ಕೇಂದ್ರ ಬಜೆಟ್​ ಕಾರ್ಪೊರೇಟ್ ಪರವಾಗಿರದೆ, ರೈತರ ಪರವಾಗಿರಲಿ : ರೈತ ಮುಖಂಡ ರಮೇಶ್ ಕಡಕೋಳ

By

Published : Jan 31, 2021, 1:00 PM IST

thumbnail
ಹಾವೇರಿ: ನಾಳೆ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದ್ದು, ಅದು ಕಾರ್ಪೋರೇಟ್​ಗಳ ಪರವಾಗಿ ಇರದೆ ರೈತರ ಪರವಾಗಿರಲಿ ಎಂದು ರೈತ ಮುಖಂಡ ರಮೇಶ್ ಕಡಕೋಳ ಒತ್ತಾಯಿಸಿದ್ದಾರೆ. ಈಟಿವಿ ಭಾತರದೊಂದಿಗೆ ಮಾತನಾಡಿದ ಅವರು, ಭಾರತದಂಥ ಕೃಷಿ ಪ್ರಧಾನ ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡದೆ, ಸಣ್ಣ ಸಣ್ಣ ರೈತರ ಉತ್ಪನ್ನಗಳ ಕಾರ್ಖಾನೆಗಳಿಗೆ ಕೇಂದ್ರ ಮಾನ್ಯತೆ ನೀಡಬೇಕು. ನಮ್ಮ ರಾಜ್ಯದಿಂದಲೇ ಬಹುರಾಷ್ಟ್ರೀಯ ಕಂಪನಿಗಳ ಬಿತ್ತನೆ ಬೀಜಕ್ಕೆ 96 ಸಾವಿರ ಕೋಟಿ ರೂ. ಆದಾಯವಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.