ETV Bharat / bharat

ಜುಲೈ 12 ರಂದು ಯುಸಿಸಿ ವರದಿ ಸಾರ್ವಜನಿಕಗೊಳಿಸಲಿದೆ ಉತ್ತರಾಖಂಡ ಸರ್ಕಾರ - uniform civil code report

author img

By ETV Bharat Karnataka Team

Published : Jul 11, 2024, 10:36 PM IST

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆಯ ವರದಿಯನ್ನು ಜುಲೈ 12 ರಂದು ಸಾರ್ವಜನಿಕಗೊಳಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಶತ್ರುಘ್ನ ಸಿಂಗ್ ತಿಳಿಸಿದ್ದಾರೆ.

uniform-civil-code-report
ಯುಸಿಸಿ ವರದಿ (ETV Bharat)

ಡೆಹ್ರಾಡೂನ್ (ಉತ್ತರಾಖಂಡ) : ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಉತ್ತರಾಖಂಡ ಸರ್ಕಾರವು ವೇಗಗೊಳಿಸಿದೆ. ಅಕ್ಟೋಬರ್ ತಿಂಗಳ ವೇಳೆಗೆ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆಯಿದೆ. ಸದ್ಯ ಯುಸಿಸಿ ನಿಯಮಾವಳಿ ಸಿದ್ಧಪಡಿಸಲು ರಚಿಸಿರುವ ಸಮಿತಿ ಬಹುತೇಕ ವರದಿ ಪೂರ್ಣಗೊಳಿಸಿದೆ. ಅಲ್ಲದೆ, ಹೈಯರ್ ಪೋರ್ಟಲ್ ಸಿದ್ಧಪಡಿಸುವ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಯುಸಿಸಿ ನಿಯಮಗಳನ್ನು ಸಿದ್ಧಪಡಿಸಿದ ನಂತರ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಯುಸಿಸಿಯನ್ನು ಜಾರಿಗೊಳಿಸುವತ್ತ ಸಾಗಲಿದೆ. ಅದಕ್ಕೂ ಮುನ್ನ ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆ ವರದಿಯನ್ನು ಸಾರ್ವಜನಿಕಗೊಳಿಸಲಿದೆ.

ವಾಸ್ತವವಾಗಿ ಏಕರೂಪ ನಾಗರಿಕ ಸಂಹಿತೆಯ ನಿಯಮಗಳನ್ನು ಸಿದ್ಧಪಡಿಸಲು ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು, ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ವರದಿಯನ್ನು ಸಾರ್ವಜನಿಕಗೊಳಿಸಲಿದೆ. UCC ವರದಿಯನ್ನು UCC ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಲಾಗುತ್ತದೆ ಮತ್ತು ಸಾರ್ವಜನಿಕಗೊಳಿಸಲಾಗುತ್ತದೆ. UCC ವರದಿಯನ್ನು UCC ವೆಬ್‌ಸೈಟ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್​ ಎರಡರಲ್ಲೂ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಯುಸಿಸಿಯನ್ನು ಅರ್ಥಮಾಡಿಕೊಳ್ಳಬಹುದು.

ಈಟಿವಿ ಭಾರತ್ ಜೊತೆ ಮಾತನಾಡಿದ ಯುಸಿಸಿ ನಿಯಮಗಳನ್ನು ಸಿದ್ಧಪಡಿಸಲು ರಚಿಸಲಾದ ಸಮಿತಿಯ ಅಧ್ಯಕ್ಷ ಶತ್ರುಘ್ನ ಸಿಂಗ್, ಶುಕ್ರವಾರ ಯುಸಿಸಿ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಹೇಳಿದರು. ಸಮಿತಿಯ ಸದಸ್ಯ ಮತ್ತು ಸಮಾಜ ಸೇವಕ ಮನು ಗೌರ್ ಮಾತನಾಡಿ, ಯುಸಿಸಿ ವರದಿಗೆ ಸಂಬಂಧಿಸಿದಂತೆ ಅನೇಕ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಲ್ಲದೇ, ಈ ವರದಿಗಾಗಿ ಹಲವರು ಆರ್‌ಟಿಐ ಅರ್ಜಿ ಕೂಡ ಸಲ್ಲಿಸಿದ್ದರು. ಇದರಿಂದಾಗಿ ಯುಸಿಸಿಯನ್ನು ಜಾರಿಗೊಳಿಸುವ ಮೊದಲು ಯುಸಿಸಿ ವರದಿಯನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆಯ ವರದಿಯನ್ನು ಶುಕ್ರವಾರ, ಅಂದರೆ ಜುಲೈ 12 ರಂದು ಸಾರ್ವಜನಿಕಗೊಳಿಸಲಾಗುವುದು ಎಂದಿದ್ದಾರೆ.

UCCಯ ಮುಖ್ಯ ನಿಬಂಧನೆಗಳು :

  • ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಸಮಾಜದಲ್ಲಿ ಬಾಲ್ಯವಿವಾಹ, ಬಹುಪತ್ನಿತ್ವ, ವಿಚ್ಛೇದನದಂತಹ ಸಾಮಾಜಿಕ ಅನಿಷ್ಟಗಳು ಹಾಗೂ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬೀಳಲಿದೆ.
  • ಈ ಕಾನೂನಿನಿಂದ ಯಾವುದೇ ಧರ್ಮದ ಸಂಸ್ಕೃತಿ, ನಂಬಿಕೆಗಳು ಮತ್ತು ಪದ್ಧತಿಗಳಿಗೆ ಧಕ್ಕೆಯಾಗುವುದಿಲ್ಲ.
  • ಯುಸಿಸಿ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆ.
  • ಮದುವೆ ನೋಂದಣಿ ಕಡ್ಡಾಯವಾಗಲಿದೆ. ನೋಂದಣಿ ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳ ಪ್ರಯೋಜನ ಸಿಗುವುದಿಲ್ಲ.
  • ಪತಿ - ಪತ್ನಿ ಬದುಕಿರುವಾಗ ಎರಡನೇ ಮದುವೆಯನ್ನು ನಿಷೇಧಿಸಲಾಗುವುದು.
  • ಎಲ್ಲ ಧರ್ಮಗಳಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು ಹುಡುಗರಿಗೆ 21 ವರ್ಷಗಳು ಮತ್ತು ಹುಡುಗಿಯರಿಗೆ 18 ವರ್ಷಗಳು ಎಂದು ನಿಗದಿಪಡಿಸಲಾಗಿದೆ.
  • ವಿವಾಹಿತ ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರ ಒಪ್ಪಿಗೆಯಿಲ್ಲದೆ ತನ್ನ ಧರ್ಮವನ್ನು ಬದಲಾಯಿಸಿದರೆ, ಆ ವ್ಯಕ್ತಿಗೆ ವಿಚ್ಛೇದನ ನೀಡುವ ಮತ್ತು ಜೀವನಾಂಶ ಭತ್ಯೆಯನ್ನು ತೆಗೆದುಕೊಳ್ಳುವ ಹಕ್ಕು ಇನ್ನೊಬ್ಬ ವ್ಯಕ್ತಿಗೆ ಇರುತ್ತದೆ.
  • ಪತಿ ಮತ್ತು ಹೆಂಡತಿಯ ನಡುವೆ ವಿಚ್ಛೇದನ ಅಥವಾ ಕೌಟುಂಬಿಕ ವಿವಾದದ ಸಂದರ್ಭದಲ್ಲಿ, 5 ವರ್ಷದವರೆಗಿನ ಮಗುವಿನ ಪಾಲನೆಯು ಮಗುವಿನ ತಾಯಿಯ ಬಳಿ ಇರುತ್ತದೆ.
  • ಎಲ್ಲ ಧಾರ್ಮಿಕ ಸಮುದಾಯಗಳಲ್ಲಿನ ಎಲ್ಲ ವರ್ಗದವರಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳು.
  • ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಹಲಾಲ್ ಮತ್ತು ಇದ್ದತ್ ಪದ್ಧತಿಯನ್ನು ನಿಷೇಧಿಸಲಾಗುವುದು.
  • ಆಸ್ತಿ ಹಕ್ಕುಗಳ ವಿಷಯದಲ್ಲಿ ಕಾನೂನುಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ.
  • ಅಕ್ರಮ ಮಕ್ಕಳನ್ನು ಸಹ ಆ ದಂಪತಿಯ ಜೈವಿಕ ಮಕ್ಕಳು ಎಂದು ಪರಿಗಣಿಸಲಾಗುತ್ತದೆ.
  • ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆಸ್ತಿಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ.
  • ಲಿವ್ - ಇನ್ ಸಂಬಂಧಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ.
  • ಲಿವ್-ಇನ್ ಸಮಯದಲ್ಲಿ ಜನಿಸಿದ ಮಕ್ಕಳನ್ನು ಆ ದಂಪತಿಯ ಕಾನೂನುಬದ್ಧ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಆ ಮಗು ಜೈವಿಕ ಮಗುವಿನಂತೆ ಎಲ್ಲ ಹಕ್ಕುಗಳನ್ನು ಪಡೆಯುತ್ತದೆ.

ಇದನ್ನೂ ಓದಿ : ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ: ಕಾನೂನಿನಲ್ಲಿರುವ ಅಂಶಗಳೇನು?

ಡೆಹ್ರಾಡೂನ್ (ಉತ್ತರಾಖಂಡ) : ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಉತ್ತರಾಖಂಡ ಸರ್ಕಾರವು ವೇಗಗೊಳಿಸಿದೆ. ಅಕ್ಟೋಬರ್ ತಿಂಗಳ ವೇಳೆಗೆ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವ ನಿರೀಕ್ಷೆಯಿದೆ. ಸದ್ಯ ಯುಸಿಸಿ ನಿಯಮಾವಳಿ ಸಿದ್ಧಪಡಿಸಲು ರಚಿಸಿರುವ ಸಮಿತಿ ಬಹುತೇಕ ವರದಿ ಪೂರ್ಣಗೊಳಿಸಿದೆ. ಅಲ್ಲದೆ, ಹೈಯರ್ ಪೋರ್ಟಲ್ ಸಿದ್ಧಪಡಿಸುವ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ. ಯುಸಿಸಿ ನಿಯಮಗಳನ್ನು ಸಿದ್ಧಪಡಿಸಿದ ನಂತರ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಯುಸಿಸಿಯನ್ನು ಜಾರಿಗೊಳಿಸುವತ್ತ ಸಾಗಲಿದೆ. ಅದಕ್ಕೂ ಮುನ್ನ ಉತ್ತರಾಖಂಡ ಸರ್ಕಾರ ಏಕರೂಪ ನಾಗರಿಕ ಸಂಹಿತೆ ವರದಿಯನ್ನು ಸಾರ್ವಜನಿಕಗೊಳಿಸಲಿದೆ.

ವಾಸ್ತವವಾಗಿ ಏಕರೂಪ ನಾಗರಿಕ ಸಂಹಿತೆಯ ನಿಯಮಗಳನ್ನು ಸಿದ್ಧಪಡಿಸಲು ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು, ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ವರದಿಯನ್ನು ಸಾರ್ವಜನಿಕಗೊಳಿಸಲಿದೆ. UCC ವರದಿಯನ್ನು UCC ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಲಾಗುತ್ತದೆ ಮತ್ತು ಸಾರ್ವಜನಿಕಗೊಳಿಸಲಾಗುತ್ತದೆ. UCC ವರದಿಯನ್ನು UCC ವೆಬ್‌ಸೈಟ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್​ ಎರಡರಲ್ಲೂ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಯುಸಿಸಿಯನ್ನು ಅರ್ಥಮಾಡಿಕೊಳ್ಳಬಹುದು.

ಈಟಿವಿ ಭಾರತ್ ಜೊತೆ ಮಾತನಾಡಿದ ಯುಸಿಸಿ ನಿಯಮಗಳನ್ನು ಸಿದ್ಧಪಡಿಸಲು ರಚಿಸಲಾದ ಸಮಿತಿಯ ಅಧ್ಯಕ್ಷ ಶತ್ರುಘ್ನ ಸಿಂಗ್, ಶುಕ್ರವಾರ ಯುಸಿಸಿ ವರದಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಹೇಳಿದರು. ಸಮಿತಿಯ ಸದಸ್ಯ ಮತ್ತು ಸಮಾಜ ಸೇವಕ ಮನು ಗೌರ್ ಮಾತನಾಡಿ, ಯುಸಿಸಿ ವರದಿಗೆ ಸಂಬಂಧಿಸಿದಂತೆ ಅನೇಕ ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಲ್ಲದೇ, ಈ ವರದಿಗಾಗಿ ಹಲವರು ಆರ್‌ಟಿಐ ಅರ್ಜಿ ಕೂಡ ಸಲ್ಲಿಸಿದ್ದರು. ಇದರಿಂದಾಗಿ ಯುಸಿಸಿಯನ್ನು ಜಾರಿಗೊಳಿಸುವ ಮೊದಲು ಯುಸಿಸಿ ವರದಿಯನ್ನು ಸಾರ್ವಜನಿಕಗೊಳಿಸಲು ನಿರ್ಧರಿಸಲಾಗಿದೆ. ಏಕರೂಪ ನಾಗರಿಕ ಸಂಹಿತೆಯ ವರದಿಯನ್ನು ಶುಕ್ರವಾರ, ಅಂದರೆ ಜುಲೈ 12 ರಂದು ಸಾರ್ವಜನಿಕಗೊಳಿಸಲಾಗುವುದು ಎಂದಿದ್ದಾರೆ.

UCCಯ ಮುಖ್ಯ ನಿಬಂಧನೆಗಳು :

  • ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಸಮಾಜದಲ್ಲಿ ಬಾಲ್ಯವಿವಾಹ, ಬಹುಪತ್ನಿತ್ವ, ವಿಚ್ಛೇದನದಂತಹ ಸಾಮಾಜಿಕ ಅನಿಷ್ಟಗಳು ಹಾಗೂ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಬೀಳಲಿದೆ.
  • ಈ ಕಾನೂನಿನಿಂದ ಯಾವುದೇ ಧರ್ಮದ ಸಂಸ್ಕೃತಿ, ನಂಬಿಕೆಗಳು ಮತ್ತು ಪದ್ಧತಿಗಳಿಗೆ ಧಕ್ಕೆಯಾಗುವುದಿಲ್ಲ.
  • ಯುಸಿಸಿ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತದೆ.
  • ಮದುವೆ ನೋಂದಣಿ ಕಡ್ಡಾಯವಾಗಲಿದೆ. ನೋಂದಣಿ ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳ ಪ್ರಯೋಜನ ಸಿಗುವುದಿಲ್ಲ.
  • ಪತಿ - ಪತ್ನಿ ಬದುಕಿರುವಾಗ ಎರಡನೇ ಮದುವೆಯನ್ನು ನಿಷೇಧಿಸಲಾಗುವುದು.
  • ಎಲ್ಲ ಧರ್ಮಗಳಲ್ಲಿ ಮದುವೆಯ ಕನಿಷ್ಠ ವಯಸ್ಸನ್ನು ಹುಡುಗರಿಗೆ 21 ವರ್ಷಗಳು ಮತ್ತು ಹುಡುಗಿಯರಿಗೆ 18 ವರ್ಷಗಳು ಎಂದು ನಿಗದಿಪಡಿಸಲಾಗಿದೆ.
  • ವಿವಾಹಿತ ದಂಪತಿಗಳಲ್ಲಿ ಒಬ್ಬರು ಇನ್ನೊಬ್ಬರ ಒಪ್ಪಿಗೆಯಿಲ್ಲದೆ ತನ್ನ ಧರ್ಮವನ್ನು ಬದಲಾಯಿಸಿದರೆ, ಆ ವ್ಯಕ್ತಿಗೆ ವಿಚ್ಛೇದನ ನೀಡುವ ಮತ್ತು ಜೀವನಾಂಶ ಭತ್ಯೆಯನ್ನು ತೆಗೆದುಕೊಳ್ಳುವ ಹಕ್ಕು ಇನ್ನೊಬ್ಬ ವ್ಯಕ್ತಿಗೆ ಇರುತ್ತದೆ.
  • ಪತಿ ಮತ್ತು ಹೆಂಡತಿಯ ನಡುವೆ ವಿಚ್ಛೇದನ ಅಥವಾ ಕೌಟುಂಬಿಕ ವಿವಾದದ ಸಂದರ್ಭದಲ್ಲಿ, 5 ವರ್ಷದವರೆಗಿನ ಮಗುವಿನ ಪಾಲನೆಯು ಮಗುವಿನ ತಾಯಿಯ ಬಳಿ ಇರುತ್ತದೆ.
  • ಎಲ್ಲ ಧಾರ್ಮಿಕ ಸಮುದಾಯಗಳಲ್ಲಿನ ಎಲ್ಲ ವರ್ಗದವರಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳು.
  • ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಹಲಾಲ್ ಮತ್ತು ಇದ್ದತ್ ಪದ್ಧತಿಯನ್ನು ನಿಷೇಧಿಸಲಾಗುವುದು.
  • ಆಸ್ತಿ ಹಕ್ಕುಗಳ ವಿಷಯದಲ್ಲಿ ಕಾನೂನುಬದ್ಧ ಮತ್ತು ನ್ಯಾಯಸಮ್ಮತವಲ್ಲದ ಮಕ್ಕಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ.
  • ಅಕ್ರಮ ಮಕ್ಕಳನ್ನು ಸಹ ಆ ದಂಪತಿಯ ಜೈವಿಕ ಮಕ್ಕಳು ಎಂದು ಪರಿಗಣಿಸಲಾಗುತ್ತದೆ.
  • ಒಬ್ಬ ವ್ಯಕ್ತಿಯ ಮರಣದ ನಂತರ, ಅವನ ಆಸ್ತಿಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ.
  • ಲಿವ್ - ಇನ್ ಸಂಬಂಧಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ.
  • ಲಿವ್-ಇನ್ ಸಮಯದಲ್ಲಿ ಜನಿಸಿದ ಮಕ್ಕಳನ್ನು ಆ ದಂಪತಿಯ ಕಾನೂನುಬದ್ಧ ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಆ ಮಗು ಜೈವಿಕ ಮಗುವಿನಂತೆ ಎಲ್ಲ ಹಕ್ಕುಗಳನ್ನು ಪಡೆಯುತ್ತದೆ.

ಇದನ್ನೂ ಓದಿ : ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ಮಸೂದೆಗೆ ರಾಷ್ಟ್ರಪತಿ ಅಂಕಿತ: ಕಾನೂನಿನಲ್ಲಿರುವ ಅಂಶಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.