ವಿಕ್ರಾಂತ್ ರೋಣ ಚಿತ್ರ ನಾಳೆ ಬಿಡುಗಡೆ: ಅಭಿಮಾನಿಗಳಿಂದ ಕುರಿ ಕಡಿದು ಸಂಭ್ರಮ - ವಿಕ್ರಾಂತ್ ರೋಣ ಚಿತ್ರ ನಾಳೆ ಬಿಡುಗಡೆ ಪ್ರಯುಕ್ತ ಅಭಿಮಾನಿಗಳಿಂದ ಕುರಿ ಕಡಿದು ಸಂಭ್ರಮ
🎬 Watch Now: Feature Video

ಚಿತ್ರದುರ್ಗ: ನಾಳೆ ದೇಶಾದ್ಯಂತ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ತೆರ ಕಾಣಲಿದೆ. ಈ ಹಿನ್ನೆಲೆಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಅಭಿಮಾನಿಗಳು ಕಿಚ್ಚನ ಬ್ಯಾನರ್ ಮುಂದೆ ಕುರಿ ಕಡಿದು ರಕ್ತಾಭಿಷೇಕ ಮಾಡಿದ್ದಾರೆ. ಜಿಲ್ಲೆಯ ಜಾನುಕೊಂಡ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್ ಬ್ಯಾನರ್ಗೆ ಕುರಿ ಕಡಿಯುವ ಮೂಲಕ ಅಭಿಮಾನ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಕಿಚ್ಚನ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿ ನೆಚ್ಚಿನ ನಟನ ಸಿನಿಮಾ ಸಕ್ಸಸ್ ಕಾಣಲಿ ಎಂದು ಹಾರೈಸಿದ್ದಾರೆ.