ETV Bharat / bharat

ಈಶ್ವರನ ಹೆಸರಿನಲ್ಲಿ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ; ಹೆಚ್​ಡಿಕೆ ಸೇರಿ 5 ಮಿತ್ರಪಕ್ಷಗಳ ನಾಯಕರಿಗೆ ಕ್ಯಾಬಿನೆಟ್‌ ಸ್ಥಾನ - Prime Minister Modi

author img

By PTI

Published : Jun 9, 2024, 7:39 PM IST

Updated : Jun 9, 2024, 11:02 PM IST

ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್​ಡಿಎ ಸರ್ಕಾರ ರಚನೆಯಾಗಿದೆ. ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮತ್ತು ಸಚಿವರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಒಟ್ಟು 71 ಸಂಸದರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಇದರಲ್ಲಿ 30 ಕ್ಯಾಬಿನೆಟ್ ಸಚಿವರು, ಐವರು ರಾಜ್ಯ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು 36 ರಾಜ್ಯ ಖಾತೆಯ ಸಚಿವರು ಸೇರಿದ್ದಾರೆ.

ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ
ಈಶ್ವರನ ಹೆಸರಿನಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕಾರ (ANI)

ನವದೆಹಲಿ: ಎನ್​ಡಿಎ ಕೂಟದ ನಾಯಕರಾಗಿರುವ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಿ ಹಾಗೂ 30 ಸಂಪುಟ ಸಚಿವರು ಸೇರಿ 71 ಸಚಿವರು ಪ್ರತಿಜ್ಞಾವಿಧಿ ಪಡೆದರು. ಇದರಲ್ಲಿ ಕರ್ನಾಟಕದಿಂದ ಮಾಜಿ ಸಿಎಂ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಮತ್ತು ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್​ ಅವರು ಪ್ರಮಾಣವಚನ ಸ್ವೀಕರಿಸಿದರು.

ಈಶ್ವರನ ಹೆಸರಿನಲ್ಲಿ ಶಪಥ: ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಳಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿದ್ದ 73 ವರ್ಷದ ಮೋದಿ ಅವರು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ನಂತರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.

ಮೋದಿ ಜತೆಗೆ ಅವರ 2.0 ಕ್ಯಾಬಿನೆಟ್‌ನ ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಐದು ಮಿತ್ರಪಕ್ಷಗಳ ನಾಯಕರೂ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಿತ್ರಪಕ್ಷಗಳ ಕ್ಯಾಬಿನೆಟ್‌ ಸಚಿವರು: ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ, ಹೆಚ್​ಎಎಂಎಸ್​ ಅಧ್ಯಕ್ಷ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ (ಲಾಲನ್), ಟಿಡಿಪಿಯ ಕೆ.ರಾಮ್ ಮೋಹನ್ ನಾಯ್ಡು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪ್ರತಿಜ್ಞಾವಿಧಿ ಪಡೆದರು.

ಸಂಪುಟಕ್ಕೆ ನಡ್ಡಾ ವಾಪಸ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಐದು ವರ್ಷಗಳ ನಂತರ ಸಂಪುಟಕ್ಕೆ ಮರಳಿದರು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹರಿಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸಹ ಪ್ರಮಾಣ ವಚನ ಸ್ವೀಕರಿಸಿದರು. ಈ ಇಬ್ಬರು ನಾಯಕರೂ ಮೋದಿ ಸಂಪುಟದ ಹೊಸ ಮುಖಗಳಾಗಿದ್ದಾರೆ.

ಉಳಿದಂತೆ ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದರ್ ಯಾದವ್ ಮತ್ತೆ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಇವರು ರಾಜ್ಯಸಭೆ ಸದಸ್ಯರಾಗಿದ್ದರು. ಈಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಜತೆಗೆ ಅಸ್ಸೋಂನ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಅಶ್ವಿನಿ ವೈಷ್ಣವ್, ವೀರೇಂದ್ರ ಕುಮಾರ್, ಪ್ರಲ್ಹಾದ್ ಜೋಶಿ, ಗಿರಿರಾಜ್ ಸಿಂಗ್, ಜುಯಲ್ ಓರಂ, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್, ಮನ್ಸುಖ್ ಮಾಂಡವಿಯಾ, ಜಿ.ಕಿಶನ್ ರೆಡ್ಡಿ, ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು, ಅನ್ನಪೂರ್ಣ ದೇವಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೆಲ್ಲರೂ ಬಿಜೆಪಿಯ ನಾಯಕರಾಗಿದ್ದಾರೆ.

ಖರ್ಗೆ ಉಪಸ್ಥಿತಿ, ವಿಪಕ್ಷಗಳ ಹಲವರು ಗೈರು: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು. ಆದರೆ, ಹಲವು ವಿಪಕ್ಷಗಳ ನಾಯಕರು ಸಮಾರಂಭಕ್ಕೆ ಗೈರುಹಾಜರಾಜರಾದರು.

ಮತ್ತೊಂದೆಡೆ, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಜತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿದೇಶಗಳ ನಾಯಕರು ಹಾಜರು: ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಪ್ರಮುಖ ನಾಯಕರು ಪ್ರಧಾನಿ ಪದಗ್ರಹಣ ಸಮಾರಂಭದಲ್ಲಿ ಹಾಜರಾಗಿದ್ದರು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು, ತೃತೀಯ ಲಿಂಗಿಗಳು, ಹೊಸ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರು ಸೇರಿ ಸುಮಾರು 9,000 ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಅಂದಾಜಿಸಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು:

ರಾಜನಾಥ್​ ಸಿಂಗ್:​ ಪ್ರಥಮವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರನ ಹೆಸರಿನಲ್ಲಿ ಅವರು ಪ್ರತಿಜ್ಞೆ ಪಡೆದರು.

ಅಮಿತ್​ ಶಾ: ಈಶ್ವರನ ಹೆಸರಿನಲ್ಲಿ ಅಮಿತ್​ ಶಾ ಅವರು ಪ್ರಮಾಣವಚನ ಸ್ವೀಕರಿಸಿದರು.

ನಿತಿನ್​ ಗಡ್ಕರಿ: ಈಶ್ವರನ ಹೆಸರಿನಲ್ಲಿ ನಿತಿನ್​ ಗಡ್ಕರಿ ಅವರು ಪ್ರತಿಜ್ಞೆ ಸ್ವೀಕರಿಸಿದರು.

ಜೆಪಿ ನಡ್ಡಾ: ಈಶ್ವರನ ಹೆಸರಿನಲ್ಲಿ ಜಗತ್​ಪ್ರಕಾಶ್​ ನಡ್ಡಾ ಅವರು ಪ್ರತಿಜ್ಞೆ ಪಡೆದರು.

ಶಿವರಾಜ್​ ಸಿಂಗ್​ ಚೌಹಾಣ್​: ಈಶ್ವರನ ಹೆಸರಿನಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಪ್ರತಿಜ್ಞೆ ಪಡೆದರು.

ನಿರ್ಮಲಾ ಸೀತಾರಾಮನ್​: ದೇವರ ಹೆಸರಿನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಪ್ರತಿಜ್ಞೆ ಪಡೆದರು.

ಡಾ.ಎಸ್​. ಜೈಶಂಕರ್​: ದೇವರ ಹೆಸರಿನಲ್ಲಿ ಡಾ.ಎಸ್​. ಜೈಶಂಕರ್​ ಅವರು ಪ್ರತಿಜ್ಞೆ ಮಾಡಿದರು.

ಮನೋಹರ್​ಲಾಲ್​ ಖಟ್ಟರ್​: ಈಶ್ವರನ ಹೆಸರಿನಲ್ಲಿ ಮನೋಹರ್​ಲಾಲ್​ ಖಟ್ಟರ್​ ಪ್ರತಿಜ್ಞೆ ಸ್ವೀಕರಿಸಿದರು.

ಹೆಚ್​.ಡಿ.ಕುಮಾರಸ್ವಾಮಿ: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಕುಮಾರಸ್ವಾಮಿ.

ಪಿಯೂಷ್​ ಗೋಯಲ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಪಿಯೂಷ್​ ಗೋಯಲ್​

ಧರ್ಮೇಂದ್ರ ಪ್ರಧಾನ್​: ಈಶ್ವರನ ಹೆಸರಿನಲ್ಲಿ ಪ್ರಮಾಣ

ಜೀತನ್​ರಾಮ್​ ಮಾಂಜಿ: ಸತ್ಯ, ನಿಷ್ಠೆಯ ಮೇಲೆ ಪ್ರತಿಜ್ಞೆ

ರಾಜೀವ್​ ರಂಜನ್ ಸಿಂಗ್​: ಸತ್ಯ, ನಿಷ್ಠೆಯ ಮೇಲೆ ಪ್ರಮಾಣ

ಸರ್ವಾನಂದ್​ ಸೋನಾವಾಲ್​: ದೇವರ ಹೆಸರಿನಲ್ಲಿ ಪ್ರಮಾಣ

ಡಾ.ವೀರೇಂದ್ರ ಕುಮಾರ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ

ರಾಮ್​ಮೋಹನ್​: ದೇವರ ಹೆಸರಿನಲ್ಲಿ ಪ್ರಮಾಣ

ಪ್ರಲ್ಹಾದ್​ ಜೋಶಿ: ದೇವರ ಹೆಸರಿನಲ್ಲಿ ಪ್ರತಿಜ್ಞೆ

ಜುಯಲ್​ ಓರಾಮ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ

ಇದನ್ನೂ ಓದಿ: ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET

ನವದೆಹಲಿ: ಎನ್​ಡಿಎ ಕೂಟದ ನಾಯಕರಾಗಿರುವ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಿ ಹಾಗೂ 30 ಸಂಪುಟ ಸಚಿವರು ಸೇರಿ 71 ಸಚಿವರು ಪ್ರತಿಜ್ಞಾವಿಧಿ ಪಡೆದರು. ಇದರಲ್ಲಿ ಕರ್ನಾಟಕದಿಂದ ಮಾಜಿ ಸಿಎಂ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಮತ್ತು ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್​ ಅವರು ಪ್ರಮಾಣವಚನ ಸ್ವೀಕರಿಸಿದರು.

ಈಶ್ವರನ ಹೆಸರಿನಲ್ಲಿ ಶಪಥ: ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೋದಿ ಅವರು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಳಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿದ್ದ 73 ವರ್ಷದ ಮೋದಿ ಅವರು ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ನಂತರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.

ಮೋದಿ ಜತೆಗೆ ಅವರ 2.0 ಕ್ಯಾಬಿನೆಟ್‌ನ ಹಿರಿಯ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಂದು ಐದು ಮಿತ್ರಪಕ್ಷಗಳ ನಾಯಕರೂ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮಿತ್ರಪಕ್ಷಗಳ ಕ್ಯಾಬಿನೆಟ್‌ ಸಚಿವರು: ಕರ್ನಾಟಕದ ಮಾಜಿ ಸಿಎಂ, ಜೆಡಿಎಸ್​ ನಾಯಕ ಹೆಚ್​.ಡಿ.ಕುಮಾರಸ್ವಾಮಿ, ಹೆಚ್​ಎಎಂಎಸ್​ ಅಧ್ಯಕ್ಷ, ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ, ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ (ಲಾಲನ್), ಟಿಡಿಪಿಯ ಕೆ.ರಾಮ್ ಮೋಹನ್ ನಾಯ್ಡು ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪ್ರತಿಜ್ಞಾವಿಧಿ ಪಡೆದರು.

ಸಂಪುಟಕ್ಕೆ ನಡ್ಡಾ ವಾಪಸ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಐದು ವರ್ಷಗಳ ನಂತರ ಸಂಪುಟಕ್ಕೆ ಮರಳಿದರು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹರಿಯಾಣದ ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ಸಹ ಪ್ರಮಾಣ ವಚನ ಸ್ವೀಕರಿಸಿದರು. ಈ ಇಬ್ಬರು ನಾಯಕರೂ ಮೋದಿ ಸಂಪುಟದ ಹೊಸ ಮುಖಗಳಾಗಿದ್ದಾರೆ.

ಉಳಿದಂತೆ ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಧರ್ಮೇಂದ್ರ ಪ್ರಧಾನ್ ಮತ್ತು ಭೂಪೇಂದರ್ ಯಾದವ್ ಮತ್ತೆ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಇವರು ರಾಜ್ಯಸಭೆ ಸದಸ್ಯರಾಗಿದ್ದರು. ಈಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಜತೆಗೆ ಅಸ್ಸೋಂನ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್, ಅಶ್ವಿನಿ ವೈಷ್ಣವ್, ವೀರೇಂದ್ರ ಕುಮಾರ್, ಪ್ರಲ್ಹಾದ್ ಜೋಶಿ, ಗಿರಿರಾಜ್ ಸಿಂಗ್, ಜುಯಲ್ ಓರಂ, ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್, ಮನ್ಸುಖ್ ಮಾಂಡವಿಯಾ, ಜಿ.ಕಿಶನ್ ರೆಡ್ಡಿ, ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು, ಅನ್ನಪೂರ್ಣ ದೇವಿ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ಕ್ಯಾಬಿನೆಟ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೆಲ್ಲರೂ ಬಿಜೆಪಿಯ ನಾಯಕರಾಗಿದ್ದಾರೆ.

ಖರ್ಗೆ ಉಪಸ್ಥಿತಿ, ವಿಪಕ್ಷಗಳ ಹಲವರು ಗೈರು: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು. ಆದರೆ, ಹಲವು ವಿಪಕ್ಷಗಳ ನಾಯಕರು ಸಮಾರಂಭಕ್ಕೆ ಗೈರುಹಾಜರಾಜರಾದರು.

ಮತ್ತೊಂದೆಡೆ, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಜತೆಗೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್, ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿದೇಶಗಳ ನಾಯಕರು ಹಾಜರು: ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಪ್ರಮುಖ ನಾಯಕರು ಪ್ರಧಾನಿ ಪದಗ್ರಹಣ ಸಮಾರಂಭದಲ್ಲಿ ಹಾಜರಾಗಿದ್ದರು. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ, ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಮತ್ತು ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿವಿಧ ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು, ತೃತೀಯ ಲಿಂಗಿಗಳು, ಹೊಸ ಸಂಸತ್ ಭವನ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರು ಸೇರಿ ಸುಮಾರು 9,000 ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ಅಂದಾಜಿಸಲಾಗಿದೆ.

ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು:

ರಾಜನಾಥ್​ ಸಿಂಗ್:​ ಪ್ರಥಮವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರನ ಹೆಸರಿನಲ್ಲಿ ಅವರು ಪ್ರತಿಜ್ಞೆ ಪಡೆದರು.

ಅಮಿತ್​ ಶಾ: ಈಶ್ವರನ ಹೆಸರಿನಲ್ಲಿ ಅಮಿತ್​ ಶಾ ಅವರು ಪ್ರಮಾಣವಚನ ಸ್ವೀಕರಿಸಿದರು.

ನಿತಿನ್​ ಗಡ್ಕರಿ: ಈಶ್ವರನ ಹೆಸರಿನಲ್ಲಿ ನಿತಿನ್​ ಗಡ್ಕರಿ ಅವರು ಪ್ರತಿಜ್ಞೆ ಸ್ವೀಕರಿಸಿದರು.

ಜೆಪಿ ನಡ್ಡಾ: ಈಶ್ವರನ ಹೆಸರಿನಲ್ಲಿ ಜಗತ್​ಪ್ರಕಾಶ್​ ನಡ್ಡಾ ಅವರು ಪ್ರತಿಜ್ಞೆ ಪಡೆದರು.

ಶಿವರಾಜ್​ ಸಿಂಗ್​ ಚೌಹಾಣ್​: ಈಶ್ವರನ ಹೆಸರಿನಲ್ಲಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಪ್ರತಿಜ್ಞೆ ಪಡೆದರು.

ನಿರ್ಮಲಾ ಸೀತಾರಾಮನ್​: ದೇವರ ಹೆಸರಿನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಪ್ರತಿಜ್ಞೆ ಪಡೆದರು.

ಡಾ.ಎಸ್​. ಜೈಶಂಕರ್​: ದೇವರ ಹೆಸರಿನಲ್ಲಿ ಡಾ.ಎಸ್​. ಜೈಶಂಕರ್​ ಅವರು ಪ್ರತಿಜ್ಞೆ ಮಾಡಿದರು.

ಮನೋಹರ್​ಲಾಲ್​ ಖಟ್ಟರ್​: ಈಶ್ವರನ ಹೆಸರಿನಲ್ಲಿ ಮನೋಹರ್​ಲಾಲ್​ ಖಟ್ಟರ್​ ಪ್ರತಿಜ್ಞೆ ಸ್ವೀಕರಿಸಿದರು.

ಹೆಚ್​.ಡಿ.ಕುಮಾರಸ್ವಾಮಿ: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಕುಮಾರಸ್ವಾಮಿ.

ಪಿಯೂಷ್​ ಗೋಯಲ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಪಿಯೂಷ್​ ಗೋಯಲ್​

ಧರ್ಮೇಂದ್ರ ಪ್ರಧಾನ್​: ಈಶ್ವರನ ಹೆಸರಿನಲ್ಲಿ ಪ್ರಮಾಣ

ಜೀತನ್​ರಾಮ್​ ಮಾಂಜಿ: ಸತ್ಯ, ನಿಷ್ಠೆಯ ಮೇಲೆ ಪ್ರತಿಜ್ಞೆ

ರಾಜೀವ್​ ರಂಜನ್ ಸಿಂಗ್​: ಸತ್ಯ, ನಿಷ್ಠೆಯ ಮೇಲೆ ಪ್ರಮಾಣ

ಸರ್ವಾನಂದ್​ ಸೋನಾವಾಲ್​: ದೇವರ ಹೆಸರಿನಲ್ಲಿ ಪ್ರಮಾಣ

ಡಾ.ವೀರೇಂದ್ರ ಕುಮಾರ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ

ರಾಮ್​ಮೋಹನ್​: ದೇವರ ಹೆಸರಿನಲ್ಲಿ ಪ್ರಮಾಣ

ಪ್ರಲ್ಹಾದ್​ ಜೋಶಿ: ದೇವರ ಹೆಸರಿನಲ್ಲಿ ಪ್ರತಿಜ್ಞೆ

ಜುಯಲ್​ ಓರಾಮ್​: ಈಶ್ವರನ ಹೆಸರಿನಲ್ಲಿ ಪ್ರತಿಜ್ಞೆ

ಇದನ್ನೂ ಓದಿ: ಮೋದಿ 3.0 ಸರ್ಕಾರದಲ್ಲಿ ರಾಜ್ಯದ ಐವರಿಗೆ ಅವಕಾಶ: ಯಾರಿಗೆ ಸಂಪುಟ ದರ್ಜೆ ಸ್ಥಾನ? - MODI CABINET

Last Updated : Jun 9, 2024, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.