ಗಾಜಿಪುರ್: ಮಹಾಕುಂಭ ಮೇಳದಿಂದ ವಾಪಸ್ ಆಗುತ್ತಿದ್ದ ಯಾತ್ರಾರ್ಥಿಗಳಿದ್ದ ಪಿಕಪ್ ವಾಹನ ಅಪಘಾತಕ್ಕೆ ಒಳಗಾಗಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.
ಯಾತ್ರಾರ್ಥಿಗಳಿದ್ದ ಪಿಕಪ್ ವಾಹನದ ಆಕ್ಸಲ್ ಬ್ರೇಕ್ ಡೌನ್ ಆದ ಪರಿಣಾಮ ಈ ಅನಾಹುತ ಸಂಭವಿಸಿದೆ. ವಾರಾಣಸಿ - ಗಾಜಿಪುರ್ ಗೋರಖ್ಪುರ್ ಚತುಷ್ಪತದ ಸಮೀಪದ ಕುಶ್ಮಿಹಿ ಕಲಾನ್ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಉತ್ತರ ಪ್ರದೇಶ ನೋಂದಣಿಯ ವಾಹನಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಪ್ರಯಾಗ್ರಾಜ್ನ ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮುಗಿಸಿ ಮರಳುತ್ತಿದ್ದರು. ಈ ವೇಳೆ, ವಾಹನದ ಆಕ್ಸಲ್ ಕಟ್ಟಾಗಿದ್ದು, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಅದಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಕಪ್ ವಾಹನದ ಮೇಲೆ ವೇಗವಾಗಿ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ 8 ಮಂದಿ ಸ್ಥಳದಲ್ಲಿ ಸಾವನ್ನಪ್ಪಿದ್ದು, 12 ಜನರು ಗಾಯಗೊಂಡಿದ್ದಾರೆ.
ಗಾಜಿಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ಯಕ ಅಖೌರಿ ನೀಡಿದ ಮಾಹಿತಿ ಅನುಸಾರ, ಪಿಕಪ್ ವಾಹನದಲ್ಲಿ 24 ಪ್ರಯಾಣಿಕರಿದ್ದರು. ಇವರೆಲ್ಲರೂ ಗೋರಖ್ಪುರ್ ಮೂಲದವರಾಗಿದ್ದು, ಮಹಾಕುಂಭ ಯಾತ್ರೆ ಮುಗಿಸಿ ಮರಳುತ್ತಿದ್ದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗಾಯಗೊಂಡವರನ್ನು ಗಾಜಿಯಾಪುರ್ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಗಾಯಾಳುಗಳ ಎಲ್ಲ ವೈದ್ಯಕೀಯ ವೆಚ್ಚವನ್ನು ಭರಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಈ ಅಪಘಾತಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯ ಭರವಸೆ ನೀಡಿದ್ದಾರೆ.
ಮತ್ತೊಂದು ಅವಘಡ: ಗಾಜಿಯಾಬಾದ್ ಜಿಲ್ಲೆಯ ಥನ ತೀಲ್ ಮೊಡ್ ಪ್ರದೇಶದಲ್ಲಿ ದೆಹಲಿ - ವಾಜಿರಾಬಾದ್ ಮಾರ್ಗದ ಭೋಪುರ ಚೌಕ್ನಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ಅಗ್ನಿ ಅನಾಹುತಕ್ಕೆ ತುತ್ತಾಗಿದೆ. ಟ್ರಕ್ನಲ್ಲಿ ಸಿಲಿಂಡರ್ ಇದ್ದ ಕಾರಣ ಸರಣಿ ಸ್ಫೋಟ ಸಂಭವಿಸಿದೆ.
ಅಗ್ನಿ ಶಾಮಕದಳದ ಮುಖ್ಯ ಅಧಿಕಾರಿ ರಾಹುಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ತಕ್ಷಣಕ್ಕೆ ಅಗ್ನಿ ನಂದಿಸುವ ಕಾರ್ಯಕ್ಕೆ ಮುಂದಾಗಲಾಗಿದೆ ಆದರೆ, ಸಿಲಿಂಡರ್ಗಳು ನಿರಂತರವಾಗಿ ಸ್ಪೋಟಿಸುತ್ತಿರುವ ಹಿನ್ನೆಲೆ ಹಲವು ಕಿ.ಮೀ ವರೆಗೆ ಅಗ್ನಿ ಭೀಕರತೆಯನ್ನು ಕಾರಣಬಹುದಾಗಿದೆ. ಈ ಅನಾಹುತಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಸಾಗಿದೆ ಎಂದರು. (ಪಿಟಿಐ)
ಇದನ್ನೂ ಓದಿ: ರಾಮೇಶ್ವರಂನಲ್ಲಿ ಭಾರತದ ಮೊದಲ ಲಂಬವಾಗಿ ತೆರೆಯುವ ರೈಲ್ವೆ ಸೀ ಬ್ರಿಡ್ಜ್ ಸಿದ್ಧ: ಶೀಘ್ರದಲ್ಲೇ ಕಾರ್ಯಾರಂಭ
ಇದನ್ನೂ ಓದಿ: ಪಿಕಪ್ ವ್ಯಾನ್- ಕ್ಯಾಂಟರ್ ನಡುವೆ ಡಿಕ್ಕಿ; 9 ಮಂದಿ ಸಾವು