ETV Bharat / entertainment

ರಜನಿಕಾಂತ್​​ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ಸೂಪರ್​ ಸ್ಟಾರ್​​​ ಪತ್ನಿಗೆ ಕರೆ ಮಾಡಿದ ಪಿಎಂ - PM Enquiries Rajinikanth Health

author img

By ETV Bharat Karnataka Team

Published : 3 hours ago

ಜನಪ್ರಿಯ ನಟ ರಜನಿಕಾಂತ್ ಅವರು ಸೋಮವಾರ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಪ್ರಧಾನಿ ಮೋದಿ ಅವರು ರಜನಿ ಪತ್ನಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.

Actor Rajinikanth, PM Narendra Modi
ರಜನಿಕಾಂತ್​​ ಆರೋಗ್ಯ ವಿಚಾರಿಸಿದ ಪಿಎಂ ಮೋದಿ (Photo: ANI)

ಸೋಮವಾರ ರಾತ್ರಿ ಅಸ್ಪತ್ರೆಗೆ ದಾಖಲಾದ ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್​​, ಸೂಕ್ತ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸೌತ್​ ಸೂಪರ್​ ಸ್ಟಾರ್​ ಶೀಘ್ರ ಗುಣಮುಖರಾಗಲೆಂದು ಅಪಾರ ಸಂಖ್ಯೆಯ ಅಭಿಮಾನಿಗಳು ಆಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಜನಿ ಪತ್ನಿ ಲತಾ ರಜನಿಕಾಂತ್ ಅವರೊಂದಿಗೆ ಫೋನ್​​ ಕರೆ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ಮೋದಿ, ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಸೂಪರ್​​ ಸ್ಟಾರ್​ ಆರೋಗ್ಯ ವಿಚಾರಿಸಿದ ಪಿಎಂ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸೋಷಿಯಲ್​ ಮೀಡಿಯಾ ಎಕ್ಸ್ ಪ್ಲ್ಯಾಟ್​ಫಾರ್ಮ್​​​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀಮತಿ ಲತಾ ರಜಿನಿಕಾಂತ್ ಅವರೊಂದಿಗೆ ದೂರವಾಣಿ ಕರೆ ಮೂಲಕ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ರಜನಿಕಾಂತ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ ಎಂದು ಅವರ ಯೋಗಕ್ಷೇಮದ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ರಜನಿಕಾಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಸೂಕ್ತ ಚಿಕಿತ್ಸೆ ಪಡೆದ ನಟ: 73ರ ಹರೆಯದ ಸೂಪರ್‌ ಸ್ಟಾರ್ ಪ್ರಸ್ತುತ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಹೃದಯದ ಮುಖ್ಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಶಸ್ತ್ರಚಿಕಿತ್ಸೆಯೇತರ ವಿಧಾನದ ಸಹಾಯ ಪಡೆಯಲಾಗಿದೆ. ರಜನಿಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ. ಅವರೀಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ರಜನಿಕಾಂತ್‌ಗೆ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ; ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್​​ ಸಾಧ್ಯತೆ - Rajinikanth Health Update

ಆಸ್ಪತ್ರೆಯಿಂದ ಬಂದ ಹೆಲ್ತ್ ಅಪ್ಡೇಟ್: ರಜನಿಕಾಂತ್ ಆಸ್ಪತ್ರೆಗೆ ದಾಖಲಾದ ಬಳಿಕ ಸಂಜೆ ವೇಳೆಗೆ ಆಸ್ಪತ್ರೆಯು ಅಧಿಕೃತ ಹೆಲ್ತ್ ಅಪ್ಡೇಟ್ ಬಿಡುಗಡೆ ಮಾಡಿತ್ತು. ಹೃದಯದ ಒಂದು ಭಾಗದ ರಕ್ತನಾಳದಲ್ಲಿ (ಮಹಾಪಧಮನಿ) ಊತ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೇತರ ವಿಧಾನವಾದ ಟ್ರಾನ್ಸ್‌ಕ್ಯಾಥೆಟರ್ ಮೂಲಕ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅಭಿಷೇಕ್​ ವರ್ತನೆಯಿಂದ ಐಶ್ವರ್ಯಗೆ ಮುಜುಗರ? ವಿಡಿಯೋ ವೈರಲ್​ - Aishwarya Abhishek

ರಜನಿ ಮುಂದಿನ ಸಿನಿಮಾಗಳು: ರಜನಿಕಾಂತ್ ಕೊನೆಯದಾಗಿ ಕಾಣಿಸಿಕೊಂಡಿರುವ ಚಿತ್ರ 'ಜೈಲರ್'. ಸಿನಿಮಾ ಅಭೂತಪೂರ್ವ ಯಶ ಕಂಡಿತ್ತು. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ', ಟಿ.ಜೆ.ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಸೇರಿದಂತೆ ಹಲವು ಸಿನಿಮಾ​​​ಗಳನ್ನು ಹೊಂದಿದ್ದಾರೆ. ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್' ಇದೇ ಅಕ್ಟೋಬರ್ 10ರಂದು ತೆರೆಗಪ್ಪಳಿಸಲಿದೆ.

ಸೋಮವಾರ ರಾತ್ರಿ ಅಸ್ಪತ್ರೆಗೆ ದಾಖಲಾದ ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್​​, ಸೂಕ್ತ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸೌತ್​ ಸೂಪರ್​ ಸ್ಟಾರ್​ ಶೀಘ್ರ ಗುಣಮುಖರಾಗಲೆಂದು ಅಪಾರ ಸಂಖ್ಯೆಯ ಅಭಿಮಾನಿಗಳು ಆಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಜನಿ ಪತ್ನಿ ಲತಾ ರಜನಿಕಾಂತ್ ಅವರೊಂದಿಗೆ ಫೋನ್​​ ಕರೆ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಕಾಳಜಿ ತೋರಿರುವ ಪ್ರಧಾನಿ ಮೋದಿ, ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಸೂಪರ್​​ ಸ್ಟಾರ್​ ಆರೋಗ್ಯ ವಿಚಾರಿಸಿದ ಪಿಎಂ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಸೋಷಿಯಲ್​ ಮೀಡಿಯಾ ಎಕ್ಸ್ ಪ್ಲ್ಯಾಟ್​ಫಾರ್ಮ್​​​ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರೀಮತಿ ಲತಾ ರಜಿನಿಕಾಂತ್ ಅವರೊಂದಿಗೆ ದೂರವಾಣಿ ಕರೆ ಮೂಲಕ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ರಜನಿಕಾಂತ್ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ ಎಂದು ಅವರ ಯೋಗಕ್ಷೇಮದ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ರಜನಿಕಾಂತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ಹಾರೈಸಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಸೂಕ್ತ ಚಿಕಿತ್ಸೆ ಪಡೆದ ನಟ: 73ರ ಹರೆಯದ ಸೂಪರ್‌ ಸ್ಟಾರ್ ಪ್ರಸ್ತುತ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಹೃದಯದ ಮುಖ್ಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲು ಶಸ್ತ್ರಚಿಕಿತ್ಸೆಯೇತರ ವಿಧಾನದ ಸಹಾಯ ಪಡೆಯಲಾಗಿದೆ. ರಜನಿಕಾಂತ್ ಅವರ ಸ್ಥಿತಿ ಸ್ಥಿರವಾಗಿದೆ. ಅವರೀಗ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿರಿಯ ನಟ ರಜನಿಕಾಂತ್‌ಗೆ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ; ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್​​ ಸಾಧ್ಯತೆ - Rajinikanth Health Update

ಆಸ್ಪತ್ರೆಯಿಂದ ಬಂದ ಹೆಲ್ತ್ ಅಪ್ಡೇಟ್: ರಜನಿಕಾಂತ್ ಆಸ್ಪತ್ರೆಗೆ ದಾಖಲಾದ ಬಳಿಕ ಸಂಜೆ ವೇಳೆಗೆ ಆಸ್ಪತ್ರೆಯು ಅಧಿಕೃತ ಹೆಲ್ತ್ ಅಪ್ಡೇಟ್ ಬಿಡುಗಡೆ ಮಾಡಿತ್ತು. ಹೃದಯದ ಒಂದು ಭಾಗದ ರಕ್ತನಾಳದಲ್ಲಿ (ಮಹಾಪಧಮನಿ) ಊತ ಕಾಣಿಸಿಕೊಂಡಿತ್ತು. ಶಸ್ತ್ರಚಿಕಿತ್ಸೇತರ ವಿಧಾನವಾದ ಟ್ರಾನ್ಸ್‌ಕ್ಯಾಥೆಟರ್ ಮೂಲಕ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಅಭಿಷೇಕ್​ ವರ್ತನೆಯಿಂದ ಐಶ್ವರ್ಯಗೆ ಮುಜುಗರ? ವಿಡಿಯೋ ವೈರಲ್​ - Aishwarya Abhishek

ರಜನಿ ಮುಂದಿನ ಸಿನಿಮಾಗಳು: ರಜನಿಕಾಂತ್ ಕೊನೆಯದಾಗಿ ಕಾಣಿಸಿಕೊಂಡಿರುವ ಚಿತ್ರ 'ಜೈಲರ್'. ಸಿನಿಮಾ ಅಭೂತಪೂರ್ವ ಯಶ ಕಂಡಿತ್ತು. ಇದೀಗ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ', ಟಿ.ಜೆ.ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಸೇರಿದಂತೆ ಹಲವು ಸಿನಿಮಾ​​​ಗಳನ್ನು ಹೊಂದಿದ್ದಾರೆ. ಬಹುನಿರೀಕ್ಷಿತ ಚಿತ್ರ 'ವೆಟ್ಟೈಯನ್' ಇದೇ ಅಕ್ಟೋಬರ್ 10ರಂದು ತೆರೆಗಪ್ಪಳಿಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.