ETV Bharat / bharat

ದುಲಾರಿ ದೇವಿ ನೀಡಿದ ಬಿಹಾರದ ಮಧುಬನಿ ಕಲೆಯ ಸೀರೆಯುಟ್ಟ ಸೀತಾರಾಮನ್: 8 ಬಜೆಟ್‌ಗಳಲ್ಲಿ 8 ಸಾಂಪ್ರದಾಯಿಕ ಸೀರೆಗಳ ಸಿಂಗಾರ! - SITHARAMAN MADHUBANI ART SAREE

ಬಜೆಟ್​ ದಿನ ಕೈಮಗ್ಗದ ವಿಶೇಷ ಸೀರೆಯುಡುವ ನಿರ್ಮಲಾ ಸೀತಾರಾಮನ್​ ಈ ಬಾರಿ ಬಿಹಾರದ ಮಧುಬನಿ ಕಲೆ ಹೊಂದಿರುವ ಬಿಳಿ- ಗೋಲ್ಡನ್​ ಸೀರೆಯುಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಸಂಪ್ರದಾಯ ಮುಂದುವರಿಸಿದ್ದಾರೆ.

sitharaman-takes-tablet-in-red-pouch-to-present-paperless-budget
ನಿರ್ಮಲಾ ಸೀತಾರಾಮನ್​ (ಎಎನ್​ಐ)
author img

By ETV Bharat Karnataka Team

Published : Feb 1, 2025, 10:39 AM IST

ನವದೆಹಲಿ: 8ನೇ ಬಜೆಟ್​ ಮಂಡಿಸಲು ಸಿದ್ದವಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಮಧುಬನಿ ಕಲೆಯ ಸೀರೆ ಉಡುವ ಮೂಲಕ ಪದ್ಮ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.

2021ರಲ್ಲಿ ದುಲಾರಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್​ ಇನ್ಸಿಟಿಟ್ಯೂಟ್​​​ಗೆ ನಿರ್ಮಲಾ ಸೀತಾರಾಮನ್​ ಅವರು ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿ, ಬಿಹಾರದ ಮಧುಬನಿ ಕಲೆ ಕುರಿತು ಆತ್ಮೀಯ ಚರ್ಚೆ ನಡೆಸಿದ್ದರು. ಈ ವೇಳೆ, ದುಲಾರಿ ದೇವಿ ಅವರಿಗೆ ಬಜೆಟ್​ ದಿನದಂದು ಉಡುವಂತೆ ಕೇಳಿ ಮಧುಬನಿ ಕಲೆಯ ಸೀರೆಯನ್ನು ಉಡುಗೊರೆ ನೀಡಿದ್ದರು.

ಸಾಂಪ್ರದಾಯಿಕ ಚೀಲದಲ್ಲಿ ಟ್ಯಾಬ್ಲೆಟ್​​: ಈಗಾಗಲೇ ಪೇಪರ್​ಲೆಸ್​ ಮೊರೆ ಹೋಗಿರುವ ವಿತ್ತ ಸಚಿವರು ಡಿಜಿಟಲ್​ ಬಜೆಟ್​ ಪ್ರತಿ ಓದಲಿದ್ದಾರೆ. ಈ ಪ್ರತಿ ಹೊಂದಿದ ಟ್ಯಾಬ್ಲೆಟ್​ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಪೌಚ್​ (ಬ್ಯಾಗ್​)ನಲ್ಲಿ ಮುಚ್ಚಿ ಕೈಯಲ್ಲಿ ಹಿಡಿದಿದ್ದಾರೆ.

ಮೊದಲ ಬಾರಿಗೆ ಪೂರ್ಣ ಕಾಲಿಕ ಮಹಿಳಾ ಹಣಕಾಸು ಸಚಿವರಾದ ಬಳಿಕ 2019 ರಿಂದ ನಿರ್ಮಲಾ ಸೀತಾರಾಮನ್​ ವಸಾಹತು ಶಾಹಿಯ ಬ್ರಿಫ್​ಕೇಸ್ ಸಂಸ್ಕೃತಿ ಬಿಟ್ಟು, ಅದರ ಬದಲಾಗಿ ಸಾಂಪ್ರದಾಯಿಕ ಬಹಿ ಖಾತಾದ ಮೂಲಕ ಬಜೆಟ್​ ಪ್ರತಿ ಒಯ್ಯಲು ಆರಂಭಿಸಿದ್ದರು. ಇದೇ ಸಾಂಪ್ರದಾಯವನ್ನು ಹಲವು ಕಾಲ ಮುಂದುವರೆಸಿದ ಅವರು, ಸಾಂಕ್ರಾಮಿಕ ಪರಿಣಾಮದಿಂದಾಗಿ 2021ರಿಂದ ಪೇಪರ್​ ಬದಲಾಗಿ ಡಿಜಿಟಲ್​ ಟ್ಯಾಬ್ಲೆಟ್​ ಮೊರೆ ಹೋದರು. ಇದೆ ಸಂಪ್ರದಾಯವನ್ನು ಇಂದು ಕೂಡ ಅವರು ಮುಂದುವರೆಸಿದರು.

ಕೈಮಗ್ಗದ ಬಿಳಿ ಸೀರೆಯಲ್ಲಿ ಮೀನಿನ ಥೀಮ್​ ಎಂಬ್ರಾಯಡರಿ ಜೊತೆಗೆ ಬಂಗಾರದ ಅಂಚು ಮಧುಬನಿ ಸೀರೆ ಮೆರಗನ್ನು ಹೆಚ್ಚಿಸಿದೆ. ರಾಷ್ಟ್ರಪತಿಗಳ ಭೇಟಿಗೂ ಮುನ್ನ ಅವರು ನಾರ್ಥ್​​ ಬ್ಲಾಕ್​ ಕಚೇರಿಯಲ್ಲಿ ಸಂಪ್ರದಾಯದಂತೆ ಬಜೆಟ್​ ಪ್ರತಿ ಚೀಲ ಹಿಡಿದು ಪೋಸ್​ ನೀಡಿದ್ದರು. ಈ ವೇಳೆ, ಅವರು ಜೊತೆ ಹಲವು ಅಧಿಕಾರಿಗಳಿದ್ದರು.

ಬಂಗಾರದ ರಾಷ್ಟ್ರೀಯ ಲಾಂಛನ: ಬಂಗಾರದ ರಾಷ್ಟ್ರೀಯ ಲಾಂಛನ ಒಳಗೊಂಡಿರುವ ಕೆಂಪು ಬ್ಯಾಗ್​ನಲ್ಲಿ ಟ್ಯಾಬ್ಲೆಟ್ ಹಿಡಿದು ಹೊರಟಿರುವ ನಿರ್ಮಲಾ ಸೀತಾರಾಮನ್​ ಮೊದಲಿಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಳಿಕ ಅವರು ಸಂಸತ್​​ ಪ್ರವೇಶಿಸಿದ್ದಾರೆ.

2014ರಿಂದ ಅಂದರೆ ಮೂರು ಅವಧಿಗಳಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ 14ನೇ ಬಜೆಟ್​ ಇದಾಗಿದೆ. ನಿರ್ಮಲಾ ಸೀತಾರಾಮನ್​ ಅವರ ಎಂಟನೇ ಬಜೆಟ್​ ಇದಾಗಿದೆ. 2019ರಲ್ಲಿ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಹಣಕಾಸು ಸಚಿವರಾಗಿ ನೇಮಕಗೊಂಡರು. 2019ರ ಜುಲೈ 5ರಂದು ಮೊದಲ ಬಾರಿಗೆ ಅವರು ಮಧ್ಯಂತರ ಬಜೆಟ್​ ಮಂಡಿಸಿದರು.

ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ದೇಶದ ಕಣ್ಣು: ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿರುವ ಸೀತಾರಾಮನ್

ಇದನ್ನೂ ಓದಿ: ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ?

ನವದೆಹಲಿ: 8ನೇ ಬಜೆಟ್​ ಮಂಡಿಸಲು ಸಿದ್ದವಾಗಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಅವರು ಮಧುಬನಿ ಕಲೆಯ ಸೀರೆ ಉಡುವ ಮೂಲಕ ಪದ್ಮ ಪ್ರಶಸ್ತಿ ಪುರಸ್ಕೃತರಾದ ದುಲಾರಿ ದೇವಿ ಅವರಿಗೆ ಗೌರವ ಸಮರ್ಪಣೆ ಮಾಡಿದ್ದಾರೆ.

2021ರಲ್ಲಿ ದುಲಾರಿ ದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿತ್ತು. ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್​ ಇನ್ಸಿಟಿಟ್ಯೂಟ್​​​ಗೆ ನಿರ್ಮಲಾ ಸೀತಾರಾಮನ್​ ಅವರು ಭೇಟಿ ನೀಡಿದಾಗ ದುಲಾರಿ ದೇವಿ ಅವರನ್ನು ಭೇಟಿಯಾಗಿ, ಬಿಹಾರದ ಮಧುಬನಿ ಕಲೆ ಕುರಿತು ಆತ್ಮೀಯ ಚರ್ಚೆ ನಡೆಸಿದ್ದರು. ಈ ವೇಳೆ, ದುಲಾರಿ ದೇವಿ ಅವರಿಗೆ ಬಜೆಟ್​ ದಿನದಂದು ಉಡುವಂತೆ ಕೇಳಿ ಮಧುಬನಿ ಕಲೆಯ ಸೀರೆಯನ್ನು ಉಡುಗೊರೆ ನೀಡಿದ್ದರು.

ಸಾಂಪ್ರದಾಯಿಕ ಚೀಲದಲ್ಲಿ ಟ್ಯಾಬ್ಲೆಟ್​​: ಈಗಾಗಲೇ ಪೇಪರ್​ಲೆಸ್​ ಮೊರೆ ಹೋಗಿರುವ ವಿತ್ತ ಸಚಿವರು ಡಿಜಿಟಲ್​ ಬಜೆಟ್​ ಪ್ರತಿ ಓದಲಿದ್ದಾರೆ. ಈ ಪ್ರತಿ ಹೊಂದಿದ ಟ್ಯಾಬ್ಲೆಟ್​ ಅನ್ನು ಸಾಂಪ್ರದಾಯಿಕವಾಗಿ ಬಹು ಖಾತಾ ಶೈಲಿಯ ಪೌಚ್​ (ಬ್ಯಾಗ್​)ನಲ್ಲಿ ಮುಚ್ಚಿ ಕೈಯಲ್ಲಿ ಹಿಡಿದಿದ್ದಾರೆ.

ಮೊದಲ ಬಾರಿಗೆ ಪೂರ್ಣ ಕಾಲಿಕ ಮಹಿಳಾ ಹಣಕಾಸು ಸಚಿವರಾದ ಬಳಿಕ 2019 ರಿಂದ ನಿರ್ಮಲಾ ಸೀತಾರಾಮನ್​ ವಸಾಹತು ಶಾಹಿಯ ಬ್ರಿಫ್​ಕೇಸ್ ಸಂಸ್ಕೃತಿ ಬಿಟ್ಟು, ಅದರ ಬದಲಾಗಿ ಸಾಂಪ್ರದಾಯಿಕ ಬಹಿ ಖಾತಾದ ಮೂಲಕ ಬಜೆಟ್​ ಪ್ರತಿ ಒಯ್ಯಲು ಆರಂಭಿಸಿದ್ದರು. ಇದೇ ಸಾಂಪ್ರದಾಯವನ್ನು ಹಲವು ಕಾಲ ಮುಂದುವರೆಸಿದ ಅವರು, ಸಾಂಕ್ರಾಮಿಕ ಪರಿಣಾಮದಿಂದಾಗಿ 2021ರಿಂದ ಪೇಪರ್​ ಬದಲಾಗಿ ಡಿಜಿಟಲ್​ ಟ್ಯಾಬ್ಲೆಟ್​ ಮೊರೆ ಹೋದರು. ಇದೆ ಸಂಪ್ರದಾಯವನ್ನು ಇಂದು ಕೂಡ ಅವರು ಮುಂದುವರೆಸಿದರು.

ಕೈಮಗ್ಗದ ಬಿಳಿ ಸೀರೆಯಲ್ಲಿ ಮೀನಿನ ಥೀಮ್​ ಎಂಬ್ರಾಯಡರಿ ಜೊತೆಗೆ ಬಂಗಾರದ ಅಂಚು ಮಧುಬನಿ ಸೀರೆ ಮೆರಗನ್ನು ಹೆಚ್ಚಿಸಿದೆ. ರಾಷ್ಟ್ರಪತಿಗಳ ಭೇಟಿಗೂ ಮುನ್ನ ಅವರು ನಾರ್ಥ್​​ ಬ್ಲಾಕ್​ ಕಚೇರಿಯಲ್ಲಿ ಸಂಪ್ರದಾಯದಂತೆ ಬಜೆಟ್​ ಪ್ರತಿ ಚೀಲ ಹಿಡಿದು ಪೋಸ್​ ನೀಡಿದ್ದರು. ಈ ವೇಳೆ, ಅವರು ಜೊತೆ ಹಲವು ಅಧಿಕಾರಿಗಳಿದ್ದರು.

ಬಂಗಾರದ ರಾಷ್ಟ್ರೀಯ ಲಾಂಛನ: ಬಂಗಾರದ ರಾಷ್ಟ್ರೀಯ ಲಾಂಛನ ಒಳಗೊಂಡಿರುವ ಕೆಂಪು ಬ್ಯಾಗ್​ನಲ್ಲಿ ಟ್ಯಾಬ್ಲೆಟ್ ಹಿಡಿದು ಹೊರಟಿರುವ ನಿರ್ಮಲಾ ಸೀತಾರಾಮನ್​ ಮೊದಲಿಗೆ ರಾಷ್ಟ್ರಪತಿ ಭವನದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಳಿಕ ಅವರು ಸಂಸತ್​​ ಪ್ರವೇಶಿಸಿದ್ದಾರೆ.

2014ರಿಂದ ಅಂದರೆ ಮೂರು ಅವಧಿಗಳಿಂದ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ 14ನೇ ಬಜೆಟ್​ ಇದಾಗಿದೆ. ನಿರ್ಮಲಾ ಸೀತಾರಾಮನ್​ ಅವರ ಎಂಟನೇ ಬಜೆಟ್​ ಇದಾಗಿದೆ. 2019ರಲ್ಲಿ ಎರಡನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಹಣಕಾಸು ಸಚಿವರಾಗಿ ನೇಮಕಗೊಂಡರು. 2019ರ ಜುಲೈ 5ರಂದು ಮೊದಲ ಬಾರಿಗೆ ಅವರು ಮಧ್ಯಂತರ ಬಜೆಟ್​ ಮಂಡಿಸಿದರು.

ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ದೇಶದ ಕಣ್ಣು: ಟ್ಯಾಬ್ ಮೂಲಕ ಬಜೆಟ್ ಮಂಡಿಸಲಿರುವ ಸೀತಾರಾಮನ್

ಇದನ್ನೂ ಓದಿ: ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.