ಲಾಠಿ ಸೈಡಿಗಿಟ್ಟು ವಾಹನ ಸವಾರರಿಗೆ ತಿಲಕ ಹಚ್ಚಿ ಬುದ್ಧಿ ಹೇಳಿದ ದಾವಣಗೆರೆ ಪೊಲೀಸರು
![ETV Thumbnail thumbnail](https://etvbharatimages.akamaized.net/etvbharat/prod-images/320-214-6615903-thumbnail-3x2-surya.jpg)
ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಬೆಳ್ಳಂಬೆಳಗ್ಗೆ ವಾಹನ ಸವಾರರ ಹಣೆಗೆ ಕುಂಕುಮ ಇಟ್ಟು, ಆರತಿ ಬೆಳಗುವ ಮೂಲಕ ರಸ್ತೆಗಿಳಿಯಬೇಡಿ ಎಂದು ಟ್ರಾಫಿಕ್ ಮನವಿ ಮಾಡಿದರು. ಮನೆಯಲ್ಲಿರಿ, ಕೊರೊನಾ ಓಡಿಸಿರಿ ಎಂಬ ಸಲಹೆ ಜೊತೆಗೆ ಪಾಸ್ ಇಲ್ಲದಿದ್ದರೆ, ಅವಶ್ಯಕತೆ ಇಲ್ಲದಿದ್ದರೆ ಮನೆಯಿಂದ ಹೊರಬರಬೇಡಿ. ಈ ಸೋಂಕು ತಡೆಗೆ ಸಹಕರಿಸಿ ಎಂದು ಕೈಮುಗಿದು ಮನವಿ ಮಾಡಿಕೊಂಡರು.