thumbnail

By

Published : Sep 22, 2019, 5:56 PM IST

Updated : Sep 22, 2019, 7:53 PM IST

ETV Bharat / Videos

ಜೆಡಿಎಸ್​ ವಿರುದ್ಧ ಕಿಡಿಕಾರಿ, ಬಿಜೆಪಿ ಜೊತೆ ಕಾಣಿಸಿಕೊಳ್ಳುವ ಜೆಡಿಎಸ್‌​ ಶಾಸಕ!

ಜೆಡಿಎಸ್ ಪಕ್ಷದ ವಿರುದ್ಧ ಕಿಡಿಕಾರಿ, ಬಿಜೆಪಿ ಮುಖಂಡರೊಂದಿಗೆ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್‌ ಶಾಸಕ ಜಿ ಟಿ ದೇವೇಗೌಡ ಅವರ ನಡೆ ಬಿಜೆಪಿ ಕಡೆ ವಾಲುತ್ತಿದೆ ಎನ್ನಲಾಗಿದೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಜಿ ಟಿ ದೇವೇಗೌಡ ಆತ್ಮೀಯತೆಯಿಂದ ಮಾತನಾಡಿಸಿದರು. ಈಶ್ವರಪ್ಪ ನಿರ್ಗಮನ ಸಂದರ್ಭದಲ್ಲಿ ಆಗಮಿಸಿದ‌ ಅವರು ದೇವಾಲಯ ಆವರಣದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿ ಕುಶಲೋಪರಿ ವಿಚಾರಿಸಿದರು‌. ಜಿಡಿಎಸ್​ನಿಂದ ದೈಹಿಕ ಹಾಗೂ ಮಾನಸಿಕವಾಗಿ ದೂರವಿರುವ ಜಿ‌ಟಿಡಿ, ಹುಣಸೂರು ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Last Updated : Sep 22, 2019, 7:53 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.