೀಯ ಪಕ್ಷಗಳು ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿದರೆ ನಾವು ಭವಿಷ್ಯದಲ್ಲಿ ಇಂತಹ ಅನಾಹುತಗಳನ್ನು ತಡೆಯಬಹುದು. ಅಲ್ಪಾವಧಿ ಪರಿಹಾರ ಲೆಕ್ಕಿಸದೇ, ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: ಅಂಬಾನಿ ಕುಟುಂಬದ ವಿವಾಹ ಮಹೋತ್ಸವ: ಅತಿಥಿಗಳಿಗೆ ಕ್ಯೂಆರ್​ ಕೋಡ್, ಕಲರ್​ ಬ್ಯಾಂಡ್ಸ್ - ಹೇಗಿತ್ತು ಗೊತ್ತಾ ಭದ್ರತೆ? - SECURITY AT ANANT RADHIKA WEDDING

ನಟನ ಸಿನಿಮಾ ವಿಚಾರ ಗಮನಿಸುವುದಾದರೆ, ಬಹುನಿರೀಕ್ಷಿತ 'ಕಂಗುವ' ಬಿಡುಗಡೆಗಾಗಿ ಅಭಿಮಾನಿಗಳು ಸೇರಿದಂತೆ ಚಿತ್ರತಂಡ ಎದುರು ನೋಡುತ್ತಿದೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದು, ಬಾಬಿ ಡಿಯೋಲ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ರೆಡಿನ್ ಕಿಂಗ್ಸ್ಲಿ, ಕೋವೈ ಸರಳಾ, ಯೋಗಿ ಬಾಬು ಮತ್ತು ಮೃಣಾಲ್ ಠಾಕೂರ್ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಸಾಲಿನ ಅಕ್ಟೋಬರ್ 10ರಂದು 'ಕಂಗುವ' ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.

ಇದನ್ನೂ ಓದಿ: 'ಫಿರ್​ ಆಯಿ ಹಸೀನ್​ ದಿಲ್ರುಬಾ' ಬಿಡುಗಡೆ ದಿನಾಂಕ ಫಿಕ್ಸ್: OTTಯಲ್ಲೇ ಬರಲಿದೆ ಸಿನಿಮಾ - Phir Aayi Hasseen Dillruba Release

ETV Bharat Logo

Copyright © 2024 Ushodaya Enterprises Pvt. Ltd., All Rights Reserved.