ETV Bharat / bharat

18ನೇ ಲೋಕಸಭಾ ಅಧಿವೇಶನ: ಇಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ - 18th Lok Sabha Session Day 4

author img

By ETV Bharat Karnataka Team

Published : Jun 27, 2024, 10:50 AM IST

ಸಂಸತ್ತಿನ ಎರಡೂ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ.

18ನೇ ಲೋಕಸಭಾ ಅಧಿವೇಶನದ 4ನೇ ದಿನ
18ನೇ ಲೋಕಸಭಾ ಅಧಿವೇಶನದ 4ನೇ ದಿನ (ETV Bharat)

ನವದೆಹಲಿ: 18ನೇ ಲೋಕಸಭೆಯ ಅಧಿವೇಶನದ 4ನೇ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ನಂತರದ ಮುರ್ಮು ಅವರ ಮೊದಲ ರಾಷ್ಟ್ರಪತಿ ಭಾಷಣವಾಗಲಿದೆ.

ಅವರ ಭಾಷಣದ ನಂತರ, ಸಂಸದರ ಚರ್ಚೆಗಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಧನ್ಯವಾದ ಮಂಡಿಸಲಾಗುತ್ತದೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್​ 24ರಿಂದ ಆರಂಭವಾಗಿದೆ. ಗುರುವಾರದಿಂದ(ಇಂದಿನಿಂದ) ರಾಜ್ಯಸಭಾ ಅಧಿವೇಶನ ಆರಂಭವಾಗಲಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ ಬಳಿಕ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಸತತ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್​ ಆಗಿ ಆಯ್ಕೆಯಾದರು. ಬಿರ್ಲಾ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾದ ಹಾಗೂ ಎಂಟು ಅವಧಿಯ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಧ್ವನಿ ಮತದ ಮೂಲಕ ಸೋಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷ ಪೀಠದತ್ತ ಕರೆದುಕೊಂಡು ಹೋದರು. ಇದೇ ವೇಳೆ ರಾಹುಲ್​ - ಮೋದಿ ಹಸ್ತಲಾಘವ ಮಾಡಿಕೊಂಡಿದ್ದು ಗಮನ ಸೆಳೆಯಿತು.

ಆದಾಗ್ಯೂ, ಸ್ವಲ್ಪ ಸಮಯದ ಬಳಿಕ ಬಿರ್ಲಾ ಅವರ ಹೇಳಿಕೆಯಿಂದ ಸದನದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದವು. ಇಂದಿರಾ ಗಾಂಧಿ ಅವರು 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಖಂಡನಾ ನಿರ್ಣಯ ಮಂಡಿಸಿದರು. ಇದು ಗೊಂದಲ ಮತ್ತು ಅಧಿವೇಶನ ಹಠಾತ್ ಮುಂದೂಡಿಕೆಗೆ ಕಾರಣವಾಯಿತು.

ಇದೇ ವೇಳೆ, ಇಂಡಿಯಾ ಒಕ್ಕೂಟವು ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಮನವಿ ಮಾಡಿದೆ. ನಿನ್ನೆ ಸ್ಪೀಕರ್​​​​​​ ಅವರನ್ನು ಅಭಿನಂದಿಸಿ ಮಾತನಾಡಿದ್ದ ರಾಹುಲ್​ ಗಾಂಧಿ ಇಂಡಿಯಾ ಒಕ್ಕೂಟ ಭಾರತ ದೇಶದ ಎಲ್ಲರ ಧ್ವನಿ ಆಗಿ ಕೆಲಸ ಮಾಡಲಿದೆ. ದೇಶದ ಜನತೆಯ ಧ್ವನಿ ಬಗ್ಗೆ ಮಾತನಾಡಲು ನೀವು ನಮಗೆ ಮುಕ್ತ ಅವಕಾಶ ನೀಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಇನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ರಾಹುಲ್ ಗಾಂಧಿ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಂಸತ್​​ನಲ್ಲಿ ದಂಪತಿ ಹವಾ: ಎರಡನೇ ಬಾರಿಗೆ ಸದನದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಈ ಸಂಸದ ಜೋಡಿ! - BIHAR MP COUPLE IN PARLIAMENT

ನವದೆಹಲಿ: 18ನೇ ಲೋಕಸಭೆಯ ಅಧಿವೇಶನದ 4ನೇ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನಗಳ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ಕೇಂದ್ರದಲ್ಲಿ 3ನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ನಂತರದ ಮುರ್ಮು ಅವರ ಮೊದಲ ರಾಷ್ಟ್ರಪತಿ ಭಾಷಣವಾಗಲಿದೆ.

ಅವರ ಭಾಷಣದ ನಂತರ, ಸಂಸದರ ಚರ್ಚೆಗಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಧನ್ಯವಾದ ಮಂಡಿಸಲಾಗುತ್ತದೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್​ 24ರಿಂದ ಆರಂಭವಾಗಿದೆ. ಗುರುವಾರದಿಂದ(ಇಂದಿನಿಂದ) ರಾಜ್ಯಸಭಾ ಅಧಿವೇಶನ ಆರಂಭವಾಗಲಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಪ್ರಸ್ತಾವನೆಯನ್ನು ಮಂಡಿಸಿದ ಬಳಿಕ ಎನ್‌ಡಿಎ ಅಭ್ಯರ್ಥಿ ಓಂ ಬಿರ್ಲಾ ಸತತ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್​ ಆಗಿ ಆಯ್ಕೆಯಾದರು. ಬಿರ್ಲಾ ಅವರು ಪ್ರತಿಪಕ್ಷಗಳ ಅಭ್ಯರ್ಥಿಯಾದ ಹಾಗೂ ಎಂಟು ಅವಧಿಯ ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಧ್ವನಿ ಮತದ ಮೂಲಕ ಸೋಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷ ಪೀಠದತ್ತ ಕರೆದುಕೊಂಡು ಹೋದರು. ಇದೇ ವೇಳೆ ರಾಹುಲ್​ - ಮೋದಿ ಹಸ್ತಲಾಘವ ಮಾಡಿಕೊಂಡಿದ್ದು ಗಮನ ಸೆಳೆಯಿತು.

ಆದಾಗ್ಯೂ, ಸ್ವಲ್ಪ ಸಮಯದ ಬಳಿಕ ಬಿರ್ಲಾ ಅವರ ಹೇಳಿಕೆಯಿಂದ ಸದನದಲ್ಲಿ ಬಿಸಿಬಿಸಿ ಚರ್ಚೆಗಳು ನಡೆದವು. ಇಂದಿರಾ ಗಾಂಧಿ ಅವರು 1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಖಂಡಿಸಿ ಖಂಡನಾ ನಿರ್ಣಯ ಮಂಡಿಸಿದರು. ಇದು ಗೊಂದಲ ಮತ್ತು ಅಧಿವೇಶನ ಹಠಾತ್ ಮುಂದೂಡಿಕೆಗೆ ಕಾರಣವಾಯಿತು.

ಇದೇ ವೇಳೆ, ಇಂಡಿಯಾ ಒಕ್ಕೂಟವು ಪ್ರತಿಪಕ್ಷಗಳಿಗೆ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಮನವಿ ಮಾಡಿದೆ. ನಿನ್ನೆ ಸ್ಪೀಕರ್​​​​​​ ಅವರನ್ನು ಅಭಿನಂದಿಸಿ ಮಾತನಾಡಿದ್ದ ರಾಹುಲ್​ ಗಾಂಧಿ ಇಂಡಿಯಾ ಒಕ್ಕೂಟ ಭಾರತ ದೇಶದ ಎಲ್ಲರ ಧ್ವನಿ ಆಗಿ ಕೆಲಸ ಮಾಡಲಿದೆ. ದೇಶದ ಜನತೆಯ ಧ್ವನಿ ಬಗ್ಗೆ ಮಾತನಾಡಲು ನೀವು ನಮಗೆ ಮುಕ್ತ ಅವಕಾಶ ನೀಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಇನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ರಾಹುಲ್ ಗಾಂಧಿ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಂಸತ್​​ನಲ್ಲಿ ದಂಪತಿ ಹವಾ: ಎರಡನೇ ಬಾರಿಗೆ ಸದನದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಈ ಸಂಸದ ಜೋಡಿ! - BIHAR MP COUPLE IN PARLIAMENT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.