ETV Bharat / bharat

ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ರಾಮೋಜಿ ಗ್ರೂಪ್​ ವತಿಯಿಂದ ₹10 ಕೋಟಿ ದೇಣಿಗೆ - Ramoji Rao Memorial Meet

author img

By ETV Bharat Karnataka Team

Published : Jun 27, 2024, 8:47 PM IST

ಆಂಧ್ರ ಪ್ರದೇಶದ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಅಮರಾವತಿ ನಗರ ನಿರ್ಮಾಣಕ್ಕೆ ರಾಮೋಜಿ ಗ್ರೂಪ್​​ ಸಹಾಯಹಸ್ತ ಚಾಚಿದೆ.

ರಾಮೋಜಿ ಪುತ್ರ ಕಿರಣ್​ರಾವ್​
ರಾಮೋಜಿ ರಾವ್‌ ಅವರ ಪುತ್ರ ಕಿರಣ್​ರಾವ್​ (ETV Bharat)

ವಿಜಯವಾಡ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ರಾಜಧಾನಿಯಾಗಿ ನಿರ್ಮಾಣವಾಗುತ್ತಿರುವ ಅಮರಾವತಿ ನಗರ ಅಭಿವೃದ್ಧಿಗೆ ರಾಮೋಜಿ ಗ್ರೂಪ್​​ ವತಿಯಿಂದ 10 ಕೋಟಿ ರೂಪಾಯಿ ದೇಣಿಗೆ ಘೋಷಿಸಲಾಗಿದೆ. ಈ ಮೂಲಕ ಅಮರಾವತಿ ನಗರ ಕಟ್ಟುವ ದೂರದೃಷ್ಟಿ ಹೊಂದಿದ್ದ ಅಕ್ಷರ ಯೋಧ, ಮಾಧ್ಯಮ ದಿಗ್ಗಜ ದಿವಂಗತ ರಾಮೋಜಿ ರಾವ್ ಅವರ ಕನಸನ್ನು ಸಂಸ್ಥೆ ಬೆಂಬಲಿಸಿದೆ.

ಆಂಧ್ರ ಸರ್ಕಾರದಿಂದ ವಿಜಯವಾಡದ ಅನುಮೋಲು ಗಾರ್ಡನ್ಸ್​ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪದ್ಮವಿಭೂಷಣ ದಿ.ರಾಮೋಜಿ ರಾವ್​ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಈನಾಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಮೋಜಿ ರಾವ್ ಅವರ ಪುತ್ರ ಚೆರುಕುರಿ ಕಿರಣ್ ರಾವ್, "ಅಮರಾವತಿ ನಗರ ನಿರ್ಮಾಣಕ್ಕೆ ರಾಮೋಜಿ ಗ್ರೂಪ್​ ಬೆನ್ನೆಲುಬಾಗಿ ನಿಲ್ಲಲಿದೆ. ರಾಜಧಾನಿ ನಿರ್ಮಾಣ ಕಾರ್ಯಕ್ಕೆ 10 ಕೋಟಿ ರೂಪಾಯಿ ನೀಡಲಾಗುವುದು" ಎಂದು ಪ್ರಕಟಿಸಿದರು.

"ಅಮರಾವತಿ ಮಹಾನಗರವಾಗಿ ನಿರ್ಮಾಣ ಆಗಬೇಕೆಂಬುದು ತಂದೆಯ ಬಯಕೆಯಾಗಿತ್ತು. ನಗರಕ್ಕೆ ಅಮರಾವತಿ ಎಂದು ನಾಮಕರಣ ಮಾಡಿದ್ದೇ ರಾಮೋಜಿ ರಾವ್​ ಅವರು. ಹೀಗಾಗಿ, ಈ ನಗರದ ಅಭಿವೃದ್ಧಿಗೆ ತಂದೆಯವರ ಪರವಾಗಿ ನಮ್ಮ ಕುಟುಂಬ ಕಿರು ಕಾಣಿಕೆ ನೀಡಲು ಬಯಸಿದೆ" ಎಂದು 10 ಕೋಟಿ ರೂಪಾಯಿಯ ಚೆಕ್​​ ಅನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಸ್ತಾಂತರಿಸಿದರು.

ರಾಮೋಜಿ ಕನಸು 'ಅಮರ': "ಅಮರಾವತಿ ಮಹಾನಗರ ದೇಶದಲ್ಲೇ ಮಾದರಿ ರಾಜಧಾನಿಯಾಗಬೇಕು. ಪ್ರಗತಿ ಹೊಂದುತ್ತಿರುವ ಭಾರತದ ಪ್ರತೀಕವಾಗಬೇಕು ಎಂಬುದು ತಂದೆಯವರ ಬಯಕೆಯಾಗಿತ್ತು" ಎಂದು ಕಿರಣ್​​ ರಾವ್​ ತಿಳಿಸಿದರು.

"ತಂದೆಯವರು (ರಾಮೋಜಿ ರಾವ್​) ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಕಾಪಾಡುತ್ತಾ, ಜೀವನದುದ್ದಕ್ಕೂ ಜನರ ಕಲ್ಯಾಣಕ್ಕಾಗಿ ಬಲವಾಗಿ ಹೋರಾಟ ನಡೆಸಿದರು. ಯಾವುದೇ ಸಂಸ್ಥೆ ದೊಡ್ಡದಾಗಿ ಬೇರೂರಲು ವ್ಯಕ್ತಿಯೊಬ್ಬರ ಶ್ರಮ ಮತ್ತು ದುಡಿಮೆ ಅಪಾರವಾಗಿರುತ್ತದೆ. ಈನಾಡು ಮತ್ತು ರಾಮೋಜಿ ಗ್ರೂಪ ಸಂಸ್ಥೆಗಳು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ರಾಮೋಜಿ ರಾವ್​ ಪರಿಶ್ರಮವೇ ಕಾರಣ" ಎಂದು ಸ್ಮರಿಸಿದರು.

"ನನ್ನ ತಂದೆ ಎಂದಿಗೂ ಪ್ರಚಾರಕ್ಕಾಗಿ ಹಪಹಪಿಸಲಿಲ್ಲ. ಅಪ್ರತಿಮ ಅಮರಾವತಿ ಮತ್ತು ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಭಾರತದ ಅಭಿವೃದ್ಧಿ ಅವರ ಮಹದಾಸೆಯಾಗಿತ್ತು" ಅವರು ಹೇಳಿದರು.

ಇದನ್ನೂ ಓದಿ: 'ಅಕ್ಷರ ಯೋಧ'ನಿಗೆ ಗೌರವ ನಮನ; ಆಂಧ್ರ ಸರ್ಕಾರದಿಂದ ರಾಮೋಜಿ ರಾವ್ ಪುಣ್ಯಸ್ಮರಣೆ - LIVE - Ramoji Rao memorial service

ವಿಜಯವಾಡ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ರಾಜಧಾನಿಯಾಗಿ ನಿರ್ಮಾಣವಾಗುತ್ತಿರುವ ಅಮರಾವತಿ ನಗರ ಅಭಿವೃದ್ಧಿಗೆ ರಾಮೋಜಿ ಗ್ರೂಪ್​​ ವತಿಯಿಂದ 10 ಕೋಟಿ ರೂಪಾಯಿ ದೇಣಿಗೆ ಘೋಷಿಸಲಾಗಿದೆ. ಈ ಮೂಲಕ ಅಮರಾವತಿ ನಗರ ಕಟ್ಟುವ ದೂರದೃಷ್ಟಿ ಹೊಂದಿದ್ದ ಅಕ್ಷರ ಯೋಧ, ಮಾಧ್ಯಮ ದಿಗ್ಗಜ ದಿವಂಗತ ರಾಮೋಜಿ ರಾವ್ ಅವರ ಕನಸನ್ನು ಸಂಸ್ಥೆ ಬೆಂಬಲಿಸಿದೆ.

ಆಂಧ್ರ ಸರ್ಕಾರದಿಂದ ವಿಜಯವಾಡದ ಅನುಮೋಲು ಗಾರ್ಡನ್ಸ್​ನಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಪದ್ಮವಿಭೂಷಣ ದಿ.ರಾಮೋಜಿ ರಾವ್​ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಈನಾಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ರಾಮೋಜಿ ರಾವ್ ಅವರ ಪುತ್ರ ಚೆರುಕುರಿ ಕಿರಣ್ ರಾವ್, "ಅಮರಾವತಿ ನಗರ ನಿರ್ಮಾಣಕ್ಕೆ ರಾಮೋಜಿ ಗ್ರೂಪ್​ ಬೆನ್ನೆಲುಬಾಗಿ ನಿಲ್ಲಲಿದೆ. ರಾಜಧಾನಿ ನಿರ್ಮಾಣ ಕಾರ್ಯಕ್ಕೆ 10 ಕೋಟಿ ರೂಪಾಯಿ ನೀಡಲಾಗುವುದು" ಎಂದು ಪ್ರಕಟಿಸಿದರು.

"ಅಮರಾವತಿ ಮಹಾನಗರವಾಗಿ ನಿರ್ಮಾಣ ಆಗಬೇಕೆಂಬುದು ತಂದೆಯ ಬಯಕೆಯಾಗಿತ್ತು. ನಗರಕ್ಕೆ ಅಮರಾವತಿ ಎಂದು ನಾಮಕರಣ ಮಾಡಿದ್ದೇ ರಾಮೋಜಿ ರಾವ್​ ಅವರು. ಹೀಗಾಗಿ, ಈ ನಗರದ ಅಭಿವೃದ್ಧಿಗೆ ತಂದೆಯವರ ಪರವಾಗಿ ನಮ್ಮ ಕುಟುಂಬ ಕಿರು ಕಾಣಿಕೆ ನೀಡಲು ಬಯಸಿದೆ" ಎಂದು 10 ಕೋಟಿ ರೂಪಾಯಿಯ ಚೆಕ್​​ ಅನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಹಸ್ತಾಂತರಿಸಿದರು.

ರಾಮೋಜಿ ಕನಸು 'ಅಮರ': "ಅಮರಾವತಿ ಮಹಾನಗರ ದೇಶದಲ್ಲೇ ಮಾದರಿ ರಾಜಧಾನಿಯಾಗಬೇಕು. ಪ್ರಗತಿ ಹೊಂದುತ್ತಿರುವ ಭಾರತದ ಪ್ರತೀಕವಾಗಬೇಕು ಎಂಬುದು ತಂದೆಯವರ ಬಯಕೆಯಾಗಿತ್ತು" ಎಂದು ಕಿರಣ್​​ ರಾವ್​ ತಿಳಿಸಿದರು.

"ತಂದೆಯವರು (ರಾಮೋಜಿ ರಾವ್​) ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಕಾಪಾಡುತ್ತಾ, ಜೀವನದುದ್ದಕ್ಕೂ ಜನರ ಕಲ್ಯಾಣಕ್ಕಾಗಿ ಬಲವಾಗಿ ಹೋರಾಟ ನಡೆಸಿದರು. ಯಾವುದೇ ಸಂಸ್ಥೆ ದೊಡ್ಡದಾಗಿ ಬೇರೂರಲು ವ್ಯಕ್ತಿಯೊಬ್ಬರ ಶ್ರಮ ಮತ್ತು ದುಡಿಮೆ ಅಪಾರವಾಗಿರುತ್ತದೆ. ಈನಾಡು ಮತ್ತು ರಾಮೋಜಿ ಗ್ರೂಪ ಸಂಸ್ಥೆಗಳು ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ರಾಮೋಜಿ ರಾವ್​ ಪರಿಶ್ರಮವೇ ಕಾರಣ" ಎಂದು ಸ್ಮರಿಸಿದರು.

"ನನ್ನ ತಂದೆ ಎಂದಿಗೂ ಪ್ರಚಾರಕ್ಕಾಗಿ ಹಪಹಪಿಸಲಿಲ್ಲ. ಅಪ್ರತಿಮ ಅಮರಾವತಿ ಮತ್ತು ನಿರಂತರವಾಗಿ ಪ್ರಗತಿ ಹೊಂದುತ್ತಿರುವ ಭಾರತದ ಅಭಿವೃದ್ಧಿ ಅವರ ಮಹದಾಸೆಯಾಗಿತ್ತು" ಅವರು ಹೇಳಿದರು.

ಇದನ್ನೂ ಓದಿ: 'ಅಕ್ಷರ ಯೋಧ'ನಿಗೆ ಗೌರವ ನಮನ; ಆಂಧ್ರ ಸರ್ಕಾರದಿಂದ ರಾಮೋಜಿ ರಾವ್ ಪುಣ್ಯಸ್ಮರಣೆ - LIVE - Ramoji Rao memorial service

ETV Bharat Logo

Copyright © 2024 Ushodaya Enterprises Pvt. Ltd., All Rights Reserved.