ETV Bharat / entertainment

ತಮಿಳುನಾಡಿನಲ್ಲಿ ಷಷ್ಠಿಪೂರ್ತಿ ಪೂಜೆಯಲ್ಲಿ ಭಾಗಿಯಾದ ಶಿವ ರಾಜ್​​ಕುಮಾರ್ ದಂಪತಿ- ವಿಡಿಯೋ - Shiva Rajkumar

author img

By ETV Bharat Entertainment Team

Published : Aug 8, 2024, 5:27 PM IST

ಒಂದು ಸಾವಿರ ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಪತ್ನಿ ಗೀತಾ ಜೊತೆ ನಟ ಶಿವ ರಾಜ್‌ಕುಮಾರ್ ಷಷ್ಠಿಪೂರ್ತಿ ಪೂಜೆ ಸಲ್ಲಿಸಿದರು.

shastipoorthi pooja by Shiva Rajkumar family
ಷಷ್ಠಿಪೂರ್ತಿ ಪೂಜೆಯಲ್ಲಿ ಭಾಗಿಯಾದ ಶಿವ ರಾಜ್​​ಕುಮಾರ್ ದಂಪತಿ (ETV Bharat)
ಷಷ್ಠಿಪೂರ್ತಿ ಪೂಜೆ (ETV Bharat)

ಹ್ಯಾಟ್ರಿಕ್‌ ಹೀರೋ ಶಿವ ರಾಜ್​​ಕುಮಾರ್ ಸದ್ಯ ಸರಣಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 'ಭೈರತಿ ರಣಗಲ್', '45' ಹಾಗೂ 'ಭೈರವನ‌ ಕೊನೆಯ ಪಾಠ' ಚಿತ್ರಗಳ ಕೆಲಸ ಸಾಗಿದೆ. ಈ ನಡುವೆ ಅವರ ಹೊಸ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಸಿನಿಮಾ ಕೆಲಸಗಳ ಮಧ್ಯೆ ಇಂದು ಕುಟುಂಬ ಹಾಗು ಸ್ನೇಹಿತರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಪತ್ನಿ ಗೀತಾ ಜೊತೆ ಅವರು ಷಷ್ಠಿಪೂರ್ತಿ ಪೂಜೆ ಸಲ್ಲಿಸಿದರು.

ಶಿವ ರಾಜ್​ಕುಮಾರ್ ಬಾಲ್ಯದ ಗೆಳೆಯರ ಕುಟುಂಬ ಕೂಡಾ ಪೂಜೆಯಲ್ಲಿ ಭಾಗಿಯಾಗಿದ್ದರು. ಹಿಂದು ಸಂಪ್ರದಾಯದ ಪ್ರಕಾರ, 60 ವರ್ಷ ತುಂಬಿದ ಮೇಲೆ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಷಷ್ಠಿಪೂರ್ತಿ ಪೂಜೆ ಮಾಡಲಾಗುತ್ತದೆ.

ಶಿವ ರಾಜ್​​ಕುಮಾರ್ ಮುಂದಿನ ಸಿನಿಮಾಗಳು: ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದಿದೆ. ಹೀಗಾಗಿ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

shastipoorthi pooja by Shiva Rajkumar family
ಷಷ್ಠಿಪೂರ್ತಿ ಪೂಜೆಯಲ್ಲಿ ಶಿವ ರಾಜ್​​ಕುಮಾರ್ ದಂಪತಿ (ETV Bharat)

2017ರಲ್ಲಿ ಬಂದ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಭೈರತಿ ರಣಗಲ್‍ ‌ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲ್ಯಾಕ್​​ ಡ್ರೆಸ್‍ ಏಕೆ ಹಾಕುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

ಇದನ್ನೂ ಓದಿ: ಲೈಟ್ ಬಾಯ್​​​ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್​​: ಇಂದೇ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ಯಶ್​​​ - Yash Toxic

ಚಿತ್ರದಲ್ಲಿ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ಕೈಚಳಕ, ರವಿ ಬಸ್ರೂರು ಸಂಗೀತವಿದೆ. ನಿರ್ಮಾಪಕಿ ಗೀತಾ ಶಿವ ರಾಜ್​​ಕುಮಾರ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಗೊಳಿಸುವ ತಯಾರಿಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಕನ್ನಡಿಗರ ಮನಗೆಲ್ಲಲು ಪಣ ತೊಟ್ಟ ಪ್ರಭು ಮುಂಡ್ಕುರ್: ಮುಂದಿನ ತಿಂಗಳು ನಿಮ್ಮೆದುರು 'ಮರ್ಫಿ' - Murphy

'ಭೈರವನ‌ ಕೊನೆಯ ಪಾಠ' ಶಿವಣ್ಣನ ಮತ್ತೊಂದು ಚಿತ್ರ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ಹೇಮಂತ್ ರಾವ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ 'ಈಟಿವಿ ಭಾರತ'ದ ಜೊತೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕರು, 'ಭೈರವನ‌ ಕೊನೆಯ ಪಾಠ'ವನ್ನು ದೊಡ್ಡ ಮಟ್ಟದಲ್ಲಿ ಮಾಡಲಿದ್ದೇವೆ. ಹಾಗಾಗಿ ದೊಡ್ಡ ಸಿನಿಮಾ ಸೆಟ್​​​​ಗಳನ್ನು ಹಾಕಲಾಗುತ್ತಿದೆ. ಈ ವರ್ಷಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕೆಂಬ ಯೋಜನೆ ಇದೆ ಎಂದಿದ್ದರು.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 38 ವರ್ಷ ಪೂರೈಸಿರು ಶಿವ ರಾಜ್‌ಕುಮಾರ್ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ‌ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ.

ಷಷ್ಠಿಪೂರ್ತಿ ಪೂಜೆ (ETV Bharat)

ಹ್ಯಾಟ್ರಿಕ್‌ ಹೀರೋ ಶಿವ ರಾಜ್​​ಕುಮಾರ್ ಸದ್ಯ ಸರಣಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. 'ಭೈರತಿ ರಣಗಲ್', '45' ಹಾಗೂ 'ಭೈರವನ‌ ಕೊನೆಯ ಪಾಠ' ಚಿತ್ರಗಳ ಕೆಲಸ ಸಾಗಿದೆ. ಈ ನಡುವೆ ಅವರ ಹೊಸ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಸಿನಿಮಾ ಕೆಲಸಗಳ ಮಧ್ಯೆ ಇಂದು ಕುಟುಂಬ ಹಾಗು ಸ್ನೇಹಿತರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಪತ್ನಿ ಗೀತಾ ಜೊತೆ ಅವರು ಷಷ್ಠಿಪೂರ್ತಿ ಪೂಜೆ ಸಲ್ಲಿಸಿದರು.

ಶಿವ ರಾಜ್​ಕುಮಾರ್ ಬಾಲ್ಯದ ಗೆಳೆಯರ ಕುಟುಂಬ ಕೂಡಾ ಪೂಜೆಯಲ್ಲಿ ಭಾಗಿಯಾಗಿದ್ದರು. ಹಿಂದು ಸಂಪ್ರದಾಯದ ಪ್ರಕಾರ, 60 ವರ್ಷ ತುಂಬಿದ ಮೇಲೆ ಆರೋಗ್ಯ ಹಾಗೂ ಅಭಿವೃದ್ಧಿಗಾಗಿ ಷಷ್ಠಿಪೂರ್ತಿ ಪೂಜೆ ಮಾಡಲಾಗುತ್ತದೆ.

ಶಿವ ರಾಜ್​​ಕುಮಾರ್ ಮುಂದಿನ ಸಿನಿಮಾಗಳು: ಬಹುನಿರೀಕ್ಷಿತ 'ಭೈರತಿ ರಣಗಲ್' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗಿವೆ. ಈಗಾಗಲೇ ಅನಾವರಣಗೊಂಡಿರುವ ಟೀಸರ್ ಮಿಲಿಯನ್​ಗಟ್ಟಲೆ ವೀಕ್ಷಣೆ ಪಡೆದಿದೆ. ಹೀಗಾಗಿ ಸಿನಿಮಾ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

shastipoorthi pooja by Shiva Rajkumar family
ಷಷ್ಠಿಪೂರ್ತಿ ಪೂಜೆಯಲ್ಲಿ ಶಿವ ರಾಜ್​​ಕುಮಾರ್ ದಂಪತಿ (ETV Bharat)

2017ರಲ್ಲಿ ಬಂದ ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್‌ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಭೈರತಿ ರಣಗಲ್‍ ‌ಗ್ಯಾಂಗ್‍ಸ್ಟರ್ ಆಗಿದ್ದು ಹೇಗೆ? ಆ ಬ್ಲ್ಯಾಕ್​​ ಡ್ರೆಸ್‍ ಏಕೆ ಹಾಕುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.

ಇದನ್ನೂ ಓದಿ: ಲೈಟ್ ಬಾಯ್​​​ನಿಂದ 'ಟಾಕ್ಸಿಕ್'ಗೆ ಕ್ಲ್ಯಾಪ್ ಮಾಡಿಸಿದ ರಾಕಿ ಬಾಯ್​​: ಇಂದೇ ಶೂಟಿಂಗ್​ನಲ್ಲಿ ಭಾಗಿಯಾಗಲಿರುವ ಯಶ್​​​ - Yash Toxic

ಚಿತ್ರದಲ್ಲಿ ರುಕ್ಮಿಣಿ ವಸಂತ್‍, ರಾಹುಲ್ ಬೋಸ್‍, ಅವಿನಾಶ್‍, ದೇವರಾಜ್‍, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ನವೀನ್ ಕುಮಾರ್ ಕ್ಯಾಮರಾ ಕೈಚಳಕ, ರವಿ ಬಸ್ರೂರು ಸಂಗೀತವಿದೆ. ನಿರ್ಮಾಪಕಿ ಗೀತಾ ಶಿವ ರಾಜ್​​ಕುಮಾರ್ ಬಹು ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಗೊಳಿಸುವ ತಯಾರಿಯಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಕನ್ನಡಿಗರ ಮನಗೆಲ್ಲಲು ಪಣ ತೊಟ್ಟ ಪ್ರಭು ಮುಂಡ್ಕುರ್: ಮುಂದಿನ ತಿಂಗಳು ನಿಮ್ಮೆದುರು 'ಮರ್ಫಿ' - Murphy

'ಭೈರವನ‌ ಕೊನೆಯ ಪಾಠ' ಶಿವಣ್ಣನ ಮತ್ತೊಂದು ಚಿತ್ರ. 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ಹೇಮಂತ್ ರಾವ್ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ 'ಈಟಿವಿ ಭಾರತ'ದ ಜೊತೆ ಮಾಹಿತಿ ಹಂಚಿಕೊಂಡಿದ್ದ ನಿರ್ದೇಶಕರು, 'ಭೈರವನ‌ ಕೊನೆಯ ಪಾಠ'ವನ್ನು ದೊಡ್ಡ ಮಟ್ಟದಲ್ಲಿ ಮಾಡಲಿದ್ದೇವೆ. ಹಾಗಾಗಿ ದೊಡ್ಡ ಸಿನಿಮಾ ಸೆಟ್​​​​ಗಳನ್ನು ಹಾಕಲಾಗುತ್ತಿದೆ. ಈ ವರ್ಷಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸಬೇಕೆಂಬ ಯೋಜನೆ ಇದೆ ಎಂದಿದ್ದರು.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 38 ವರ್ಷ ಪೂರೈಸಿರು ಶಿವ ರಾಜ್‌ಕುಮಾರ್ 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳ‌ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.