ಲಕ್ಷ್ಮಿ ಪುತ್ರನಿಗೆ ಶ್ರೀ ದತ್ತಾತ್ರೇಯ ಎಂದು ಹೆಸರಿಟ್ಟ ರಾಜಮಾತೆ
ಮೈಸೂರು: ಗಂಡು ಮರಿಗೆ ಜನ್ಮ ನೀಡಿದ ಲಕ್ಷ್ಮಿ ಪುತ್ರನಿಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಶ್ರೀ ದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ. ರಾಂಪುರ ಆನೆ ಶಿಬಿರದಿಂದ ದಸರಾ ಮಹೋತ್ಸವಕ್ಕೆ ಬಂದಿದ್ದ ಲಕ್ಷ್ಮಿ ಆನೆ, ನಿನ್ನೆಯಷ್ಟೆ ಗಂಡು ಮರಿಗೆ ಜನ್ಮ ನೀಡಿದೆ. ಅರಮನೆ ಆವರಣದಲ್ಲಿ ಮರಿ ಹಾಕಿರುವುದರಿಂದ ರಾಜಮಾತೆ ಅವರು ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೇ ಮರಿ ಆನೆಗೆ ನಾನೇ ಹೆಸರಿಡುತ್ತೇನೆ ಎಂದು ಹೇಳಿದ್ದರು. ಅದರಂತೆ ಮರಿ ಆನೆಗೆ ಹೆಸರಿಟ್ಟಿದ್ದಾರೆ.