ETV Bharat / bharat

ಗ್ರಾಹಕರ 17ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದ ಬ್ಯಾಂಕ್​ ಮ್ಯಾನೇಜರ್​ ವಶಕ್ಕೆ - Bank Of Maharashtra Kerala Scam

author img

By ETV Bharat Karnataka Team

Published : Aug 19, 2024, 1:43 PM IST

Updated : Aug 19, 2024, 2:30 PM IST

ಪ್ರಕರಣ ದಾಖಲಾಗುತ್ತಿದ್ದಂತೆ ಕಣ್ಮರೆಯಾಗಿದ್ದ ಆರೋಪಿ ಮ್ಯಾನೇಜರ್​ ತೆಲಂಗಾಣದಲ್ಲಿ ಸಿಕ್ಕಿಬಿದ್ದಿದ್ದಾರೆ.

bank-of-maharashtra-kerala-branch-scam-former-manager-madha-jayakumar-arrested-from-telangana
ಬ್ಯಾಂಕ್​ ವಂಚನೆ ಆರೋಪಿ ಮ್ಯಾನೇಜರ್​ ಜಯಕುಮಾರ್​ (ಈಟಿವಿ ಭಾರತ್​​)

ಕೋಝಿಕ್ಕೊಡ್​: ಬ್ಯಾಂಕ್​ ಆಫ್​ ಮಹಾರಾಷ್ಟ್ರದ ವಡಕರ ಬ್ರಾಂಚ್​ನಲ್ಲಿ ಚಿನ್ನ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆಹಿಯುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಎಂ ಜಯಕುಮಾರ್​ನನ್ನು ಕೇರಳ ಪೊಲೀಸರ ಸೂಚನೆ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದ. ಈತನ ಕುರಿತು ಇತರೆ ರಾಜ್ಯಗಳೊಂದಿಗೆ ಕೇರಳ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಹುಡುಕಾಟಕ್ಕೆ ಕೇರಳ ಪೊಲೀಸರು ನೆರವು ಕೋರಿದ್ದರು. ಬ್ಯಾಂಕ್​ ಹಗರಣದ ಪ್ರಮುಖ ಆರೋಪಿ ತೆಲಂಗಾಣದಲ್ಲಿ ಅವಿತಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿರುವ ತೆಲಂಗಾಣ ಪೊಲೀಸರು, 34 ವರ್ಷದ ಜಯಕುಮಾರ್​ನನ್ನು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಕೇರಳ ಪೊಲೀಸರ ಸೂಚನೆ ಮೇರೆಗೆ ಈ ಕ್ರಮ ನಡೆಸಲಾಗಿದೆ. ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಬ್ಯಾಂಕ್​ನ ಮಾಜಿ ಬ್ರಾಂಚ್​ ಮ್ಯಾನೇಜರ್​ ಇರುವ ಕುರಿತು ಮಾಹಿತಿ ಪಡೆಯಲಾಗಿತ್ತು. ಮಾಧಾ ಜಯಕುಮಾರ್​ ಕೇರಳದ ಕೊಝಿಕ್ಕೊಡ್​​ನ ಬ್ಯಾಂಕ್​ ಆಫ್​ ಮಹಾರಾಷ್ಟ್ರ ಬ್ರಾಂಚ್​ನಲ್ಲಿ 17 ಕೋಟಿ ಮೌಲ್ಯದ 26 ಕೆ.ಜಿ ಮೌಲ್ಯದ ಬಂಗಾರವನ್ನು ಬ್ಯಾಂಕ್​ನಲ್ಲಿ ಗಿರವಿ ಇರಿಸಲಾಗಿತ್ತು.

ಗ್ರಾಹಕರು ಇರಿಸಿದ್ದ ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರವನ್ನು ಬ್ಯಾಂಕ್​ನಲ್ಲಿ ಜಮೆಯಾಗಿಸುವ ಮೂಲಕ ಬ್ಯಾಂಕ್​ಗೆ ಜಯಕುಮಾರ್​ ವಂಚಿಸಿದ್ದರು. ತಮಿಳುನಾಡಿನಲ್ಲಿ ಮೆಟ್ಟುಪಾಳ್ಯಮ್​ ಪತ್ತಿ ಸ್ಟ್ರೀಟ್​ನ ನಿವಾಸಿಯಾಗಿರುವ ಜಯಕುಮಾರ್​ ಕೃತ್ಯವು ಬ್ರಾಂಚ್​ನ ಮರು ಮೌಲ್ಯಮಾಪನ ಪ್ರಕ್ರಿಯೆ ವೇಳೆ ಬಹಿರಂಗವಾಗಿತ್ತು. ಇತ್ತೀಚಿಗೆ ಬ್ಯಾಂಕ್​ಗೆ ನೇಮಕಗೊಂಡಿದ್ದ ಹೊಸ ಮ್ಯಾನೇಜರ್​ ವಿ ಇರ್ಷಾದ್​ ಅವರು ಈ ಕೃತ್ಯವನ್ನು ಬಯಲಿಗೆಳೆದು ವಡಕರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಜಯಕುಮಾರ್​ ಕಳೆದ ಮೂರು ವರ್ಷಗಳಿಂದ ವಡಕರ ಬ್ರಾಂಚ್​ನ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಎರ್ನಾಕುಲಂನ ಪಲರಿವಟ್ಟಂ ಬ್ರಾಂಚ್​ಗೆ ವರ್ಗಾವಣೆಗೊಂಡಿದ್ದರು. 2024ರ ಜೂನ್​ 13ರಿಂದ ಜುಲೈ 6ರ ವರೆಗೆ ಗ್ರಾಹಕರು ಇರಿಸಲಾಗಿದ್ದ 42 ಖಾತೆಗಳಲ್ಲಿನ ಬಂಗಾರ ಕಣ್ಮರೆಯಾಗಿತ್ತು. ಈ ಪ್ರಕರಣ ಸಂಬಂದ ವಡಕರ ಸರ್ಕಲ್​ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್​ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಐಪಿಸಿ ಸೆಕ್ಷನ್​ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ಶಾಖೆಯಿಂದ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಮ್ಯಾನೇಜರ್ ಪರಾರಿ!

ಕೋಝಿಕ್ಕೊಡ್​: ಬ್ಯಾಂಕ್​ ಆಫ್​ ಮಹಾರಾಷ್ಟ್ರದ ವಡಕರ ಬ್ರಾಂಚ್​ನಲ್ಲಿ ಚಿನ್ನ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆಹಿಯುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಎಂ ಜಯಕುಮಾರ್​ನನ್ನು ಕೇರಳ ಪೊಲೀಸರ ಸೂಚನೆ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದ. ಈತನ ಕುರಿತು ಇತರೆ ರಾಜ್ಯಗಳೊಂದಿಗೆ ಕೇರಳ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಹುಡುಕಾಟಕ್ಕೆ ಕೇರಳ ಪೊಲೀಸರು ನೆರವು ಕೋರಿದ್ದರು. ಬ್ಯಾಂಕ್​ ಹಗರಣದ ಪ್ರಮುಖ ಆರೋಪಿ ತೆಲಂಗಾಣದಲ್ಲಿ ಅವಿತಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ಮಾತನಾಡಿರುವ ತೆಲಂಗಾಣ ಪೊಲೀಸರು, 34 ವರ್ಷದ ಜಯಕುಮಾರ್​ನನ್ನು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಕೇರಳ ಪೊಲೀಸರ ಸೂಚನೆ ಮೇರೆಗೆ ಈ ಕ್ರಮ ನಡೆಸಲಾಗಿದೆ. ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಬ್ಯಾಂಕ್​ನ ಮಾಜಿ ಬ್ರಾಂಚ್​ ಮ್ಯಾನೇಜರ್​ ಇರುವ ಕುರಿತು ಮಾಹಿತಿ ಪಡೆಯಲಾಗಿತ್ತು. ಮಾಧಾ ಜಯಕುಮಾರ್​ ಕೇರಳದ ಕೊಝಿಕ್ಕೊಡ್​​ನ ಬ್ಯಾಂಕ್​ ಆಫ್​ ಮಹಾರಾಷ್ಟ್ರ ಬ್ರಾಂಚ್​ನಲ್ಲಿ 17 ಕೋಟಿ ಮೌಲ್ಯದ 26 ಕೆ.ಜಿ ಮೌಲ್ಯದ ಬಂಗಾರವನ್ನು ಬ್ಯಾಂಕ್​ನಲ್ಲಿ ಗಿರವಿ ಇರಿಸಲಾಗಿತ್ತು.

ಗ್ರಾಹಕರು ಇರಿಸಿದ್ದ ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರವನ್ನು ಬ್ಯಾಂಕ್​ನಲ್ಲಿ ಜಮೆಯಾಗಿಸುವ ಮೂಲಕ ಬ್ಯಾಂಕ್​ಗೆ ಜಯಕುಮಾರ್​ ವಂಚಿಸಿದ್ದರು. ತಮಿಳುನಾಡಿನಲ್ಲಿ ಮೆಟ್ಟುಪಾಳ್ಯಮ್​ ಪತ್ತಿ ಸ್ಟ್ರೀಟ್​ನ ನಿವಾಸಿಯಾಗಿರುವ ಜಯಕುಮಾರ್​ ಕೃತ್ಯವು ಬ್ರಾಂಚ್​ನ ಮರು ಮೌಲ್ಯಮಾಪನ ಪ್ರಕ್ರಿಯೆ ವೇಳೆ ಬಹಿರಂಗವಾಗಿತ್ತು. ಇತ್ತೀಚಿಗೆ ಬ್ಯಾಂಕ್​ಗೆ ನೇಮಕಗೊಂಡಿದ್ದ ಹೊಸ ಮ್ಯಾನೇಜರ್​ ವಿ ಇರ್ಷಾದ್​ ಅವರು ಈ ಕೃತ್ಯವನ್ನು ಬಯಲಿಗೆಳೆದು ವಡಕರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.

ಜಯಕುಮಾರ್​ ಕಳೆದ ಮೂರು ವರ್ಷಗಳಿಂದ ವಡಕರ ಬ್ರಾಂಚ್​ನ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಎರ್ನಾಕುಲಂನ ಪಲರಿವಟ್ಟಂ ಬ್ರಾಂಚ್​ಗೆ ವರ್ಗಾವಣೆಗೊಂಡಿದ್ದರು. 2024ರ ಜೂನ್​ 13ರಿಂದ ಜುಲೈ 6ರ ವರೆಗೆ ಗ್ರಾಹಕರು ಇರಿಸಲಾಗಿದ್ದ 42 ಖಾತೆಗಳಲ್ಲಿನ ಬಂಗಾರ ಕಣ್ಮರೆಯಾಗಿತ್ತು. ಈ ಪ್ರಕರಣ ಸಂಬಂದ ವಡಕರ ಸರ್ಕಲ್​ ಇನ್ಸ್​ಪೆಕ್ಟರ್​ ಸುನೀಲ್​ ಕುಮಾರ್​ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಐಪಿಸಿ ಸೆಕ್ಷನ್​ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ಶಾಖೆಯಿಂದ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಮ್ಯಾನೇಜರ್ ಪರಾರಿ!

Last Updated : Aug 19, 2024, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.