thumbnail

ಸದ್ಯಕ್ಕೆ ನೇಮಕಾತಿ ಬೇಡ ಎಂದು ಸರ್ಕಾರದಿಂದ ಸುತ್ತೋಲೆ: ಮೈಸೂರು ವಿವಿ ಕುಲಪತಿ

By

Published : Aug 25, 2020, 1:21 PM IST

ಮೈಸೂರು: ಖಾಲಿ ಇರುವ ಹುದ್ದೆಗಳಿಗೆ ಸದ್ಯಕ್ಕೆ ಯಾರನ್ನೂ ನೇಮಕಾತಿ ಮಾಡಿಕೊಳ್ಳಬೇಡಿ ಎಂದು ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಕೆ-ಸೆಟ್ ಪರೀಕ್ಷೆ ನಡೆಸಲು ಸರ್ಕಾರದಿಂದ ಅನುಮತಿ ಕೇಳಿದ್ದೇವೆ. ಇಷ್ಟು ದಿನ ಪರೀಕ್ಷೆಯನ್ನು ನಾವೇ ಮಾಡುತ್ತಿದ್ದೆವು. ಆದರೆ ಕೋವಿಡ್ ಇರುವುದರಿಂದ ಎಲ್ಲಾ ವಿಶ್ವವಿದ್ಯಾಲಯಗಳ ಸಹಕಾರ ಬೇಕು. ಅದಕ್ಕಾಗಿ ದಿನಾಂಕ ನಿಗದಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.