ETV Bharat / bharat

ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬೇರ್ಪಟ್ಟು ಉರುಳಿ ಬಿದ್ದ 10 ಕಂಟೈನರ್‌ಗಳು: ರೈಲು ಸಂಚಾರ ಬಂದ್ - Goods Train Accident

author img

By ETV Bharat Karnataka Team

Published : Jul 2, 2024, 4:25 PM IST

ಮಂಗಳವಾರ ಬೆಳಗ್ಗೆ ಕರ್ನಾಲ್‌ನಲ್ಲಿ ರೈಲು ಅಪಘಾತ ಸಂಭವಿಸಿದೆ. ತರವಾಡಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ 10 ಕಂಟೈನರ್‌ಗಳು ಬೇರ್ಪಟ್ಟು ಉರುಳಿ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್​ ಮಾಡಲಾಗಿದೆ.

TARAWADI RAILWAY STATION  RAIL ACCIDENT IN KARNAL  TRAIN TRAFFIC STOPPED  RAIL ACCIDENT
ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬೇರ್ಪಟ್ಟು ಉರುಳಿ ಬಿದ್ದ 10 ಕಂಟೈನರ್‌ಗಳು: ರೈಲು ಸಂಚಾರ ಬಂದ್ (ETV Bharat)

ಕರ್ನಾಲ್ (ಹರಿಯಾಣ): ಹರಿಯಾಣದ ಕರ್ನಾಲ್​ನಲ್ಲಿ ಮಂಗಳವಾರ ಬೆಳಗ್ಗೆ ರೈಲು ಅಪಘಾತ ಸಂಭವಿಸಿದೆ. ತರವಾಡಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಸುಮಾರು 10 ಕಂಟೈನರ್‌ಗಳು ಬೇರ್ಪಟ್ಟು ಹಳಿಯ ಮೇಲೆಯೇ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ. ಈ ಕಂಟೈನರ್‌ಗಳು ಸುಮಾರು 1 ಕಿಲೋ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ.

ಕಂಟೈನರ್ ಬೀಳುತ್ತಿರುವುದನ್ನು ಅರಿತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಂಟೈನರ್‌ ಬಿದ್ದಿದ್ದರಿಂದ ವಿದ್ಯುತ್‌ ತಂತಿಗಳು ಹಾಗೂ ರೈಲು ಹಳಿಗಳಿಗೆ ಹಾನಿಯಾಗಿದೆ.

ಕರ್ನಾಲ್‌ನ ಮಾರ್ಗದಲ್ಲಿ ರೈಲು ಸಂಚಾರ ಬಂದ್​: ದೆಹಲಿ ಮತ್ತು ಅಮೃತಸರ ನಡುವೆ ಚಲಿಸುವ ರೈಲುಗಳ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ನಿಲ್ಲಿಸಿದ್ದಾರೆ. ಗೂಡ್ಸ್ ರೈಲು ಚಂಡೀಗಢದಿಂದ ದೆಹಲಿ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ರೈಲು ಕರ್ನಾಲ್‌ನ ತರವಾಡಿ ರೈಲು ನಿಲ್ದಾಣಕ್ಕೆ ಬಂದಾಗ ಏಕಾಏಕಿ ಚಲಿಸುತ್ತಿದ್ದ ರೈಲಿನಿಂದ 10 ಕಂಟೈನರ್ ಹಳಿ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಇದರಿಂದಾಗಿ ಎರಡೂ ಬದಿಯ ರೈಲು ಮಾರ್ಗಗಳನ್ನು ಬಂದ್​ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರೈಲ್ವೆ ಪೊಲೀಸ್ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿದರು.

ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬಿದ್ದ ಕಂಟೈನರ್​ಗಳು: ಸದ್ಯ ಹಳಿಗಳ ಮೇಲೆ ಅಲ್ಲಲ್ಲಿ ಕಂಟೈನರ್​ಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಂಟೈನರ್‌ಗಳು ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. ಹಳಿ ಮತ್ತು ರೈಲ್ವೆ ವಿದ್ಯುತ್ ಕಂಬಗಳ ದುರಸ್ತಿಗೆ ಸಾಕಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೂ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್ ಆಗಿರುತ್ತದೆ.

ಸ್ಥಳೀಯರು ಜೋರಾಗಿ ಗುಡುಗಿನ ಸದ್ದು ಕೇಳಿಸಿ ಹೊರಗೆ ಬಂದು ನೋಡಿದಾಗ ರೈಲು ಮಾರ್ಗದಲ್ಲಿ ಕಂಟೈನರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂತು. ಈ ಕಂಟೈನರ್‌ಗಳು ಸುಮಾರು 1 ಕಿಲೋಮೀಟರ್‌ವರೆಗೆ ಬಿದ್ದಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಯಾರ ಪ್ರಾಣ, ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಸ್ಥಳಕ್ಕಾಗಮಿಸಿದ ಹರಿಯಾಣ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯ ಸೇವಿಸಿ ಮರ್ಸಿಡಿಸ್​ ಕಾರು ಅಪಘಾತ: ಪೊಲೀಸರಿಗೆ ಶರಣಾದ ಆರೋಪಿ ಮಹಿಳೆ - Nagpur Mercedes Crash Case

ಕರ್ನಾಲ್ (ಹರಿಯಾಣ): ಹರಿಯಾಣದ ಕರ್ನಾಲ್​ನಲ್ಲಿ ಮಂಗಳವಾರ ಬೆಳಗ್ಗೆ ರೈಲು ಅಪಘಾತ ಸಂಭವಿಸಿದೆ. ತರವಾಡಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಸುಮಾರು 10 ಕಂಟೈನರ್‌ಗಳು ಬೇರ್ಪಟ್ಟು ಹಳಿಯ ಮೇಲೆಯೇ ಉರುಳಿ ಬಿದ್ದಿವೆ ಎಂದು ವರದಿಯಾಗಿದೆ. ಈ ಕಂಟೈನರ್‌ಗಳು ಸುಮಾರು 1 ಕಿಲೋ ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ.

ಕಂಟೈನರ್ ಬೀಳುತ್ತಿರುವುದನ್ನು ಅರಿತ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕಂಟೈನರ್‌ ಬಿದ್ದಿದ್ದರಿಂದ ವಿದ್ಯುತ್‌ ತಂತಿಗಳು ಹಾಗೂ ರೈಲು ಹಳಿಗಳಿಗೆ ಹಾನಿಯಾಗಿದೆ.

ಕರ್ನಾಲ್‌ನ ಮಾರ್ಗದಲ್ಲಿ ರೈಲು ಸಂಚಾರ ಬಂದ್​: ದೆಹಲಿ ಮತ್ತು ಅಮೃತಸರ ನಡುವೆ ಚಲಿಸುವ ರೈಲುಗಳ ಕಾರ್ಯಾಚರಣೆಯನ್ನು ರೈಲ್ವೆ ಅಧಿಕಾರಿಗಳು ನಿಲ್ಲಿಸಿದ್ದಾರೆ. ಗೂಡ್ಸ್ ರೈಲು ಚಂಡೀಗಢದಿಂದ ದೆಹಲಿ ಕಡೆಗೆ ಹೋಗುತ್ತಿತ್ತು ಎಂದು ಹೇಳಲಾಗುತ್ತಿದೆ. ರೈಲು ಕರ್ನಾಲ್‌ನ ತರವಾಡಿ ರೈಲು ನಿಲ್ದಾಣಕ್ಕೆ ಬಂದಾಗ ಏಕಾಏಕಿ ಚಲಿಸುತ್ತಿದ್ದ ರೈಲಿನಿಂದ 10 ಕಂಟೈನರ್ ಹಳಿ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ಇದರಿಂದಾಗಿ ಎರಡೂ ಬದಿಯ ರೈಲು ಮಾರ್ಗಗಳನ್ನು ಬಂದ್​ ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ರೈಲ್ವೆ ಪೊಲೀಸ್ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿದರು.

ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಬಿದ್ದ ಕಂಟೈನರ್​ಗಳು: ಸದ್ಯ ಹಳಿಗಳ ಮೇಲೆ ಅಲ್ಲಲ್ಲಿ ಕಂಟೈನರ್​ಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಂಟೈನರ್‌ಗಳು ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭಿಸಿಲ್ಲ. ಹಳಿ ಮತ್ತು ರೈಲ್ವೆ ವಿದ್ಯುತ್ ಕಂಬಗಳ ದುರಸ್ತಿಗೆ ಸಾಕಷ್ಟು ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೂ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್ ಆಗಿರುತ್ತದೆ.

ಸ್ಥಳೀಯರು ಜೋರಾಗಿ ಗುಡುಗಿನ ಸದ್ದು ಕೇಳಿಸಿ ಹೊರಗೆ ಬಂದು ನೋಡಿದಾಗ ರೈಲು ಮಾರ್ಗದಲ್ಲಿ ಕಂಟೈನರ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂತು. ಈ ಕಂಟೈನರ್‌ಗಳು ಸುಮಾರು 1 ಕಿಲೋಮೀಟರ್‌ವರೆಗೆ ಬಿದ್ದಿವೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಯಾರ ಪ್ರಾಣ, ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಸ್ಥಳಕ್ಕಾಗಮಿಸಿದ ಹರಿಯಾಣ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯ ಸೇವಿಸಿ ಮರ್ಸಿಡಿಸ್​ ಕಾರು ಅಪಘಾತ: ಪೊಲೀಸರಿಗೆ ಶರಣಾದ ಆರೋಪಿ ಮಹಿಳೆ - Nagpur Mercedes Crash Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.