ಕೋಝಿಕ್ಕೊಡ್: ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಬ್ರಾಂಚ್ನಲ್ಲಿ ಚಿನ್ನ ವಂಚನೆ ಪ್ರಕರಣದ ಪ್ರಮುಖ ಆರೋಪಿಯನ್ನು ಸೆರೆಹಿಯುವಲ್ಲಿ ತೆಲಂಗಾಣ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಎಂ ಜಯಕುಮಾರ್ನನ್ನು ಕೇರಳ ಪೊಲೀಸರ ಸೂಚನೆ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದ. ಈತನ ಕುರಿತು ಇತರೆ ರಾಜ್ಯಗಳೊಂದಿಗೆ ಕೇರಳ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಹುಡುಕಾಟಕ್ಕೆ ಕೇರಳ ಪೊಲೀಸರು ನೆರವು ಕೋರಿದ್ದರು. ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ತೆಲಂಗಾಣದಲ್ಲಿ ಅವಿತಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಮಾತನಾಡಿರುವ ತೆಲಂಗಾಣ ಪೊಲೀಸರು, 34 ವರ್ಷದ ಜಯಕುಮಾರ್ನನ್ನು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಕೇರಳ ಪೊಲೀಸರ ಸೂಚನೆ ಮೇರೆಗೆ ಈ ಕ್ರಮ ನಡೆಸಲಾಗಿದೆ. ಕೇರಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಬ್ಯಾಂಕ್ನ ಮಾಜಿ ಬ್ರಾಂಚ್ ಮ್ಯಾನೇಜರ್ ಇರುವ ಕುರಿತು ಮಾಹಿತಿ ಪಡೆಯಲಾಗಿತ್ತು. ಮಾಧಾ ಜಯಕುಮಾರ್ ಕೇರಳದ ಕೊಝಿಕ್ಕೊಡ್ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ರಾಂಚ್ನಲ್ಲಿ 17 ಕೋಟಿ ಮೌಲ್ಯದ 26 ಕೆ.ಜಿ ಮೌಲ್ಯದ ಬಂಗಾರವನ್ನು ಬ್ಯಾಂಕ್ನಲ್ಲಿ ಗಿರವಿ ಇರಿಸಲಾಗಿತ್ತು.
ಗ್ರಾಹಕರು ಇರಿಸಿದ್ದ ಅಸಲಿ ಬಂಗಾರದ ಬದಲಾಗಿ ನಕಲಿ ಬಂಗಾರವನ್ನು ಬ್ಯಾಂಕ್ನಲ್ಲಿ ಜಮೆಯಾಗಿಸುವ ಮೂಲಕ ಬ್ಯಾಂಕ್ಗೆ ಜಯಕುಮಾರ್ ವಂಚಿಸಿದ್ದರು. ತಮಿಳುನಾಡಿನಲ್ಲಿ ಮೆಟ್ಟುಪಾಳ್ಯಮ್ ಪತ್ತಿ ಸ್ಟ್ರೀಟ್ನ ನಿವಾಸಿಯಾಗಿರುವ ಜಯಕುಮಾರ್ ಕೃತ್ಯವು ಬ್ರಾಂಚ್ನ ಮರು ಮೌಲ್ಯಮಾಪನ ಪ್ರಕ್ರಿಯೆ ವೇಳೆ ಬಹಿರಂಗವಾಗಿತ್ತು. ಇತ್ತೀಚಿಗೆ ಬ್ಯಾಂಕ್ಗೆ ನೇಮಕಗೊಂಡಿದ್ದ ಹೊಸ ಮ್ಯಾನೇಜರ್ ವಿ ಇರ್ಷಾದ್ ಅವರು ಈ ಕೃತ್ಯವನ್ನು ಬಯಲಿಗೆಳೆದು ವಡಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಜಯಕುಮಾರ್ ಕಳೆದ ಮೂರು ವರ್ಷಗಳಿಂದ ವಡಕರ ಬ್ರಾಂಚ್ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಅವರು ಎರ್ನಾಕುಲಂನ ಪಲರಿವಟ್ಟಂ ಬ್ರಾಂಚ್ಗೆ ವರ್ಗಾವಣೆಗೊಂಡಿದ್ದರು. 2024ರ ಜೂನ್ 13ರಿಂದ ಜುಲೈ 6ರ ವರೆಗೆ ಗ್ರಾಹಕರು ಇರಿಸಲಾಗಿದ್ದ 42 ಖಾತೆಗಳಲ್ಲಿನ ಬಂಗಾರ ಕಣ್ಮರೆಯಾಗಿತ್ತು. ಈ ಪ್ರಕರಣ ಸಂಬಂದ ವಡಕರ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬ್ಯಾಂಕ್ ಶಾಖೆಯಿಂದ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಮ್ಯಾನೇಜರ್ ಪರಾರಿ!