ಹಿರೇಕೆರೂರಲ್ಲಿ ಕೌರವನ ಪರಾಕ್ರಮ... ಕೈ ಅಭ್ಯರ್ಥಿ ಬನ್ನಿಕೋಡ್ ವಿರುದ್ಧ ಬಿ.ಸಿ.ಪಾಟೀಲ್ ಜಯಭೇರಿ
ಸರ್ವಜ್ಞನ ನಾಡು ಹಾವೇರಿಯ ಹಿರೇಕೆರೂರಲ್ಲಿ ಕೌರವ ಬಿ.ಸಿ.ಪಾಟೀಲ್ ನಾಲ್ಕನೇ ಬಾರಿ ಜಯಭೇರಿ ಭಾರಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿ.ಹೆಚ್.ಬನ್ನಿಕೋಡ್ಗೆ ಸೋಲುಣಿಸಿರುವ ಕೌರವ, ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅನರ್ಹ ಶಾಸಕ ಎಂಬ ಪಟ್ಟ ಹೊತ್ತಿದ್ದ ಬಿ.ಸಿ.ಪಾಟೀಲ್ರ ಗೆಲುವು ಅಷ್ಟೇನೂ ಸುಲಭವಾಗಿರಲಿಲ್ಲ.