ರಾಯಚೂರು: ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಹೋಳಿಗೆ ಊಟ - Quarantine Center
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7304469-822-7304469-1590142890040.jpg)
ರಾಯಚೂರು: ಇಂದು ಅಮವಾಸ್ಯೆಯಾಗಿದ್ದರಿಂದ ಜಿಲ್ಲೆಯ ಕೆಲವೊಂದು ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಹೋಳಿಗೆ ಊಟವನ್ನ ನೀಡಲಾಯಿತು. ದೇವದುರ್ಗ ತಾಲೂಕಿನ ಬಿ. ಗಣೇಕಲ್ ಗ್ರಾಮದ ಸರ್ಕಾರಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಸಾಂಸ್ಥಿಕ ಕೇಂದ್ರದಲ್ಲಿರುವವರಿಗೆ ಹೋಳಿಗೆ ಊಟ ನೀಡಲಾಯಿತು. ಇಂದು ಅಮವಾಸ್ಯೆ ಆಗಿರುವುದರಿಂದ 48 ಜನ ಕ್ವಾರಂಟೈನಿಗಳಿಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಹೋಳಿಗೆ ಊಟ ಬಡಿಸಲಾಯಿತು.