thumbnail

By

Published : Nov 19, 2020, 5:43 PM IST

ETV Bharat / Videos

ಸಿಎಂ ತವರು ಕ್ಷೇತ್ರದಲ್ಲಿ ನಿಲ್ಲದ ಬಯಲು ಬಹಿರ್ದೆಸೆ

ಶಿವಮೊಗ್ಗ: ಇಂದು ವಿಶ್ವ ಶೌಚಾಲಯ ದಿನ. ಈ ಹಿನ್ನೆಲೆಯಲ್ಲಿ ಈಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದಾಗ ಸರ್ಕಾರದ ಎಲ್ಲ ಪ್ರಯತ್ನವನ್ನು ಜನರೆ ವಿಫಲ ಮಾಡುತ್ತಿರುವುದು ತಿಳಿದು ಬಂದಿದೆ. ಶಿವಮೊಗ್ಗದ ರಾಜೀವ ಗಾಂಧಿ ಬಡಾವಣೆ ಕೊಳಚೆ ಪ್ರದೇಶವಾಗಿದ್ದು, ಇಲ್ಲಿನ ನಿವಾಸಿಗಳಿಗೆ ಮಹಾನಗರ ಪಾಲಿಕೆಯಿಂದ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೂ ಇಲ್ಲಿನ ಕೆಲ ನಿವಾಸಿಗಳು ರಸ್ತೆ ಪಕ್ಕದಲ್ಲಿಯೇ ಬರ್ಹಿದೆಸೆಗೆ ತೆರಳಿ ಗಲೀಜು ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆಯಿಂದ ನಿರ್ಮಾಣ ಮಾಡಿರುವ ಶೌಚಾಲಯ ಹಣ ಕೊಟ್ಟು ಉಪಯೋಗಿಸುವಂತದ್ದು, ಇದರಿಂದ ಕೇವಲ ಎರಡು ರೂಪಾಯಿ ಹಣ ನೀಡಲು ಆಗದ ಕೆಲವರು ಈ ರೀತಿ ಮಾಡುತ್ತಿದ್ದಾರೆ. ಈ ಕುರಿತು ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.