ETV Bharat / bharat

ಹೆಚ್ಚುತ್ತಿದೆ ಉಂಡ ಮನೆಗೆ ಕನ್ನ ಹಾಕುವ ಪ್ರಕರಣಗಳು! ಪೊಲೀಸರಿಂದ ಮಹತ್ವದ ಎಚ್ಚರಿಕೆ - Employee Linked Thefts

author img

By ETV Bharat Karnataka Team

Published : Jun 20, 2024, 4:33 PM IST

ಕಡಿಮೆ ವೇತನಕ್ಕೆ ಬರುವ ಕಾರ್ಮಿಕರು ಮನೆ ಮಾಲೀಕರ ವಿಶ್ವಾಸ ಸಂಪಾದಿಸಿ, ಕಳ್ಳತನದಂಥ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

rising-trend-of-employee-linked-thefts-plagues-hyderabad-police-issue-caution
ಸಾಂದರ್ಭಿಕ ಚಿತ್ರ (IANS)

ಹೈದರಾಬಾದ್​: ಮನೆಗೆಲಸ, ಕಟ್ಟಡಗಳಿಗೆ ಭದ್ರತೆ ಸೇರಿದಂತೆ ಹಲವು ಕೆಲಸಗಳಿಗೆ ಕಡಿಮೆ ವೇತನಕ್ಕೆ ನೇಮಕಗೊಳ್ಳುವ ಕಾರ್ಮಿಕರು ಕಳ್ಳತನ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನೇಪಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧೆಡೆಯ ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ದಾಖಲಾಗಿರುವ ಪ್ರಮುಖ ಗಂಭೀರ ಸ್ವರೂಪದ ಪ್ರಕರಣಗಳು ಹೀಗಿವೆ.

  • ಸಿಕಂದರಾಬಾದ್​ನಲ್ಲಿ ಉದ್ಯೋಗಕ್ಕೆ ನೇಮಕಗೊಂಡ ನೇಪಾಳಿ ದಂಪತಿ 25-30 ಲಕ್ಷ ರೂ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
  • ಜುಬ್ಲಿ ಹಿಲ್​ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ವ್ಯಕ್ತಿ 70 ಲಕ್ಷ ಮೌಲ್ಯದ ಸ್ವತ್ತು ಕಳವು ಮಾಡಿದ್ದಾರೆ.
  • ಗಗನ್‌ಮಹಲ್​ನಲ್ಲಿ ನಿವೃತ್ತ ಹಿರಿಯ ಉದ್ಯೋಗಿಯ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ಅವರ ಎಟಿಎಂ ಕಾರ್ಡ್​​ನಿಂದ 30 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾನೆ.

ಇಂಥ ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಬಹುತೇಕರು ಹೊಸದಾಗಿ ಕೆಲಸಕ್ಕೆ ನೇಮಕವಾಗಿದ್ದು, ಅಪರಾಧಕ್ಕಾಗಿ ಯೋಜನೆ ರೂಪಿಸುತ್ತಾರೆ. ಮೊದಲಿಗೆ ಮನೆ ಮಾಲೀಕರ ವಿಶ್ವಾಸ ಗಳಿಸುತ್ತಾರೆ. ನಂತರ ಅವಕಾಶವನ್ನು ಉಪಯೋಗಿಸಿಕೊಂಡು, ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ.

  • ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ವೈಯಕ್ತಿಕ ಮಾಹಿತಿ, ಅಪರಾಧ ದಾಖಲೆ, ಆಧಾರ್​ ಮಾಹಿತಿ ಮತ್ತು ಸಂಪರ್ಕದ ವಿವರ ಪಡೆಯಿರಿ.
  • Hawk-Eye ಆ್ಯಪ್​ ಬಳಸಿಕೊಂಡು ಉದ್ಯೋಗಿಯ ಹಿನ್ನೆಲೆಯನ್ನು ಪರಿಶೀಲನೆ ನಡೆಸಬಹುದು.

ಇದನ್ನೂ ಓದಿ: ₹20,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣ: ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಕಡೆ ಇಡಿ ದಾಳಿ - Bank Fraud Case

ಹೈದರಾಬಾದ್​: ಮನೆಗೆಲಸ, ಕಟ್ಟಡಗಳಿಗೆ ಭದ್ರತೆ ಸೇರಿದಂತೆ ಹಲವು ಕೆಲಸಗಳಿಗೆ ಕಡಿಮೆ ವೇತನಕ್ಕೆ ನೇಮಕಗೊಳ್ಳುವ ಕಾರ್ಮಿಕರು ಕಳ್ಳತನ, ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ನಗರದಲ್ಲಿ ಹೆಚ್ಚಾಗಿದೆ. ಕಳೆದ ಐದು ತಿಂಗಳಿನಲ್ಲಿ ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ನೇಪಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧೆಡೆಯ ಜನರು ಇಂತಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಇತ್ತೀಚಿಗೆ ದಾಖಲಾಗಿರುವ ಪ್ರಮುಖ ಗಂಭೀರ ಸ್ವರೂಪದ ಪ್ರಕರಣಗಳು ಹೀಗಿವೆ.

  • ಸಿಕಂದರಾಬಾದ್​ನಲ್ಲಿ ಉದ್ಯೋಗಕ್ಕೆ ನೇಮಕಗೊಂಡ ನೇಪಾಳಿ ದಂಪತಿ 25-30 ಲಕ್ಷ ರೂ ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.
  • ಜುಬ್ಲಿ ಹಿಲ್​ನಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ಮನೆಗೆಲಸಕ್ಕಿದ್ದ ವ್ಯಕ್ತಿ 70 ಲಕ್ಷ ಮೌಲ್ಯದ ಸ್ವತ್ತು ಕಳವು ಮಾಡಿದ್ದಾರೆ.
  • ಗಗನ್‌ಮಹಲ್​ನಲ್ಲಿ ನಿವೃತ್ತ ಹಿರಿಯ ಉದ್ಯೋಗಿಯ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿ, ಅವರ ಎಟಿಎಂ ಕಾರ್ಡ್​​ನಿಂದ 30 ಲಕ್ಷ ರೂ ದುರ್ಬಳಕೆ ಮಾಡಿಕೊಂಡಿದ್ದಾನೆ.

ಇಂಥ ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ಬಹುತೇಕರು ಹೊಸದಾಗಿ ಕೆಲಸಕ್ಕೆ ನೇಮಕವಾಗಿದ್ದು, ಅಪರಾಧಕ್ಕಾಗಿ ಯೋಜನೆ ರೂಪಿಸುತ್ತಾರೆ. ಮೊದಲಿಗೆ ಮನೆ ಮಾಲೀಕರ ವಿಶ್ವಾಸ ಗಳಿಸುತ್ತಾರೆ. ನಂತರ ಅವಕಾಶವನ್ನು ಉಪಯೋಗಿಸಿಕೊಂಡು, ಕಳ್ಳತನ ಮಾಡಿ ಪರಾರಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲವು ಸಲಹೆಗಳನ್ನು ನೀಡಿದ್ದಾರೆ.

  • ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮುನ್ನ ವೈಯಕ್ತಿಕ ಮಾಹಿತಿ, ಅಪರಾಧ ದಾಖಲೆ, ಆಧಾರ್​ ಮಾಹಿತಿ ಮತ್ತು ಸಂಪರ್ಕದ ವಿವರ ಪಡೆಯಿರಿ.
  • Hawk-Eye ಆ್ಯಪ್​ ಬಳಸಿಕೊಂಡು ಉದ್ಯೋಗಿಯ ಹಿನ್ನೆಲೆಯನ್ನು ಪರಿಶೀಲನೆ ನಡೆಸಬಹುದು.

ಇದನ್ನೂ ಓದಿ: ₹20,000 ಕೋಟಿ ಬ್ಯಾಂಕ್‌ ವಂಚನೆ ಪ್ರಕರಣ: ಅಮ್ಟೇಕ್​​​ ಗ್ರೂಪ್​ಗೆ ಸೇರಿದ 35 ಕಡೆ ಇಡಿ ದಾಳಿ - Bank Fraud Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.