ETV Bharat / bharat

ಸಾಗರದಾಳದ ಅಧ್ಯಯನಕ್ಕೆ ಸಮುದ್ರಯಾನ ಯೋಜನೆ; ಶೀಘ್ರದಲ್ಲೇ ಪರೀಕ್ಷಾರ್ಥ ಪ್ರಯೋಗ - ಸಮುದ್ರಯಾನ ಯೋಜನೆ

ಸಮುದ್ರದಾಳದಲ್ಲಿ 6000 ಮೀಟರ್​​ ಅಡಿಯಲ್ಲಿನ ಕುರಿತು ಈ ಯೋಜನೆ ಅನ್ವೇಷಣೆ ನಡೆಸಲಿದೆ. ಇದಕ್ಕಾಗಿ ಮನುಷ್ಯರನ್ನು ಕಳುಹಿಸುವ ಸಿದ್ದತೆಯೂ ಭರದಿಂದ ಸಾಗಿದೆ.

niot-will-soon-hold-samudrayaan-mission
niot-will-soon-hold-samudrayaan-mission
author img

By ETV Bharat Karnataka Team

Published : Feb 24, 2024, 10:44 AM IST

ಚೆನ್ನೈ: ಸಮುದ್ರದಾಳದ ಅನ್ವೇಷಣೆಗಾಗಿ ಮನುಷ್ಯರನ್ನು ಕಳುಹಿಸುವ ಸಿದ್ದತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದಡಿಯ ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಆಫ್​ ಓಷನ್​ ಟೆಕ್ನಾಲಜಿಯಿಂದ ಈ ಸಮುದ್ರಯಾನ ಯೋಜನೆ ನಡೆಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿ ಸಮುದ್ರದ ಆಳಕ್ಕೆ ಮನುಷ್ಯರನ್ನು ಸಂಶೋಧನೆಗಾಗಿ ಕಳುಹಿಸಲಾಗುವುದು

ಚೆನ್ನೈ ಮೂಲದ ನ್ಯಾಷನಲ್​ ಇನ್ಸಿಟಿಟ್ಯೂಟ್​ ಆಫ್​ ಓಷನ್​ ಟೆಕ್ನಾಲಜಿ (ಎನ್​ಐಒಟಿ) ಸ್ವಾಯತ್ತ ಸಂಸ್ಥೆಯಾಗಿದ್ದು, ಸಮುದ್ರಾಳದ ಅಧ್ಯಯನಕ್ಕೆ ಮತ್ಸ್ಯ 6000 (MATSYA 6000) ಎಂಬ ವಾಹನವನ್ನು ತಯಾರಿಸಿದೆ. ಈ ಸಮುದ್ರಯಾನ ಯೋಜನೆ ಜಾರಿಗೆ 4,800 ಕೋಟಿ ವೆಚ್ಚ ಆಗಲಿದೆ ಎಂದು ಎನ್​ಐಒಟಿ ನಿರ್ದೇಶಕ ಜಿಎ ರಾಮದಾಸ್​​ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಇನ್ನು ಕೆಲವೇ ವಾರದಲ್ಲಿ ಚೆನ್ನೈನಲ್ಲಿ ಈ ಸಂಬಂಧ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಈ ಯೋಜನೆಯ ಮುಖ್ಯ ಉದ್ದೇಶ ಸಮುದ್ರದ 6 ಸಾವಿರ ಮೀಟರ್​ ಅಡಿಯಲ್ಲಿ ಸಂಶೋಧನೆ ಮಾಡುವುದಾಗಿದೆ. ಮೊದಲ ಹಂತದ ಬಂದರು ಪರೀಕ್ಷೆ ಸಮುದ್ರದಾಳದ 500 ಮೀಟರ್​ ಅಡಿಯಲ್ಲಿ ನಡೆಯಲಿದೆ. ಸಮುದ್ರದ ಒಳಗೆ ಮೂರು ಜನರು ಹೋಗಬಹುದು. ಮೇಲ್ಮೈಯಲ್ಲಿರುವ ಖನಿಜ ಸಂಪನ್ಮೂಲ ನೇರವಾಗಿ ನೋಡಬಹುದಾಗಿದೆ.

ಚೆನ್ನೈನ ಪಲ್ಲಿಕರಣೈನಲ್ಲಿರುವ ಎನ್​ಐಒಟಿ ಕ್ಯಾಂಪಸ್​ನಲ್ಲಿನ ಪಲ್ಲಿಕರಣೈಯಲ್ಲಿ ಈ ಯೋಜನೆಯ ವಾಹನವನ್ನು ಇರಿಸಲಾಗಿದ್ದು, ಇದು ಗೋಲಾಕಾರವಾಗಿದ್ದು, ಇದರಲ್ಲಿ ಜನರು ಪ್ರಯಾಣ ಮಾಡಬಹುದಾಗಿದೆ ಎಂದು ರಾಮದಾಸ್​ ತಿಳಿಸಿದ್ದಾರೆ. ಇದು 6.6 ಮೀಟರ್​ ಉದ್ದ ಮತ್ತು 210 ಟನ್​ ತೂಕವನ್ನು ಹೊಂದಿದ್ದು, ನೀರಿನೋಳಗೆ 48 ಗಂಟೆಗಳ ಕಾಲ ಸಂಶೋಧನೆ ನಡೆಸುವ ಸಾಮರ್ಥ್ಯ ಹೊಂದಿದೆ.

ಜನರನ್ನು ಹೊತ್ತೊಯ್ಯುವ ಗೋಲಾಕಾರದ ಈ ವಾಹನವನ್ನು ಸಂಪೂರ್ಣವಾಗಿ ಟೈಟಾನಿಯಂನಿಂದ ಮಾಡಲಾಗಿದೆ. ಟೈಟಾನಿಯಂ ಬಳಕೆ ಮಾಡಿರುವ ಕಾರಣ ಎಂದರೆ, ಇದು ಹಗುರ ಹಾಗೂ ಬೇರೆ ಲೋಹಗಳಿಗಿಂತ ಶಕ್ತಿಯಾಲಿಯಾಗಿದೆ. ಸಬ್​ಮೆರಿನ್​ಗೆ ಮಾಜಿ ನೌಕಾ ಅಧಿಕಾರಿಯನ್ನು ಪೈಲಟ್​ ಆಗಿ ನೇಮಕ ಮಾಡಲಾಗಿದೆ. ಅವರು ಎನ್​ಐಒಟಿ ವಿಜ್ಞಾನಿಗಳಿಗೆ ಎರಡು ದಿನ ಪೈಲಟ್​​ ತರಬೇತಿ ಕೂಡಾ ನೀಡಲಿದ್ದಾರೆ.

ಮತ್ಸ್ಯ 6000 ಯೋಜನೆಯು, ಮೂರು ಬಂದರುಗಳು, ಸಾಗರಗಳನ್ನು ಅನ್ವೇಷಿಸಲು ಎರಡು ಮ್ಯಾನಿಪ್ಯುಲೇಟರ್‌ಗಳು, ಖನಿಜ ಮಾದರಿಗಳನ್ನು ಸಂಗ್ರಹಿಸುವ ಟ್ರೇ, ಆಳವಾದ ಸಮುದ್ರ ಮತ್ತು ಸಂಪನ್ಮೂಲಗಳ ಫೋಟೋ ಸೆರೆ ಹಿಡಿಯಲು ಕ್ಯಾಮೆರಾ ಒಳಗೊಂಡಿರಲಿದೆ. ಈ ವರ್ಷವೇ ಸಮುದ್ರಯಾನ ಯೋಜನೆ ಕಾರ್ಯಗತಗೊಳ್ಳಲಿದ್ದು, 2026ರ ವೇಳೆಗೆ ಸಂಸ್ಥೆ ಅಂದುಕೊಂಡಂತೆ ಯೋಜನೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಗುರಿ ಹೊಂದಲಾಗಿದೆ.

ಎನ್​ಐಒಟಿ ವಿಜ್ಞಾನಿ ಎನ್​ ಆರ್​​ ರಮೇಶ್​​ ಹೇಳುವಂತೆ, ಆಳವಾದ ಸಮುದ್ರದಲ್ಲಿನ ಸಂಪನ್ಮೂಲ ಅನ್ವೇಷಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಇದೇ ವೇಳೆ ಸಂಶೋಧನೆ ಸಾಗರ ಸಂಪನ್ಮೂಲಗಳ ದುರ್ಬಳಕೆ ಪರಿಣಾಮಗಳಾಗಬಹುದೇ ಎಂಬ ಕುರಿತು ಕೂಡ ಗಮನ ಹರಿಸಲು ಎನ್​ಐಒಟಿ ಮುಂದಾಗಿದೆ. ಈ ಯೋಜನೆ ಕಾರ್ಯಾರಂಭ ಮಾಡುವ ಮುನ್ನ ಹಲವು ಪೂರ್ವಭಾವಿ ಪರೀಕ್ಷೆಗಳು ಪೂರ್ಣಗೊಳ್ಳಬೇಕಿದೆ ಎಂದು ರಮೇಶ್ ಅವರು ಹೇಳಿದ್ದಾರೆ.

ಇದನ್ನೂ ಓದಿ: 1971ರ ಯುದ್ಧ: ವಿಶಾಖಪಟ್ಟಣಂ ಕರಾವಳಿಯಲ್ಲಿ ಪಾಕ್​ನ ಜಲಾಂತರ್ಗಾಮಿ ನೌಕೆ 'ಘಾಜಿ' ಅವಶೇಷ ಪತ್ತೆ

ಚೆನ್ನೈ: ಸಮುದ್ರದಾಳದ ಅನ್ವೇಷಣೆಗಾಗಿ ಮನುಷ್ಯರನ್ನು ಕಳುಹಿಸುವ ಸಿದ್ದತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದಡಿಯ ನ್ಯಾಷನಲ್​ ಇನ್ಸ್​ಟಿಟ್ಯೂಟ್​ ಆಫ್​ ಓಷನ್​ ಟೆಕ್ನಾಲಜಿಯಿಂದ ಈ ಸಮುದ್ರಯಾನ ಯೋಜನೆ ನಡೆಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅಡಿ ಸಮುದ್ರದ ಆಳಕ್ಕೆ ಮನುಷ್ಯರನ್ನು ಸಂಶೋಧನೆಗಾಗಿ ಕಳುಹಿಸಲಾಗುವುದು

ಚೆನ್ನೈ ಮೂಲದ ನ್ಯಾಷನಲ್​ ಇನ್ಸಿಟಿಟ್ಯೂಟ್​ ಆಫ್​ ಓಷನ್​ ಟೆಕ್ನಾಲಜಿ (ಎನ್​ಐಒಟಿ) ಸ್ವಾಯತ್ತ ಸಂಸ್ಥೆಯಾಗಿದ್ದು, ಸಮುದ್ರಾಳದ ಅಧ್ಯಯನಕ್ಕೆ ಮತ್ಸ್ಯ 6000 (MATSYA 6000) ಎಂಬ ವಾಹನವನ್ನು ತಯಾರಿಸಿದೆ. ಈ ಸಮುದ್ರಯಾನ ಯೋಜನೆ ಜಾರಿಗೆ 4,800 ಕೋಟಿ ವೆಚ್ಚ ಆಗಲಿದೆ ಎಂದು ಎನ್​ಐಒಟಿ ನಿರ್ದೇಶಕ ಜಿಎ ರಾಮದಾಸ್​​ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಇನ್ನು ಕೆಲವೇ ವಾರದಲ್ಲಿ ಚೆನ್ನೈನಲ್ಲಿ ಈ ಸಂಬಂಧ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಈ ಯೋಜನೆಯ ಮುಖ್ಯ ಉದ್ದೇಶ ಸಮುದ್ರದ 6 ಸಾವಿರ ಮೀಟರ್​ ಅಡಿಯಲ್ಲಿ ಸಂಶೋಧನೆ ಮಾಡುವುದಾಗಿದೆ. ಮೊದಲ ಹಂತದ ಬಂದರು ಪರೀಕ್ಷೆ ಸಮುದ್ರದಾಳದ 500 ಮೀಟರ್​ ಅಡಿಯಲ್ಲಿ ನಡೆಯಲಿದೆ. ಸಮುದ್ರದ ಒಳಗೆ ಮೂರು ಜನರು ಹೋಗಬಹುದು. ಮೇಲ್ಮೈಯಲ್ಲಿರುವ ಖನಿಜ ಸಂಪನ್ಮೂಲ ನೇರವಾಗಿ ನೋಡಬಹುದಾಗಿದೆ.

ಚೆನ್ನೈನ ಪಲ್ಲಿಕರಣೈನಲ್ಲಿರುವ ಎನ್​ಐಒಟಿ ಕ್ಯಾಂಪಸ್​ನಲ್ಲಿನ ಪಲ್ಲಿಕರಣೈಯಲ್ಲಿ ಈ ಯೋಜನೆಯ ವಾಹನವನ್ನು ಇರಿಸಲಾಗಿದ್ದು, ಇದು ಗೋಲಾಕಾರವಾಗಿದ್ದು, ಇದರಲ್ಲಿ ಜನರು ಪ್ರಯಾಣ ಮಾಡಬಹುದಾಗಿದೆ ಎಂದು ರಾಮದಾಸ್​ ತಿಳಿಸಿದ್ದಾರೆ. ಇದು 6.6 ಮೀಟರ್​ ಉದ್ದ ಮತ್ತು 210 ಟನ್​ ತೂಕವನ್ನು ಹೊಂದಿದ್ದು, ನೀರಿನೋಳಗೆ 48 ಗಂಟೆಗಳ ಕಾಲ ಸಂಶೋಧನೆ ನಡೆಸುವ ಸಾಮರ್ಥ್ಯ ಹೊಂದಿದೆ.

ಜನರನ್ನು ಹೊತ್ತೊಯ್ಯುವ ಗೋಲಾಕಾರದ ಈ ವಾಹನವನ್ನು ಸಂಪೂರ್ಣವಾಗಿ ಟೈಟಾನಿಯಂನಿಂದ ಮಾಡಲಾಗಿದೆ. ಟೈಟಾನಿಯಂ ಬಳಕೆ ಮಾಡಿರುವ ಕಾರಣ ಎಂದರೆ, ಇದು ಹಗುರ ಹಾಗೂ ಬೇರೆ ಲೋಹಗಳಿಗಿಂತ ಶಕ್ತಿಯಾಲಿಯಾಗಿದೆ. ಸಬ್​ಮೆರಿನ್​ಗೆ ಮಾಜಿ ನೌಕಾ ಅಧಿಕಾರಿಯನ್ನು ಪೈಲಟ್​ ಆಗಿ ನೇಮಕ ಮಾಡಲಾಗಿದೆ. ಅವರು ಎನ್​ಐಒಟಿ ವಿಜ್ಞಾನಿಗಳಿಗೆ ಎರಡು ದಿನ ಪೈಲಟ್​​ ತರಬೇತಿ ಕೂಡಾ ನೀಡಲಿದ್ದಾರೆ.

ಮತ್ಸ್ಯ 6000 ಯೋಜನೆಯು, ಮೂರು ಬಂದರುಗಳು, ಸಾಗರಗಳನ್ನು ಅನ್ವೇಷಿಸಲು ಎರಡು ಮ್ಯಾನಿಪ್ಯುಲೇಟರ್‌ಗಳು, ಖನಿಜ ಮಾದರಿಗಳನ್ನು ಸಂಗ್ರಹಿಸುವ ಟ್ರೇ, ಆಳವಾದ ಸಮುದ್ರ ಮತ್ತು ಸಂಪನ್ಮೂಲಗಳ ಫೋಟೋ ಸೆರೆ ಹಿಡಿಯಲು ಕ್ಯಾಮೆರಾ ಒಳಗೊಂಡಿರಲಿದೆ. ಈ ವರ್ಷವೇ ಸಮುದ್ರಯಾನ ಯೋಜನೆ ಕಾರ್ಯಗತಗೊಳ್ಳಲಿದ್ದು, 2026ರ ವೇಳೆಗೆ ಸಂಸ್ಥೆ ಅಂದುಕೊಂಡಂತೆ ಯೋಜನೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಗುರಿ ಹೊಂದಲಾಗಿದೆ.

ಎನ್​ಐಒಟಿ ವಿಜ್ಞಾನಿ ಎನ್​ ಆರ್​​ ರಮೇಶ್​​ ಹೇಳುವಂತೆ, ಆಳವಾದ ಸಮುದ್ರದಲ್ಲಿನ ಸಂಪನ್ಮೂಲ ಅನ್ವೇಷಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಇದೇ ವೇಳೆ ಸಂಶೋಧನೆ ಸಾಗರ ಸಂಪನ್ಮೂಲಗಳ ದುರ್ಬಳಕೆ ಪರಿಣಾಮಗಳಾಗಬಹುದೇ ಎಂಬ ಕುರಿತು ಕೂಡ ಗಮನ ಹರಿಸಲು ಎನ್​ಐಒಟಿ ಮುಂದಾಗಿದೆ. ಈ ಯೋಜನೆ ಕಾರ್ಯಾರಂಭ ಮಾಡುವ ಮುನ್ನ ಹಲವು ಪೂರ್ವಭಾವಿ ಪರೀಕ್ಷೆಗಳು ಪೂರ್ಣಗೊಳ್ಳಬೇಕಿದೆ ಎಂದು ರಮೇಶ್ ಅವರು ಹೇಳಿದ್ದಾರೆ.

ಇದನ್ನೂ ಓದಿ: 1971ರ ಯುದ್ಧ: ವಿಶಾಖಪಟ್ಟಣಂ ಕರಾವಳಿಯಲ್ಲಿ ಪಾಕ್​ನ ಜಲಾಂತರ್ಗಾಮಿ ನೌಕೆ 'ಘಾಜಿ' ಅವಶೇಷ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.