ಹೈದರಾಬಾದ್ ಕರ್ನಾಟಕದ ಮರು ನಾಮಕರಣ ಸ್ವಾಗತಾರ್ಹ... ಆದರೆ ಅದರ ಅಭಿವೃದ್ಧಿ? - ರಾಜ್ಯಸರ್ಕಾರ
🎬 Watch Now: Feature Video
ರಾಯಚೂರು ಸೇರಿದಂತೆ ಹೈದರಾಬಾದ್ ಕರ್ನಾಟಕಕ್ಕೆ ಸೇರಿದ 6 ಜಿಲ್ಲೆಗಳನ್ನೂ ಈವರೆಗೂ ಹೈದರಾಬಾದ್ ಕರ್ನಾಟಕವೆಂದೇ ಗುರುತಿಸಲಾಗುತ್ತಿತ್ತು. ಆದ್ರೆ, ಇತ್ತೀಚೆಗೆ ರಾಜ್ಯ ಸರ್ಕಾರ ಇದರ ಮರುನಾಮಕರಣ ಮಾಡಿ ಕಲ್ಯಾಣ ಕರ್ನಾಟಕವೆಂಬ ಹೆಸರಿಟ್ಟಿದೆ. ನಿಜಾಮರಿಂದ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ದಕ್ಕಿಸಿಕೊಂಡ ಈ ಭಾಗ ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಹಿಂದೆಯೇ ಉಳಿದಿದೆ. ಈ ಭಾಗದ ಮರುನಾಮಕರಣ ಐತಿಹಾಸಿಕ ನಿರ್ಧಾರವೇ ಸರಿ. ಆದರೆ, ಹೆಸರು ಬದಲಾಯಿಸಿದರೆ ಸಾಲದು. ಇನ್ನಾದರೂ ಈ ಭಾಗದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸಬೇಕೆಂದು ಜನೆತೆ ಒತ್ತಾಯಿಸುತಿದ್ದಾರೆ.