ETV Bharat / bharat

ತಮಿಳುನಾಡಿನ 6 ಜಿಲ್ಲೆಗಳಲ್ಲಿ ಇಂದು ಕೂಡ ಭಾರಿ ಮಳೆ; ಚೆನ್ನೈನಲ್ಲಿ ಕೊಂಚ ವಿಶ್ರಾಂತಿ

ಚೆನ್ನೈನ ಸುತ್ತಮುತ್ತ ಪ್ರದೇಶದಲ್ಲಿ ಮೋಡದ ವಾತಾವರಣವಿದ್ದು, ಅಲ್ಲಲ್ಲಿ ಚದುರಿದ ಮಳೆ ಮತ್ತು ಗುಡುಗು ಉಂಟಾಗಲಿದೆ. ವೆಲ್ಲೂರು, ತಿರುಪತ್ತೂರ್​, ಕೃಷ್ಣಗಿರಿ, ಧರ್ಮಾಪುರಿ, ಸೇಲಂ ಮತ್ತು ಈರೋಡ್​ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.

author img

By IANS

Published : 2 hours ago

RMC has predicted heavy rains in six districts of Tamil Nadu on Friday
ಚೆನ್ನೈ ಮಳೆ (ಎಎನ್​ಐ)

ಚೆನ್ನೈ, ತಮಿಳುನಾಡು: ಭಾರೀ ಮಳೆಯಿಂದ ನಲುಗಿರುವ ಚೆನ್ನೈಗೆ ಇಂದು ಮಳೆ ಕೊಂಚ ಬಿಡುವ ನೀಡುವ ಸಾಧ್ಯತೆ ಇದೆ. ಆದರೆ, ಕೆಲವು ಪ್ರದೇಶಗಳಲ್ಲಿ ಸಾಧಾರಣೆ ಮಳೆಯಾಗಲಿದ್ದು, ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಚೆನ್ನೈನ ಸುತ್ತಮುತ್ತ ಪ್ರದೇಶದಲ್ಲಿ ಮೋಡದ ವಾತಾವರಣವಿದ್ದು, ಅಲ್ಲಲ್ಲಿ ಚದುರಿದ ಮಳೆ ಮತ್ತು ಗುಡುಗು ಉಂಟಾಗಲಿದೆ. ವೆಲ್ಲೂರು, ತಿರುಪತ್ತೂರ್​, ಕೃಷ್ಣಗಿರಿ, ಧರ್ಮಾಪುರಿ, ಸೇಲಂ ಮತ್ತು ಈರೋಡ್​ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಶ್ಚಿಮ ಮಧ್ಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಪಶ್ಚಿಮ ವಾಯುವ್ಯದ ಕಡೆಗೆ ಚಲಿಸಿದೆ. ಪರಿಣಾಮ ವಾಯುವ್ಯದಲ್ಲಿ ಕಡಿಮೆ ಒತ್ತಡ ಪ್ರದೇಶ ದುರ್ಬಲಗೊಳ್ಳಲಿದ್ದು, ತಮಿಳುನಾಡು ದಕ್ಷಿಣ ಆಂಧ್ರಪ್ರದೇಶದ ಕರಾವಳಿ, ಪುದುಚೇರಿ ಮತ್ತು ನೆಲ್ಲೂರಿನಲ್ಲಿ ಮಳೆಯಾಗಲಿದೆ. ಕೊಯಮತ್ತೂರು ಮತ್ತು ತಿರುಪುರ್ ಮತ್ತು ರಾಣಿಪೇಟ್, ವೆಲ್ಲೂರು, ತಿರುಪತ್ತೂರ್, ಕೃಷ್ಣಗಿರಿ, ಧರ್ಮಪುರಿ, ಸೇಲಂ, ತಿರುಚ್ಚಿ, ದಿಂಡಿಗಲ್, ಮಧುರೈ, ಪುದುಕೊಟ್ಟೈ, ಅರಿಯಲೂರ್ ಮತ್ತು ಪೆರಂಬಲೂರು ಜಿಲ್ಲೆಗಳಲ್ಲಿ ಅಕ್ಟೋಬರ್ 20 ಮತ್ತು 21ರಂದು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ತಮಿಳುನಾಡಿನಲ್ಲಿ ತೆನೆ​ಪೆನ್ನೈ ನದಿ ಹರಿಯುವ ಧರ್ಮಾಪುರಿ, ಕೃಷ್ಣಗಿರಿ ಮತ್ತು ತಿರುವಣ್ಣಮಲೈ ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆಯನ್ನು ನೀಡಲಿದೆ. ಕೃಷ್ಣಗಿರಿ ಜಲಾಶಯ ಯೋಜನೆ (ಕೆಆರ್‌ಪಿ) ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟಿನಿಂದ 2,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಹರೂರು ಮತ್ತು ಪಾಪ್ಪಿರೆಡ್ಡಿಪಟ್ಟಿ ಪ್ರದೇಶದಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿದ್ದವಾಗಿದೆ. ತೆನೆಪೆನ್ನೈ ನದಿಯ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಪಿ ಅಣೆಕಟ್ಟೆ ನೀರಿನ ಒಳಹರಿವಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: 2 ತಿಂಗಳಲ್ಲಿ 40 ಮಂದಿ ಸಾವು: ಗ್ರಾಮ ಖಾಲಿ ಮಾಡಿ ‘ವನವಾಸ’ಕ್ಕೆ ತೆರಳಿದ ಗ್ರಾಮಸ್ಥರು

ಚೆನ್ನೈ, ತಮಿಳುನಾಡು: ಭಾರೀ ಮಳೆಯಿಂದ ನಲುಗಿರುವ ಚೆನ್ನೈಗೆ ಇಂದು ಮಳೆ ಕೊಂಚ ಬಿಡುವ ನೀಡುವ ಸಾಧ್ಯತೆ ಇದೆ. ಆದರೆ, ಕೆಲವು ಪ್ರದೇಶಗಳಲ್ಲಿ ಸಾಧಾರಣೆ ಮಳೆಯಾಗಲಿದ್ದು, ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಪ್ರಾದೇಶಿಕ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

ಚೆನ್ನೈನ ಸುತ್ತಮುತ್ತ ಪ್ರದೇಶದಲ್ಲಿ ಮೋಡದ ವಾತಾವರಣವಿದ್ದು, ಅಲ್ಲಲ್ಲಿ ಚದುರಿದ ಮಳೆ ಮತ್ತು ಗುಡುಗು ಉಂಟಾಗಲಿದೆ. ವೆಲ್ಲೂರು, ತಿರುಪತ್ತೂರ್​, ಕೃಷ್ಣಗಿರಿ, ಧರ್ಮಾಪುರಿ, ಸೇಲಂ ಮತ್ತು ಈರೋಡ್​ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪಶ್ಚಿಮ ಮಧ್ಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಪಶ್ಚಿಮ ವಾಯುವ್ಯದ ಕಡೆಗೆ ಚಲಿಸಿದೆ. ಪರಿಣಾಮ ವಾಯುವ್ಯದಲ್ಲಿ ಕಡಿಮೆ ಒತ್ತಡ ಪ್ರದೇಶ ದುರ್ಬಲಗೊಳ್ಳಲಿದ್ದು, ತಮಿಳುನಾಡು ದಕ್ಷಿಣ ಆಂಧ್ರಪ್ರದೇಶದ ಕರಾವಳಿ, ಪುದುಚೇರಿ ಮತ್ತು ನೆಲ್ಲೂರಿನಲ್ಲಿ ಮಳೆಯಾಗಲಿದೆ. ಕೊಯಮತ್ತೂರು ಮತ್ತು ತಿರುಪುರ್ ಮತ್ತು ರಾಣಿಪೇಟ್, ವೆಲ್ಲೂರು, ತಿರುಪತ್ತೂರ್, ಕೃಷ್ಣಗಿರಿ, ಧರ್ಮಪುರಿ, ಸೇಲಂ, ತಿರುಚ್ಚಿ, ದಿಂಡಿಗಲ್, ಮಧುರೈ, ಪುದುಕೊಟ್ಟೈ, ಅರಿಯಲೂರ್ ಮತ್ತು ಪೆರಂಬಲೂರು ಜಿಲ್ಲೆಗಳಲ್ಲಿ ಅಕ್ಟೋಬರ್ 20 ಮತ್ತು 21ರಂದು ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ತಮಿಳುನಾಡಿನಲ್ಲಿ ತೆನೆ​ಪೆನ್ನೈ ನದಿ ಹರಿಯುವ ಧರ್ಮಾಪುರಿ, ಕೃಷ್ಣಗಿರಿ ಮತ್ತು ತಿರುವಣ್ಣಮಲೈ ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆಯನ್ನು ನೀಡಲಿದೆ. ಕೃಷ್ಣಗಿರಿ ಜಲಾಶಯ ಯೋಜನೆ (ಕೆಆರ್‌ಪಿ) ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಅಣೆಕಟ್ಟಿನಿಂದ 2,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಇದರಿಂದಾಗಿ ನದಿ ಪಾತ್ರದ ಹರೂರು ಮತ್ತು ಪಾಪ್ಪಿರೆಡ್ಡಿಪಟ್ಟಿ ಪ್ರದೇಶದಲ್ಲಿ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಪರಿಸ್ಥಿತಿ ನಿರ್ವಹಣೆಗೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿದ್ದವಾಗಿದೆ. ತೆನೆಪೆನ್ನೈ ನದಿಯ ಜಲಾನಯನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆಆರ್‌ಪಿ ಅಣೆಕಟ್ಟೆ ನೀರಿನ ಒಳಹರಿವಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: 2 ತಿಂಗಳಲ್ಲಿ 40 ಮಂದಿ ಸಾವು: ಗ್ರಾಮ ಖಾಲಿ ಮಾಡಿ ‘ವನವಾಸ’ಕ್ಕೆ ತೆರಳಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.