ETV Bharat / bharat

ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆಯಲ್ಲಿ ನಡೆದಿದ್ದೇನು? - PM Modi Rahul Gandhi Tea meeting

author img

By ANI

Published : Aug 10, 2024, 7:14 AM IST

ಸಂಸತ್ತಿನಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆ ನಡೆಸಿದರು. ಯಾವೆಲ್ಲಾ ವಿರೋಧ ಪಕ್ಷದ ಸಂಸದರು ಈ ಸಭೆಯಲ್ಲಿ ಭಾಗಿಯಾಗಿದ್ದರು ಎಂಬುದನ್ನು ತಿಳಿಯೋಣ ಬನ್ನಿ.

Narendra Modi  Rahul Gandhi  PM Modi Rahul Gandhi Tea meeting
ಪ್ರಧಾನಿ ಮೋದಿ, ರಾಹುಲ್ ಗಾಂಧಿ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆ (ANI)

ನವದೆಹಲಿ: ಲೋಕಸಭೆಯಲ್ಲಿ ಸಂಸತ್ ಅಧಿವೇಶನವನ್ನು ಮುಂದೂಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ನಾಯಕರೊಂದಿಗೆ ಶುಕ್ರವಾರ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆ ನಡೆಯಿತು. ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಶುಭಾಶಯ ಕೋರಿದರು. ರಾಹುಲ್ ಗಾಂಧಿ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದರು. ಇದಕ್ಕೆ ರಕ್ಷಣಾ ಸಚಿವರು ಪ್ರತಿಕ್ರಿಯಿಸಿ, ಭಾರತವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.

ಲೋಕಸಭೆಯ ಕಲಾಪವನ್ನು ಶುಕ್ರವಾರ (ಆಗಸ್ಟ್ 9) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕಳೆದ ತಿಂಗಳು ಜುಲೈ 22ರಿಂದ ಆರಂಭವಾದ ಈ ಅಧಿವೇಶನದ ಕಲಾಪಗಳು ಆಗಸ್ಟ್ 12ರವರೆಗೆ ನಡೆಯಬೇಕಿತ್ತು. ಆದರೆ, ಶುಕ್ರವಾರವೇ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಅವರು ಪ್ರಧಾನಿ, ಸಂಸದೀಯ ವ್ಯವಹಾರಗಳ ಸಚಿವರು, ವಿರೋಧ ಪಕ್ಷದ ನಾಯಕರು, ವಿವಿಧ ಪಕ್ಷಗಳ ನಾಯಕರು ಮತ್ತು ಸಂಸದರಿಗೆ ಅಧಿವೇಶನದಲ್ಲಿ ಸದನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

'ಚಾಯ್ ಪೇ ಚರ್ಚಾ' ಸಭೆಯಲ್ಲಿ ಭಾಗವಹಿಸಿದ ಉಳಿದ ನಾಯಕರು ಯಾರು?: ಸಂಸತ್ತಿನ ಅಧಿವೇಶನವನ್ನು ಮುಂದೂಡಿದ ನಂತರ, ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ದೊಡ್ಡ ನಾಯಕರು ಉಪಸ್ಥಿತರಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ, ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

18ನೇ ಲೋಕಸಭೆಯ ಎರಡನೇ ಅಧಿವೇಶನದಲ್ಲಿ 15 ಸಭೆಗಳು- ಓಂ ಬಿರ್ಲಾ: 18ನೇ ಲೋಕಸಭೆಯ ಎರಡನೇ ಅಧಿವೇಶನದ ಕಲಾಪವನ್ನು ಶುಕ್ರವಾರ, ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಅನುಮೋದಿಸುವ ಪ್ರಕ್ರಿಯೆಯು ಪೂರ್ಣಗೊಂಡಿತು. 115 ಗಂಟೆಗಳ ಕಾಲ ನಡೆದ ಈ ಅಧಿವೇಶನದಲ್ಲಿ 15 ಸಭೆಗಳು ನಡೆದಿದ್ದು, ಸದನದ ಕೆಲಸದ ಉತ್ಪಾದಕತೆ ಶೇಕಡಾ 136 ರಷ್ಟಿದೆ ಎಂದರು.

ಸದನದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ 181 ಸದಸ್ಯರು ಭಾಗಿ: ಹದಿನೆಂಟನೇ ಲೋಕಸಭೆಯ ಎರಡನೇ ಅಧಿವೇಶನ ಜುಲೈ 22 ರಂದು ಪ್ರಾರಂಭವಾಯಿತು. ಇದರಲ್ಲಿ ಜುಲೈ 23 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದರು. ಸದನದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯು ಸುಮಾರು 27 ಗಂಟೆ 19 ನಿಮಿಷಗಳ ಕಾಲ ನಡೆಯಿತು. ಇದರಲ್ಲಿ 181 ಸದಸ್ಯರು ಭಾಗವಹಿಸಿದ್ದರು ಎಂದು ಸ್ಪೀಕರ್ ಬಿರ್ಲಾ ಮಾಹಿತಿ ನೀಡಿದರು.

ಇದನ್ನೂ ಓದಿ: 18 ತಿಂಗಳ ನಂತರ ಆಪ್ ನಾಯಕ ಮನೀಶ್‌ ಸಿಸೋಡಿಯಾ ಜೈಲಿನಿಂದ ಬಿಡುಗಡೆ - Manish Sisodia

ನವದೆಹಲಿ: ಲೋಕಸಭೆಯಲ್ಲಿ ಸಂಸತ್ ಅಧಿವೇಶನವನ್ನು ಮುಂದೂಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ನಾಯಕರೊಂದಿಗೆ ಶುಕ್ರವಾರ ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆ ನಡೆಯಿತು. ಈ ವೇಳೆ ಉಭಯ ನಾಯಕರು ಆತ್ಮೀಯವಾಗಿ ಶುಭಾಶಯ ಕೋರಿದರು. ರಾಹುಲ್ ಗಾಂಧಿ ಅವರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದರು. ಇದಕ್ಕೆ ರಕ್ಷಣಾ ಸಚಿವರು ಪ್ರತಿಕ್ರಿಯಿಸಿ, ಭಾರತವು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದರು.

ಲೋಕಸಭೆಯ ಕಲಾಪವನ್ನು ಶುಕ್ರವಾರ (ಆಗಸ್ಟ್ 9) ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕಳೆದ ತಿಂಗಳು ಜುಲೈ 22ರಿಂದ ಆರಂಭವಾದ ಈ ಅಧಿವೇಶನದ ಕಲಾಪಗಳು ಆಗಸ್ಟ್ 12ರವರೆಗೆ ನಡೆಯಬೇಕಿತ್ತು. ಆದರೆ, ಶುಕ್ರವಾರವೇ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಅವರು ಪ್ರಧಾನಿ, ಸಂಸದೀಯ ವ್ಯವಹಾರಗಳ ಸಚಿವರು, ವಿರೋಧ ಪಕ್ಷದ ನಾಯಕರು, ವಿವಿಧ ಪಕ್ಷಗಳ ನಾಯಕರು ಮತ್ತು ಸಂಸದರಿಗೆ ಅಧಿವೇಶನದಲ್ಲಿ ಸದನದ ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

'ಚಾಯ್ ಪೇ ಚರ್ಚಾ' ಸಭೆಯಲ್ಲಿ ಭಾಗವಹಿಸಿದ ಉಳಿದ ನಾಯಕರು ಯಾರು?: ಸಂಸತ್ತಿನ ಅಧಿವೇಶನವನ್ನು ಮುಂದೂಡಿದ ನಂತರ, ಅನೌಪಚಾರಿಕ 'ಚಾಯ್ ಪೇ ಚರ್ಚಾ' ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ದೊಡ್ಡ ನಾಯಕರು ಉಪಸ್ಥಿತರಿದ್ದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ, ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಮತ್ತಿತರರು ಉಪಸ್ಥಿತರಿದ್ದರು.

18ನೇ ಲೋಕಸಭೆಯ ಎರಡನೇ ಅಧಿವೇಶನದಲ್ಲಿ 15 ಸಭೆಗಳು- ಓಂ ಬಿರ್ಲಾ: 18ನೇ ಲೋಕಸಭೆಯ ಎರಡನೇ ಅಧಿವೇಶನದ ಕಲಾಪವನ್ನು ಶುಕ್ರವಾರ, ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇದರಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಅನುಮೋದಿಸುವ ಪ್ರಕ್ರಿಯೆಯು ಪೂರ್ಣಗೊಂಡಿತು. 115 ಗಂಟೆಗಳ ಕಾಲ ನಡೆದ ಈ ಅಧಿವೇಶನದಲ್ಲಿ 15 ಸಭೆಗಳು ನಡೆದಿದ್ದು, ಸದನದ ಕೆಲಸದ ಉತ್ಪಾದಕತೆ ಶೇಕಡಾ 136 ರಷ್ಟಿದೆ ಎಂದರು.

ಸದನದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ 181 ಸದಸ್ಯರು ಭಾಗಿ: ಹದಿನೆಂಟನೇ ಲೋಕಸಭೆಯ ಎರಡನೇ ಅಧಿವೇಶನ ಜುಲೈ 22 ರಂದು ಪ್ರಾರಂಭವಾಯಿತು. ಇದರಲ್ಲಿ ಜುಲೈ 23 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದರು. ಸದನದಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯು ಸುಮಾರು 27 ಗಂಟೆ 19 ನಿಮಿಷಗಳ ಕಾಲ ನಡೆಯಿತು. ಇದರಲ್ಲಿ 181 ಸದಸ್ಯರು ಭಾಗವಹಿಸಿದ್ದರು ಎಂದು ಸ್ಪೀಕರ್ ಬಿರ್ಲಾ ಮಾಹಿತಿ ನೀಡಿದರು.

ಇದನ್ನೂ ಓದಿ: 18 ತಿಂಗಳ ನಂತರ ಆಪ್ ನಾಯಕ ಮನೀಶ್‌ ಸಿಸೋಡಿಯಾ ಜೈಲಿನಿಂದ ಬಿಡುಗಡೆ - Manish Sisodia

ETV Bharat Logo

Copyright © 2024 Ushodaya Enterprises Pvt. Ltd., All Rights Reserved.