ತುಂಗಭದ್ರಾ ಭೋರ್ಗರೆತ: ನೀರು 10 ಮೀಟರ್​ಗಿಂತ ಹೆಚ್ಚಾದ್ರೆ 63 ಹಳ್ಳಿಗಳಿಗೆ ಸಂಕಷ್ಟ.. ವಾಕ್​ ಥ್ರೂ

By

Published : Jul 14, 2022, 12:28 PM IST

Updated : Jul 14, 2022, 1:00 PM IST

thumbnail
ದಾವಣಗೆರೆ : ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾಭದ್ರಾ ನದಿ ಮೈತುಂಬಿ ಹರಿಯುತ್ತಿದೆ. ಈ ನದಿಯ ತಟದಲ್ಲಿರುವ ಹೊನ್ನಾಳಿ ಹಾಗೂ ಹರಿಹರ ತಾಲೂಕಿನ ಗ್ರಾಮಗಳು ಹಾಗೂ ಜಮೀನು ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗಿದೆ. ಎರಡು ತಾಲೂಕುಗಳ ಪೈಕಿ 65ಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆಯಾಗಲಿದ್ದು, ಸಾವಿರಾರು ಹೆಕ್ಟೇರ್ ಜಮೀನು ಪ್ರದೇಶಗಳು ಮುಳುಗಡೆಯಾಗಲಿವೆ. ಈಗಾಗಲೇ 9.5 ಮೀಟರ್​ನಷ್ಟು ನೀರು ಹರಿಯುತ್ತಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಇದರಿಂದ ಮತ್ತಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಹೊನ್ನಾಳಿ, ಹರಿಹರ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದು, ಯಾರು ಕೂಡ ನದಿ ಪಾತ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಈಟಿ ಭಾರತ್​ ಪ್ರತಿನಿಧಿ ನೀಡಿರುವ ವಾಕ್​ ಥ್ರೂ ಇಲ್ಲಿದೆ..
Last Updated : Jul 14, 2022, 1:00 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.