ETV Bharat / bharat

4 ಎಕರೆ ಭೂಮಿಯಲ್ಲಿ 32 ವಿವಿಧ ತಳಿಯ 400 ಮಾವಿನ ಮರಗಳ ಪೋಷಣೆ; ಯುವ ರೈತನ ಮಾದರಿ ತೋಟಗಾರಿಕೆ - Garden of 32 Varieties Of Mango

author img

By ETV Bharat Karnataka Team

Published : Jun 25, 2024, 1:12 PM IST

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಅಸ್ಸಾಂ, ರಾಜಸ್ಥಾನ ಮತ್ತು ಬಂಗಾಳ ಸೇರಿಂದಂತೆ ದೇಶದ ವಿವಿಧೆಡೆಯಿಂದ 32 ವೈವಿಧ್ಯಮಯ ಮಾವಿನ ತಳಿಗಳನ್ನು ಯುವ ರೈತ ಆಕಾಶ್​ ಚೌರಾಸಿಯಾ ತೋಟದಲ್ಲಿ ನೆಟ್ಟು ಸಂರಕ್ಷಿಸಿದ್ದಾರೆ.

Young farmer grows 400 mango trees of 32 varieties in 4 acres land in Madhya Pradesh
ಮಧ್ಯಪ್ರದೇಶದ: 4 ಎಕರೆ ಭೂಮಿಯಲ್ಲಿ 32 ವಿವಿಧ ತಳಿಯ 400 ಮಾವಿನ ಮರಗಳನ್ನು ಬೆಳೆದ ಯುವ ರೈತ (ETV Bharat)

ಕಪೂರಿಯಾ (ಮಧ್ಯಪ್ರದೇಶ): ಕೃಷಿಯಿಂದ ಯುವಕರು ವಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಾಗರ ಜಿಲ್ಲೆಯ ಕಪೂರಿಯಾ ಗ್ರಾಮದಲ್ಲಿ ಯುವ ರೈತನೊಬ್ಬ ತನ್ನ 4 ಎಕರೆ ಜಮೀನಿನಲ್ಲಿ ವಿವಿಧ ತಳಿಯ ಮಾವಿನ ಮರಗಳನ್ನು ನೆಟ್ಟು ಮಾದರಿಯಾಗಿದ್ದಾರೆ. ವಿಶೇಷ ಎಂದರೆ ಇವರ ತೋಟದಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 32 ವೈವಿಧ್ಯಮಯ ತಳಿಗಳ ಸುಮಾರು 400 ಮಾವಿನ ಮರಗಳನ್ನು ಬೆಳೆದಿದ್ದಾರೆ. ಇವುಗಳಲ್ಲಿ ಕೇಸರಿ, ಬಾದಾಮಿ, ಮಲ್ಲಿಕಾ ಮತ್ತು ದುಸ್ಸೆರಿ ಮುಂತಾದ ಮಾವಿನ ಹಣ್ಣುಗಳು ಸೇರಿವೆ.

Young farmer grows 400 mango trees of 32 varieties in 4 acres land in Madhya Pradesh
ಮಧ್ಯಪ್ರದೇಶದ: 4 ಎಕರೆ ಭೂಮಿಯಲ್ಲಿ 32 ವಿವಿಧ ತಳಿಯ 400 ಮಾವಿನ ಮರಗಳನ್ನು ಬೆಳೆದ ಯುವ ರೈತ (ETV Bharat)

ಹಣ್ಣುಗಳ ರಾಜ ಮಾವು ರುಚಿ, ಗಾತ್ರ, ದರದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದೆ. ದೇಶದೆಲ್ಲೆಡೆಯ ವಿವಿಧ ಪ್ರದೇಶಗಳ 32 ಬಗೆಯ ಅತ್ಯುತ್ತಮ ಮಾವಿನ ಹಣ್ಣುಗಳನ್ನು ಒಂದೇ ಕಡೆ ಸಿಗುವಂತೆ ಮಾಡಿದ್ದಾರೆ ಸಾಗರದ ಈ ಯುವ ರೈತ. ಬುಂದೇಲ್​ಖಂಡದ ರೈತನಾಗಿರುವ ಆಕಾಶ್​ ಚೌರಾಸಿಯಾ ಕಪುರಿಯಾ ಗ್ರಾಮದಲ್ಲಿ ವರ್ಷಗಳ ಪರಿಶ್ರಮದಿಂದ ಇಂತಹ ಅದ್ಭುತ ಉದ್ಯಾನವನ್ನೇ ನಿರ್ಮಿಸಿದ್ದಾರೆ. ಇದರಲ್ಲಿ ದೇಶದ ವಿವಿಧ ಪ್ರದೇಶಗಳ 32 ಬಗೆಯ 400 ಮಾವಿನ ಮರಗಳಿವೆ. ಆಕಾಶ್​ ಚೌರಾಸಿಯಾ ಅವರು ಸ್ಥಳೀಯ ಮಾವಿನ ತಳಿಗಳನ್ನು ಸಂರಕ್ಷಿಸುವ ಜೊತೆಗೆ ಇತರ ರಾಜ್ಯಗಳ ಪ್ರಸಿದ್ಧ ಮಾವಿನ ತಳಿಗಳನ್ನು ಕೂಡ ಬೆಳೆಸಿದ್ದಾರೆ.

4 ಎಕರೆಯಲ್ಲಿ 32 ಮಾವಿನ ತಳಿಯ 400 ಮರಗಳು: ತಾವು ಈ ತೋಟವನ್ನು ಬೆಳೆಸಿದ ಬಗ್ಗೆ ಅನುಭವ ಹಂಚಿಕೊಂಡಿರುವ ಆಕಾಶ್​ ಚೌರಾಸಿಯಾ, "ಈ ಮಾವಿನ ತೋಟವನ್ನು ಬೆಳೆಸಲು ನಾನು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಅದಕ್ಕಿಂತಲೂ ಅವುಗಳ ಇಷ್ಟು ಎತ್ತರಕ್ಕೆ ಬೆಳೆದು ಫಲ ನೀಡುವವರೆಗೆ ನಾನು ತಾಳ್ಮೆಯಿಂದ ಕೆಲಸ ಮಾಡಬೇಕಾಗಿತ್ತು. ಪ್ರಾರಂಭದಲ್ಲಿ ನಾನು ನಮ್ಮ ಹಿರಿಯರಿಂದ ಸಿಕ್ಕಿದ ಮಾವಿನ ತಳಿಗಳನ್ನು ಸಂರಕ್ಷಿಸಿದೆ. ನಂತರ ದಕ್ಷಿಣ ಭಾರತದ ವಿವಿಧ ತಳಿಯ ಮಾವುಗಳನ್ನು ಇಲ್ಲಿ ನೆಡಲು ಪ್ರಾರಂಭಿಸಿದೆ. ಕಸಿ ಹಾಗೂ ಬೀಜದ ವಿಧಾನಗಳ ಮೂಲಕ ಒಟ್ಟು 4 ಎಕರೆಯಲ್ಲಿ ಸುಮಾರು 400 ಮಾವಿನ ಮರಗಳನ್ನು ನೆಡಲಾಗಿದೆ. ಇದರಲ್ಲಿ ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ರಾಜಸ್ಥಾನ ಮತ್ತು ಮಭಗಾಳ ಮಾವಿನ ತಳಿಗಳನ್ನು ತೋಟದಲ್ಲಿ ನೆಡಲಾಗಿದೆ." ಎನ್ನುತ್ತಾರೆ.

ಇವರಲ್ಲಿರುವ ಮಾವಿನ ತಳಿಗಳು: ಕೇಸರಿ, ರಸಪುರಿ, ಮಲ್ಗೋವಾ, ಹಿಮ ಸಾಗರ, ರತ್ನ, ವನರಾಜ್, ಕಿಶನ್ಭೋಗ್, ಮಾಲ್ಡಾ, ಲಾಂಗ್ರಾ, ಚೌಸಾ, ದಶ್​ಹರಿ, ಬಾಂಬೆ ಗ್ರೀನ್​, ತೋತಾಪುರಿ, ಬಾದಾಮಿ, ನೀಲಮ್​, ಆಮ್ರಪಾಲಿ, ಮಲ್ಲಿಕಾ, ಸ್ಥಳೀಯ ಚುಸಿಯಾ, ಬಾಗಿನಪಲ್ಲಿ, ಸಫೇದಾ, ಅಲ್ಫೋನ್ಸೊ, ಫಜ್ಲಿ, ಸಿಂಧೂರಿ, ಇಮಾಮ್​, ಮಂಕುರಾದ್, ಪಹರಿ, ಕಿಲಿಚುಂಡನ್, ರೂಮನಿ, ಬೇಗನಪಲ್ಲಿ, ಕಸ್ತೂರಿ, ಹಪುಶ್, ಕಲಮಿ.

ಮಾವಿನ ತಳಿಗಳ ವಿಶೇಷತೆ: ಈ ಮಾವಿನಹಣ್ಣುಗಳಲ್ಲಿ, ಕೇಸರಿ ಮಾವು ಗುಜರಾತ್‌ನ ಜುನಾಗಢ್‌ನ ಗಿರ್ನಾರ್ ಬೆಟ್ಟಗಳಲ್ಲಿ ಬೆಳೆಯುವ ಮಾವಿನ ಪ್ರಮುಖ ತಳಿಯಾಗಿದೆ. ಇದರ ರುಚಿ ತುಂಬಾ ಸಿಹಿಯಾಗಿರುತ್ತದೆ. 'ಅಲ್ಫೋನ್ಸೋ' ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬೆಳೆಯುವ ಮಾವು. ಇದಕ್ಕೆ ವಿಶೇಷ ಹವಾಮಾನ ಬೇಕು. ಈ ಮಾವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 'ಹಿಮ್ ಸಾಗರ್' ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ವಿಶೇಷ ತಳಿಯಾಗಿದೆ. ಮಲ್ಗೋವಾ ಮಾವು ತಮಿಳುನಾಡಿನ ಸೇಲಂನ ಒಂದು ತಳಿಯಾಗಿದೆ. ಇದು ದುಂಡಗಿನ ಆಕಾರದಲ್ಲಿದೆ. ಮಂಕುರಾದ್​ ಮಾವು ಗೋವಾದ ತಳಿ, ಹೆಚ್ಚು ಫೈಬರ್ ಅಂಶ ಹೊಂದಿದ್ದು, ತುಂಬಾ ಸಿಹಿಯಾಗಿರುತ್ತದೆ.

ಮರಗಳ ಆರೈಕೆ: ಆಕಾಶ್ ಅವರ ಪ್ರಕಾರ, "ಸಸ್ಯಗಳ ಆರೈಕೆ, ಅದರಲ್ಲೂ ಅವುಗಳ ಕೀಟಗಳು ಮತ್ತು ರೋಗಗಳ ಬಾಧಿಸದಂತೆ ಗಮನ ಹರಿಸುವುದು ಮುಖ್ಯ. ವಿಶೇಷವಾಗಿ ಚಳಿಗಾಲದಲ್ಲಿ, ಮಂಜಿನಿಂದಾಗಿ, ಎಲೆಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಹೂಬಿಡುವ ಸಮಯದಲ್ಲಿ ಹೂವುಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತವೆ. ಇದರಂದ ಹೂವುಗಳು ಉದುರಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯನ್ನು ತಡೆಗಟ್ಟಲು, ನೀವು 250 ಗ್ರಾಂ ಸುಣ್ಣವನ್ನು 15 ಲೀಟರ್ ನೀರಿನಲ್ಲಿ ಕರಗಿಸಿ 3-4 ದಿನಗಳ ಮಧ್ಯಂತರದಲ್ಲಿ ನಿರಂತರವಾಗಿ ಸಿಂಪಡಿಸಬಹುದು. ಹೀಗೆ ಮಾಡಿದಲ್ಲಿ ಕಪ್ಪು ಕಲೆಗಳು ಮಾಯವಾಗುತ್ತವೆ. ಇದಲ್ಲದೇ ನೆಲದ ಮೂಲಕ ಗಿಡಕ್ಕೆ ಬರುವ ಇರುವೆ, ಗೆದ್ದಲು ಮೊದಲಾದ ಕೀಟಗಳು ಗಿಡಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ, ಒಂದು ಲೀಟರ್ ನೀರಿನಲ್ಲಿ ಒಂದು ಕೆಜಿ ಸುಣ್ಣವನ್ನು ಬೆರೆಸಿ ಮತ್ತು ಅರ್ಧ ಕಿಲೋಗ್ರಾಂ ಪುಡಿ ಉಪ್ಪು ಮತ್ತು ಅರ್ಧ ಕಿಲೋಗ್ರಾಂ ಬೆಲ್ಲವನ್ನು ಸೇರಿಸಿ ಪೇಸ್ಟ್ ರೀತಿಯಲ್ಲಿ ತಯಾರಿಸಿ. ನಂತರ ನೆಲದಿಂದ ಮೂರು ಅಡಿ ಎತ್ತರದವರೆಗೆ ಮರದ ಮೇಲೆ ಪೇಸ್ಟ್ ಅನ್ನು ಅನ್ವಯಿಸಿ. ಇದರಿಂದ ನೆಲದಿಂದ ಗಿಡದ ಮೇಲೆ ಹತ್ತಿ ಎಲೆ, ಹೂ, ಹಣ್ಣುಗಳಿಗೆ ಹಾನಿ ಮಾಡುವ ಕೀಟಗಳನ್ನು ತಡೆಯಬಹುದು." ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ರೈತರಿಗೆ ಬಂಪರ್​​​​​​​​​​​​ ಕೊಡುಗೆ: ಸಹಾಯಧನ ಏರಿಕೆ, ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಹೆಚ್ಚಿದ ಒಲವು! - Solar powered agricultural

ಕಪೂರಿಯಾ (ಮಧ್ಯಪ್ರದೇಶ): ಕೃಷಿಯಿಂದ ಯುವಕರು ವಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಾಗರ ಜಿಲ್ಲೆಯ ಕಪೂರಿಯಾ ಗ್ರಾಮದಲ್ಲಿ ಯುವ ರೈತನೊಬ್ಬ ತನ್ನ 4 ಎಕರೆ ಜಮೀನಿನಲ್ಲಿ ವಿವಿಧ ತಳಿಯ ಮಾವಿನ ಮರಗಳನ್ನು ನೆಟ್ಟು ಮಾದರಿಯಾಗಿದ್ದಾರೆ. ವಿಶೇಷ ಎಂದರೆ ಇವರ ತೋಟದಲ್ಲಿ ಹತ್ತಲ್ಲ, ಇಪ್ಪತ್ತಲ್ಲ, ಬರೋಬ್ಬರಿ 32 ವೈವಿಧ್ಯಮಯ ತಳಿಗಳ ಸುಮಾರು 400 ಮಾವಿನ ಮರಗಳನ್ನು ಬೆಳೆದಿದ್ದಾರೆ. ಇವುಗಳಲ್ಲಿ ಕೇಸರಿ, ಬಾದಾಮಿ, ಮಲ್ಲಿಕಾ ಮತ್ತು ದುಸ್ಸೆರಿ ಮುಂತಾದ ಮಾವಿನ ಹಣ್ಣುಗಳು ಸೇರಿವೆ.

Young farmer grows 400 mango trees of 32 varieties in 4 acres land in Madhya Pradesh
ಮಧ್ಯಪ್ರದೇಶದ: 4 ಎಕರೆ ಭೂಮಿಯಲ್ಲಿ 32 ವಿವಿಧ ತಳಿಯ 400 ಮಾವಿನ ಮರಗಳನ್ನು ಬೆಳೆದ ಯುವ ರೈತ (ETV Bharat)

ಹಣ್ಣುಗಳ ರಾಜ ಮಾವು ರುಚಿ, ಗಾತ್ರ, ದರದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದೆ. ದೇಶದೆಲ್ಲೆಡೆಯ ವಿವಿಧ ಪ್ರದೇಶಗಳ 32 ಬಗೆಯ ಅತ್ಯುತ್ತಮ ಮಾವಿನ ಹಣ್ಣುಗಳನ್ನು ಒಂದೇ ಕಡೆ ಸಿಗುವಂತೆ ಮಾಡಿದ್ದಾರೆ ಸಾಗರದ ಈ ಯುವ ರೈತ. ಬುಂದೇಲ್​ಖಂಡದ ರೈತನಾಗಿರುವ ಆಕಾಶ್​ ಚೌರಾಸಿಯಾ ಕಪುರಿಯಾ ಗ್ರಾಮದಲ್ಲಿ ವರ್ಷಗಳ ಪರಿಶ್ರಮದಿಂದ ಇಂತಹ ಅದ್ಭುತ ಉದ್ಯಾನವನ್ನೇ ನಿರ್ಮಿಸಿದ್ದಾರೆ. ಇದರಲ್ಲಿ ದೇಶದ ವಿವಿಧ ಪ್ರದೇಶಗಳ 32 ಬಗೆಯ 400 ಮಾವಿನ ಮರಗಳಿವೆ. ಆಕಾಶ್​ ಚೌರಾಸಿಯಾ ಅವರು ಸ್ಥಳೀಯ ಮಾವಿನ ತಳಿಗಳನ್ನು ಸಂರಕ್ಷಿಸುವ ಜೊತೆಗೆ ಇತರ ರಾಜ್ಯಗಳ ಪ್ರಸಿದ್ಧ ಮಾವಿನ ತಳಿಗಳನ್ನು ಕೂಡ ಬೆಳೆಸಿದ್ದಾರೆ.

4 ಎಕರೆಯಲ್ಲಿ 32 ಮಾವಿನ ತಳಿಯ 400 ಮರಗಳು: ತಾವು ಈ ತೋಟವನ್ನು ಬೆಳೆಸಿದ ಬಗ್ಗೆ ಅನುಭವ ಹಂಚಿಕೊಂಡಿರುವ ಆಕಾಶ್​ ಚೌರಾಸಿಯಾ, "ಈ ಮಾವಿನ ತೋಟವನ್ನು ಬೆಳೆಸಲು ನಾನು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ. ಅದಕ್ಕಿಂತಲೂ ಅವುಗಳ ಇಷ್ಟು ಎತ್ತರಕ್ಕೆ ಬೆಳೆದು ಫಲ ನೀಡುವವರೆಗೆ ನಾನು ತಾಳ್ಮೆಯಿಂದ ಕೆಲಸ ಮಾಡಬೇಕಾಗಿತ್ತು. ಪ್ರಾರಂಭದಲ್ಲಿ ನಾನು ನಮ್ಮ ಹಿರಿಯರಿಂದ ಸಿಕ್ಕಿದ ಮಾವಿನ ತಳಿಗಳನ್ನು ಸಂರಕ್ಷಿಸಿದೆ. ನಂತರ ದಕ್ಷಿಣ ಭಾರತದ ವಿವಿಧ ತಳಿಯ ಮಾವುಗಳನ್ನು ಇಲ್ಲಿ ನೆಡಲು ಪ್ರಾರಂಭಿಸಿದೆ. ಕಸಿ ಹಾಗೂ ಬೀಜದ ವಿಧಾನಗಳ ಮೂಲಕ ಒಟ್ಟು 4 ಎಕರೆಯಲ್ಲಿ ಸುಮಾರು 400 ಮಾವಿನ ಮರಗಳನ್ನು ನೆಡಲಾಗಿದೆ. ಇದರಲ್ಲಿ ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ರಾಜಸ್ಥಾನ ಮತ್ತು ಮಭಗಾಳ ಮಾವಿನ ತಳಿಗಳನ್ನು ತೋಟದಲ್ಲಿ ನೆಡಲಾಗಿದೆ." ಎನ್ನುತ್ತಾರೆ.

ಇವರಲ್ಲಿರುವ ಮಾವಿನ ತಳಿಗಳು: ಕೇಸರಿ, ರಸಪುರಿ, ಮಲ್ಗೋವಾ, ಹಿಮ ಸಾಗರ, ರತ್ನ, ವನರಾಜ್, ಕಿಶನ್ಭೋಗ್, ಮಾಲ್ಡಾ, ಲಾಂಗ್ರಾ, ಚೌಸಾ, ದಶ್​ಹರಿ, ಬಾಂಬೆ ಗ್ರೀನ್​, ತೋತಾಪುರಿ, ಬಾದಾಮಿ, ನೀಲಮ್​, ಆಮ್ರಪಾಲಿ, ಮಲ್ಲಿಕಾ, ಸ್ಥಳೀಯ ಚುಸಿಯಾ, ಬಾಗಿನಪಲ್ಲಿ, ಸಫೇದಾ, ಅಲ್ಫೋನ್ಸೊ, ಫಜ್ಲಿ, ಸಿಂಧೂರಿ, ಇಮಾಮ್​, ಮಂಕುರಾದ್, ಪಹರಿ, ಕಿಲಿಚುಂಡನ್, ರೂಮನಿ, ಬೇಗನಪಲ್ಲಿ, ಕಸ್ತೂರಿ, ಹಪುಶ್, ಕಲಮಿ.

ಮಾವಿನ ತಳಿಗಳ ವಿಶೇಷತೆ: ಈ ಮಾವಿನಹಣ್ಣುಗಳಲ್ಲಿ, ಕೇಸರಿ ಮಾವು ಗುಜರಾತ್‌ನ ಜುನಾಗಢ್‌ನ ಗಿರ್ನಾರ್ ಬೆಟ್ಟಗಳಲ್ಲಿ ಬೆಳೆಯುವ ಮಾವಿನ ಪ್ರಮುಖ ತಳಿಯಾಗಿದೆ. ಇದರ ರುಚಿ ತುಂಬಾ ಸಿಹಿಯಾಗಿರುತ್ತದೆ. 'ಅಲ್ಫೋನ್ಸೋ' ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬೆಳೆಯುವ ಮಾವು. ಇದಕ್ಕೆ ವಿಶೇಷ ಹವಾಮಾನ ಬೇಕು. ಈ ಮಾವು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. 'ಹಿಮ್ ಸಾಗರ್' ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ವಿಶೇಷ ತಳಿಯಾಗಿದೆ. ಮಲ್ಗೋವಾ ಮಾವು ತಮಿಳುನಾಡಿನ ಸೇಲಂನ ಒಂದು ತಳಿಯಾಗಿದೆ. ಇದು ದುಂಡಗಿನ ಆಕಾರದಲ್ಲಿದೆ. ಮಂಕುರಾದ್​ ಮಾವು ಗೋವಾದ ತಳಿ, ಹೆಚ್ಚು ಫೈಬರ್ ಅಂಶ ಹೊಂದಿದ್ದು, ತುಂಬಾ ಸಿಹಿಯಾಗಿರುತ್ತದೆ.

ಮರಗಳ ಆರೈಕೆ: ಆಕಾಶ್ ಅವರ ಪ್ರಕಾರ, "ಸಸ್ಯಗಳ ಆರೈಕೆ, ಅದರಲ್ಲೂ ಅವುಗಳ ಕೀಟಗಳು ಮತ್ತು ರೋಗಗಳ ಬಾಧಿಸದಂತೆ ಗಮನ ಹರಿಸುವುದು ಮುಖ್ಯ. ವಿಶೇಷವಾಗಿ ಚಳಿಗಾಲದಲ್ಲಿ, ಮಂಜಿನಿಂದಾಗಿ, ಎಲೆಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದು ಹೂಬಿಡುವ ಸಮಯದಲ್ಲಿ ಹೂವುಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತವೆ. ಇದರಂದ ಹೂವುಗಳು ಉದುರಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯನ್ನು ತಡೆಗಟ್ಟಲು, ನೀವು 250 ಗ್ರಾಂ ಸುಣ್ಣವನ್ನು 15 ಲೀಟರ್ ನೀರಿನಲ್ಲಿ ಕರಗಿಸಿ 3-4 ದಿನಗಳ ಮಧ್ಯಂತರದಲ್ಲಿ ನಿರಂತರವಾಗಿ ಸಿಂಪಡಿಸಬಹುದು. ಹೀಗೆ ಮಾಡಿದಲ್ಲಿ ಕಪ್ಪು ಕಲೆಗಳು ಮಾಯವಾಗುತ್ತವೆ. ಇದಲ್ಲದೇ ನೆಲದ ಮೂಲಕ ಗಿಡಕ್ಕೆ ಬರುವ ಇರುವೆ, ಗೆದ್ದಲು ಮೊದಲಾದ ಕೀಟಗಳು ಗಿಡಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ, ಒಂದು ಲೀಟರ್ ನೀರಿನಲ್ಲಿ ಒಂದು ಕೆಜಿ ಸುಣ್ಣವನ್ನು ಬೆರೆಸಿ ಮತ್ತು ಅರ್ಧ ಕಿಲೋಗ್ರಾಂ ಪುಡಿ ಉಪ್ಪು ಮತ್ತು ಅರ್ಧ ಕಿಲೋಗ್ರಾಂ ಬೆಲ್ಲವನ್ನು ಸೇರಿಸಿ ಪೇಸ್ಟ್ ರೀತಿಯಲ್ಲಿ ತಯಾರಿಸಿ. ನಂತರ ನೆಲದಿಂದ ಮೂರು ಅಡಿ ಎತ್ತರದವರೆಗೆ ಮರದ ಮೇಲೆ ಪೇಸ್ಟ್ ಅನ್ನು ಅನ್ವಯಿಸಿ. ಇದರಿಂದ ನೆಲದಿಂದ ಗಿಡದ ಮೇಲೆ ಹತ್ತಿ ಎಲೆ, ಹೂ, ಹಣ್ಣುಗಳಿಗೆ ಹಾನಿ ಮಾಡುವ ಕೀಟಗಳನ್ನು ತಡೆಯಬಹುದು." ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: ರೈತರಿಗೆ ಬಂಪರ್​​​​​​​​​​​​ ಕೊಡುಗೆ: ಸಹಾಯಧನ ಏರಿಕೆ, ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ಹೆಚ್ಚಿದ ಒಲವು! - Solar powered agricultural

ETV Bharat Logo

Copyright © 2024 Ushodaya Enterprises Pvt. Ltd., All Rights Reserved.