ಬೆಂಗಳೂರು ಗಲಭೆಯಲ್ಲಿ ಅಮಾಯಕರನ್ನು ಬಂಧಿಸಲಾಗಿದೆ: ಮಾಜಿ ಶಾಸಕ ಇಬ್ರಾಹಿಂ ಆರೋಪ
ಕೊಡಗು: ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಕೂಡ ಬಂಧಿಸಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ. ನವೀನ್ ಎಂಬಾತ ಪ್ರವಾದಿ ಪೈಗಂಬರ್ ಅವರಿಗೆ ಅಪಮಾನಿಸಿದ್ದಾನೆ. ಹಾಗೆಂದು ಶಾಸಕ ಅಖಂಡ ಶ್ರೀನಿವಾಸ್ ಮನೆಯನ್ನು ಧ್ವಂಸ ಮಾಡಿದ್ದು ಸರಿಯಲ್ಲ. ಇಂತಹ ದುರ್ಘಟನೆ ನಡೆಯಬಾರದಿತ್ತು. ಸರ್ಕಾರದ ವೈಫಲ್ಯದಿಂದ ಇಂತಹ ದುರ್ಘಟನೆಗಳು ನಡೆದಿವೆ ಎಂದು ವಿಟ್ಲ ಕ್ಷೇತ್ರದ ಮಾಜಿ ಶಾಸಕ ಇಬ್ರಾಹಿಂ ಮಡಿಕೇರಿಯಲ್ಲಿ ದೂರಿದ್ದಾರೆ.