ಸನ್ಮಾನ ಮಾಡಲು ಬಂದು ಸನ್ಮಾನ ಮಾಡಿಸಿಕೊಂಡ ಅಕ್ಷರ ಸಂತ ಹಾಜಬ್ಬ
ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಇತ್ತೀಚೆಗೆ ಮಾಜಿ ಸಚಿವ ಯುಟಿ ಖಾದರ್ಗೆ ಸನ್ಮಾನ ಮಾಡಲೆಂದು ಹಣ್ಣು ಹಂಪಲು ಜೊತೆ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಹಾಜಬ್ಬರಿಂದ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಖಾದರ್, ಹಾಜಬ್ಬ ತಂದ ಶಾಲು, ಹಾರದಿಂದ ಅವರಿಗೆ ಸನ್ಮಾನ ಮಾಡಿದ್ರು. ಈ ವೇಳೆ ಪದ್ಮಶ್ರೀ ಪ್ರಶಸ್ತಿ ಜೊತೆ ಸಿಕ್ಕಿದ 1ಲಕ್ಷ ರೂಪಾಯಿ ಮೊತ್ತದ ಚೆಕ್ನ್ನು ಖಾದರ್ ಅವರಿಗೆ ತೋರಿಸಿದ ಹಾಜಬ್ಬ, ಅದರಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿ ಪಡಿಸಿಕೊಂಡರು. ಪ್ರಶಸ್ತಿಯಿಂದ ಬಂದ ಹಣವನ್ನು ಈ ಹಿಂದಿನಂತೆಯೇ ಶಾಲೆಯ ಅಭಿವೃದ್ದಿಗೆ ನೀಡಲು ಹಾಜಬ್ಬ ತೀರ್ಮಾನಿಸಿದ್ದಾರೆ.
TAGGED: