thumbnail

By

Published : Oct 20, 2020, 8:07 PM IST

ETV Bharat / Videos

ಧಾರಾಕಾರ ಮಳೆಗೆ ತಾತ್ಕಾಲಿಕ ಸೇತುವೆ ಬಂದ್: ರಸ್ತೆ ಸಂಚಾರ ಸ್ಥಗಿತ

ಧಾರವಾಡ : ಭಾರಿ ಮಳೆಗೆ ತಾಲೂಕಿನ ಹಾರೋಬೆಳವಡಿ ಗ್ರಾಮದ ಪಕ್ಕದಲ್ಲಿದ್ದ ತಾತ್ಕಾಲಿಕ ಸೇತುವೆ ಮೇಲೆ ನೀರು ತುಂಬಿಕೊಂಡಿದೆ. ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕಳೆದ ವರ್ಷ ಆಗಸ್ಟ್​​​​ನಲ್ಲಿ ಸುರಿದ ಮಳೆಯ ಪ್ರವಾಹಕ್ಕೆ ಸೇತುವೆ ಹಾನಿಯಾಗಿತ್ತು. ಸೇತುವೆ ದುರಸ್ತಿ ಕಾರ್ಯ ನಡೆದಿದ್ದರಿಂದ ಅದರ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು. ಈಗ ಅದರ ಮೇಲಿಂದ ಹಳ್ಳದ ನೀರು ಹರಿದು ಹೋಗುತ್ತಿದೆ. ಪರಿಣಾಮ ಧಾರವಾಡ - ಸವದತ್ತಿ ರಸ್ತೆ ಸಂಚಾರ ಬಂದ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.