thumbnail

ಮಳೆರಾಯನ ಆರ್ಭಟ... ರುದ್ರಾಕ್ಷಿ ಮಠದ ಗೋಡೆ ಕುಸಿತ!

By

Published : Aug 11, 2019, 8:18 AM IST

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ಆರ್ಭಟಕ್ಕೆ ಜಿಲ್ಲೆಯಲ್ಲಿರುವ ರುದ್ರಾಕ್ಷಿ ಮಠದ ಗೋಡೆಗಳು ಸಂಪೂರ್ಣವಾಗಿ ಕುಸಿದಿವೆ. ಮಂಗಳವಾರಪೇಟೆಯಲ್ಲಿರುವ ರುದ್ರಾಕ್ಷಿ ಮಠದ ಗೋಡೆ ಕುಸಿದ ಪರಿಣಾಮ ಬೈಕ್​ವೊಂದು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮಳೆಯಿಂದ ಗೋಡೆಗಳೆಲ್ಲ ಶಿಥಿಲಗೊಂಡು ಕುಸಿದಿವೆ ಎನ್ನಲಾಗುತ್ತಿದೆ. ಇನ್ನು ಸ್ಥಳಕ್ಕೆ ಮಠದ ಸ್ವಾಮಿಗಳು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.