ETV Bharat / bharat

ಮಹಾಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪುಣ್ಯಸ್ನಾನ - AMIT SHAH IN MAHAKUMBH

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಂದು ಪುಣ್ಯ ಸ್ನಾನ ಮಾಡಿದರು.

ಮಹಾಕುಂಭಮೇಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪುಣ್ಯಸ್ನಾನ
ಮಹಾಕುಂಭಮೇಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಪುಣ್ಯಸ್ನಾನ (ANI)
author img

By ANI

Published : Jan 27, 2025, 5:48 PM IST

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಇಲ್ಲಿ ನಡೆಯುತ್ತಿರುವ ಸನಾತನಿಗಳ ಮಹಾ ಕುಂಭಮೇಳದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪವಿತ್ರ ಸ್ನಾನ ಮಾಡಿದರು. ಬಳಿಕ ಕುಟುಂಬದೊಂದಿಗೆ ಆರತಿ ಬೆಳಗಿದರು.

12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ಗಣ್ಯರು ಮಿಂದೆದ್ದಿದ್ದಾರೆ.

ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಬಂದ ಅಮಿತ್​ ಶಾ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರ ಮಾಡಿಕೊಂಡರು. ಬಳಿಕ ಪ್ರಯಾಗ್​ರಾಜ್​​ನ ಮಹಾಕುಂಭ ನಗರಕ್ಕೆ ತೆರಳಿ ಅಲ್ಲಿನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಈ ವೇಳೆ ಪತಂಜಲಿಯ ಬಾಬಾ ರಾಮ್​ದೇವ್ ಸೇರಿದಂತೆ ಸಂತರು ಮತ್ತು ಋಷಿಗಳು ಜೊತೆಗಿದ್ದರು.

ಸಂತರೊಂದಿಗೆ ಶಾ ಮಾತುಕತೆ: ಪುಣ್ಯ ಸ್ನಾನಕ್ಕೂ ಮಾಡುವ ಮೊದಲು, ಅಮಿತ್​ ಶಾ ಮತ್ತು ಸಿಎಂ ಯೋಗಿ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಂತರು ಮತ್ತು ಋಷಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ, ಕೇಂದ್ರ ಸಚಿವರು ಬಡೇ ಹನುಮಾನ್ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಿದರು. ನಂತರ, ಶಾ ಜುನಾ ಅಖಾಡಕ್ಕೆ ತೆರಳಲಿದರು. ಅಲ್ಲಿ ಅವರು ಮಹಾರಾಜರು ಮತ್ತು ಅಖಾಡದ ಸಂತರೊಂದಿಗೆ ಭೋಜನ ಸವಿದರು.

ಸಂತರೊಂದಿಗೆ ಅಮಿತ್​ ಶಾ ಮಾತುಕತೆ
ಸಂತರೊಂದಿಗೆ ಅಮಿತ್​ ಶಾ ಮಾತುಕತೆ (ANI)

ಇಲ್ಲಿನ ಗುರು ಶರಣಾನಂದ ಅವರ ಆಶ್ರಮಕ್ಕೆ ಭೇಟಿ ನೀಡಿ, ಗುರು ಶರಣಾನಂದ ಮತ್ತು ಗೋವಿಂದ ಗಿರಿ ಮಹಾರಾಜ್ ಅವರನ್ನು ಭೇಟಿ ಮಾಡಿದರು. ಶೃಂಗೇರಿ, ಪುರಿ ಮತ್ತು ದ್ವಾರಕದ ಶಂಕರಾಚಾರ್ಯರೊಂದಿಗೆ ಮಾತುಕತೆ ನಡೆಸಿ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಮಹಾ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವರ್ಷದ ಕುಂಭವು ಜನವರಿ 13 ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. 14 ದಿನಗಳಲ್ಲಿ 12 ಕೋಟಿಗೂ ಅಧಿಗೂ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಓದಿ: ಮಹಾ ಕುಂಭಮೇಳ 2025 : ನಾಗಾ ಸಾಧುಗಳು ಎಂದರೆ ಯಾರು?- ಏನಿವರ ಮಹತ್ವ?: ಇಲ್ಲಿದೆ ಮಾಹಿತಿ

ಹಿಂದೂ ಧರ್ಮದ ಮೇಲಿನ ಪ್ರೀತಿ ನನ್ನನ್ನು ಮಹಾ ಕುಂಭಮೇಳಕ್ಕೆ ಕರೆ ತಂದಿತು: ಫ್ರೆಂಚ್ ಮಹಿಳೆ

ಮಹಾ ಕುಂಭಮೇಳ 2025 : ನಾಗಾ ಸಾಧುಗಳು ಎಂದರೆ ಯಾರು?- ಏನಿವರ ಮಹತ್ವ?: ಇಲ್ಲಿದೆ ಮಾಹಿತಿ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ) : ಇಲ್ಲಿ ನಡೆಯುತ್ತಿರುವ ಸನಾತನಿಗಳ ಮಹಾ ಕುಂಭಮೇಳದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪವಿತ್ರ ಸ್ನಾನ ಮಾಡಿದರು. ಬಳಿಕ ಕುಟುಂಬದೊಂದಿಗೆ ಆರತಿ ಬೆಳಗಿದರು.

12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವು ಗಣ್ಯರು ಮಿಂದೆದ್ದಿದ್ದಾರೆ.

ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಬಂದ ಅಮಿತ್​ ಶಾ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬರ ಮಾಡಿಕೊಂಡರು. ಬಳಿಕ ಪ್ರಯಾಗ್​ರಾಜ್​​ನ ಮಹಾಕುಂಭ ನಗರಕ್ಕೆ ತೆರಳಿ ಅಲ್ಲಿನ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಈ ವೇಳೆ ಪತಂಜಲಿಯ ಬಾಬಾ ರಾಮ್​ದೇವ್ ಸೇರಿದಂತೆ ಸಂತರು ಮತ್ತು ಋಷಿಗಳು ಜೊತೆಗಿದ್ದರು.

ಸಂತರೊಂದಿಗೆ ಶಾ ಮಾತುಕತೆ: ಪುಣ್ಯ ಸ್ನಾನಕ್ಕೂ ಮಾಡುವ ಮೊದಲು, ಅಮಿತ್​ ಶಾ ಮತ್ತು ಸಿಎಂ ಯೋಗಿ ಅವರು ಪ್ರಯಾಗ್‌ರಾಜ್‌ನಲ್ಲಿರುವ ಸಂತರು ಮತ್ತು ಋಷಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ, ಕೇಂದ್ರ ಸಚಿವರು ಬಡೇ ಹನುಮಾನ್ ದೇವಸ್ಥಾನ ಮತ್ತು ಅಭಯವತ್‌ಗೆ ಭೇಟಿ ನೀಡಿದರು. ನಂತರ, ಶಾ ಜುನಾ ಅಖಾಡಕ್ಕೆ ತೆರಳಲಿದರು. ಅಲ್ಲಿ ಅವರು ಮಹಾರಾಜರು ಮತ್ತು ಅಖಾಡದ ಸಂತರೊಂದಿಗೆ ಭೋಜನ ಸವಿದರು.

ಸಂತರೊಂದಿಗೆ ಅಮಿತ್​ ಶಾ ಮಾತುಕತೆ
ಸಂತರೊಂದಿಗೆ ಅಮಿತ್​ ಶಾ ಮಾತುಕತೆ (ANI)

ಇಲ್ಲಿನ ಗುರು ಶರಣಾನಂದ ಅವರ ಆಶ್ರಮಕ್ಕೆ ಭೇಟಿ ನೀಡಿ, ಗುರು ಶರಣಾನಂದ ಮತ್ತು ಗೋವಿಂದ ಗಿರಿ ಮಹಾರಾಜ್ ಅವರನ್ನು ಭೇಟಿ ಮಾಡಿದರು. ಶೃಂಗೇರಿ, ಪುರಿ ಮತ್ತು ದ್ವಾರಕದ ಶಂಕರಾಚಾರ್ಯರೊಂದಿಗೆ ಮಾತುಕತೆ ನಡೆಸಿ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಮಹಾ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ವರ್ಷದ ಕುಂಭವು ಜನವರಿ 13 ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದೆ. 14 ದಿನಗಳಲ್ಲಿ 12 ಕೋಟಿಗೂ ಅಧಿಗೂ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.

ಓದಿ: ಮಹಾ ಕುಂಭಮೇಳ 2025 : ನಾಗಾ ಸಾಧುಗಳು ಎಂದರೆ ಯಾರು?- ಏನಿವರ ಮಹತ್ವ?: ಇಲ್ಲಿದೆ ಮಾಹಿತಿ

ಹಿಂದೂ ಧರ್ಮದ ಮೇಲಿನ ಪ್ರೀತಿ ನನ್ನನ್ನು ಮಹಾ ಕುಂಭಮೇಳಕ್ಕೆ ಕರೆ ತಂದಿತು: ಫ್ರೆಂಚ್ ಮಹಿಳೆ

ಮಹಾ ಕುಂಭಮೇಳ 2025 : ನಾಗಾ ಸಾಧುಗಳು ಎಂದರೆ ಯಾರು?- ಏನಿವರ ಮಹತ್ವ?: ಇಲ್ಲಿದೆ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.