ETV Bharat / bharat

ಗೂಡ್ಸ್​ ರೈಲುಗಳ ಮಧ್ಯೆ ಭೀಕರ ಅಪಘಾತ; ಇಬ್ಬರು ಲೋಕೋ ಪೈಲಟ್​ಗಳಿಗೆ ಗಂಭೀರ ಗಾಯ - Train Accident

author img

By ETV Bharat Karnataka Team

Published : Jun 2, 2024, 11:16 AM IST

ಗೂಡ್ಸ್​ ರೈಲುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಲೋಕೋ ಪೈಲಟ್​ಗಳು ಗಾಯಗೊಂಡಿರುವ ಘಟನೆ ಪಂಜಾಬ್​ನಲ್ಲಿ ನಡೆದಿದೆ.

ಗೂಡ್ಸ್​ ರೈಲುಗಳ ಮಧ್ಯೆ ಭೀಕರ ಅಪಘಾತ;
ಗೂಡ್ಸ್​ ರೈಲುಗಳ ಮಧ್ಯೆ ಭೀಕರ ಅಪಘಾತ; (ETV Bharat)

ಚಂಡೀಗಢ: ಪಂಜಾಬ್​ನ ಸಿರ್ಹಿಂದ್‌ನ ಮಾಧೋಪುರ ಎಂಬ ಪ್ರದೇಶದಲ್ಲಿ ಗೂಡ್ಸ್​ ರೈಲುಗಳು ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಲೋಕೋ ಪೈಲಟ್​ಗಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ 3.45ರ ಸುಮಾರಿಗೆ ನಡೆದಿದೆ.

ಈ ಘಟನೆ ಬಗ್ಗೆ ರೈಲ್ವೆ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಸುಕಿನಜಾವ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ರೈಲುಗಳ ಚಾಲಕರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಲೋಕೋ ಪೈಲಟ್​ಗಳಿಬ್ಬರು ಉತ್ತರ ಪ್ರದೇಶದವರಾಗಿದ್ದು, ಒಬ್ಬರು ಹಿಮಾಂಶು ಕುಮಾರ್​, ಮತ್ತೊಬ್ಬರು ವಿಕಾಸ್​ ಎಂದು ತಿಳಿದು ಬಂದಿದೆ. ಇಬ್ಬರನ್ನು ಸ್ಥಳೀಯ ಶ್ರೀ ಫತ್ತೇಘರ್​ ಸಾಹಿಬ್​ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಘಟನೆಯಿಂದ ಅಂಬಾಲಾ ಮತ್ತು ಲುಧಿಯಾನ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

ತನಿಖೆ ಆರಂಭಿಸಿದ ರೈಲ್ವೆ ಇಲಾಖೆ: ಅಪಘಾತದ ಬಳಿಕ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಸರಕು ಸಾಗಣೆ ರೈಲು ಹಳಿ ಮೇಲೆ ನಿಂತಿದ್ದಾಗ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂದಿದೆ? ಅಲ್ಲದೆ, ಸರಕು ಸಾಗಣೆ ರೈಲು ಅದೇ ಮಾರ್ಗದಲ್ಲಿ ಬರಲು ಸಿಗ್ನಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ: ರೈಲು ಕಂಪಾರ್ಟ್​​ಮೆಂಟ್​ನಲ್ಲಿ ಬೆಂಕಿ

ಚಂಡೀಗಢ: ಪಂಜಾಬ್​ನ ಸಿರ್ಹಿಂದ್‌ನ ಮಾಧೋಪುರ ಎಂಬ ಪ್ರದೇಶದಲ್ಲಿ ಗೂಡ್ಸ್​ ರೈಲುಗಳು ನಡುವೆ ಭೀಕರ ಅಪಘಾತ ಸಂಭವಿಸಿ, ಇಬ್ಬರು ಲೋಕೋ ಪೈಲಟ್​ಗಳ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗಿನ ಜಾವ 3.45ರ ಸುಮಾರಿಗೆ ನಡೆದಿದೆ.

ಈ ಘಟನೆ ಬಗ್ಗೆ ರೈಲ್ವೆ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ನಸುಕಿನಜಾವ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡೂ ರೈಲುಗಳ ಚಾಲಕರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಲ್ಲಿ ಗಾಯಗೊಂಡ ಲೋಕೋ ಪೈಲಟ್​ಗಳಿಬ್ಬರು ಉತ್ತರ ಪ್ರದೇಶದವರಾಗಿದ್ದು, ಒಬ್ಬರು ಹಿಮಾಂಶು ಕುಮಾರ್​, ಮತ್ತೊಬ್ಬರು ವಿಕಾಸ್​ ಎಂದು ತಿಳಿದು ಬಂದಿದೆ. ಇಬ್ಬರನ್ನು ಸ್ಥಳೀಯ ಶ್ರೀ ಫತ್ತೇಘರ್​ ಸಾಹಿಬ್​ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ. ಘಟನೆಯಿಂದ ಅಂಬಾಲಾ ಮತ್ತು ಲುಧಿಯಾನ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

ತನಿಖೆ ಆರಂಭಿಸಿದ ರೈಲ್ವೆ ಇಲಾಖೆ: ಅಪಘಾತದ ಬಳಿಕ ರೈಲ್ವೆ ಇಲಾಖೆ ತನಿಖೆ ನಡೆಸುತ್ತಿದೆ. ಸರಕು ಸಾಗಣೆ ರೈಲು ಹಳಿ ಮೇಲೆ ನಿಂತಿದ್ದಾಗ ಅದೇ ಮಾರ್ಗದಲ್ಲಿ ಮತ್ತೊಂದು ರೈಲು ಹೇಗೆ ಬಂದಿದೆ? ಅಲ್ಲದೆ, ಸರಕು ಸಾಗಣೆ ರೈಲು ಅದೇ ಮಾರ್ಗದಲ್ಲಿ ಬರಲು ಸಿಗ್ನಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹರಿಯಾಣ: ರೈಲು ಕಂಪಾರ್ಟ್​​ಮೆಂಟ್​ನಲ್ಲಿ ಬೆಂಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.