ಊರುಗಳತ್ತ ತೆರಳಲು ಹೆಸರು ನೋಂದಾಯಿಸಿಕೊಳ್ಳುತ್ತಿರುವ ವಲಸೆ ಕಾರ್ಮಿಕರು - ವಲಸೆ ಕಾರ್ಮಿಕರು ಸಮಸ್ಯೆ
🎬 Watch Now: Feature Video
ಲಾಕ್ ಡೌನ್ ನಂತರ ತುಮಕೂರು ಜಿಲ್ಲೆಯಲ್ಲಿ ಸಿಲುಕಿರುವ ಹೊರರಾಜ್ಯದ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸುತ್ತಿದೆ. ಹೀಗಾಗಿ ಅವರುಗಳ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ತಾಲೂಕು ಕೇಂದ್ರಗಳ ಜೊತೆಗೆ ನಗರದಲ್ಲಿ ಮೂರು ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಯನ್ನು ಪಡೆದಿರುವ ಜಿಲ್ಲಾಡಳಿತ, ಪೂರಕ ವ್ಯವಸ್ಥೆ ಕಲ್ಪಿಸಿದ ನಂತರ ಮೊಬೈಲ್ಗೆ ಸಂದೇಶ ರವಾನಿಸುವ ತಯಾರಿ ಮಾಡಿಕೊಂಡಿದೆ. ಜಿಲ್ಲಾಡಳಿತದ ಮಾಹಿತಿಗಾಗಿ ಹೊರರಾಜ್ಯದ ಕಾರ್ಮಿಕರು ಕಾದು ಕುಳಿತಿದ್ದಾರೆ.