ETV Bharat / entertainment

ಕನ್ನಡ್​ ಅಲ್ಲ ಕನ್ನಡ: ಮತ್ತೆ ಸಾಬೀತಾಯ್ತು ಕಿಚ್ಚನ ಭಾಷಾಪ್ರೇಮ; ಸುದೀಪ್​ ವಿಡಿಯೋ ವೈರಲ್​ - Sudeep

author img

By ETV Bharat Karnataka Team

Published : Sep 17, 2024, 2:33 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​​ ತಮ್ಮ ಕನ್ನಡಾಭಿಮಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ. ನಟನ ಕನ್ನಡ ಪ್ರೇಮಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ. ಅದರಂತೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ.

sudeep
ಕಿಚ್ಚ ಸುದೀಪ್​​ (ANI)

ಹೈದರಾಬಾದ್​: ಸೌತ್ ಇಂಡಿಯನ್ ಇಂಟರ್​​​​ನ್ಯಾಷನಲ್​ ಮೂವಿ ಅವಾರ್ಡ್ಸ್ (SIIMA-ಸೈಮಾ) ಸಮಾರಂಭ ಕಳೆದ ಶನಿವಾರ ಮತ್ತು ಭಾನುವಾರ ದುಬೈನಲ್ಲಿ ಅದ್ಧೂರಿಯಾಗಿ ಜರುಗಿತು. ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ, ಕಾಟೇರ ಸೇರಿದಂತೆ ಹಲವು ಚಿತ್ರಗಳು ಮತ್ತು ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈವೆಂಟ್​ನ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಹುಭಾಷೆಗಳನ್ನು ಮಾತನಾಡುವ ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್​​ ಓರ್ವ ಅಪ್ಪಟ ಕನ್ನಡಿಗ. ತಮ್ಮ ಕನ್ನಡಾಭಿಮಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹೆಸರಾಂತ ನಟನ ಕನ್ನಡ ಪ್ರೇಮಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ.

ಇದೇ ಸೆಪ್ಟೆಂಬರ್​​ 14 ಮತ್ತು 15ರಂದು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್​ವುಡ್​​ ತಾರೆಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಸುದೀಪ್​​ ಕೂಡಾ ಕಾಣಿಸಿಕೊಂಡಿದ್ದರು. ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು 'ಕನ್ನಡ್' ಎಂಬ ಪದ ಬಳಕೆ ಮಾಡಿದ್ದಾರೆ. ಸ್ಟೇಜ್​ನಲ್ಲಿದ್ದ ಸುದೀಪ್​ ಅವರು ಅದೇ ಕ್ಷಣ ಆ ಪದವನ್ನು ಸರಿಪಡಿಸಿದ್ದಾರೆ. ಕನ್ನಡ್​ ಅಲ್ಲ ಕನ್ನಡ ಎಂದು ತಿದ್ದಿದ್ದಾರೆ. ''ನಾನು ಮುಂಬೈನವರು ಮಾತ್ರ ಕನ್ನಡ್​​ ಅನ್ನು ಕನ್ನಡ ಎಂದು ಹೇಳ್ತಾರೆ ಅಂದುಕೊಂಡಿದ್ದೆ. ಆದ್ರೆ ಹೈದರಾಬಾದ್​ನವರಾದ ನೀವೂ ಕೂಡಾ ಕನ್ನಡ್​ ಅಂತೀರಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಕತ್​ ವೈರಲ್​ ಆಗುತ್ತಿದ್ದು, ಕಿಚ್ಚನ ಕನ್ನಡಾಭಿಮಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: '10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ, ಇದು ಹೊಸ ಅಧ್ಯಾಯ': 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್​​​ಗೆ ಸುದೀಪೇ ಬಾಸ್​!! - Kannada Bigg Boss

ಅದ್ಭುತ ಸಿನಿಮಾಗಳು, ಅಮೋಘ ಅಭಿನಯದ ಮೂಲಕ ಭಾರತೀಯರನ್ನು ಮನರಂಜಿಸುತ್ತಾ ಬಂದಿರುವ ಸುದೀಪ್​​ ನಿರೂಪಣೆಯಲ್ಲೂ ಎತ್ತಿದ ಕೈ. ಕನ್ನಡದ ಬಿಗ್​​ ಬಾಸ್​​​ ರಿಯಾಲಿಟಿ ಶೋ ನಡೆಸಿಕೊಡುವ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇವರ ನಿರೂಪಣಾ ಶೈಲಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದೆ. ಸುದೀಪ್​​ ಕಾಣಿಸಿಕೊಳ್ಳುವ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮ ವೀಕ್ಷಿಸಲೆಂದೇ ಅದೆಷ್ಟೋ ಜನರು ಕಾತರರಾಗಿರುತ್ತಾರೆ. ಆದ್ರೆ ಮುಂದಿನ ಸೀಸನ್​ಗೆ ಬೇರೆ ಆ್ಯಂಕರ್​​ಗಳು ಬರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದ್ರೆ ಮುಂದಿನ ಸೀಸನ್​ಗೂ ಸುದೀಪ್‌ ಅವರೇ ಆ್ಯಂಕರ್​ ಆಗಿರಲಿದ್ದಾರೆ.

ಇದನ್ನೂ ಓದಿ: ವಜ್ರಮುನಿ ಗೆಟಪ್​​​​ನಲ್ಲಿ ನಟ ಕೋಮಲ್: 'ಯಲಾಕುನ್ನಿ' ಟೀಸರ್​​ಗೆ ಮೆಚ್ಚುಗೆ - Yela Kunni Teaser

ಕಲರ್ಸ್​ ಕನ್ನಡ ವಾಹಿನಿ ಇತ್ತೀಚೆಗಷ್ಟೇ ಆ್ಯಂಕರ್​ ಇಂಟ್ರೊಡಕ್ಷನ್​ ಗ್ಲಿಂಪ್ಸ್ ಅನಾವರಣಗೊಳಿಸಿತ್ತು. ಈ ಪೋಸ್ಟ್​ಗೆ, ''ಬದಲಾವಣೆ ಜಗದ ನಿಯಮ, ಅದಕ್ಕೆ ಬಿಗ್ ಬಾಸ್‍ ಕೂಡಾ ಹೇಳೋದು 'ಹೌದು ಸ್ವಾಮಿ'. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್ ಕನ್ನಡ ಸೀಸನ್ 11. ಸೆಪ್ಟೆಂಬರ್‌ 29ರಿಂದ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಸುದೀಪ್​ ಎಂಟ್ರಿ ಬಹಳ ರೋಚಕವಾಗಿ ಮೂಡಿ ಬಂದಿದೆ.

ಹೈದರಾಬಾದ್​: ಸೌತ್ ಇಂಡಿಯನ್ ಇಂಟರ್​​​​ನ್ಯಾಷನಲ್​ ಮೂವಿ ಅವಾರ್ಡ್ಸ್ (SIIMA-ಸೈಮಾ) ಸಮಾರಂಭ ಕಳೆದ ಶನಿವಾರ ಮತ್ತು ಭಾನುವಾರ ದುಬೈನಲ್ಲಿ ಅದ್ಧೂರಿಯಾಗಿ ಜರುಗಿತು. ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ, ಕಾಟೇರ ಸೇರಿದಂತೆ ಹಲವು ಚಿತ್ರಗಳು ಮತ್ತು ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈವೆಂಟ್​ನ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ.

ಬಹುಭಾಷೆಗಳನ್ನು ಮಾತನಾಡುವ ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್​​ ಓರ್ವ ಅಪ್ಪಟ ಕನ್ನಡಿಗ. ತಮ್ಮ ಕನ್ನಡಾಭಿಮಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹೆಸರಾಂತ ನಟನ ಕನ್ನಡ ಪ್ರೇಮಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತದೆ.

ಇದೇ ಸೆಪ್ಟೆಂಬರ್​​ 14 ಮತ್ತು 15ರಂದು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಸ್ಯಾಂಡಲ್​ವುಡ್​​ ತಾರೆಗಳು ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಸುದೀಪ್​​ ಕೂಡಾ ಕಾಣಿಸಿಕೊಂಡಿದ್ದರು. ವೇದಿಕೆಯಲ್ಲಿ ಚಿತ್ರರಂಗದ ಗಣ್ಯರು 'ಕನ್ನಡ್' ಎಂಬ ಪದ ಬಳಕೆ ಮಾಡಿದ್ದಾರೆ. ಸ್ಟೇಜ್​ನಲ್ಲಿದ್ದ ಸುದೀಪ್​ ಅವರು ಅದೇ ಕ್ಷಣ ಆ ಪದವನ್ನು ಸರಿಪಡಿಸಿದ್ದಾರೆ. ಕನ್ನಡ್​ ಅಲ್ಲ ಕನ್ನಡ ಎಂದು ತಿದ್ದಿದ್ದಾರೆ. ''ನಾನು ಮುಂಬೈನವರು ಮಾತ್ರ ಕನ್ನಡ್​​ ಅನ್ನು ಕನ್ನಡ ಎಂದು ಹೇಳ್ತಾರೆ ಅಂದುಕೊಂಡಿದ್ದೆ. ಆದ್ರೆ ಹೈದರಾಬಾದ್​ನವರಾದ ನೀವೂ ಕೂಡಾ ಕನ್ನಡ್​ ಅಂತೀರಲ್ವಾ ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಕತ್​ ವೈರಲ್​ ಆಗುತ್ತಿದ್ದು, ಕಿಚ್ಚನ ಕನ್ನಡಾಭಿಮಾನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: '10 ವರ್ಷದಿಂದ ಒಂದು ಲೆಕ್ಕ ಈಗಿಂದ ಬೇರೇನೇ ಲೆಕ್ಕ, ಇದು ಹೊಸ ಅಧ್ಯಾಯ': 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್​​​ಗೆ ಸುದೀಪೇ ಬಾಸ್​!! - Kannada Bigg Boss

ಅದ್ಭುತ ಸಿನಿಮಾಗಳು, ಅಮೋಘ ಅಭಿನಯದ ಮೂಲಕ ಭಾರತೀಯರನ್ನು ಮನರಂಜಿಸುತ್ತಾ ಬಂದಿರುವ ಸುದೀಪ್​​ ನಿರೂಪಣೆಯಲ್ಲೂ ಎತ್ತಿದ ಕೈ. ಕನ್ನಡದ ಬಿಗ್​​ ಬಾಸ್​​​ ರಿಯಾಲಿಟಿ ಶೋ ನಡೆಸಿಕೊಡುವ ಮೂಲಕ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇವರ ನಿರೂಪಣಾ ಶೈಲಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದೆ. ಸುದೀಪ್​​ ಕಾಣಿಸಿಕೊಳ್ಳುವ ಶನಿವಾರ ಮತ್ತು ಭಾನುವಾರದ ಕಾರ್ಯಕ್ರಮ ವೀಕ್ಷಿಸಲೆಂದೇ ಅದೆಷ್ಟೋ ಜನರು ಕಾತರರಾಗಿರುತ್ತಾರೆ. ಆದ್ರೆ ಮುಂದಿನ ಸೀಸನ್​ಗೆ ಬೇರೆ ಆ್ಯಂಕರ್​​ಗಳು ಬರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದ್ರೆ ಮುಂದಿನ ಸೀಸನ್​ಗೂ ಸುದೀಪ್‌ ಅವರೇ ಆ್ಯಂಕರ್​ ಆಗಿರಲಿದ್ದಾರೆ.

ಇದನ್ನೂ ಓದಿ: ವಜ್ರಮುನಿ ಗೆಟಪ್​​​​ನಲ್ಲಿ ನಟ ಕೋಮಲ್: 'ಯಲಾಕುನ್ನಿ' ಟೀಸರ್​​ಗೆ ಮೆಚ್ಚುಗೆ - Yela Kunni Teaser

ಕಲರ್ಸ್​ ಕನ್ನಡ ವಾಹಿನಿ ಇತ್ತೀಚೆಗಷ್ಟೇ ಆ್ಯಂಕರ್​ ಇಂಟ್ರೊಡಕ್ಷನ್​ ಗ್ಲಿಂಪ್ಸ್ ಅನಾವರಣಗೊಳಿಸಿತ್ತು. ಈ ಪೋಸ್ಟ್​ಗೆ, ''ಬದಲಾವಣೆ ಜಗದ ನಿಯಮ, ಅದಕ್ಕೆ ಬಿಗ್ ಬಾಸ್‍ ಕೂಡಾ ಹೇಳೋದು 'ಹೌದು ಸ್ವಾಮಿ'. ಆದ್ರೆ ಇವರ ವಿಚಾರದಲ್ಲಿ ಬದಲಾವಣೆ 'ನೋ ವೇ, ಛಾನ್ಸೇ ಇಲ್ಲ'! ಬಿಗ್ ಬಾಸ್ ಕನ್ನಡ ಸೀಸನ್ 11. ಸೆಪ್ಟೆಂಬರ್‌ 29ರಿಂದ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಸುದೀಪ್​ ಎಂಟ್ರಿ ಬಹಳ ರೋಚಕವಾಗಿ ಮೂಡಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.