ಕೆ.ಆರ್.ಪೇಟೆ ಗಣೇಶೋತ್ಸವದಲ್ಲಿ ಯುವಕರ ಜೊತೆ ಅನರ್ಹ ಶಾಸಕ ನಾರಾಯಣಗೌಡ ನೃತ್ಯ
ಮಂಡ್ಯ: ಮಧ್ಯಾಹ್ನ ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಂಜೆ ವೇಳೆಗೆ ಗಣೇಶೋತ್ಸವದಲ್ಲಿ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಷ್ಟಾಪಿಸಲಾದ ಧರ್ಮಧ್ವಜ ಸೇವಾ ಸಮಿತಿಯ ಗಣೇಶೋತ್ಸವ ಮೆರವಣಿಗೆಯಲ್ಲಿ ಅನರ್ಹ ಶಾಸಕ ಡಾ.ನಾರಾಯಣ ಗೌಡ ಯುವಕರ ಜೊತೆ ನೃತ್ಯ ಮಾಡಿ ಸಂಭ್ರಮಿಸಿದರು.