ETV Bharat / bharat

ನಿತೀಶ್‌ಗೆ ಇಂಡಿ ಕೂಟದಿಂದ ಉಪ ಪ್ರಧಾನಿ ಆಫರ್? : ಮೋದಿ ಕಂಗೆಡುವಂತೆ ಮಾಡ್ತಾರಾ ನಿತೀಶ್​​? - Nitish Kumar

author img

By ETV Bharat Karnataka Team

Published : Jun 4, 2024, 5:58 PM IST

Updated : Jun 5, 2024, 7:28 AM IST

ಐಎನ್​ಡಿಐ ಮೈತ್ರಿಕೂಟವು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಉಪಪ್ರಧಾನಿ ಪಟ್ಟದ ಆಫರ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಹಾರ ಸಿಎಂ ನಿತೀಶ್ ಕುಮಾರ್
ಬಿಹಾರ ಸಿಎಂ ನಿತೀಶ್ ಕುಮಾರ್ (IANS)

ಪಾಟ್ನಾ: 2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ಭಾರತದ ರಾಜಕೀಯದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ಮಧ್ಯಾಹ್ನದವರೆಗಿನ ಟ್ರೆಂಡ್‌ಗಳಲ್ಲಿ ಎನ್​ಡಿಎ ಮೇಲುಗೈ ಸಾಧಿಸುತ್ತಿರುವಂತೆ ತೋರುತ್ತಿದ್ದರೂ, ಐಎನ್​ಡಿಐಎ ಮೈತ್ರಿಕೂಟವು ನಿರೀಕ್ಷೆಗಿಂತ ಉತ್ತಮವಾಗಿ ಫಲಿತಾಂಶ ಪಡೆಯುತ್ತಿರುವುದು ಕಾಣಿಸುತ್ತಿದೆ.

ಈ ಮಧ್ಯೆ ರಾಷ್ಟ್ರ ರಾಜಕೀಯದಲ್ಲಿ ಅಧಿಕಾರ ರಾಜಕೀಯದ ಹಗ್ಗ ಜಗ್ಗಾಟವೂ ಜೋರಾಗುತ್ತಿದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ತಮ್ಮ ಮೈತ್ರಿಕೂಟಕ್ಕೆ ಸೇರಿಕೊಂಡರೆ ಐಎನ್​ಡಿಐಎ ಅವರಿಗೆ ಉಪ ಪ್ರಧಾನಿ ಪಟ್ಟವನ್ನು ಆಫರ್ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಈ ಬಗ್ಗೆ ಐಎನ್​ಡಿಐಎ ಮೈತ್ರಿಕೂಟ ಈವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಸರ್ಕಾರ ರಚನೆಯಲ್ಲಿ ಜೆಡಿಯು ಪಾತ್ರ ಮುಖ್ಯ: ವಾಸ್ತವವಾಗಿ ಬಿಹಾರದಲ್ಲಿ ಎನ್​ಡಿಎ ಮೇಲುಗೈ ಸಾಧಿಸಿದೆ ಮತ್ತು ಜೆಡಿಯು ಎನ್​ಡಿಎಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಈ ಟ್ರೆಂಡ್​ಗಳು ಅಂತಿಮ ಫಲಿತಾಂಶವಾದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಜೆಡಿಯು ಪಾತ್ರ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಐಎನ್​ಡಿಐಎ ಮೈತ್ರಿಕೂಟವು ಈಗಾಗಲೇ ನಿತೀಶ್ ಕುಮಾರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಪ್ರಧಾನಿ ಭೇಟಿ ಮಾಡಿದ್ದ ನಿತೀಶ್: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಮೊದಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ನಿತೀಶ್ ಕುಮಾರ್ ಪ್ರಧಾನಿಯನ್ನು ಭೇಟಿ ಮಾಡಿದ್ದರು ಎಂದು ನಂಬಲಾಗಿದೆ. ಇದಲ್ಲದೆ, ನಿತೀಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಹ ಭೇಟಿಯಾಗಿದ್ದರು.

ಆರಂಭಿಕ ಫಲಿತಾಂಶಗಳಲ್ಲಿ ಬಿಜೆಪಿಗೆ ಸಿಗದ ಬಹುಮತ: ಈಗಿನ ಫಲಿತಾಂಶಗಳನ್ನು ನೋಡಿದರೆ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವಷ್ಟು ಸೀಟು ಪಡೆಯಲಾರದು ಎಂಬುದು ಸ್ಪಷ್ಟವಾಗಿದೆ. ಆದರೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಬಹುಮತದ ಸಂಖ್ಯೆಯನ್ನು ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ಈ ಬಾರಿ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಬೇಕಾದರೆ ಬಿಜೆಪಿ ಮಿತ್ರಪಕ್ಷಗಳನ್ನು ಅವಲಂಬಿಸಲೇಬೇಕಾಗುತ್ತದೆ ಎಂಬುದು ನಿಚ್ಚಳ.

ಸುಳಿವು ನೀಡಿದ್ದ ತೇಜಸ್ವಿ ಯಾದವ್: ಜೂನ್ 4ರಂದು ಫಲಿತಾಂಶಗಳು ಬಂದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಈ ಹಿಂದೆ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದರು. ಆದಾಗ್ಯೂ, ತೇಜಸ್ವಿ ಅವರ ಹೇಳಿಕೆಗೆ ಜೆಡಿಯು ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು ಮತ್ತು ಇದು ಜನರ ದಾರಿತಪ್ಪಿಸುವ ಹೇಳಿಕೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಸಿಪಿಐ (ಎಂ) ಘಟಾನುಘಟಿ ನಾಯಕರ ಸೋಲು: ಸಿಎಂ ಪಿಣರಾಯಿ ವಿಜಯನ್​ಗೆ ಹಿನ್ನಡೆ - Lok Sabha Election Results 2024

ಪಾಟ್ನಾ: 2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ಭಾರತದ ರಾಜಕೀಯದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಕಂಡುಬರುತ್ತಿವೆ. ಮಧ್ಯಾಹ್ನದವರೆಗಿನ ಟ್ರೆಂಡ್‌ಗಳಲ್ಲಿ ಎನ್​ಡಿಎ ಮೇಲುಗೈ ಸಾಧಿಸುತ್ತಿರುವಂತೆ ತೋರುತ್ತಿದ್ದರೂ, ಐಎನ್​ಡಿಐಎ ಮೈತ್ರಿಕೂಟವು ನಿರೀಕ್ಷೆಗಿಂತ ಉತ್ತಮವಾಗಿ ಫಲಿತಾಂಶ ಪಡೆಯುತ್ತಿರುವುದು ಕಾಣಿಸುತ್ತಿದೆ.

ಈ ಮಧ್ಯೆ ರಾಷ್ಟ್ರ ರಾಜಕೀಯದಲ್ಲಿ ಅಧಿಕಾರ ರಾಜಕೀಯದ ಹಗ್ಗ ಜಗ್ಗಾಟವೂ ಜೋರಾಗುತ್ತಿದೆ. ಮೂಲಗಳ ಪ್ರಕಾರ, ನಿತೀಶ್ ಕುಮಾರ್ ತಮ್ಮ ಮೈತ್ರಿಕೂಟಕ್ಕೆ ಸೇರಿಕೊಂಡರೆ ಐಎನ್​ಡಿಐಎ ಅವರಿಗೆ ಉಪ ಪ್ರಧಾನಿ ಪಟ್ಟವನ್ನು ಆಫರ್ ಮಾಡುವ ಸಾಧ್ಯತೆಯಿದೆ. ಆದಾಗ್ಯೂ, ಈ ಬಗ್ಗೆ ಐಎನ್​ಡಿಐಎ ಮೈತ್ರಿಕೂಟ ಈವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಸರ್ಕಾರ ರಚನೆಯಲ್ಲಿ ಜೆಡಿಯು ಪಾತ್ರ ಮುಖ್ಯ: ವಾಸ್ತವವಾಗಿ ಬಿಹಾರದಲ್ಲಿ ಎನ್​ಡಿಎ ಮೇಲುಗೈ ಸಾಧಿಸಿದೆ ಮತ್ತು ಜೆಡಿಯು ಎನ್​ಡಿಎಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ. ಈ ಟ್ರೆಂಡ್​ಗಳು ಅಂತಿಮ ಫಲಿತಾಂಶವಾದಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುವಲ್ಲಿ ಜೆಡಿಯು ಪಾತ್ರ ಮುಖ್ಯವಾಗುತ್ತದೆ. ಈ ಕಾರಣಕ್ಕಾಗಿಯೇ ಐಎನ್​ಡಿಐಎ ಮೈತ್ರಿಕೂಟವು ಈಗಾಗಲೇ ನಿತೀಶ್ ಕುಮಾರ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ.

ಪ್ರಧಾನಿ ಭೇಟಿ ಮಾಡಿದ್ದ ನಿತೀಶ್: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಮೊದಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು. ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ನಿತೀಶ್ ಕುಮಾರ್ ಪ್ರಧಾನಿಯನ್ನು ಭೇಟಿ ಮಾಡಿದ್ದರು ಎಂದು ನಂಬಲಾಗಿದೆ. ಇದಲ್ಲದೆ, ನಿತೀಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಹ ಭೇಟಿಯಾಗಿದ್ದರು.

ಆರಂಭಿಕ ಫಲಿತಾಂಶಗಳಲ್ಲಿ ಬಿಜೆಪಿಗೆ ಸಿಗದ ಬಹುಮತ: ಈಗಿನ ಫಲಿತಾಂಶಗಳನ್ನು ನೋಡಿದರೆ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವಷ್ಟು ಸೀಟು ಪಡೆಯಲಾರದು ಎಂಬುದು ಸ್ಪಷ್ಟವಾಗಿದೆ. ಆದರೂ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಬಹುಮತದ ಸಂಖ್ಯೆಯನ್ನು ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ಈ ಬಾರಿ ಕೇಂದ್ರದಲ್ಲಿ ಹೊಸ ಸರ್ಕಾರ ರಚಿಸಬೇಕಾದರೆ ಬಿಜೆಪಿ ಮಿತ್ರಪಕ್ಷಗಳನ್ನು ಅವಲಂಬಿಸಲೇಬೇಕಾಗುತ್ತದೆ ಎಂಬುದು ನಿಚ್ಚಳ.

ಸುಳಿವು ನೀಡಿದ್ದ ತೇಜಸ್ವಿ ಯಾದವ್: ಜೂನ್ 4ರಂದು ಫಲಿತಾಂಶಗಳು ಬಂದ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್ ಈ ಹಿಂದೆ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದ್ದರು. ಆದಾಗ್ಯೂ, ತೇಜಸ್ವಿ ಅವರ ಹೇಳಿಕೆಗೆ ಜೆಡಿಯು ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು ಮತ್ತು ಇದು ಜನರ ದಾರಿತಪ್ಪಿಸುವ ಹೇಳಿಕೆ ಎಂದು ಟೀಕಿಸಿದ್ದರು.

ಇದನ್ನೂ ಓದಿ: ಕೇರಳದಲ್ಲಿ ಸಿಪಿಐ (ಎಂ) ಘಟಾನುಘಟಿ ನಾಯಕರ ಸೋಲು: ಸಿಎಂ ಪಿಣರಾಯಿ ವಿಜಯನ್​ಗೆ ಹಿನ್ನಡೆ - Lok Sabha Election Results 2024

Last Updated : Jun 5, 2024, 7:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.